ETV Bharat / state

ಮಾನವೀಯತೆ: ಮಂಗಳಮುಖಿಯರಿಗೆ ಸೊಪ್ಪು ನೀಡಿದ ಮಹಿಳೆ

author img

By

Published : May 27, 2021, 6:54 PM IST

ಕೊರೊನಾ ನಡುವೆ ಸಂಕಷ್ಟಕ್ಕೆ ಸಿಲುಕಿರುವ ಮಂಗಳಮುಖಿಯರಿಗೆ ತಳ್ಳುವ ಗಾಡಿಯಲ್ಲಿ ಬಂದ ಮಹಿಳೆ ಸೊಪ್ಪು ನೀಡಿ ಮಾನವೀಯತೆ ಮೆರೆದಿರುವ ಘಟನೆ ದಾವಣಗೆರೆ ನಗರದ ನಗರದ ಕೆಆರ್ ಮಾರುಕಟ್ಟೆಯಲ್ಲಿ ನಡೆದಿದೆ.

ಮಂಗಳಮುಖಿಯರಿಗೆ ಸೊಪ್ಪು ನೀಡಿದ ಮಹಿಳೆ
ಮಂಗಳಮುಖಿಯರಿಗೆ ಸೊಪ್ಪು ನೀಡಿದ ಮಹಿಳೆ

ದಾವಣಗೆರೆ: ಕೊರೊನಾ, ಲಾಕ್​ಡೌನ್​ ಸಮಯದಲ್ಲಿ ಕಷ್ಟದಲ್ಲಿರುವ ಮಂಗಳ ಮುಖಿಯರಿಗೆ ಮಹಿಳೆಯೊಬ್ಬರು ಸೊಪ್ಪು ನೀಡಿ ಮಾನವೀಯತೆ ಮೆರೆದಿದ್ದಾರೆ.

ಮಂಗಳಮುಖಿಯರಿಗೆ ಸೊಪ್ಪು ನೀಡಿದ ಮಹಿಳೆ

ನಗರದ ಕೆಆರ್ ಮಾರುಕಟ್ಟೆಯಲ್ಲಿ ಜಿಲ್ಲಾಡಳಿತದಿಂದ ಮಂಗಳಮುಖಿಯರಿಗೆ ಫುಡ್ ಕಿಟ್ ನೀಡುವ ವೇಳೆ ತಳ್ಳುವ ಗಾಡಿಯಲ್ಲಿ ಸೊಪ್ಪು ಮಾರುತ್ತಾ ಬಂದ ಅಂಬುಜಮ್ಮ, ಕಳೆದ ವರ್ಷ ಕೂಡ ಸೊಪ್ಪು ನೀಡಿದ್ದೆ, ಈ ಬಾರಿನೂ ನೀಡ್ಬೇಕು ಎಂದು ಮುಂದೆ ಬಂದು ತಹಶೀಲ್ದಾರ್ ಗಿರೀಶ್ ಸಮ್ಮುಖದಲ್ಲಿ ಮಂಗಳಮುಖಿಯರಿಗೆ ಸೊಪ್ಪು ನೀಡಿದ್ದಾರೆ.

ಅಂಬುಜಮ್ಮ ಸಾಮಾಜಿಕ ಕಳಕಳಿ ಗಮನಿಸಿದ ತಹಶೀಲ್ದಾರ್ ಗಿರೀಶ್ ತಾಲೂಕು ಆಡಳಿತದ ವತಿಯಿಂದ ಹೊಸ ತಳ್ಳುವ ಗಾಡಿ ನೀಡಿ ಪ್ರತಿ ದಿನ ಮುವತ್ತು ರೂಪಾಯಿ ಬಾಡಿಗೆ ನೀಡೋದನ್ನ ತಪ್ಪಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಜನ ಸಂಕಷ್ಣಕ್ಕೀಡಾಗಿದ್ದಾರೆ. ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ ಮಂಗಳ ಮುಖಿಯರು ಕಷ್ಟದಲ್ಲಿದ್ದಾರೆ. ಜೀವನ ನಡೆಸಲು ಆಗದೆ ಸಂಕಷ್ಟಕ್ಕೀಡಾಗಿದ್ದನ್ನು ಗಮನಿಸಿದ ಜಿಲ್ಲಾಡಳಿತ ಮಂಗಳ ಮುಖಿಯರ ಸಹಾಯಕ್ಕೆ ನಿಂತಿದೆ. ಜಿಲ್ಲಾಡತದಿಂದ 200 ಆಹಾರ ಕಿಟ್​ಗಳನ್ನು ವಿತರಿಸಲಾಗಿದೆ.

