ETV Bharat / state

ಹುಬ್ಬಳ್ಳಿಯಲ್ಲೂ ಕಾರಹುಣ್ಣಿಮೆ ಸಡಗರ... ಎತ್ತುಗಳ ಕರಿ ಹರಿದು ಸಂಭ್ರಮಿಸಿದ ಜನ

author img

By

Published : Jun 18, 2019, 9:03 PM IST

ಕಾರಹುಣ್ಣಿಮೆ ನಿಮಿತ್ತ ಹುಬ್ಬಳ್ಳಿಯ ಜಂಗಲಿಪೇಟೆ ರೈತರು ಎತ್ತುಗಳನ್ನು ಓಡಿಸಿ ಸಂಭ್ರಮಿಸಿದರು. ಬೇವಿನ ಎಲೆಯ ಸರದಲ್ಲಿನ ಕೊಬ್ಬರಿ ಬೆಲ್ಲವನ್ನು ಎತ್ತುಗಳಿಗೆ ಕಟ್ಟಿದ್ದ ಹಗ್ಗದ ಮೂಲಕ ಹರಿಯುವ ಸ್ಪರ್ಧೆ ನಡೆಸಲಾಯಿತು. ಈ ರೀತಿ ಕರಿ ಹರಿಯುವ ಸಂದರ್ಭದಲ್ಲಿ ಎತ್ತಿನ ಕರಿ ಹರಿದರೆ ಹಿಂಗಾರು, ಬಿಳಿ ಎತ್ತು ಕರಿ ಹರಿದರೆ ಮುಂಗಾರು ಹಾಗೂ ಕಂದು ಎತ್ತು ಕರಿ ಹರಿದರೆ ಎರಡೂ ಋುತುಗಳಲ್ಲಿ ಮಳೆ ಉತ್ತಮವಾಗುವುದೆಂಬ ನಂಬಿಕೆ ಇದೆ.

ಹುಬ್ಬಳ್ಳಿಯಲ್ಲಿ ಕಾರಹುಣ್ಣಿಮೆ ಸಡಗರ, ಎತ್ತುಗಳಿಗೆ ಸಿಂಗಾರ

ಹುಬ್ಬಳ್ಳಿ: ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಎತ್ತುಗಳಿಂದ ಕರಿ ಹರಿಸಿ ರೈತರು ಸಂಭ್ರಮಪಟ್ಟರು.

ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚುತ್ತಿದ್ದಂತೆಯೇ ಜಾನುವಾರುಗಳ ಸಂಖ್ಯೆ ಕಡಿಮೆಯಾದ ಕಾರಣ ಕಾರಹುಣ್ಣಿಮೆ ತನ್ನ ಎಂದಿನ ಸಂಭ್ರಮ ಕಳೆದುಕೊಂಡಿದೆ. ಇದರ ನಡುವೆಯೂ ರೈತರ ಹಬ್ಬವೆಂದೇ ಖ್ಯಾತಿ ಪಡೆದಿರುವ ಕಾರಹುಣ್ಣಿಮೆಯನ್ನು ಇಲ್ಲಿನ ಜಂಗಲಿಪೇಟೆ ರೈತರು ಸಂಭ್ರಮದಿಂದ ಆಚರಿಸಿದರು.

ಹುಬ್ಬಳ್ಳಿಯಲ್ಲಿ ಕಾರಹುಣ್ಣಿಮೆ ಸಡಗರ, ಎತ್ತುಗಳಿಗೆ ಸಿಂಗಾರ

ಜಂಗಲಿಪೇಟೆ ರೈತರು ಎಲ್ಲರೂ ಒಂದೆಡೆ ಸೇರಿ ಎತ್ತುಗಳನ್ನು ಓಡಿಸಿದರು. ಎತ್ತುಗಳಿಗೆ ಕಟ್ಟಲಾಗಿದ್ದ ಬೇವಿನ ಎಲೆಯ ಸರದಲ್ಲಿನ ಕೊಬ್ಬರಿ ಬೆಲ್ಲವನ್ನು ಹಗ್ಗದ ಮೂಲಕ ಹರಿಯುವ ಸ್ಪರ್ಧೆ ನಡೆಸಲಾಯಿತು. ಕರಿ ಎತ್ತು ಕರಿ ಹರಿದ್ರೆ ಹಿಂಗಾರು, ಬಿಳಿ ಎತ್ತು ಕರಿ ಹರಿದರೆ ಮುಂಗಾರು ಹಾಗೂ ಕಂದು ಬಣ್ಣದ ಎತ್ತಿನ ಕರಿ ಹರಿದ್ರೆ ಎರಡೂ ಋುತುಗಳಲ್ಲಿ ಮಳೆ ಉತ್ತಮವಾಗುವುದೆಂಬ ನಂಬಿಕೆ ಇದೆ.

