ETV Bharat / state

ಬಿಎಸ್‌ವೈ ಅವರನ್ನು ಸಿಎಂ ಮಾಡಿದ್ದೇ ನಾನು: ಚಂದ್ರಕಾಂತ ಬೆಲ್ಲದ

author img

By

Published : Jun 17, 2021, 1:06 PM IST

Updated : Jun 17, 2021, 1:28 PM IST

ಬಿಎಸ್‌ವೈ ಪಕ್ಷ ಹೇಳಿದ್ದನ್ನು ಕೇಳಿಕೊಂಡು ಕೆಲಸ ಮಾಡಲಿ. ನ್ಯಾಯಯುತವಾಗಿ ನಡೆದುಕೊಳ್ಳಲಿ ಹಾಗೂ ಬೆಳೆಸಿದ ಪಕ್ಷದೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳಲಿ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದ್ದಾರೆ.

bellada
bellada

ಧಾರವಾಡ: ಬಿಎಸ್‌ವೈ ತಮ್ಮ ಆತ್ಮ ಶೋಧನೆ ಮಾಡಿಕೊಳ್ಳಲಿ, ಅದರ ಮೂಲಕ ನ್ಯಾಯಯುತವಾಗಿ ನಡೆದುಕೊಳ್ಳಲಿ. ಬೆಳೆಸಿದ ಪಕ್ಷದೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳಲಿ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಹೇಳಿದ್ದನ್ನು ಕೇಳಿಕೊಂಡು ಕೆಲಸ ಮಾಡಲಿ. ನಾನು ಬಿಜೆಪಿಗೆ ಬಂದಾಗ ಬಿಎಸ್‌ವೈ ಒಬ್ಬರೇ ಶಾಸಕರಿದ್ದರು. ಪಕ್ಷದ ಬೆಳವಣಿಗೆಗೆ ನಾನೇ ಕಾರಣ. ಬಿ‌ಎಸ್‌‌ವೈ ಅವರನ್ನು ಸಿಎಂ ಮಾಡಿದ್ದು ನಾನೇ. ಇದು ಎಲ್ಲರಿಗೂ ಗೊತ್ತು. ರಾಜ್ಯದ ಎಲ್ಲಾ ನಾಯಕರಿಗೂ ಗೊತ್ತಿದೆ ಎಂದರು.

ಬಿಎಸ್‌ವೈ ಅವರನ್ನು ಸಿಎಂ ಮಾಡಿದ್ದೇ ನಾನು: ಚಂದ್ರಕಾಂತ ಬೆಲ್ಲದ

ನಾನು ಬಿಜೆಪಿ ಬೆಳೆಸಿದ್ದು ಕೂಡ ನಾಯಕರಿಗೆ ಗೊತ್ತಿದೆ. 1991ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದೆ. ಆಗ ಧಾರವಾಡ ಕ್ಷೇತ್ರದಲ್ಲಿ ಒಬ್ಬ ಬಿಜೆಪಿ ಶಾಸಕನೂ ಇರಲಿಲ್ಲ. ಆಗ ಕಾಂಗ್ರೆಸ್ ವಿರುದ್ಧ 20 ಸಾವಿರ ಮತದಿಂದ ಸೋತಿದ್ದೆ. ಆಗ ಕಾರ್ಯಕರ್ತರೂ ಇರಲಿಲ್ಲ. ಅದು ಕೂಡ ವೈಯಕ್ತಿಕ ವ್ಯಕ್ತಿತ್ವದಿಂದ ಮತ ಪಡೆದಿದ್ದೆ. ನಾನು ಐದು ಬಾರಿ ಶಾಸಕನಾಗಿದ್ದೆ. ತಮ್ಮನ್ನು ಸಿಎಂ ಮಾಡಿದ್ದು ಯಾರು ಅನ್ನೋದು ಬಿಎಸ್‌ವೈಗೂ ಗೊತ್ತಿತ್ತು. ಆದರೂ ನನಗೆ ಸಚಿವ ಸ್ಥಾನ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರವಿಂದ ಬೆಲ್ಲದ್​ಗೆ ಸಚಿವ ಸ್ಥಾನ ವಿಚಾರಕ್ಕೆ ಮಾತನಾಡಿದ ಅವರು, ಅದು ಪಕ್ಷಕ್ಕೆ ಬಿಟ್ಟ ವಿಚಾರ. ಸ್ಥಾನ ನೀಡಬೇಕು ಅನ್ನೋದು ಜನರ ಆಶಯ ಎಂದರು.