ಓದಿ:CD case: ’ಕೂಡಲೇ ರೇಪಿಸ್ಟ್ ರಮೇಶ್​ನನ್ನು ಬಂಧಿಸಿ’ - ಡಿಕೆಶಿ ಆಗ್ರಹ

ದಾವಣಗೆರೆ: ಕೊರೊನಾ, ಲಾಕ್​ಡೌನ್​ ಸಮಯದಲ್ಲಿ ಕಷ್ಟದಲ್ಲಿರುವ ಮಂಗಳ ಮುಖಿಯರಿಗೆ ಮಹಿಳೆಯೊಬ್ಬರು ಸೊಪ್ಪು ನೀಡಿ ಮಾನವೀಯತೆ ಮೆರೆದಿದ್ದಾರೆ.

ಮಂಗಳಮುಖಿಯರಿಗೆ ಸೊಪ್ಪು ನೀಡಿದ ಮಹಿಳೆ

ನಗರದ ಕೆಆರ್ ಮಾರುಕಟ್ಟೆಯಲ್ಲಿ ಜಿಲ್ಲಾಡಳಿತದಿಂದ ಮಂಗಳಮುಖಿಯರಿಗೆ ಫುಡ್ ಕಿಟ್ ನೀಡುವ ವೇಳೆ ತಳ್ಳುವ ಗಾಡಿಯಲ್ಲಿ ಸೊಪ್ಪು ಮಾರುತ್ತಾ ಬಂದ ಅಂಬುಜಮ್ಮ, ಕಳೆದ ವರ್ಷ ಕೂಡ ಸೊಪ್ಪು ನೀಡಿದ್ದೆ, ಈ ಬಾರಿನೂ ನೀಡ್ಬೇಕು ಎಂದು ಮುಂದೆ ಬಂದು ತಹಶೀಲ್ದಾರ್ ಗಿರೀಶ್ ಸಮ್ಮುಖದಲ್ಲಿ ಮಂಗಳಮುಖಿಯರಿಗೆ ಸೊಪ್ಪು ನೀಡಿದ್ದಾರೆ.

ಅಂಬುಜಮ್ಮ ಸಾಮಾಜಿಕ ಕಳಕಳಿ ಗಮನಿಸಿದ ತಹಶೀಲ್ದಾರ್ ಗಿರೀಶ್ ತಾಲೂಕು ಆಡಳಿತದ ವತಿಯಿಂದ ಹೊಸ ತಳ್ಳುವ ಗಾಡಿ ನೀಡಿ ಪ್ರತಿ ದಿನ ಮುವತ್ತು ರೂಪಾಯಿ ಬಾಡಿಗೆ ನೀಡೋದನ್ನ ತಪ್ಪಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಜನ ಸಂಕಷ್ಣಕ್ಕೀಡಾಗಿದ್ದಾರೆ. ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ ಮಂಗಳ ಮುಖಿಯರು ಕಷ್ಟದಲ್ಲಿದ್ದಾರೆ. ಜೀವನ ನಡೆಸಲು ಆಗದೆ ಸಂಕಷ್ಟಕ್ಕೀಡಾಗಿದ್ದನ್ನು ಗಮನಿಸಿದ ಜಿಲ್ಲಾಡಳಿತ ಮಂಗಳ ಮುಖಿಯರ ಸಹಾಯಕ್ಕೆ ನಿಂತಿದೆ. ಜಿಲ್ಲಾಡತದಿಂದ 200 ಆಹಾರ ಕಿಟ್​ಗಳನ್ನು ವಿತರಿಸಲಾಗಿದೆ.

ಓದಿ:CD case: ’ಕೂಡಲೇ ರೇಪಿಸ್ಟ್ ರಮೇಶ್​ನನ್ನು ಬಂಧಿಸಿ’ - ಡಿಕೆಶಿ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.