ETV Bharat / state

ಸಲೂನ್ ಶಾಪ್ ಒಳಗಿದ್ದವರಿಗೆ ಲಾಠಿ ಬಿಸಿ ಮುಟ್ಟಿಸಿದ ಪುರಸಭೆ ಮುಖ್ಯಾಧಿಕಾರಿ

author img

By

Published : Apr 12, 2020, 3:32 PM IST

ಲಾಕ್​ಡೌನ್​ ಧಿಕ್ಕರಿಸಿ ಸಲೂನ್​ ಶಾಪ್​​ ಒಳಗೆ ಹೇರ್‌ ಕಟ್ಟಿಂಗ್‌ ಮಾಡುತ್ತಿದ್ದ ಅಂಗಡಿ ಮೇಲೆ ಪುರಸಭೆ ಅಧಿಕಾರಿಗಳು ದಾಳಿ ನಡೆಸಿದರು.

saloon shop open during lockdown
ಸಲೂನ್ ಶಾಪ್ ಓಪನ್​​

ದಾವಣಗೆರೆ: ಬಾಗಿಲು ಮುಚ್ಚಿಕೊಂಡು ಕಾರ್ಯ ನಿರ್ವಹಿಸುತ್ತಿದ್ದ ಸಲೂನ್ ಶಾಪ್‌ನೊಳಗಿದ್ದ ಯುವಕರಿಗೆ ಪುರಸಭೆ ಮುಖ್ಯಾಧಿಕಾರಿ ಲಾಠಿ ಬೀಸಿ ಬಿಸಿ ಮುಟ್ಟಿಸಿದ ಘಟನೆ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ನಡೆದಿದೆ.

ಸಲೂನ್ ಶಾಪ್ ಓಪನ್​​
ಲಾಕ್‌ಡೌನ್ ಇದ್ದರೂ ಕ್ಷೌರದಂಗಡಿಯ ಬಾಗಿಲು ಮುಚ್ಚಿ ಒಳಗೆ ಕಟಿಂಗ್ ಮಾಡುತ್ತಿದ್ದ ಬಗ್ಗೆ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ, ಹತ್ತಕ್ಕೂ ಹೆಚ್ವು ಮಂದಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಈ ವೇಳೆ ಕ್ಷೌರಿಕನನ್ನು ತೀವ್ರ ತರಾಟೆಗೆ ತೆಗೆದುಕೊಂಡರು.‌
ಮಲೆಬೆನ್ನೂರು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಒಳಗಿದ್ದ ಯುವಕರಿಗೆ ಲಾಠಿ ರುಚಿ ತೋರಿಸಲಾಯಿತು. ದಾಳಿ ಆಗುತ್ತಿದ್ದಂತೆ ಅಂಗಡಿಯಲ್ಲಿ ಸೇರಿದ್ದ ಜನ ಓಡಿ ಹೋದರು. ಬಳಿಕ ಕಟಿಂಗ್ ಶಾಪ್ ಬಂದ್ ಮಾಡಿಸಲಾಯಿತು.

ದಾವಣಗೆರೆ: ಬಾಗಿಲು ಮುಚ್ಚಿಕೊಂಡು ಕಾರ್ಯ ನಿರ್ವಹಿಸುತ್ತಿದ್ದ ಸಲೂನ್ ಶಾಪ್‌ನೊಳಗಿದ್ದ ಯುವಕರಿಗೆ ಪುರಸಭೆ ಮುಖ್ಯಾಧಿಕಾರಿ ಲಾಠಿ ಬೀಸಿ ಬಿಸಿ ಮುಟ್ಟಿಸಿದ ಘಟನೆ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ನಡೆದಿದೆ.

ಸಲೂನ್ ಶಾಪ್ ಓಪನ್​​
ಲಾಕ್‌ಡೌನ್ ಇದ್ದರೂ ಕ್ಷೌರದಂಗಡಿಯ ಬಾಗಿಲು ಮುಚ್ಚಿ ಒಳಗೆ ಕಟಿಂಗ್ ಮಾಡುತ್ತಿದ್ದ ಬಗ್ಗೆ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ, ಹತ್ತಕ್ಕೂ ಹೆಚ್ವು ಮಂದಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಈ ವೇಳೆ ಕ್ಷೌರಿಕನನ್ನು ತೀವ್ರ ತರಾಟೆಗೆ ತೆಗೆದುಕೊಂಡರು.‌
ಮಲೆಬೆನ್ನೂರು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಒಳಗಿದ್ದ ಯುವಕರಿಗೆ ಲಾಠಿ ರುಚಿ ತೋರಿಸಲಾಯಿತು. ದಾಳಿ ಆಗುತ್ತಿದ್ದಂತೆ ಅಂಗಡಿಯಲ್ಲಿ ಸೇರಿದ್ದ ಜನ ಓಡಿ ಹೋದರು. ಬಳಿಕ ಕಟಿಂಗ್ ಶಾಪ್ ಬಂದ್ ಮಾಡಿಸಲಾಯಿತು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.