ಕಡಬ: ಕೇರಳದಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ದಕ್ಷಿಣ ಕನ್ನಡದ ಕಡಬದ ಚಿನ್ನಾಭರಣ ಮಳಿಗೆಯೊಂದಕ್ಕೆ ಮಾರಟ ಮಾಡಿದ್ದ ಆರೋಪಿ ಸಮೇತ ಕೇರಳ ಪೊಲೀಸರು ಆಗಮಿಸಿದ್ದಾರೆ.
ಕೇರಳ ನಿವಾಸಿ ಖಾದರ್ ಎಂಬಾತ ಕಳ್ಳತನ ಮಾಡಿ, ಕಡಬದಲ್ಲಿ ವಾಸವಿರುವ ಆರೋಪಿಯ ಸಹೋದರ ಶಾಫಿ ಎಂಬಾತನ ಮೂಲಕ ಜ್ಯುವೆಲ್ಲರ್ಸ್ ಮಳಿಗೆಯೊಂದಕ್ಕೆ ಸ್ವಲ್ಪ ಪ್ರಮಾಣದ ಚಿನ್ನವನ್ನು ಮಾರಾಟ ಮಾಡಿಸಿದ್ದಾಗಿ ಬಾಯಿಬಿಟ್ಟಿದ್ದಾನೆ. ಹಾಗಾಗಿ ಆರೋಪಿಸಿ ಸಮೇತ ಆಗಮಿಸಿದ ಪೊಲೀಸರು, ಜ್ಯುವೆಲ್ಲರ್ ಶಾಪ್ನಲ್ಲಿ ತನಿಖೆ ನಡೆಸಿದ್ದಾರೆ.
ಇದೀಗ ಚಿನ್ನವನ್ನು ಮಾರಾಟ ಮಾಡಲು ಸಹಕರಿಸಿದ್ದ ಸಹೋದರ ಶಫಿ ತಲೆಮರೆಸಿಕೊಂಡಿದ್ದು, ಕಡಬ ಪೊಲೀಸರ ಸಹಾಯದೊಂದಿಗೆ ಕೇರಳ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.