ETV Bharat / state

ಮಾಜಿ ಸಚಿವ ವಿನಯ‌ ಕುಲಕರ್ಣಿ ಪರ ಪತ್ನಿ ಶಿವಲೀಲಾ ನಾಮಪತ್ರ ಸಲ್ಲಿಕೆ

ವಿನಯ ಕುಲಕರ್ಣಿ ನಾಮಪತ್ರ ಸಲ್ಲಿಕೆಯನ್ನು ಅವರ ಅನುಪಸ್ಥಿತಿಯಲ್ಲಿ ಮಾಡಿದ್ದೇವೆ ಎಂದು ಪತ್ನಿ ಶಿವಲೀಲಾ ತಿಳಿಸಿದರು.

author img

By

Published : Apr 20, 2023, 9:46 PM IST

Updated : Apr 20, 2023, 10:06 PM IST

Vinay Kulkarnis wife Shivleela spoke to the media.
ವಿನಯ‌ ಕುಲಕರ್ಣಿ ಪತ್ನಿ ಶಿವಲೀಲಾ ಮಾಧ್ಯಮದವರ ಜತೆ ಮಾತನಾಡಿದರು.
ವಿನಯ‌ ಕುಲಕರ್ಣಿ ಪತ್ನಿ ಶಿವಲೀಲಾ ಮಾಧ್ಯಮದವರ ಜತೆ ಮಾತನಾಡಿದರು.

ಧಾರವಾಡ: ಮಾಜಿ ಸಚಿವ ವಿನಯ‌ ಕುಲಕರ್ಣಿ ಪರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದರು. ಧಾರವಾಡ ಮುರುಘಾಮಠದಿಂದ ಅಪಾರ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಲೀಲಾ, ವಿನಯ ಕುಲಕರ್ಣಿ ನಾಮಪತ್ರ ಸಲ್ಲಿಕೆಯನ್ನು ಇವತ್ತು ಅವರ ಅನುಪಸ್ಥಿತಿಯಲ್ಲಿ ಮಾಡಿದ್ದೇವೆ. ಜನರ ಬೆಂಬಲವೂ ದೊಡ್ಡ ಪ್ರಮಾಣದಲ್ಲಿ ಸಿಗುತ್ತಿದೆ. ವಿನಯ ಕುಲಕರ್ಣಿ ಜಿಲ್ಲೆಗೆ ಬರ್ತಾರೆ ಎಂಬ ವಿಶ್ವಾಸವಿತ್ತು. ಕಾನೂನು ಮೇಲೆ ಬಹಳ‌ ವಿಶ್ವಾಸವಿದೆ. ಆದರೆ ನಮಗೆ ಹಿನ್ನಡೆಯಾಗಿದೆ. ನಾವು ಈಗಲೂ ಕಾನೂನು ಮೇಲೆ ಭರವಸೆ ಇಟ್ಟಿದ್ದೇವೆ, ಮುಂದೆ ಅವರು ಜಿಲ್ಲೆಗೆ ಬರದೇ ಇದ್ದರೂ ಜನರು ನಮ್ಮ ಬೆಂಬಲಕ್ಕೆ ಇದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ನಮ್ಮ ಕ್ಷೇತ್ರದ ಜನರನ್ನು ಕರೆದುಕೊಂಡು ಮತಯಾಚನೆ ಮಾಡ್ತೇನೆ. ಪ್ರತಿ ಮನೆ ಮನೆಗೆ ಹೋಗಿ ಮತ‌‌ ಕೇಳ್ತೇನೆ. ನಮ್ಮ‌ ಮನೆಯವರನ್ನು ಹತ್ತಿಕ್ಕಲು ಪ್ರಯತ್ನ ನಡೆದಿದೆ. 10 ವರ್ಷಗಳಿಂದ ಈ ಕೆಲಸ ನಡೆದಿದೆ. ಕ್ಷೇತ್ರದಲ್ಲಿ ಯಾವುದೇ ಸಣ್ಣ ಘಟನೆ ನಡೆದರೂ ಅದು ವಿನಯ ಕುಲಕರ್ಣಿ ಹಣೆಪಟ್ಟಿಗೆ ಹಚ್ಚುವ‌ ಕೆಲಸ ನಡೆದಿದೆ ಎಂದರು.

