ETV Bharat / state

21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

1999ರಲ್ಲಿ ಆರೋಪಿ ಟೈಲರಿಂಗ್‌ ಅಂಗಡಿಯ ಬೀಗ ಮುರಿದು ಬಟ್ಟೆಗಳನ್ನು ಕಳವು ಮಾಡಿದ್ದ. ನ್ಯಾಯಾಂಗ ಬಂಧನದಲ್ಲಿದ್ದ ಆತ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ.

author img

By

Published : Oct 5, 2020, 12:07 PM IST

accused
accused

ಹುಬ್ಬಳ್ಳಿ: 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ‌.

ಅಮರಗೋಳದ ಚಿಕ್ಕೇರಿ ಪ್ಲಾಟ್‌ನ ಶಿದ್ಲಿಂಗಪ್ಪ ಅಲಿಯಾಸ್‌ ಸಿದ್ದಪ್ಪ ಬಾಗಲಕೋಟೆ ಎಂಬಾತನೇ ಬಂಧಿತ ಆರೋಪಿ.

1999ರಲ್ಲಿ ಆರೋಪಿ ನಗರದ ರಾಧಾಕೃಷ್ಣಗಲ್ಲಿಯ ಮಹೇಶ ಟೈಲರಿಂಗ್‌ ಅಂಗಡಿಯ ಬೀಗ ಮುರಿದು ಬಟ್ಟೆಗಳನ್ನು ಕಳವು ಮಾಡಿದ್ದ. ಆಗ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಜಾಮೀನು ಪಡೆದಿದ್ದ ಆತ ತಲೆಮರೆಸಿಕೊಂಡಿದ್ದ.

ಕೋರ್ಟ್‌ನ‌ಲ್ಲಿ ಬಾಕಿ ಉಳಿದ ಪ್ರಕರಣ ಎಂದು ಪರಿಗಣಿಸಿ ಆರೋಪಿ ಪತ್ತೆಗೆ ಇನ್ಸ್​ಪೆಕ್ಟರ್‌ ಎಂ.ಎಸ್.ಪಾಟೀಲ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಹುಬ್ಬಳ್ಳಿ: 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ‌.

ಅಮರಗೋಳದ ಚಿಕ್ಕೇರಿ ಪ್ಲಾಟ್‌ನ ಶಿದ್ಲಿಂಗಪ್ಪ ಅಲಿಯಾಸ್‌ ಸಿದ್ದಪ್ಪ ಬಾಗಲಕೋಟೆ ಎಂಬಾತನೇ ಬಂಧಿತ ಆರೋಪಿ.

1999ರಲ್ಲಿ ಆರೋಪಿ ನಗರದ ರಾಧಾಕೃಷ್ಣಗಲ್ಲಿಯ ಮಹೇಶ ಟೈಲರಿಂಗ್‌ ಅಂಗಡಿಯ ಬೀಗ ಮುರಿದು ಬಟ್ಟೆಗಳನ್ನು ಕಳವು ಮಾಡಿದ್ದ. ಆಗ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಜಾಮೀನು ಪಡೆದಿದ್ದ ಆತ ತಲೆಮರೆಸಿಕೊಂಡಿದ್ದ.

ಕೋರ್ಟ್‌ನ‌ಲ್ಲಿ ಬಾಕಿ ಉಳಿದ ಪ್ರಕರಣ ಎಂದು ಪರಿಗಣಿಸಿ ಆರೋಪಿ ಪತ್ತೆಗೆ ಇನ್ಸ್​ಪೆಕ್ಟರ್‌ ಎಂ.ಎಸ್.ಪಾಟೀಲ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.