ETV Bharat / state

ಮಂಗಳೂರಿಗೆ ಬಂದಿಳಿದ ಯೋಗಿ ಆದಿತ್ಯನಾಥ್.. ರಸ್ತೆ ಮಾರ್ಗದ ಮೂಲಕ ಕಾಸರಗೋಡಿನತ್ತ ಪಯಣ - ಕಾಸರಗೋಡಿನಲ್ಲಿ‌ ನಡೆಯಲಿರುವ ಬಿಜೆಪಿ‌ ವಿಜಯ ಯಾತ್ರೆ

ಇಂದು ಸಂಜೆ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ವಿಜಯ ಯಾತ್ರೆಗೆ ಯೋಗಿ ಆದಿತ್ಯನಾಥ್ ಅವರು ಚಾಲನೆ ನೀಡಿ, ಪ್ರಧಾನ ಭಾಷಣ ಮಾಡಲಿದ್ದಾರೆ..

ಮಂಗಳೂರಿಗೆ ಬಂದಿಳಿದ ಯೋಗಿ ಆದಿತ್ಯನಾಥ್​​​ರನ್ನು ಸ್ವಾಗತಿಸಿದ ಬಿಜೆಪಿ ರಾಜ್ಯಾಧ್ಯಕ್ಷ
BJP President Kateel and others welcomed UP CM Yogi adityanath in Mangalore
author img

By

Published : Feb 21, 2021, 7:13 PM IST

ಮಂಗಳೂರು : ಕಾಸರಗೋಡಿನಲ್ಲಿ‌ ನಡೆಯಲಿರುವ ಬಿಜೆಪಿ‌ ವಿಜಯ ಯಾತ್ರೆಗೆ ಚಾಲನೆ ನೀಡಲು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಸಂಜೆ 4ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದರು. ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​ ಸೇರಿ ಇತರ ನಾಯಕರು ಸ್ವಾಗತಿಸಿದರು.

ಮಂಗಳೂರಿಗೆ ಬಂದಿಳಿದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

ತಮಿಳುನಾಡು, ಪಶ್ಚಿಮ ಬಂಗಾಳದ ಜೊತೆಗೆ ಈ ವರ್ಷ ಕೇರಳದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಬಿಜೆಪಿ ಇಂದಿನಿಂದ ಕಾಸರಗೋಡಿನಲ್ಲಿ ವಿಜಯ ಯಾತ್ರೆ ರ್ಯಾಲಿ ನಡೆಸುತ್ತಿದೆ. ಇದಕ್ಕೆ ಚಾಲನೆ ನೀಡಲು ಯೋಗಿ ಆದಿತ್ಯನಾಥ್ ಆಮಿಸಿದ್ದಾರೆ. ಅವರು ವಿಮಾನ ನಿಲ್ದಾಣದಿಂದ ಪೊಲೀಸ್​ ಬಿಗಿ ಬಂದೋಬಸ್ತಿನಲ್ಲಿ ರಸ್ತೆ ಮಾರ್ಗದ ಮೂಲಕ ಕಾಸರಗೋಡಿಗೆ ತೆರಳಿದರು.

BJP President Kateel and others welcomed UP CM Yogi adityanath in Mangalore
ಮಂಗಳೂರಿಗೆ ಬಂದಿಳಿದ ಯೋಗಿ ಆದಿತ್ಯನಾಥ್

ಓದಿ: ಪಂಚಮಸಾಲಿ ಸಮುದಾಯ 2ಎ ಗೆ ಸೇರಿಸುವ ಬೇಡಿಕೆ ಈಡೇರದೆ ಮಠಕ್ಕೆ ಮರಳಲ್ಲ: ಕೂಡಲಸಂಗಮ‌ ಶ್ರೀ

ಇಂದು ಸಂಜೆ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ವಿಜಯ ಯಾತ್ರೆಗೆ ಯೋಗಿ ಆದಿತ್ಯನಾಥ್ ಅವರು ಚಾಲನೆ ನೀಡಿ, ಪ್ರಧಾನ ಭಾಷಣ ಮಾಡಲಿದ್ದಾರೆ.