ಇದಕ್ಕೆಲ್ಲ ಉತ್ತರ ಮುಂದಿನ ದಿನಗಳಲ್ಲಿ ಜನ ಕೊಡ್ತಾರೆ. ಸತತವಾಗಿ ಜನ ನಮ್ಮ ಜೊತೆ ಇದ್ದಾರೆ. ಅವರೆಲ್ಲರೂ ವಿನಯ ಬರ್ತಾರೆ ಎಂದು ಕಾಯುತ್ತಿದ್ರು, ಕಾನೂನು ಮೇಲೆ ಭರವಸೆ ಇಟ್ಟು ಕಾಯುತ್ತಿದ್ದರು. ಇವತ್ತು ಅವರು ಇಲ್ಲದೇ ಇರುವುದರಿಂದ ಜನ ನೊಂದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂಓದಿ:ತುಮಕೂರು ನಗರ ವಿಧಾನಸಭಾ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಯಾಗಿ ಸೊಗಡು ಶಿವಣ್ಣ ಉಮೇದುವಾರಿಕೆ ಸಲ್ಲಿಕೆ

ಒಂದೇ ಮತದಿಂದ ಗೆದ್ದರೂ ನ್ಯಾಯಾಲಯಕ್ಕೆ ಮೇಲ್ಮನವಿ: ನನಗೆ ಜನ ಧೈರ್ಯ ತುಂಬಿದ್ದಾರೆ, ವಿನಯ ಅವರ 25 ವರ್ಷದ ರಾಜಕೀಯದಲ್ಲಿ ನಾನು ಅವರ ಬೆನ್ನಿಗೆ ನಿಂತು ಕೆಲಸ ಮಾಡಿದ್ದೇನೆ. ಅವರ ಜಾಗದಲ್ಲಿ ಇವತ್ತು‌ ‌ನಿಂತು ಕೆಲಸ ಮಾಡುತ್ತಿದ್ದೇನೆ. ನಾವು ನಂಬಿದ್ದೆಲ್ಲ ಆಗಿಲ್ಲ. ಆದರೆ ಅವರು ಧಾರವಾಡ ಗಡಿಯಲ್ಲಿ ಇದ್ದು ಜನರ ಜತೆ ಭೇಟಿ ಮಾಡ್ತಾರೆ. ಈ ಬಾರಿ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ. ಒಂದೇ ಮತದಿಂದ ಗೆದ್ದರೂ ನಾವು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದೇವೆ. ವಕೀಲರ ನೇತೃತ್ವದಲ್ಲಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಬಂಡಾಯ ಅಭ್ಯರ್ಥಿ ತವನಪ್ಪ ಅಷ್ಟಗಿ ಹಾಗೂ ಬಸವರಾಜ ಕೊರವರ ಪಕ್ಷೇತರರಾಗಿ ಗ್ರಾಮೀಣ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೂರೆ ಪಾಲಿಕೆ ಕಚೇರಿ ರೋಡ್ ಶೋ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಇದನ್ನೂಓದಿ: ರಾಜಕೀಯ ಜೀವನ ಆರಂಭಿಸಿದ ಅಂಬಾಸಿಡರ್​ ಕಾರನ್ನ ಮತ್ತೊಮ್ಮೆ ಏರಿದ ಬಿಎಸ್​ವೈ.. ಏನಿದರ ವಿಶೇಷತೆ?

ವಿನಯ‌ ಕುಲಕರ್ಣಿ ಪತ್ನಿ ಶಿವಲೀಲಾ ಮಾಧ್ಯಮದವರ ಜತೆ ಮಾತನಾಡಿದರು.

ಧಾರವಾಡ: ಮಾಜಿ ಸಚಿವ ವಿನಯ‌ ಕುಲಕರ್ಣಿ ಪರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದರು. ಧಾರವಾಡ ಮುರುಘಾಮಠದಿಂದ ಅಪಾರ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಲೀಲಾ, ವಿನಯ ಕುಲಕರ್ಣಿ ನಾಮಪತ್ರ ಸಲ್ಲಿಕೆಯನ್ನು ಇವತ್ತು ಅವರ ಅನುಪಸ್ಥಿತಿಯಲ್ಲಿ ಮಾಡಿದ್ದೇವೆ. ಜನರ ಬೆಂಬಲವೂ ದೊಡ್ಡ ಪ್ರಮಾಣದಲ್ಲಿ ಸಿಗುತ್ತಿದೆ. ವಿನಯ ಕುಲಕರ್ಣಿ ಜಿಲ್ಲೆಗೆ ಬರ್ತಾರೆ ಎಂಬ ವಿಶ್ವಾಸವಿತ್ತು. ಕಾನೂನು ಮೇಲೆ ಬಹಳ‌ ವಿಶ್ವಾಸವಿದೆ. ಆದರೆ ನಮಗೆ ಹಿನ್ನಡೆಯಾಗಿದೆ. ನಾವು ಈಗಲೂ ಕಾನೂನು ಮೇಲೆ ಭರವಸೆ ಇಟ್ಟಿದ್ದೇವೆ, ಮುಂದೆ ಅವರು ಜಿಲ್ಲೆಗೆ ಬರದೇ ಇದ್ದರೂ ಜನರು ನಮ್ಮ ಬೆಂಬಲಕ್ಕೆ ಇದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ನಮ್ಮ ಕ್ಷೇತ್ರದ ಜನರನ್ನು ಕರೆದುಕೊಂಡು ಮತಯಾಚನೆ ಮಾಡ್ತೇನೆ. ಪ್ರತಿ ಮನೆ ಮನೆಗೆ ಹೋಗಿ ಮತ‌‌ ಕೇಳ್ತೇನೆ. ನಮ್ಮ‌ ಮನೆಯವರನ್ನು ಹತ್ತಿಕ್ಕಲು ಪ್ರಯತ್ನ ನಡೆದಿದೆ. 10 ವರ್ಷಗಳಿಂದ ಈ ಕೆಲಸ ನಡೆದಿದೆ. ಕ್ಷೇತ್ರದಲ್ಲಿ ಯಾವುದೇ ಸಣ್ಣ ಘಟನೆ ನಡೆದರೂ ಅದು ವಿನಯ ಕುಲಕರ್ಣಿ ಹಣೆಪಟ್ಟಿಗೆ ಹಚ್ಚುವ‌ ಕೆಲಸ ನಡೆದಿದೆ ಎಂದರು.