ಧಾರವಾಡ: ಬಿಎಸ್‌ವೈ ತಮ್ಮ ಆತ್ಮ ಶೋಧನೆ ಮಾಡಿಕೊಳ್ಳಲಿ, ಅದರ ಮೂಲಕ ನ್ಯಾಯಯುತವಾಗಿ ನಡೆದುಕೊಳ್ಳಲಿ. ಬೆಳೆಸಿದ ಪಕ್ಷದೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳಲಿ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಹೇಳಿದ್ದನ್ನು ಕೇಳಿಕೊಂಡು ಕೆಲಸ ಮಾಡಲಿ. ನಾನು ಬಿಜೆಪಿಗೆ ಬಂದಾಗ ಬಿಎಸ್‌ವೈ ಒಬ್ಬರೇ ಶಾಸಕರಿದ್ದರು. ಪಕ್ಷದ ಬೆಳವಣಿಗೆಗೆ ನಾನೇ ಕಾರಣ. ಬಿ‌ಎಸ್‌‌ವೈ ಅವರನ್ನು ಸಿಎಂ ಮಾಡಿದ್ದು ನಾನೇ. ಇದು ಎಲ್ಲರಿಗೂ ಗೊತ್ತು. ರಾಜ್ಯದ ಎಲ್ಲಾ ನಾಯಕರಿಗೂ ಗೊತ್ತಿದೆ ಎಂದರು.

ಬಿಎಸ್‌ವೈ ಅವರನ್ನು ಸಿಎಂ ಮಾಡಿದ್ದೇ ನಾನು: ಚಂದ್ರಕಾಂತ ಬೆಲ್ಲದ

ನಾನು ಬಿಜೆಪಿ ಬೆಳೆಸಿದ್ದು ಕೂಡ ನಾಯಕರಿಗೆ ಗೊತ್ತಿದೆ. 1991ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದೆ. ಆಗ ಧಾರವಾಡ ಕ್ಷೇತ್ರದಲ್ಲಿ ಒಬ್ಬ ಬಿಜೆಪಿ ಶಾಸಕನೂ ಇರಲಿಲ್ಲ. ಆಗ ಕಾಂಗ್ರೆಸ್ ವಿರುದ್ಧ 20 ಸಾವಿರ ಮತದಿಂದ ಸೋತಿದ್ದೆ. ಆಗ ಕಾರ್ಯಕರ್ತರೂ ಇರಲಿಲ್ಲ. ಅದು ಕೂಡ ವೈಯಕ್ತಿಕ ವ್ಯಕ್ತಿತ್ವದಿಂದ ಮತ ಪಡೆದಿದ್ದೆ. ನಾನು ಐದು ಬಾರಿ ಶಾಸಕನಾಗಿದ್ದೆ. ತಮ್ಮನ್ನು ಸಿಎಂ ಮಾಡಿದ್ದು ಯಾರು ಅನ್ನೋದು ಬಿಎಸ್‌ವೈಗೂ ಗೊತ್ತಿತ್ತು. ಆದರೂ ನನಗೆ ಸಚಿವ ಸ್ಥಾನ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರವಿಂದ ಬೆಲ್ಲದ್​ಗೆ ಸಚಿವ ಸ್ಥಾನ ವಿಚಾರಕ್ಕೆ ಮಾತನಾಡಿದ ಅವರು, ಅದು ಪಕ್ಷಕ್ಕೆ ಬಿಟ್ಟ ವಿಚಾರ. ಸ್ಥಾನ ನೀಡಬೇಕು ಅನ್ನೋದು ಜನರ ಆಶಯ ಎಂದರು.

Last Updated : Jun 17, 2021, 1:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.