ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ನಲ್ಲಿ ಜಾರಿಯಲ್ಲಿದ್ದ ನಿಷೇಧಾಜ್ಞೆ ಶನಿವಾರ ಮಧ್ಯರಾತ್ರಿ ಮುಕ್ತಾಯವಾಗಿದೆ. ಆದರೆ, ಪೊಲೀಸ್ ಕಣ್ಗಾವಲು ಮುಂದುವರಿಯಲಿದೆ ಎಂದು ಪೊಲೀಸ್ ಆಯುಕ್ತ ಆರ್.ದಿಲೀಪ್ ತಿಳಿಸಿದ್ದಾರೆ.
ಅವಳಿನಗರದಲ್ಲಿ ನಿಷೇಧಾಜ್ಞೆ ಹಿಂಪಡೆದರೂ ಪೊಲೀಸರ ಕಣ್ಗಾವಲು ಮುಂದುವರಿಯಲಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೇ ಅವಳಿನಗರದಲ್ಲಿ ಅಂತಹ ಯಾವುದೇ ವಾತಾವರಣ ಇಲ್ಲ. ಎಲ್ಲ ಸಮುದಾಯಗಳು ಸೌಹಾರ್ಧತೆಯಿಂದ ನಡೆದುಕೊಳ್ಳುತ್ತಿವೆ. ಹೀಗಾಗಿ ನಿಷೇಧಾಜ್ಞೆ ಮುಂದುವರಿಸುತ್ತಿಲ್ಲ. ಆದರೆ, ಮೆರವಣಿಗೆ ಕೈಕೊಳ್ಳುವ ಮುನ್ನ ಪೊಲೀಸರ ಪರವಾನಗಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂದು ಸ್ಪಷ್ಟಪಡಿಸಿದ್ದಾರೆ.