ETV Bharat / state

ಪೌರತ್ವ ಕಾಯ್ದೆ ವಿರುದ್ಧ ಭುಗಿಲೆದ್ದ ಹಿಂಸಾಚಾರ: ಮಂಗಳೂರಲ್ಲಿ ಇಬ್ಬರು ಸಾವು - ಮಂಗಳೂರು ಇಬ್ಬರು ಪ್ರತಿಭಟನಾಕಾರರು ಸಾವು

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಈ ಹಿಂಸಾಚಾರದಲ್ಲಿ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

Mangalore: Two persons shot dead in violence
ಮಂಗಳೂರು: ಹಿಂಸಾಚಾರದಲ್ಲಿ ಗುಂಡಿನ ದಾಳಿಗೀಡಾಗಿದ್ದ ಇಬ್ಬರು ಸಾವು
author img

By

Published : Dec 19, 2019, 9:47 PM IST

Updated : Dec 19, 2019, 11:18 PM IST

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಪೌರತ್ವ ಕಾಯ್ದೆ ವಿರುದ್ಧ ಭುಗಿಲೆದ್ದ ಹಿಂಸಾಚಾರ: ಮಂಗಳೂರಲ್ಲಿ ಇಬ್ಬರು ಸಾವು

ಇವರು ಯಾವ ರೀತಿ ಸಾವನ್ನಪ್ಪಿದ್ದಾರೆ ಎಂಬುದು ಶವ ಮಹಜರು ನಡೆಸಿದ ಬಳಿಕ‌ ತಿಳಿಸುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ ಎಸ್‌. ಹರ್ಷಾ ಹೇಳಿದ್ದಾರೆ.

ಈ ಬಗ್ಗೆ ಸಭೆ ನಡೆಸಿದ ಮಂಗಳೂರು ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಹಮ್ಮದ್ ಮಸೂದ್ ಮಾತನಾಡಿ, ಎಲ್ಲರೂ ಶಾಂತಿ ಕಾಪಾಡಬೇಕು. ಯಾವುದೇ ರೀತಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಿಸದಂತೆ ಕರೆ ನೀಡಿದರು.

ಅಲ್ಲದೆ ಪೊಲೀಸರು ರಾತ್ರಿ ಹೊತ್ತು ಮನೆಗೆ ನುಗ್ಗಿ ಯಾವುದೇ ರೀತಿಯಲ್ಲಿ ತೊಂದರೆ ಕೊಡಬಾರದು. ಹಾಗೆಯೇ ಮೃತಪಟ್ಟವರಿಗೆ ಹಾಗೂ ಗಾಯಾಳುಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಪೌರತ್ವ ಕಾಯ್ದೆ ವಿರುದ್ಧ ಭುಗಿಲೆದ್ದ ಹಿಂಸಾಚಾರ: ಮಂಗಳೂರಲ್ಲಿ ಇಬ್ಬರು ಸಾವು

ಇವರು ಯಾವ ರೀತಿ ಸಾವನ್ನಪ್ಪಿದ್ದಾರೆ ಎಂಬುದು ಶವ ಮಹಜರು ನಡೆಸಿದ ಬಳಿಕ‌ ತಿಳಿಸುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ ಎಸ್‌. ಹರ್ಷಾ ಹೇಳಿದ್ದಾರೆ.

ಈ ಬಗ್ಗೆ ಸಭೆ ನಡೆಸಿದ ಮಂಗಳೂರು ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಹಮ್ಮದ್ ಮಸೂದ್ ಮಾತನಾಡಿ, ಎಲ್ಲರೂ ಶಾಂತಿ ಕಾಪಾಡಬೇಕು. ಯಾವುದೇ ರೀತಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಿಸದಂತೆ ಕರೆ ನೀಡಿದರು.

ಅಲ್ಲದೆ ಪೊಲೀಸರು ರಾತ್ರಿ ಹೊತ್ತು ಮನೆಗೆ ನುಗ್ಗಿ ಯಾವುದೇ ರೀತಿಯಲ್ಲಿ ತೊಂದರೆ ಕೊಡಬಾರದು. ಹಾಗೆಯೇ ಮೃತಪಟ್ಟವರಿಗೆ ಹಾಗೂ ಗಾಯಾಳುಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

Intro:ಮಂಗಳೂರು: ಮಂಗಳೂರಿನ ಹಿಂಸಾಚಾರದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರು ಡಿಸಿಪಿ ಸೇರಿ ಹಲವು ಮಂದಿ ಪೊಲೀಸರಿಗೆ ಗಾಯವಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಹೇಳಿದರು.

