ETV Bharat / state

ವಿಶೇಷ ಪ್ಯಾಕೇಜ್ : ಧನಸಹಾಯ ಪಡೆಯುವ ವಯೋಮಿತಿ ಇಳಿಸುವಂತೆ ಯಕ್ಷಗಾನ ಕಲಾವಿದರ ಮನವಿ

ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್​ನ ಧನಸಹಾಯ ಪಡೆಯಲು ವಯೋಮಿತಿ ನಿಗದಿಪಡಿಸಲಾಗಿದ್ದು, ಇದರಿಂದ ಯುವ ಯಕ್ಷಗಾನ ಕಲಾವಿದರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ, ಫಲಾನುಭವಿಗಳ ವಯೋಮಿತಿ ಇಳಿಸಬೇಕೆಂದು ಮನವಿ ಮಾಡಲಾಗಿದೆ.

author img

By

Published : Jun 2, 2021, 2:35 PM IST

YAKSHAGANA ARTIST URGES TO REDUCE AGE LIMIT OF RELIEF AMOUNT
ಧನಸಹಾಯ ಪಡೆಯಲು ವಯೋಮಿತಿ ಅಡ್ಡಿ

ಮಂಗಳೂರು: ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್​ನಲ್ಲಿ ಕಲಾವಿದರಿಗಾಗಿ ಸಹಾಯಧನ ಘೋಷಿಸಲಾಗಿದೆ. ಆದರೆ, ಅದನ್ನು ಪಡೆಯಲು ವಯೋಮಿತಿ ನಿಗದಿಪಡಿಸಿರುವುದು ಯಕ್ಷಗಾನ ಕಲಾವಿದರ ಅಸಮಧಾನಕ್ಕೆ ಕಾರಣವಾಗಿದೆ.

ಕೊರೊನಾ ಹರಡಲು ಪ್ರಾರಂಭವಾದ ಬಳಿಕ ಯಕ್ಷಗಾನ ಮೇಳಗಳು ಸ್ಥಗಿತಗೊಂಡು, ಕಲಾವಿದರ ಪರಿಸ್ಥಿತಿ ಅಯೋಮಯವಾಗಿದೆ. ಕಳೆದ ಬಾರಿ ಲಾಕ್​ ಡೌನ್​ನಲ್ಲಿ ಆನ್​ಲೈನ್​ ಯಕ್ಷಗಾನ ಪ್ರದರ್ಶನ ನೀಡಲಾಗಿತ್ತು. ಆದರೆ, ಅದರಿಂದ ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಸಾಮಾನ್ಯವಾಗಿ ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನ ಇಲ್ಲದಿರುವುದರಿಂದ ಮೇ ತಿಂಗಳವರೆಗೆ ಶ್ರಮಪಟ್ಟು ದುಡಿದರೆ ಕಲಾವಿದರ ಜೀವನ ಸಾಗಬಹುದು. ಆದರೆ, ಈ ಬಾರಿ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಮೇಳಗಳು ನಡೆಸಲು ಸಾಧ್ಯವಾಗದೇ ಜೀವನದ ಬಂಡಿ ನಡೆಸುವುದು ಹೇಗೆ ಎಂಬ ಚಿಂತೆಯಲ್ಲಿ ಕಲಾವಿದರು ಇದ್ದರು. ಈ ವೇಳೆ, ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಕಲಾವಿದರಿಗೆ ಕೊಂಚ ಸಮಧಾನ ನೀಡಿತ್ತು. ಆದರೆ, ಪ್ಯಾಕೇಜ್ ಸಹಾಯಧನ ಪಡೆಯಲು ವಯೋಮಿತಿ ನಿಗದಿಪಡಿಸಿರುವುದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಧನಸಹಾಯ ಪಡೆಯಲು ಯಕ್ಷಗಾನ ಕಲಾವಿದರಿಗೆ ವಯೋಮಿತಿ ಅಡ್ಡಿ

ಸರ್ಕಾರದ ವಿಶೇಷ ಪ್ಯಾಕೇಜ್​ನ ಧನ ಸಹಾಯ ಪಡೆಯಲು ಕಲಾವಿದರಿಗೆ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಇದರಿಂದ ಯಕ್ಷಗಾನ ಕಲಾವಿದರಿಗೆ ಸಮಸ್ಯೆಯಾಗುತ್ತಿದೆ. ಕರಾವಳಿ ಭಾಗದಲ್ಲಿ 15 ರ ಹರೆಯದಲ್ಲೇ ಯಕ್ಷಗಾನ ಮೇಳ ಸೇರುವ ಯುವ ಕಲಾವಿದರಿದ್ದಾರೆ. ಸಹಾಯಧನ ಪಡೆಯಲು 35 ವರ್ಷ ನಿಗದಿಪಡಿಸಿರುವುದು ಯುವ ಕಲಾವಿದರಿಗೆ ಸರ್ಕಾರದ ಸೌಲಭ್ಯ ಸಿಗದಂತೆ ಮಾಡಿದೆ. ಹಾಗಾಗಿ, ವಯೋಮಿತಿ ಇಳಿಸುವಂತೆ ಕಲಾವಿದರು ಆಗ್ರಹಿಸಿದ್ದಾರೆ.