ಇದಕ್ಕೆಲ್ಲ ಉತ್ತರ ಮುಂದಿನ ದಿನಗಳಲ್ಲಿ ಜನ ಕೊಡ್ತಾರೆ. ಸತತವಾಗಿ ಜನ ನಮ್ಮ ಜೊತೆ ಇದ್ದಾರೆ. ಅವರೆಲ್ಲರೂ ವಿನಯ ಬರ್ತಾರೆ ಎಂದು ಕಾಯುತ್ತಿದ್ರು, ಕಾನೂನು ಮೇಲೆ ಭರವಸೆ ಇಟ್ಟು ಕಾಯುತ್ತಿದ್ದರು. ಇವತ್ತು ಅವರು ಇಲ್ಲದೇ ಇರುವುದರಿಂದ ಜನ ನೊಂದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂಓದಿ:ತುಮಕೂರು ನಗರ ವಿಧಾನಸಭಾ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಯಾಗಿ ಸೊಗಡು ಶಿವಣ್ಣ ಉಮೇದುವಾರಿಕೆ ಸಲ್ಲಿಕೆ

ಒಂದೇ ಮತದಿಂದ ಗೆದ್ದರೂ ನ್ಯಾಯಾಲಯಕ್ಕೆ ಮೇಲ್ಮನವಿ: ನನಗೆ ಜನ ಧೈರ್ಯ ತುಂಬಿದ್ದಾರೆ, ವಿನಯ ಅವರ 25 ವರ್ಷದ ರಾಜಕೀಯದಲ್ಲಿ ನಾನು ಅವರ ಬೆನ್ನಿಗೆ ನಿಂತು ಕೆಲಸ ಮಾಡಿದ್ದೇನೆ. ಅವರ ಜಾಗದಲ್ಲಿ ಇವತ್ತು‌ ‌ನಿಂತು ಕೆಲಸ ಮಾಡುತ್ತಿದ್ದೇನೆ. ನಾವು ನಂಬಿದ್ದೆಲ್ಲ ಆಗಿಲ್ಲ. ಆದರೆ ಅವರು ಧಾರವಾಡ ಗಡಿಯಲ್ಲಿ ಇದ್ದು ಜನರ ಜತೆ ಭೇಟಿ ಮಾಡ್ತಾರೆ. ಈ ಬಾರಿ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ. ಒಂದೇ ಮತದಿಂದ ಗೆದ್ದರೂ ನಾವು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದೇವೆ. ವಕೀಲರ ನೇತೃತ್ವದಲ್ಲಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಬಂಡಾಯ ಅಭ್ಯರ್ಥಿ ತವನಪ್ಪ ಅಷ್ಟಗಿ ಹಾಗೂ ಬಸವರಾಜ ಕೊರವರ ಪಕ್ಷೇತರರಾಗಿ ಗ್ರಾಮೀಣ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೂರೆ ಪಾಲಿಕೆ ಕಚೇರಿ ರೋಡ್ ಶೋ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಇದನ್ನೂಓದಿ: ರಾಜಕೀಯ ಜೀವನ ಆರಂಭಿಸಿದ ಅಂಬಾಸಿಡರ್​ ಕಾರನ್ನ ಮತ್ತೊಮ್ಮೆ ಏರಿದ ಬಿಎಸ್​ವೈ.. ಏನಿದರ ವಿಶೇಷತೆ?

Last Updated : Apr 20, 2023, 10:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.