ETV Bharat / state

ಹೆದ್ದಾರಿಯಲ್ಲಿ ಹಸಿದವರ ಹೊಟ್ಟೆ ತುಂಬಿಸುತ್ತಿದೆ ನೆಲ್ಯಾಡಿಯ ಸಂತ ಜಾರ್ಜ್​​ ವಿದ್ಯಾ ಸಂಸ್ಥೆ

ಲಾಕ್​ಡೌನ್​ನಿಂದಾಗಿ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ವಾಹನ ಚಾಲಕರು ಸಹ ಆಹಾರ ಸಿಗದೆ ಪರಿತಪಿಸುವಂತಾಗಿದೆ. ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಎಲ್ಲಾ ಹೋಟೆಲ್​ಗಳು ಬಾಗಿಲು ಹಾಕಿದ್ದು, ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರಿಗೆ ನೀರು, ಊಟ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಮಸ್ಯೆ ಮನಗಂಡು ಇದೀಗ ನೆಲ್ಯಾಡಿಯ ಸಂತ ಜಾರ್ಜ್​ ವಿದ್ಯಾ ಸಂಸ್ಥೆ, ವಾಹನ ಚಾಲಕರು ಹಾಗೂ ನಿರ್ವಾಹಕರಿಗೆ ಊಟದ ವ್ಯವಸ್ಥೆ ಮಾಡಿ ಮಾದರಿಯಾಗಿದೆ.

author img

By

Published : Apr 17, 2020, 11:41 PM IST

St. George's Institute of Nelladi is distributing food for drivers in highway
ಹೆದ್ದಾರಿಯಲ್ಲಿ ಹಸಿದವರ ಹೊಟ್ಟೆ ತುಂಬಿಸುತ್ತಿದೆ ನೆಲ್ಯಾಡಿಯ ಸಂತ ಜಾರ್ಜ್​ ವಿದ್ಯಾ ಸಂಸ್ಥೆ

ಮಂಗಳೂರು: ಲಾಕ್​ಡೌನ್ ಜಾರಿಯಾಗಿರುವುದರಿಂದ ಬೆಂಗಳೂರು-ಮಂಗಳೂರು ಹೆದ್ದಾರಿಗಳಲ್ಲಿ ವಾಹನ ಸವಾರರಿಗೆ ಊಟದ ಸಮಸ್ಯೆ ಎದುರಾಗಿದೆ. ಹೆದ್ದಾರಿಯಲ್ಲಿ ಸಾಮಾನ್ಯವಾಗಿ ಹತ್ತಾರು ಹೋಟೆಲ್​ಗಳು ತೆರದಿರುತ್ತಿದ್ದವು. ಆದರೆ ಲಾಕ್​​ಡೌನ್​ನಿಂದಾಗಿ ಈ ಎಲ್ಲಾ ಹೋಟೆಲ್​ಗಳು ಈಗ ಬಂದ್ ಆಗಿವೆ.

ಈ ಹಿನ್ನೆಲೆ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ನೆಲ್ಯಾಡಿಯ ಸಂತ ಜಾರ್ಜ್​ ವಿದ್ಯಾ ಸಂಸ್ಥೆಯ ವತಿಯಿಂದ ಆಹಾರದ ವ್ಯಸಸ್ಥೆ ಮಾಡಲಾಗುತ್ತಿದೆ.

ಸಂತ ಜಾರ್ಜ್ ವಿದ್ಯಾ ಸಂಸ್ಥೆಗಳ ಪದಾಧಿಕಾರಿಗಳು, ಹಳೇ ವಿದ್ಯಾರ್ಥಿಗಳು, ನೀತಿ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು, ಅನ್ನ-ನೀರಿಲ್ಲದೇ ಸಂಚರಿಸುವ ಸರಕು ಸಾಗಣೆ ವಾಹನಗಳ ಚಾಲಕರಿಗೆ, ನಿರ್ವಾಹಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಮಂಗಳೂರು-ಬೆಂಗಳೂರು ನಡುವೆ ವಾಹನ ಓಡಿಸುವ ಚಾಲಕರನ್ನು ಕಾಡುತ್ತಿರುವ ಮುಖ್ಯ ಸಮಸ್ಯೆ ಆಹಾರ, ನೀರು ಇಲ್ಲದಿರುವುದು. ಕೆಲವು ಚಾಲಕರು ತಮ್ಮ ವಾಹನದಲ್ಲೇ ಅಡುಗೆ ವ್ಯವಸ್ಥೆ ಮಾಡುತ್ತಿದ್ದರೆ, ಬಹುತೇಕ ವಾಹನ ಚಾಲಕರಿಗೆ ಈ ಸೌಲಭ್ಯ ಇಲ್ಲ. ಇದನ್ನು ಮನಗಂಡ ಸಂತ ಜಾರ್ಜ್ ವಿದ್ಯಾ ಸಂಸ್ಥೆ ನೆಲ್ಯಾಡಿ ಪದಾಧಿಕಾರಿಗಳು, ನೀತಿ ತಂಡದ ಕಾರ್ಯಕರ್ತರು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಇದಕ್ಕೆ ಸ್ಧಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು, ತಾಲೂಕು ಪಂಚಾಯತ್ ಸದಸ್ಯರು ಬೆಂಬಲ ನೀಡುತ್ತಿದ್ದಾರೆ. ಆಹಾರ, ನೀರು ಪಡೆದುಕೊಂಡ ಚಾಲಕರು ತಮಗೆ ಊಟ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿ ಹೊರಡುತ್ತಿದ್ದಾರೆ.

