ದಾವಣಗೆರೆ : ಬೆಣ್ಣೆ ನಗರಿಯಲ್ಲಿ ಪೊಲೀಸರಿಗೆ ಸೋಂಕು ಹೆಚ್ಚಾಗಿ ತಗುಲುತ್ತಿದೆ. ಈ ಮಹಾಮಾರಿ ಸೋಂಕಿನಿಂದ ಪೊಲೀಸರನ್ನು ರಕ್ಷಿಸಿಕೊಳ್ಳಲು ಅಜಾದ್ನಗರ ಪೊಲೀಸ್ ಠಾಣೆಯಲ್ಲಿ ಸ್ಟೀಂ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್ ಡ್ಯೂಟಿ ಮಾಡುತ್ತಿರುವ ಪೊಲೀಸರಿಗೆ ಠಾಣೆಯಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಮೂರು ಬಾರಿ ಸ್ಟೀಂ ತೆಗೆದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಕುಕ್ಕರ್ನಲ್ಲಿ ನೀರು ಹಾಕಿ ಮಾತ್ರೆ ಹಾಕಿ ಏಕಕಾಲಕ್ಕೆ ಇಬ್ಬರು ಆವಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ: ಕಪಾಳಕ್ಕೆ ಕೊಟ್ಟ ಏಟನ್ನು ಪೊಲೀಸ್ ಕಾನ್ಸ್ಟೇಬಲ್ಗೆ ವಾಪಸ್ ಕೊಟ್ಟ ಅಂಗಡಿ ಮಾಲೀಕ
ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿ ಈವರೆಗೂ 25ಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು ಕಾಣಿಸಿಕೊಂಡಿದ್ದುಕಂಟೋನ್ಮೆಂಟ್ ವಲಯದಲ್ಲಿ, ಮಾರುಕಟ್ಟೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಅಜಾದ್ ನಗರ ಠಾಣೆಯಲ್ಲಿ ಸ್ಟೀಂ ವ್ಯವಸ್ಥೆ ಮಾಡಿದ್ದಾರೆ.