ETV Bharat / state

ಮನಾಲಿಯಲ್ಲಿರುವ ಕನ್ನಡತಿಯನ್ನು ಇಂದು ಭೇಟಿಯಾಗಲಿರುವ ಅಧಿಕಾರಿ... ಈಟಿವಿ ಭಾರತ್​ ಇಂಪ್ಯಾಕ್ಟ್​ - ಉಕ್ಕಡಗಾತ್ರಿ

ಮನಾಲಿಯ ಮಾನಸಿಕ ಸಾಂತ್ವನ ಕೇಂದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ದಾವಣಗೆರೆ ಮೂಲದವರು ಎನ್ನಲಾದ ಸುಶೀಲಮ್ಮ ಅವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಮಹಿಳೆಯ ಕುರಿತು ಮಾಹಿತಿ ಕಲೆಹಾಕಲು ಅಧಿಕಾರಿಯೊಬ್ಬರನ್ನು ಮನಾಲಿಗೆ ಕಳುಹಿಸಿದ್ದು, ವಾಪಸ್​ ಕರೆತರಲು ಅಗತ್ಯವಿರುವ ಶಿಷ್ಟಾಚಾರಗಳ ಕುರಿತು ಪರಿಶೀಲನೆ ನಡೆಸುತ್ತಿದೆ.

ದಾವಣಗೆರೆ ಜಿಲ್ಲಾಧಿಕಾರಿ ಜಿಎನ್​ ಶಿವಮೂರ್ತಿ
author img

By

Published : Mar 11, 2019, 2:22 PM IST

Updated : Mar 11, 2019, 3:35 PM IST

ದಾವಣಗೆರೆ: ಮನಾಲಿಯ ಮಾನಸಿಕ ಸಾಂತ್ವನ ಕೇಂದ್ರದಲ್ಲಿದ್ದಾರೆ ಎನ್ನಲಾದ ದಾವಣಗೆರೆ ಜಿಲ್ಲೆ ಉಕ್ಕಡಗಾತ್ರಿ ಮೂಲದ ಮಹಿಳೆ ಸುಶೀಲಮ್ಮ ಅವರನ್ನು ವಾಪಸ್​ ತವರಿಗೆ ಕರೆತರಲು ಈಟಿವಿ ಭಾರತ್​ ಹಾಕಿದ ಪರಿಶ್ರಮ ಕೊನೆಗೂ ಫಲಿಸಿದೆ.

ವಿಜಯ್ ಕುಮಾರ್

ಈಗಾಗಲೇ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿಧರ್ ಉಕ್ಕಡಗಾತ್ರಿಗೆ ಹೋಗಿ ಅಲ್ಲಿ‌ ಮನೆ ಮನೆಗಳಲ್ಲಿಯೂ ವಿಚಾರಿಸಿದ್ದಾರೆ. ಆದರೆ ಉಕ್ಕಡಗಾತ್ರಿ ಅವರು ಎನ್ನುವುದಕ್ಕೆ ಯಾವ ಪುರಾವೆ ಸಿಕ್ಕಿಲ್ಲ.‌ ಆದರೂ ಉಕ್ಕಡಗಾತ್ರಿ ಹೆಸರು ಹೇಳಿರುವುದರಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ಜೊತೆಗೆ ಜಿಲ್ಲಾಧಿಕಾರಿ ಅವರು ಸುಶೀಲಮ್ಮರನ್ನ ಕರೆತರಲು ವಿಶೇಷ ಮುತುವರ್ಜಿ ವಹಿಸಿದ್ದಾರೆ.‌ ಆದಷ್ಟು ಬೇಗ ದಾವಣಗೆರೆಗೆ ಕರೆದುಕೊಂಡು ಬಂದು ಆಕೆಗೆ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದ್ದಾರೆ.