ಡಿ.20ರ ಮಧ್ಯರಾತ್ರಿವರೆಗೆ 144 ಸೆಕ್ಷನ್ ಜಾರಿಯಲ್ಲಿದ್ದು, ಯಾರೂ ಅಕ್ರಮ ಕೂಟ, ಪ್ರತಿಭಟನೆ, ಗಲಾಟೆ ನಡೆಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ಅಲ್ಲದೆ ನಿರ್ಬಂಧಕಾಜ್ಞೆ ವಿಧಿಸಿರುವ ಬಗ್ಗೆ ಎಲ್ಲರಿಗೂ ತಿಳಿಸಲಾಗಿತ್ತು. ಎಲ್ಲಾ ಸಮುದಾಯದ ನಾಯಕರನ್ನು ಕರೆದು ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಸದಂತೆ ತಿಳಿ ಹೇಳಿದ್ದೇವೆ. ಆದರೂ ಏಕಾಏಕಿ ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಹಾಗೂ ನೆಲ್ಲಿಕಾಯಿ ರಸ್ತೆಯ ಬಳಿ ದುಷ್ಕರ್ಮಿಗಳು ಗುಂಪು ಗುಂಪಾಗಿ ಬಂದು ಕಲ್ಲು, ದೊಣ್ಣೆ, ಹಾಗೂ ಬಾಟಲಿಗಳನ್ನು ಎಸೆದು ಸಾರ್ವಜನಿಕರಿಗೆ ಭೀತಿ ಮೂಡಿಸುವ ರೀತಿಯಲ್ಲಿ ಗಲಾಟೆ ಮಾಡಿದ್ದಾರೆ.
Body:
ಈ ಘಟನೆಯಲ್ಲಿ ಸ್ಥಳದಲ್ಲಿದ್ದ ಪೊಲೀಸರಿಗೆ ಹಾಗೂ ಕೆಲವೊಂದು ಅಮಾಯಕರಿಗೆ ಗಾಯಗಳಾಗಿವೆ. ಪರಿಸ್ಥಿತಿ ಕೈಮೀರಿದಾಗ ಟೀಯರ್ ಗ್ಯಾಸ್ ಸಿಡಿಸಿ ಆ ಗುಂಪನ್ನು ಚದುರಿಸಲು ಪ್ರಯತ್ನಿಸಿದ್ದೇವೆ. ಇದರಿಂದ ಆರ್ ಆರ್ ನಗರದಲ್ಲಿ ದುಷ್ಕರ್ಮಿಗಳು ಪೊಲೀಸರಿಗೆ ಹಲ್ಲೆ ನಡೆಸಲು ತೊಡಗಿದರು. ಇದರಿಂದ ಹೆಚ್ಚಿನ ನಾವು ಪೊಲೀಸ್ ನಿಯೋಜನೆಗೊಳಿಸಿದ್ದು, ದುಷ್ಕರ್ಮಿಗಳು ಅಲ್ಲಿಂದ ಹಿಮ್ಮಟ್ಟಿ ಕುದ್ರೋಳಿ ವ್ಯಾಪ್ತಿಯಲ್ಲಿ ಜಮಾವಣೆಗೊಂಡರು‌. ಅಲ್ಲಿ ಸುಮಾರು ಏಳೆಂಟು ಸಾವಿರ ಮಂದಿ ಸೇರಿ ಗಾಜಿನ ಬಾಟಲಿಗಳನ್ನು ಉತ್ತರ ಪೊಲೀಸ್ ಮೇಲೆ ತೀವ್ರತರವಾದ ದಾಳಿ ನಡೆಸಿದೆ. ಇದರಿಂದ ಸಾಕಷ್ಟು ಪೊಲೀಸರಿಗೆ ಗಾಯಗಳಾಗಿವೆ. ಅಲ್ಲದೆ ಉದ್ರಿಕ್ತ ಗುಂಪು ಪೊಲೀಸರಿಗೆ ಅಲ್ಲಿಂದ ತೆರಳಲು ಅವಕಾಶ ಕೊಡದೆ ಸುತ್ತುವರಿದಾಗ, ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿ, ಯಾವುದೇ ಅವಕಾಶ ವಿಲ್ಲದೆ ಗಾಳಿಯಲ್ಲಿ ಎರಡು ಗುಂಡುಗಳನ್ನು ಹಾರುಸಲಾಯಿತು. ಅದಕ್ಕೂ ಬಗ್ಗದ ಗುಂಪು ಮುಂಭಾಗದಲ್ಲಿ ದ್ದ 8-10 ಪೊಲೀಸ್ ಸಿಬ್ಬಂದಿಯ ಮೇಲೆ ಮರಣಾಂತಿಕ ವಾಗಿ ಹಲ್ಲೆ ನಡೆಸಿದ ಮೇಲೆ ಸ್ಥಳದಲ್ಲಿನ ಅಧಿಕಾರಿಗಳು ಬಲ ಪ್ರಯೋಗ ನಡೆಸಿದ್ದಾರೆ. ಇದರಿಂದ ಇಬ್ಬರಿಗೆ ಗಾಯಗಳಾಗಿವೆ. ನಮ್ಮ ಇಬ್ಬರು ಡಿಸಿಪಿಗಳಿಗೂ ಗಾಯಗಳಾಗಿವೆ. ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸ್ ಆಯುಕ್ತ ಡಾ‌.ಪಿ.ಎಸ್. ಹರ್ಷ ಹೇಳಿದರು.

Reporter_Vishwanath PanjimogaruConclusion:
Last Updated : Dec 19, 2019, 11:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.