ETV Bharat / state

ಬಾಕಿ ಹಣ ನೀಡಲಾಗದೆ ರೈಸ್ ಮಿಲ್​ ಮಾಲೀಕ ಆತ್ಮಹತ್ಯೆ, ರೈತರು ಕಂಗಾಲು

ಹನುಮೇಶ್ ಗೌಡ ಮೃತ ವ್ಯಕ್ತಿ. ರೈತರಿಗೆ ಕೋಟ್ಯಂತರ ರೂಪಾಯಿ ಬಾಕಿ ಕೊಡಬೇಕಿದ್ದ ರೈಸ್ ಮಿಲ್ ಮಾಲೀಕ ಸಾಲದ ಹೊರೆ ಹೆಚ್ಚಾದ ಕಾರಣ ಬೇಸತ್ತು ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದರು..

author img

By

Published : Jul 21, 2020, 8:30 PM IST

dsd
ಬಾಕಿ ಹಣ ನೀಡಲಾಗದೇ ರೈಸ್ ಮಿಲ್​ ಮಾಲೀಕ ಆತ್ಮಹತ್ಯೆ

ದಾವಣಗೆರೆ : ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹರಿಹರದ ಎಂ ಬಿ ರೈಸ್ ಮಿಲ್ ಮಾಲೀಕ ನಗರದ ಎಸ್ ಎಸ್ ಹೈಟೆಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಬಾಕಿ ಹಣ ನೀಡಲಾಗದೇ ರೈಸ್ ಮಿಲ್​ ಮಾಲೀಕ ಆತ್ಮಹತ್ಯೆ

ಹನುಮೇಶ್ ಗೌಡ ಮೃತ ವ್ಯಕ್ತಿ. ರೈತರಿಗೆ ಕೋಟ್ಯಂತರ ರೂಪಾಯಿ ಬಾಕಿ ಕೊಡಬೇಕಿದ್ದ ರೈಸ್ ಮಿಲ್ ಮಾಲೀಕ ಸಾಲದ ಹೊರೆ ಹೆಚ್ಚಾದ ಕಾರಣ ಬೇಸತ್ತು ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದರು. ರೈತರಿಂದ ಭತ್ತ ಖರೀದಿ‌ ಮಾಡಿ ರೈಸ್ ಮಿಲ್ ನಡೆಸುತ್ತಿದ್ದರು. ರೈತರಿಗೆ ಬಾಕಿ ನೀಡುವಂತೆ ಆಗ್ರಹಿಸಿ‌ ಒಂದು ವರ್ಷದಿಂದ ರೈತರು ಹೋರಾಟ ನಡೆಸುತ್ತಿದ್ದರು.‌

ಹಣ ನೀಡುವುದಾಗಿ ರೈಸ್ ಮಿಲ್ ಮಾಲೀಕ ಭರವಸೆ ನೀಡಿದ್ದರು.‌ ಆದರೆ, ಹನುಮೇಶ್ ಗೌಡ ಸಾವಿನಿಂದಾಗಿ ನೂರಾರು ರೈತರು ಆತಂಕದಲ್ಲಿದ್ದಾರೆ‌. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಆವರಣದಲ್ಲಿ ರೈತರು ಸೇರಿದ್ದರು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ದಾವಣಗೆರೆ : ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹರಿಹರದ ಎಂ ಬಿ ರೈಸ್ ಮಿಲ್ ಮಾಲೀಕ ನಗರದ ಎಸ್ ಎಸ್ ಹೈಟೆಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಬಾಕಿ ಹಣ ನೀಡಲಾಗದೇ ರೈಸ್ ಮಿಲ್​ ಮಾಲೀಕ ಆತ್ಮಹತ್ಯೆ

ಹನುಮೇಶ್ ಗೌಡ ಮೃತ ವ್ಯಕ್ತಿ. ರೈತರಿಗೆ ಕೋಟ್ಯಂತರ ರೂಪಾಯಿ ಬಾಕಿ ಕೊಡಬೇಕಿದ್ದ ರೈಸ್ ಮಿಲ್ ಮಾಲೀಕ ಸಾಲದ ಹೊರೆ ಹೆಚ್ಚಾದ ಕಾರಣ ಬೇಸತ್ತು ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದರು. ರೈತರಿಂದ ಭತ್ತ ಖರೀದಿ‌ ಮಾಡಿ ರೈಸ್ ಮಿಲ್ ನಡೆಸುತ್ತಿದ್ದರು. ರೈತರಿಗೆ ಬಾಕಿ ನೀಡುವಂತೆ ಆಗ್ರಹಿಸಿ‌ ಒಂದು ವರ್ಷದಿಂದ ರೈತರು ಹೋರಾಟ ನಡೆಸುತ್ತಿದ್ದರು.‌

ಹಣ ನೀಡುವುದಾಗಿ ರೈಸ್ ಮಿಲ್ ಮಾಲೀಕ ಭರವಸೆ ನೀಡಿದ್ದರು.‌ ಆದರೆ, ಹನುಮೇಶ್ ಗೌಡ ಸಾವಿನಿಂದಾಗಿ ನೂರಾರು ರೈತರು ಆತಂಕದಲ್ಲಿದ್ದಾರೆ‌. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಆವರಣದಲ್ಲಿ ರೈತರು ಸೇರಿದ್ದರು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.