ಮಂಗಳೂರು: ಲಾಕ್​ಡೌನ್ ಜಾರಿಯಾಗಿರುವುದರಿಂದ ಬೆಂಗಳೂರು-ಮಂಗಳೂರು ಹೆದ್ದಾರಿಗಳಲ್ಲಿ ವಾಹನ ಸವಾರರಿಗೆ ಊಟದ ಸಮಸ್ಯೆ ಎದುರಾಗಿದೆ. ಹೆದ್ದಾರಿಯಲ್ಲಿ ಸಾಮಾನ್ಯವಾಗಿ ಹತ್ತಾರು ಹೋಟೆಲ್​ಗಳು ತೆರದಿರುತ್ತಿದ್ದವು. ಆದರೆ ಲಾಕ್​​ಡೌನ್​ನಿಂದಾಗಿ ಈ ಎಲ್ಲಾ ಹೋಟೆಲ್​ಗಳು ಈಗ ಬಂದ್ ಆಗಿವೆ.

ಈ ಹಿನ್ನೆಲೆ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ನೆಲ್ಯಾಡಿಯ ಸಂತ ಜಾರ್ಜ್​ ವಿದ್ಯಾ ಸಂಸ್ಥೆಯ ವತಿಯಿಂದ ಆಹಾರದ ವ್ಯಸಸ್ಥೆ ಮಾಡಲಾಗುತ್ತಿದೆ.

ಸಂತ ಜಾರ್ಜ್ ವಿದ್ಯಾ ಸಂಸ್ಥೆಗಳ ಪದಾಧಿಕಾರಿಗಳು, ಹಳೇ ವಿದ್ಯಾರ್ಥಿಗಳು, ನೀತಿ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು, ಅನ್ನ-ನೀರಿಲ್ಲದೇ ಸಂಚರಿಸುವ ಸರಕು ಸಾಗಣೆ ವಾಹನಗಳ ಚಾಲಕರಿಗೆ, ನಿರ್ವಾಹಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಮಂಗಳೂರು-ಬೆಂಗಳೂರು ನಡುವೆ ವಾಹನ ಓಡಿಸುವ ಚಾಲಕರನ್ನು ಕಾಡುತ್ತಿರುವ ಮುಖ್ಯ ಸಮಸ್ಯೆ ಆಹಾರ, ನೀರು ಇಲ್ಲದಿರುವುದು. ಕೆಲವು ಚಾಲಕರು ತಮ್ಮ ವಾಹನದಲ್ಲೇ ಅಡುಗೆ ವ್ಯವಸ್ಥೆ ಮಾಡುತ್ತಿದ್ದರೆ, ಬಹುತೇಕ ವಾಹನ ಚಾಲಕರಿಗೆ ಈ ಸೌಲಭ್ಯ ಇಲ್ಲ. ಇದನ್ನು ಮನಗಂಡ ಸಂತ ಜಾರ್ಜ್ ವಿದ್ಯಾ ಸಂಸ್ಥೆ ನೆಲ್ಯಾಡಿ ಪದಾಧಿಕಾರಿಗಳು, ನೀತಿ ತಂಡದ ಕಾರ್ಯಕರ್ತರು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಇದಕ್ಕೆ ಸ್ಧಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು, ತಾಲೂಕು ಪಂಚಾಯತ್ ಸದಸ್ಯರು ಬೆಂಬಲ ನೀಡುತ್ತಿದ್ದಾರೆ. ಆಹಾರ, ನೀರು ಪಡೆದುಕೊಂಡ ಚಾಲಕರು ತಮಗೆ ಊಟ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿ ಹೊರಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.