ಓದಿ : ವೃದ್ಧಾಶ್ರಮಕ್ಕೆ 1ಲಕ್ಷ ರೂ. ದೇಣಿಗೆ ನೀಡಿ 42ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

ಮಂಗಳೂರು: ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್​ನಲ್ಲಿ ಕಲಾವಿದರಿಗಾಗಿ ಸಹಾಯಧನ ಘೋಷಿಸಲಾಗಿದೆ. ಆದರೆ, ಅದನ್ನು ಪಡೆಯಲು ವಯೋಮಿತಿ ನಿಗದಿಪಡಿಸಿರುವುದು ಯಕ್ಷಗಾನ ಕಲಾವಿದರ ಅಸಮಧಾನಕ್ಕೆ ಕಾರಣವಾಗಿದೆ.

ಕೊರೊನಾ ಹರಡಲು ಪ್ರಾರಂಭವಾದ ಬಳಿಕ ಯಕ್ಷಗಾನ ಮೇಳಗಳು ಸ್ಥಗಿತಗೊಂಡು, ಕಲಾವಿದರ ಪರಿಸ್ಥಿತಿ ಅಯೋಮಯವಾಗಿದೆ. ಕಳೆದ ಬಾರಿ ಲಾಕ್​ ಡೌನ್​ನಲ್ಲಿ ಆನ್​ಲೈನ್​ ಯಕ್ಷಗಾನ ಪ್ರದರ್ಶನ ನೀಡಲಾಗಿತ್ತು. ಆದರೆ, ಅದರಿಂದ ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಸಾಮಾನ್ಯವಾಗಿ ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನ ಇಲ್ಲದಿರುವುದರಿಂದ ಮೇ ತಿಂಗಳವರೆಗೆ ಶ್ರಮಪಟ್ಟು ದುಡಿದರೆ ಕಲಾವಿದರ ಜೀವನ ಸಾಗಬಹುದು. ಆದರೆ, ಈ ಬಾರಿ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಮೇಳಗಳು ನಡೆಸಲು ಸಾಧ್ಯವಾಗದೇ ಜೀವನದ ಬಂಡಿ ನಡೆಸುವುದು ಹೇಗೆ ಎಂಬ ಚಿಂತೆಯಲ್ಲಿ ಕಲಾವಿದರು ಇದ್ದರು. ಈ ವೇಳೆ, ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಕಲಾವಿದರಿಗೆ ಕೊಂಚ ಸಮಧಾನ ನೀಡಿತ್ತು. ಆದರೆ, ಪ್ಯಾಕೇಜ್ ಸಹಾಯಧನ ಪಡೆಯಲು ವಯೋಮಿತಿ ನಿಗದಿಪಡಿಸಿರುವುದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಧನಸಹಾಯ ಪಡೆಯಲು ಯಕ್ಷಗಾನ ಕಲಾವಿದರಿಗೆ ವಯೋಮಿತಿ ಅಡ್ಡಿ

ಸರ್ಕಾರದ ವಿಶೇಷ ಪ್ಯಾಕೇಜ್​ನ ಧನ ಸಹಾಯ ಪಡೆಯಲು ಕಲಾವಿದರಿಗೆ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಇದರಿಂದ ಯಕ್ಷಗಾನ ಕಲಾವಿದರಿಗೆ ಸಮಸ್ಯೆಯಾಗುತ್ತಿದೆ. ಕರಾವಳಿ ಭಾಗದಲ್ಲಿ 15 ರ ಹರೆಯದಲ್ಲೇ ಯಕ್ಷಗಾನ ಮೇಳ ಸೇರುವ ಯುವ ಕಲಾವಿದರಿದ್ದಾರೆ. ಸಹಾಯಧನ ಪಡೆಯಲು 35 ವರ್ಷ ನಿಗದಿಪಡಿಸಿರುವುದು ಯುವ ಕಲಾವಿದರಿಗೆ ಸರ್ಕಾರದ ಸೌಲಭ್ಯ ಸಿಗದಂತೆ ಮಾಡಿದೆ. ಹಾಗಾಗಿ, ವಯೋಮಿತಿ ಇಳಿಸುವಂತೆ ಕಲಾವಿದರು ಆಗ್ರಹಿಸಿದ್ದಾರೆ.

ಓದಿ : ವೃದ್ಧಾಶ್ರಮಕ್ಕೆ 1ಲಕ್ಷ ರೂ. ದೇಣಿಗೆ ನೀಡಿ 42ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.