ETV Bharat / state

ಕಡಬದ ಆಟೋ ಚಾಲಕರು, ವರ್ತಕರಿಗೆ RT-PCR​​ ಟೆಸ್ಟ್ ಕಡ್ಡಾಯ: ತಹಶೀಲ್ದಾರ್

author img

By

Published : Aug 21, 2021, 9:43 AM IST

ದಕ್ಷಿಣ ಕನ್ನಡ ಹಲವು ಭಾಗಗಳಲ್ಲಿ ಕೋವಿಡ್ ಹರಡದಂತೆ ಕ್ರಮವಹಿಸುವ ನಿಟ್ಟಿನಲ್ಲಿ ಸಾರ್ವಜನಕರೊಂದಿಗೆ ದಿನನಿತ್ಯ ಬೆರೆಯುವ ಆಟೋ ಚಾಲಕರು ಹಾಗೂ ವರ್ತಕರಿಗೆ ಆರ್​​ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಲು ಸೂಚಿಸಲಾಗಿದೆ. ಜೊತೆಗೆ ಆ ಟೆಸ್ಟ್​ನ ವರದಿಯನ್ನ ಅಂಗಡಿ ಹಾಗೂ ತಮ್ಮ ವಾಹನದ ಮೇಲೆ ಅಂಟಿಸಿಕೊಳ್ಳಲು ಸೂಚಿಸಲಾಗಿದೆ.

Kadaba Tahasildar
ಕಡಬ ತಹಶೀಲ್ದಾರ್

ಕಡಬ (ದ.ಕ): ಕಡಬ ತಾಲೂಕಿನ ವರ್ತಕರು, ಆಟೋ ಚಾಲಕರು ಕೂಡಲೇ ಕಡ್ಡಾಯವಾಗಿ ಆರ್​​​ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಹಶೀಲ್ದಾರ್ ಅನಂತಶಂಕರ್ ಸೂಚಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಡಬ ಭಾಗದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ಹತೋಟಿಗೆ ತರುವ ಬಗ್ಗೆ ಕೊರೊನಾ ಕಾರ್ಯಪಡೆ ಸಭೆಯಲ್ಲಿ ಚರ್ಚಿಸಲಾಗಿದ್ದು, ಹಂತ ಹಂತವಾಗಿ ಎಲ್ಲಾ ವಿಭಾಗದವರನ್ನೂ ಆರ್​​ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು.

ಕಡಬದ ಆಟೋ ಚಾಲಕರು, ವರ್ತಕರಿಗೆ ಆರ್​ಟಿಪಿಸಿಆರ್​​ ಟೆಸ್ಟ್ ಕಡ್ಡಾಯ

ಕಡಬದ ವರ್ತಕರು, ಅಂಗಡಿಯಲ್ಲಿರುವ ಸಿಬ್ಬಂದಿ ಮತ್ತು ಅಟೋ ಹಾಗೂ ಇತರೆ ವಾಹನ ಚಾಲಕರು ಕೂಡಲೇ ಸ್ವಯಂ ಪ್ರೇರಿತರಾಗಿ ಬಂದು ಕೋವಿಡ್ ಪರೀಕ್ಷೆ ಮಾಡಿಸಿ ಎಂದು ವಿನಂತಿಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮದಲ್ಲಿಯೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ, ಯಾರೊಬ್ಬರು ಈ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬಾರದು. ಮುಖ್ಯವಾಗಿ ಪೇಟೆಯಲ್ಲಿ ಸಾರ್ವಜನಿಕರೊಂದಿಗೆ ಸದಾ ಸಂಪರ್ಕದಲ್ಲಿರುವ ಅಂಗಡಿ ಮಾಲೀಕರು ಹಾಗೂ ವಾಹನ ಚಾಲಕರು ತಾವೇ ಮುಂದೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಅಂಗಡಿ ಮಾಲೀಕರು, ಸಿಬ್ಬಂದಿ ಆರ್​​​ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆಯೇ ಎಂದು ಪಟ್ಟಣ ಪಂಚಾಯತ್ ಸಿಬ್ಬಂದಿ ಪ್ರತಿಅಂಗಡಿ ಹಾಗೂ ವಾಹನ ಚಾಲಕರನ್ನು ಭೇಟಿ ಮಾಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಓದಿ: ಕೈಗೆ ಕಗ್ಗಂಟಾದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ: ಮೂರು ದಿನ ಕಳೆದರೂ ಮುಗಿಯದ ಆಯ್ಕೆ ಕಸರತ್ತು

ಕಡಬ (ದ.ಕ): ಕಡಬ ತಾಲೂಕಿನ ವರ್ತಕರು, ಆಟೋ ಚಾಲಕರು ಕೂಡಲೇ ಕಡ್ಡಾಯವಾಗಿ ಆರ್​​​ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಹಶೀಲ್ದಾರ್ ಅನಂತಶಂಕರ್ ಸೂಚಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಡಬ ಭಾಗದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ಹತೋಟಿಗೆ ತರುವ ಬಗ್ಗೆ ಕೊರೊನಾ ಕಾರ್ಯಪಡೆ ಸಭೆಯಲ್ಲಿ ಚರ್ಚಿಸಲಾಗಿದ್ದು, ಹಂತ ಹಂತವಾಗಿ ಎಲ್ಲಾ ವಿಭಾಗದವರನ್ನೂ ಆರ್​​ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು.

ಕಡಬದ ಆಟೋ ಚಾಲಕರು, ವರ್ತಕರಿಗೆ ಆರ್​ಟಿಪಿಸಿಆರ್​​ ಟೆಸ್ಟ್ ಕಡ್ಡಾಯ

ಕಡಬದ ವರ್ತಕರು, ಅಂಗಡಿಯಲ್ಲಿರುವ ಸಿಬ್ಬಂದಿ ಮತ್ತು ಅಟೋ ಹಾಗೂ ಇತರೆ ವಾಹನ ಚಾಲಕರು ಕೂಡಲೇ ಸ್ವಯಂ ಪ್ರೇರಿತರಾಗಿ ಬಂದು ಕೋವಿಡ್ ಪರೀಕ್ಷೆ ಮಾಡಿಸಿ ಎಂದು ವಿನಂತಿಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮದಲ್ಲಿಯೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ, ಯಾರೊಬ್ಬರು ಈ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬಾರದು. ಮುಖ್ಯವಾಗಿ ಪೇಟೆಯಲ್ಲಿ ಸಾರ್ವಜನಿಕರೊಂದಿಗೆ ಸದಾ ಸಂಪರ್ಕದಲ್ಲಿರುವ ಅಂಗಡಿ ಮಾಲೀಕರು ಹಾಗೂ ವಾಹನ ಚಾಲಕರು ತಾವೇ ಮುಂದೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಅಂಗಡಿ ಮಾಲೀಕರು, ಸಿಬ್ಬಂದಿ ಆರ್​​​ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆಯೇ ಎಂದು ಪಟ್ಟಣ ಪಂಚಾಯತ್ ಸಿಬ್ಬಂದಿ ಪ್ರತಿಅಂಗಡಿ ಹಾಗೂ ವಾಹನ ಚಾಲಕರನ್ನು ಭೇಟಿ ಮಾಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಓದಿ: ಕೈಗೆ ಕಗ್ಗಂಟಾದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ: ಮೂರು ದಿನ ಕಳೆದರೂ ಮುಗಿಯದ ಆಯ್ಕೆ ಕಸರತ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.