ಕಾಸರಗೋಡಿನಿಂದ ಆರಂಭವಾಗುವ ಈ‌ ವಿಜಯಯಾತ್ರೆಯು ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ದಿನಗಳ ಕಾಲ ಸಂಚರಿಸಿ ಕೊನೆಗೆ ತಿರುವನಂತಪುರಂನಲ್ಲಿ ಸಮಾಪ್ತಿಯಾಗಲಿದೆ. ಬಳಿಕ‌ ಅಲ್ಲಿಂದ ಹೊರಡುವ ಯೋಗಿ ಆದಿತ್ಯನಾಥ್ ಸಂಜೆ 6 ಗಂಟೆಗೆ ಕದ್ರಿ ಶ್ರೀಜೋಗಿ ಮಠಕ್ಕೆ ಆಗಮಿಸಲಿದ್ದಾರೆ.

ಮಂಗಳೂರು : ಕಾಸರಗೋಡಿನಲ್ಲಿ‌ ನಡೆಯಲಿರುವ ಬಿಜೆಪಿ‌ ವಿಜಯ ಯಾತ್ರೆಗೆ ಚಾಲನೆ ನೀಡಲು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಸಂಜೆ 4ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದರು. ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​ ಸೇರಿ ಇತರ ನಾಯಕರು ಸ್ವಾಗತಿಸಿದರು.

ಮಂಗಳೂರಿಗೆ ಬಂದಿಳಿದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

ತಮಿಳುನಾಡು, ಪಶ್ಚಿಮ ಬಂಗಾಳದ ಜೊತೆಗೆ ಈ ವರ್ಷ ಕೇರಳದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಬಿಜೆಪಿ ಇಂದಿನಿಂದ ಕಾಸರಗೋಡಿನಲ್ಲಿ ವಿಜಯ ಯಾತ್ರೆ ರ್ಯಾಲಿ ನಡೆಸುತ್ತಿದೆ. ಇದಕ್ಕೆ ಚಾಲನೆ ನೀಡಲು ಯೋಗಿ ಆದಿತ್ಯನಾಥ್ ಆಮಿಸಿದ್ದಾರೆ. ಅವರು ವಿಮಾನ ನಿಲ್ದಾಣದಿಂದ ಪೊಲೀಸ್​ ಬಿಗಿ ಬಂದೋಬಸ್ತಿನಲ್ಲಿ ರಸ್ತೆ ಮಾರ್ಗದ ಮೂಲಕ ಕಾಸರಗೋಡಿಗೆ ತೆರಳಿದರು.

BJP President Kateel and others welcomed UP CM Yogi adityanath in Mangalore
ಮಂಗಳೂರಿಗೆ ಬಂದಿಳಿದ ಯೋಗಿ ಆದಿತ್ಯನಾಥ್

ಓದಿ: ಪಂಚಮಸಾಲಿ ಸಮುದಾಯ 2ಎ ಗೆ ಸೇರಿಸುವ ಬೇಡಿಕೆ ಈಡೇರದೆ ಮಠಕ್ಕೆ ಮರಳಲ್ಲ: ಕೂಡಲಸಂಗಮ‌ ಶ್ರೀ

ಇಂದು ಸಂಜೆ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ವಿಜಯ ಯಾತ್ರೆಗೆ ಯೋಗಿ ಆದಿತ್ಯನಾಥ್ ಅವರು ಚಾಲನೆ ನೀಡಿ, ಪ್ರಧಾನ ಭಾಷಣ ಮಾಡಲಿದ್ದಾರೆ.

ಕಾಸರಗೋಡಿನಿಂದ ಆರಂಭವಾಗುವ ಈ‌ ವಿಜಯಯಾತ್ರೆಯು ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ದಿನಗಳ ಕಾಲ ಸಂಚರಿಸಿ ಕೊನೆಗೆ ತಿರುವನಂತಪುರಂನಲ್ಲಿ ಸಮಾಪ್ತಿಯಾಗಲಿದೆ. ಬಳಿಕ‌ ಅಲ್ಲಿಂದ ಹೊರಡುವ ಯೋಗಿ ಆದಿತ್ಯನಾಥ್ ಸಂಜೆ 6 ಗಂಟೆಗೆ ಕದ್ರಿ ಶ್ರೀಜೋಗಿ ಮಠಕ್ಕೆ ಆಗಮಿಸಲಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.