ಇನ್ನು ಕಾರಹುಣ್ಣಿಮೆ ಹಬ್ಬದ ಹಿನ್ನೆಲೆಯಲ್ಲಿ ರೈತರು ಎತ್ತುಗಳು, ಜಾನುವಾರುಗಳನ್ನು ಸ್ವಚ್ಛವಾಗಿ ತೊಳೆದು ಮೈಗೆ ಹಾಗೂ ಕೊಂಬುಗಳಿಗೆ ತರಹೇವಾರಿ ಬಣ್ಣಗಳನ್ನು ಹಚ್ಚಿ ಶೃಂಗಾರ ಮಾಡಿ ಸಂತಸಪಟ್ಟರು.

ಹುಬ್ಬಳ್ಳಿ: ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಎತ್ತುಗಳಿಂದ ಕರಿ ಹರಿಸಿ ರೈತರು ಸಂಭ್ರಮಪಟ್ಟರು.

ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚುತ್ತಿದ್ದಂತೆಯೇ ಜಾನುವಾರುಗಳ ಸಂಖ್ಯೆ ಕಡಿಮೆಯಾದ ಕಾರಣ ಕಾರಹುಣ್ಣಿಮೆ ತನ್ನ ಎಂದಿನ ಸಂಭ್ರಮ ಕಳೆದುಕೊಂಡಿದೆ. ಇದರ ನಡುವೆಯೂ ರೈತರ ಹಬ್ಬವೆಂದೇ ಖ್ಯಾತಿ ಪಡೆದಿರುವ ಕಾರಹುಣ್ಣಿಮೆಯನ್ನು ಇಲ್ಲಿನ ಜಂಗಲಿಪೇಟೆ ರೈತರು ಸಂಭ್ರಮದಿಂದ ಆಚರಿಸಿದರು.

ಹುಬ್ಬಳ್ಳಿಯಲ್ಲಿ ಕಾರಹುಣ್ಣಿಮೆ ಸಡಗರ, ಎತ್ತುಗಳಿಗೆ ಸಿಂಗಾರ

ಜಂಗಲಿಪೇಟೆ ರೈತರು ಎಲ್ಲರೂ ಒಂದೆಡೆ ಸೇರಿ ಎತ್ತುಗಳನ್ನು ಓಡಿಸಿದರು. ಎತ್ತುಗಳಿಗೆ ಕಟ್ಟಲಾಗಿದ್ದ ಬೇವಿನ ಎಲೆಯ ಸರದಲ್ಲಿನ ಕೊಬ್ಬರಿ ಬೆಲ್ಲವನ್ನು ಹಗ್ಗದ ಮೂಲಕ ಹರಿಯುವ ಸ್ಪರ್ಧೆ ನಡೆಸಲಾಯಿತು. ಕರಿ ಎತ್ತು ಕರಿ ಹರಿದ್ರೆ ಹಿಂಗಾರು, ಬಿಳಿ ಎತ್ತು ಕರಿ ಹರಿದರೆ ಮುಂಗಾರು ಹಾಗೂ ಕಂದು ಬಣ್ಣದ ಎತ್ತಿನ ಕರಿ ಹರಿದ್ರೆ ಎರಡೂ ಋುತುಗಳಲ್ಲಿ ಮಳೆ ಉತ್ತಮವಾಗುವುದೆಂಬ ನಂಬಿಕೆ ಇದೆ.

ಇನ್ನು ಕಾರಹುಣ್ಣಿಮೆ ಹಬ್ಬದ ಹಿನ್ನೆಲೆಯಲ್ಲಿ ರೈತರು ಎತ್ತುಗಳು, ಜಾನುವಾರುಗಳನ್ನು ಸ್ವಚ್ಛವಾಗಿ ತೊಳೆದು ಮೈಗೆ ಹಾಗೂ ಕೊಂಬುಗಳಿಗೆ ತರಹೇವಾರಿ ಬಣ್ಣಗಳನ್ನು ಹಚ್ಚಿ ಶೃಂಗಾರ ಮಾಡಿ ಸಂತಸಪಟ್ಟರು.