ದಾವಣಗೆರೆ: ಮನಾಲಿಯ ಮಾನಸಿಕ ಸಾಂತ್ವನ ಕೇಂದ್ರದಲ್ಲಿದ್ದಾರೆ ಎನ್ನಲಾದ ದಾವಣಗೆರೆ ಜಿಲ್ಲೆ ಉಕ್ಕಡಗಾತ್ರಿ ಮೂಲದ ಮಹಿಳೆ ಸುಶೀಲಮ್ಮ ಅವರನ್ನು ವಾಪಸ್​ ತವರಿಗೆ ಕರೆತರಲು ಈಟಿವಿ ಭಾರತ್​ ಹಾಕಿದ ಪರಿಶ್ರಮ ಕೊನೆಗೂ ಫಲಿಸಿದೆ.

ವಿಜಯ್ ಕುಮಾರ್

ಈಗಾಗಲೇ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿಧರ್ ಉಕ್ಕಡಗಾತ್ರಿಗೆ ಹೋಗಿ ಅಲ್ಲಿ‌ ಮನೆ ಮನೆಗಳಲ್ಲಿಯೂ ವಿಚಾರಿಸಿದ್ದಾರೆ. ಆದರೆ ಉಕ್ಕಡಗಾತ್ರಿ ಅವರು ಎನ್ನುವುದಕ್ಕೆ ಯಾವ ಪುರಾವೆ ಸಿಕ್ಕಿಲ್ಲ.‌ ಆದರೂ ಉಕ್ಕಡಗಾತ್ರಿ ಹೆಸರು ಹೇಳಿರುವುದರಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ಜೊತೆಗೆ ಜಿಲ್ಲಾಧಿಕಾರಿ ಅವರು ಸುಶೀಲಮ್ಮರನ್ನ ಕರೆತರಲು ವಿಶೇಷ ಮುತುವರ್ಜಿ ವಹಿಸಿದ್ದಾರೆ.‌ ಆದಷ್ಟು ಬೇಗ ದಾವಣಗೆರೆಗೆ ಕರೆದುಕೊಂಡು ಬಂದು ಆಕೆಗೆ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದ್ದಾರೆ.

Intro:
ಈಟಿವಿ ಭಾರತ್ ಇಂಪ್ಯಾಕ್ಟ್

ಮನಾಲಿಯಲ್ಲಿರುವ ಕನ್ನಡತಿಯನ್ನು ಶೀಘ್ರದಲ್ಲಿಯೇ ಕರೆತರುತ್ತೇವೆ : ಡಿಸಿ ಸತ್ಯಮೂರ್ತಿ

ದಾವಣಗೆರೆ: ಮನಾಲಿಯಲ್ಲಿರುವ ದಾವಣಗೆರೆ ಜಿಲ್ಲೆ ಉಕ್ಕಡಗಾತ್ರಿ ಮೂಲದವರು ಎನ್ನಲಾದ ಕನ್ನಡತಿ ಮಾನಸಿಕ ಅಸ್ವಸ್ಥ ಮಹಿಳೆಯಾದ ಸುಶೀಲಮ್ಮರನ್ನು ಕರೆ ತರುವ ಪ್ರಯತ್ನ ನಡೆದಿದೆ. ಈಗಾಗಲೇ ಆಕೆಯನ್ನು ದಾವಣಗೆರೆಗೆ ಕರೆದುಕೊಂಡು ಬರಲು ತಂಡವನ್ನು ಅಲ್ಲಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಎನ್. ಸತ್ಯಮೂರ್ತಿ ಹೇಳಿದ್ದಾರೆ.

ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಈಗಾಗಲೇ ಶಿಮ್ಲಾದ ಸಾಮಾಜಿಕ ಕಾರ್ಯಕರ್ತ ಸುನೀಲ್‌ ಶರ್ಮಾರನ್ನು ಸಂಪರ್ಕಿಸಲಾಗಿದೆ. ಅವರಿಂದ ಮಹಿಳೆಯ ಮಾಹಿತಿ ಪಡೆದಿದ್ದು, ಈಗ ಮನಾಲಿಯಾದ ಮಾನಸಿಕ ಅಸ್ವಸ್ಥ ಕೇಂದ್ರದಲ್ಲಿ ಇದ್ದಾರೆ. ಆದಷ್ಟು ಬೇಗ ಆಕೆಯನ್ನು ಇಲ್ಲಿಗೆ ಕರೆ ತರಲಾಗುವುದು ಎಂದು ತಿಳಿಸಿದ್ದಾರೆ.

ಸುಶೀಲಮ್ಮ ಕನ್ನಡದಲ್ಲಿ ಮಾತನಾಡುತ್ತಿದ್ದು, ಆಕೆ ಉಕ್ಕಡಗಾತ್ರಿ ಉಕ್ಕಡಗಾತ್ರಿ ಎಂದು ಹೇಳುತ್ತಿದ್ದಾಳೆ ವಿನಾಃ ಬೇರೆ ಯಾವ ವಿಷಯ ಹೇಳುತ್ತಿಲ್ಲ. ಹಾಗಾಗಿ ಮಾಹಿತಿ ಸಮರ್ಪಕವಾಗಿ ಸಿಗುತ್ತಿಲ್ಲ.‌ ಈ ಸಂಬಂಧ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ವಿಕಲಚೇತನ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಉಕ್ಕಡಗಾತ್ರಿಯಾಗಲೀ, ಸುತ್ತಮುತ್ತಲಿನ ಹಳ್ಳಿಯವರಾಗಲೀ, ಬೇರೆ ಜಿಲ್ಲೆಯವರು ಆಗಿದ್ದರೂ ಅವರನ್ನು ಸಂಬಂಧಪಟ್ಟವರ ಜೊತೆ ಕಳುಹಿಸಿಕೊಡಲು ಕ್ರಮ ಕೈಗೊಳ್ಳುತ್ತೇವೆ ಎಂದು ವಿವರಿಸಿದ್ದಾರೆ.

ಸುಶೀಲಮ್ಮ ಮಾನಸಿಕ ಅಸ್ವಸ್ಥೆಯಾಗಿರುವ ಕಾರಣ ಚಿಕಿತ್ಸೆ‌ ಕೊಡಿಸಬೇಕಾಗಿದೆ. ಕೆಲವು ಶಿಷ್ಟಾಚಾರಗಳ ಪಾಲನೆ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಆದಷ್ಟು ಬೇಗ ಸುಶೀಲಮ್ಮರನ್ನು ದಾವಣಗೆರೆಗೆ ಕರೆದುಕೊಂಡು ಬರುತ್ತೇವೆ. ಇಷ್ಟು ದಿನದೊಳಗೆ ಕರೆದುಕೊಂಡು ಬರುತ್ತೇವೆ ಎಂದು ಹೇಳಲಾಗದು. ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಬಳಿಕ ಇಲ್ಲಿಗೆ ಮನಾಲಿ ಮಾನಸಿಕ ಅಸ್ವಸ್ಥ ಕೇಂದ್ರದವರು ಕಳುಹಿಸಿಕೊಡಲಿದ್ದಾರೆ ಎಂದು ಸತ್ಯಮೂರ್ತಿ ಅವರು ಮಾಹಿತಿ ನೀಡಿದರು.

ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್ ಈಟಿವಿ ಭಾರತ್ ಜೊತೆ ಮಾತನಾಡಿ, ಈಗಾಗಲೇ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖ ದುರ್ಗೇಶ್ ಅವರನ್ನು ವಿಮಾನದ ಮೂಲಕ ಮನಾಲಿಗೆ ಕಳುಹಿಸಿಕೊಡಲಾಗಿದೆ.‌ ಈಗಾಗಲೇ ಅಲ್ಲಿಗೆ ಹೋಗಿದ್ದಾರೆ.‌ ಆಕೆಯನ್ನು ದಾವಣಗೆರೆಗೆ ಕರೆದುಕೊಂಡು ಬಂದ ಬಳಿಕ ಸಂಬಂಧಿಕರು ಸಿಕ್ಕರೆ ಅವರ ಜೊತೆ ಸುಶೀಲಮ್ಮರನ್ನ ಕಳುಹಿಸಿಕೊಡುತ್ತೇವೆ. ಇಲ್ಲದಿದ್ದರೆ ಇಲ್ಲಿನ‌ ಮಾನಸಿಕ ಅಸ್ವಸ್ಥ ಕೇಂದ್ರ ಅಥವಾ ವೃದ್ಧಾಶ್ರಮದಲ್ಲಿ ವಸತಿ ಸೌಲಭ್ಯ ಕಲ್ಪಿಸುತ್ತೇವೆ ಎಂದಿದ್ದಾರೆ.

ಈಗಾಗಲೇ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿಧರ್ ಉಕ್ಕಡಗಾತ್ರಿಗೆ ಹೋಗಿ ಅಲ್ಲಿ‌ ಮನೆ ಮನೆಗಳಲ್ಲಿಯೂ ವಿಚಾರಿಸಿದ್ದಾರೆ. ಆದರೆ ಉಕ್ಕಡಗಾತ್ರಿ ಅವರು ಎನ್ನುವುದಕ್ಕೆ ಯಾವ ಪುರಾವೆ ಸಿಕ್ಕಿಲ್ಲ.‌ ಆದರೂ ಉಕ್ಕಡಗಾತ್ರಿ ಹೆಸರು ಹೇಳಿರುವುದರಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ಜೊತೆಗೆ ಜಿಲ್ಲಾಧಿಕಾರಿ ಅವರು ಸುಶೀಲಮ್ಮರನ್ನ ಕರೆತರಲು ವಿಶೇಷ ಮುತುವರ್ಜಿ ವಹಿಸಿದ್ದಾರೆ.‌ಆದಷ್ಟು ಬೇಗ ದಾವಣಗೆರೆಗೆ ಕರೆದುಕೊಂಡು ಬಂದು ಆಕೆಗೆ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದ್ದಾರೆ.


Body:
ಈಟಿವಿ ಭಾರತ್ ಇಂಪ್ಯಾಕ್ಟ್

ಮನಾಲಿಯಲ್ಲಿರುವ ಕನ್ನಡತಿಯನ್ನು ಶೀಘ್ರದಲ್ಲಿಯೇ ಕರೆತರುತ್ತೇವೆ : ಡಿಸಿ ಸತ್ಯಮೂರ್ತಿ

ದಾವಣಗೆರೆ: ಮನಾಲಿಯಲ್ಲಿರುವ ದಾವಣಗೆರೆ ಜಿಲ್ಲೆ ಉಕ್ಕಡಗಾತ್ರಿ ಮೂಲದವರು ಎನ್ನಲಾದ ಕನ್ನಡ ಮಾತನಾಡುವ ಮಾನಸಿಕ ಅಸ್ವಸ್ಥ ಮಹಿಳೆಯಾದ ಸುಶೀಲಮ್ಮರನ್ನು ಕರೆ ತರುವ ಪ್ರಯತ್ನ ನಡೆದಿದೆ. ಈಗಾಗಲೇ ಆಕೆಯನ್ನು ದಾವಣಗೆರೆಗೆ ಕರೆದುಕೊಂಡು ಬರಲು ವಿಶೇಷ ತಂಡವನ್ನು ಅಲ್ಲಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಎನ್. ಸತ್ಯಮೂರ್ತಿ ಹೇಳಿದ್ದಾರೆ.

ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಈಗಾಗಲೇ ಶಿಮ್ಲಾದ ಸಾಮಾಜಿಕ ಕಾರ್ಯಕರ್ತ ಸುನೀಲ್‌ ಶರ್ಮಾರನ್ನು ಸಂಪರ್ಕಿಸಲಾಗಿದೆ. ಅವರಿಂದ ಮಹಿಳೆಯ ಮಾಹಿತಿ ಪಡೆದಿದ್ದು, ಈಗ ಮನಾಲಿಯಾದ ಮಾನಸಿಕ ಅಸ್ವಸ್ಥ ಕೇಂದ್ರದಲ್ಲಿ ಇದ್ದಾರೆ. ಆದಷ್ಟು ಬೇಗ ಆಕೆಯನ್ನು ಇಲ್ಲಿಗೆ ಕರೆ ತರಲಾಗುವುದು ಎಂದು ತಿಳಿಸಿದ್ದಾರೆ.

ಸುಶೀಲಮ್ಮ ಕನ್ನಡದಲ್ಲಿ ಮಾತನಾಡುತ್ತಿದ್ದು, ಆಕೆ ಉಕ್ಕಡಗಾತ್ರಿ ಉಕ್ಕಡಗಾತ್ರಿ ಎಂದು ಹೇಳುತ್ತಿದ್ದಾಳೆ ವಿನಾಃ ಬೇರೆ ಯಾವ ವಿಷಯ ಹೇಳುತ್ತಿಲ್ಲ. ಹಾಗಾಗಿ ಆಕೆಗೆ ಸಂಬಂಧಿಸಿದ ಮಾಹಿತಿ ಸಮರ್ಪಕವಾಗಿ ಸಿಗುತ್ತಿಲ್ಲ.‌ ಈ ಸಂಬಂಧ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ವಿಕಲಚೇತನ ಅಧಿಕಾರಿಗಳ ಜೊತೆ ಈ ಪ್ರಕರಣದ ಬಗ್ಗೆ ಮಾತನಾಡಿದ್ದೇನೆ. ಉಕ್ಕಡಗಾತ್ರಿಯಾಗಲೀ, ಸುತ್ತಮುತ್ತಲಿನ ಹಳ್ಳಿಯವರಾಗಲೀ, ಬೇರೆ ಜಿಲ್ಲೆಯವರು ಆಗಿದ್ದರೂ ಅವರನ್ನು ಸಂಬಂಧಪಟ್ಟವರ ಜೊತೆ ಕಳುಹಿಸಿಕೊಡಲು ಕ್ರಮ ಕೈಗೊಳ್ಳುತ್ತೇವೆ ಎಂದು ವಿವರಿಸಿದ್ದಾರೆ.

ಸುಶೀಲಮ್ಮ ಮಾನಸಿಕ ಅಸ್ವಸ್ಥೆಯಾಗಿರುವ ಕಾರಣ ಚಿಕಿತ್ಸೆ‌ ಕೊಡಿಸಬೇಕಾಗಿದೆ. ಕೆಲವು ಶಿಷ್ಟಾಚಾರಗಳ ಪಾಲನೆ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಆದಷ್ಟು ಬೇಗ ಸುಶೀಲಮ್ಮರನ್ನು ದಾವಣಗೆರೆಗೆ ಕರೆದುಕೊಂಡು ಬರುತ್ತೇವೆ. ಇಷ್ಟು ದಿನದೊಳಗೆ ಕರೆದುಕೊಂಡು ಬರುತ್ತೇವೆ ಎಂದು ಹೇಳಲಾಗದು. ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಬಳಿಕ ಇಲ್ಲಿಗೆ ಮನಾಲಿ ಮಾನಸಿಕ ಅಸ್ವಸ್ಥ ಕೇಂದ್ರದವರು ಕಳುಹಿಸಿಕೊಡಲಿದ್ದಾರೆ ಎಂದು ಸತ್ಯಮೂರ್ತಿ ಅವರು ಮಾಹಿತಿ ನೀಡಿದರು.

ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್ ಈಟಿವಿ ಭಾರತ್ ಜೊತೆ ಮಾತನಾಡಿ, ಈಗಾಗಲೇ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖ ದುರ್ಗೇಶ್ ಅವರನ್ನು ವಿಮಾನದ ಮೂಲಕ ಮನಾಲಿಗೆ ಕಳುಹಿಸಿಕೊಡಲಾಗಿದೆ.‌ ಈಗಾಗಲೇ ಅಲ್ಲಿಗೆ ಹೋಗಿದ್ದಾರೆ.‌ ಆಕೆಯನ್ನು ದಾವಣಗೆರೆಗೆ ಕರೆದುಕೊಂಡು ಬಂದ ಬಳಿಕ ಸಂಬಂಧಿಕರು ಸಿಕ್ಕರೆ ಅವರ ಜೊತೆ ಸುಶೀಲಮ್ಮರನ್ನ ಕಳುಹಿಸಿಕೊಡುತ್ತೇವೆ. ಇಲ್ಲದಿದ್ದರೆ ಇಲ್ಲಿನ‌ ಮಾನಸಿಕ ಅಸ್ವಸ್ಥ ಕೇಂದ್ರ ಅಥವಾ ವೃದ್ಧಾಶ್ರಮದಲ್ಲಿ ವಸತಿ ಸೌಲಭ್ಯ ಕಲ್ಪಿಸುತ್ತೇವೆ ಎಂದಿದ್ದಾರೆ.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿಧರ್ ಉಕ್ಕಡಗಾತ್ರಿಗೆ ಹೋಗಿ ಅಲ್ಲಿ‌ ಮನೆ ಮನೆಗಳಲ್ಲಿಯೂ ವಿಚಾರಿಸಿದ್ದಾರೆ. ಆದರೆ ಉಕ್ಕಡಗಾತ್ರಿ ಅವರು ಎನ್ನುವುದಕ್ಕೆ ಯಾವ ಪುರಾವೆ ಸಿಕ್ಕಿಲ್ಲ.‌ ಆದರೂ ಉಕ್ಕಡಗಾತ್ರಿ ಹೆಸರು ಹೇಳಿರುವುದರಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ಜೊತೆಗೆ ಜಿಲ್ಲಾಧಿಕಾರಿ ಅವರು ಸುಶೀಲಮ್ಮರನ್ನ ಕರೆತರಲು ವಿಶೇಷ ಮುತುವರ್ಜಿ ವಹಿಸಿದ್ದಾರೆ.‌ಆದಷ್ಟು ಬೇಗ ದಾವಣಗೆರೆಗೆ ಕರೆದುಕೊಂಡು ಬಂದು ಆಕೆಗೆ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದ್ದಾರೆ.

ಸುಶೀಲಮ್ಮ‌ ಮನಾಲಿಯ ಮಾನಸಿಕ ಅಸ್ವಸ್ಥ ಕೇಂದ್ರದಲ್ಲಿ ಇರುವ ಬಗ್ಗೆ ಈಟಿವಿ ಭಾರತ್ ನಲ್ಲಿ ವರದಿ ಪ್ರಸಾರವಾಗಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಸತ್ಯಮೂರ್ತಿ ಅವರು ಆಕೆ ಕರೆತರಲು ಶ್ರಮಿಸುತ್ತಿದ್ದಾರೆ. ಇದು ಈಟಿವಿ ಭಾರತ್ ಇಂಪ್ಯಾಕ್ಟ್ ಆಗಿದೆ. ಒಟ್ಟಿನಲ್ಲಿ ಭಾಷೆ ಬಾರದ ಊರಿನಲ್ಲಿ ಪರದಾಡುತ್ತಿರುವ ಕನ್ನಡತಿ ದಾವಣಗೆರೆಗೆ ಸದ್ಯದಲ್ಲಿಯೇ ಬರಲಿದ್ದಾರೆ.


Conclusion:
Last Updated : Mar 11, 2019, 3:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.