Intro:ಹುಬ್ಬಳಿBody:ಸ್ಲಗ್: ಹುಬ್ಬಳ್ಳಿಯಲ್ಲಿ ಕಾರಹುಣ್ಣಿಮೆ ಸಡಗರ, ಎತ್ತುಗಳಿಗೆ ಸಿಂಗಾರ

ಹುಬ್ಬಳ್ಳಿ:- ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಎತ್ತುಗಳಿಂದ ಕರಿ ಹರಿಸಿ ರೈತರು ಸಂಭ್ರಮಪಟ್ಟರು. ಮೊದಲೇ ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚುತ್ತಿದ್ದಂತೆಯೇ ಜಾನುವಾರುಗಳ ಸಂಖ್ಯೆ ಇತ್ತೀಚೆಗೆ ಕಡಿಮೆಯಾದ ಕಾರಣ ಕಾರಹುಣ್ಣಿಮೆ ತನ್ನ ಎಂದಿನ ಸಂಭ್ರಮ ಕಳೆದುಕೊಂಡಿದೆ. ಇದರ ನಡುವೆಯೂ ರೈತರ ಹಬ್ಬವೆಂದೇ ಖ್ಯಾತಿ ಪಡೆದಿರುವ ಕಾರಹುಣ್ಣಿಮೆಯನ್ನು ಹುಬ್ಬಳ್ಳಿಯ ಜಂಗ್ಲೀಪೇಟ್ ರೈತರು ಸಂಭ್ರಮದಿಂದ ಆಚರಿಸಿದರು. ಜಂಗಲಿಪೇಟ ರೈತರು ಎಲ್ಲರೂ ಸೇರಿ ಎತ್ತುಗಳನ್ನು ಓಡಿಸಿ ಸಂಭ್ರಮಪಟ್ಟರು. ಮೇಲೆ ಕಟ್ಟಲಾದ ಬೇವಿನೆಲೆಯ ಸರದಲ್ಲಿನ ಕೊಬ್ಬರಿ ಬೆಲ್ಲ ಇತರ ಸಾಂಪ್ರದಾಯಿಕ ಶುಭಕಾರಕಗಳನ್ನು ಎತ್ತುಗಳಿಗೆ ಕಟ್ಟಿದ್ದ ಹಗ್ಗದ ಮೂಲಕ ಹರಿದ ಎತ್ತಿನ ಬಣ್ಣದಂತೆ ಮುಂಗಾರು ಹಿಂಗಾರು ಮಳೆ ಈ ಬಾರಿ ಹೇಗಾಗುವುದು ಎಂದು ಇಲ್ಲಿನ ರೈತರು ಲೆಕ್ಕಹಾಕುತ್ತಾರೆ. ಕರಿ ಎತ್ತು ಕರಿ ಹರಿದರೆ ಹಿಂಗಾರು, ಬಿಳಿ ಎತ್ತು ಕರಿ ಹರಿದರೆ ಮುಂಗಾರು ಹಾಗೂ ಕಂದು ಎತ್ತು ಕರಿ ಹರಿದರೆ ಎರಡೂ ಋುತುಗಳಲ್ಲಿ ಮಳೆ ಉತ್ತಮವಾಗುವುದೆಂಬ ನಂಬಿಕೆ ಇದೆ.ಇನ್ನೂ ಕಾರಹುಣ್ಣಿಮೆ ಹಬ್ಬದ ಹಿನ್ನೆಲೆಯಲ್ಲಿ ರೈತರು ಎತ್ತುಗಳು, ಜಾನುವಾರುಗಳನ್ನು ಸ್ವಚ್ಛವಾಗಿ ಸ್ನಾನ ಮಾಡಿಸಿ ತರವೆವಾರಿ ಬಣ್ಣಗಳನ್ನು ಕೋಡುಗಳಿಗೆ, ಮೈಯಿಗೆ ಬಣ್ಣ ಬಳಿದು, ಗೊಂಡೆ ಕಟ್ಟಿ
ಶೃಂಗಾರ ಮಾಡಿ ಸಂತೋಷ ಪಟ್ಟರು. ಇದಲ್ಲದೇ ಕರಡಿದಾರ, ಮತಾಟಿ, ಗೊಂಡೆ, ದಾಂಡ, ಕಾಲುಗೆಜ್ಜಿ, ಹುರಿಗೆಜ್ಜಿ ಸೇರಿ ಇನ್ನಿತರ ವಸ್ತುಗಳಿಂದ ಸಿಂಗರಿಸಿ ಪೂಜೆ, ನೆವೇದ್ಯ ಸಲ್ಲಿಸುವ ಮೂಲಕ ಕೃತಾರ್ಥರಾದರು. ವರ್ಷಕ್ಕೊಮ್ಮೆ ಬರುವ ಈ ಹಬ್ಬಕ್ಕೆ ಹೊಸ ವಸ್ತುಗಳನ್ನು ಖರೀದಿಸಿ ಎತ್ತುಗಳನ್ನು ಸಿಂಗರಿಸಿ ಹಬ್ಬವನ್ನು ಆಚರಿಸುತ್ತೆವೆ ಎನ್ನುತ್ತಾರೆ. ರೈತರು...


ಬೈಟ್:- ಶಿವಾನಂದ ಹೊಸುರ....ರೈತರು.

Conclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.