ETV Bharat / state

ಮದ್ಯಪಾನ ನಿಷೇಧ, ಮದ್ಯ ವರ್ಜನ ಶಿಬಿರಕ್ಕೆ ಸರ್ಕಾರದಿಂದ ಯೋಜನೆ ರೂಪಿಸಲು ಪ್ರಯತ್ನ: ಸಚಿವ ಪೂಜಾರಿ - plan the ban of alcohol

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ‌ ಯೋಜನೆ ವತಿಯಿಂದ ವ್ಯಸನಮುಕ್ತ ಸಾಧಕರ ಸಮಾವೇಶ ಜರುಗಿದ್ದು, ಕೋಟಾ ಶ್ರೀನಿವಾಸ ಪೂಜಾರಿ ಪಾಲ್ಗೊಂಡು ಸರ್ಕಾರದಿಂದ ಮದ್ಯಪಾನ ನಿಷೇಧಕ್ಕೆ ಹೊಸ ಯೋಜನೆ ರೂಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

ವ್ಯಸನಮುಕ್ತರ ಸಾಧಕರ ಸಮಾವೇಶ
author img

By

Published : Sep 14, 2019, 7:43 PM IST

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮೂಲಕ ನೂರಾರು ಮಂದಿ ಮದ್ಯವ್ಯಸನ ಮುಕ್ತರಾಗಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಸರ್ಕಾರ ಹೊಸ ಬಾರ್​​ಗೆ ಪರವಾನಗಿ ನೀಡುತ್ತಿದೆ. ಆದ್ದರಿಂದ ಇದಕ್ಕೊಂದು ಅಂತಿಮ ರೂಪ ನೀಡಬೇಕು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಅಖಿಲ ಭಾರತ ಜನಜಾಗೃತಿ ವೇದಿಕೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ‌ ಯೋಜನೆ ವ್ಯಸನಮುಕ್ತರ ಸಾಧಕರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ವತಿಯಿಂದ ವೀರೇಂದ್ರ ಹೆಗ್ಗಡೆಯವರ ಅಭಿಪ್ರಾಯವನ್ನು ಕ್ರೋಢೀಕರಿಸಿಕೊಂಡು ಯಾವ ರೀತಿ ಗ್ರಾಮಾಭಿವೃದ್ಧಿಗೆ ಹೆಜ್ಜೆಯನ್ನು ಇರಿಸಿದ್ದೇವೋ, ಅದೇ ರೀತಿ ಮದ್ಯಪಾನ ನಿಷೇಧ ಹಾಗೂ ಮದ್ಯವರ್ಜನ ಶಿಬಿರಕ್ಕೆ ಸರ್ಕಾರ ಮತ್ತು ಪಾನ ನಿರೋಧ ಮಂಡಳಿಯ ವತಿಯಿಂದ ಯೋಜನೆಯನ್ನು ರೂಪಿಸಲು ಪ್ರಯತ್ನ ಪಡುತ್ತೇವೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ವ್ಯಸನಮುಕ್ತ ಸಾಧಕರ ಸಮಾವೇಶ

ಇಡೀ ಕರ್ನಾಟಕ ಸರ್ಕಾರಕ್ಕೆ ಸುಮಾರು 18 ಸಾವಿರ ಕೋಟಿ ರೂ. ಆದಾಯ ಬರುವುದು ಅಬಕಾರಿ ಇಲಾಖೆಯಿಂದ. ಆದರೆ ಇಷ್ಟು ಆದಾಯ ಬರುವ ಬಾರ್​​ಗಳನ್ನು ಮುಚ್ಚಿದರೆ ಸರ್ಕಾರದ ಬೊಕ್ಕಸಕ್ಕೆ ಅಷ್ಟು ಕೋಟಿ ರೂ. ನಷ್ಟವಾಗುತ್ತದೆ. ಆದರೆ ಮದ್ಯಪಾನಿಗಳು ಮಾಡುವ ಅವಾಂತರವನ್ನು ನಿಯಂತ್ರಣ ಮಾಡಲು ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಅಬಕಾರಿ ಇಲಾಖೆಯಿಂದ 10% ಜಾಸ್ತಿ ಖರ್ಚು ಮಾಡಬೇಕಾಗುತ್ತದೆ ಎಂಬ ವರದಿ ಬಂದಿತ್ತು. ಆದ್ದರಿಂದ ವ್ಯಸನಮುಕ್ತ ಸಮಾಜವನ್ನು ನಿರ್ಮಾಣ ಮಾಡುವ‌ ಶಾಸನವನ್ನು ಸರ್ಕಾರ ಅನುಷ್ಠಾನಗೊಳಿಸಿ ಮದ್ಯ ವ್ಯಸನಿಗಳನ್ನು ಪುನರುಜ್ಜೀವನ ಮಾಡಬೇಕಾದ ಅವಶ್ಯಕತೆ ಇದೆ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸುಮಾರು 27 ವರ್ಷಗಳಿಂದ ಜನರಲ್ಲಿರುವ ಮದ್ಯಪಾನ, ಡ್ರಗ್ಸ್ ಮುಂತಾದ ದುಶ್ಚಟಗಳನ್ನು ಬಿಡಿಸುವ ಪ್ರಯತ್ನ ನಡೆಸುತ್ತಿದ್ದೇವೆ. ನಮ್ಮ ಈ ವೇದಿಕೆಯ ಮೂಲಕ ಮಾದಕ ವ್ಯಸನಿಗಳ ಮನಪರಿವರ್ತನೆ ಮಾಡಿ ದುಶ್ಚಟಗಳಿಂದ ಮುಕ್ತರಾಗುವಂತೆ ಮಾಡುತ್ತೇವೆ. ಅಲ್ಲದೆ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ದುಶ್ಚಟಗಳಿಂದ ದೂರ ಇರುವಂತೆಯೂ ಮಾರ್ಗದರ್ಶನ ನೀಡುತ್ತಿದ್ದೇವೆ. ಹಾಗಾಗಿ ಶಿಬಿರದ ಮೂಲಕ ನೂರು ದಿವಸ ಯಾರು ಮುಗಿಸಿದ್ದಾರೆ ಅವರಿಗೆ ಮನೋಸ್ಥೈರ್ಯ ತುಂಬಲು ಅವರಿಗೆ ಮತ್ತೆ ಮಾದಕ ವ್ಯವಸನದಿಂದ ದೂರ ಇರುವಂತೆ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ವ್ಯಸನಮುಕ್ತ ಸಾಧಕರಿಗೆ ಐಡಿ ಕಾರ್ಡ್​ಗಳು, ಅಭಿನಂದನಾ ಪತ್ರಗಳನ್ನು ಸಾಂಕೇತಿಕವಾಗಿ ನೀಡಲಾಯಿತು. ಅಲ್ಲದೆ ಅತೀ ಹೆಚ್ಚು ಜನರನ್ನು ಮಾದಕ ವ್ಯಸನದಿಂದ ಮುಕ್ತರಾಗುವಂತೆ ಮಾಡಿದವರನ್ನು ಸನ್ಮಾನಿಸಲಾಯಿತು.

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮೂಲಕ ನೂರಾರು ಮಂದಿ ಮದ್ಯವ್ಯಸನ ಮುಕ್ತರಾಗಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಸರ್ಕಾರ ಹೊಸ ಬಾರ್​​ಗೆ ಪರವಾನಗಿ ನೀಡುತ್ತಿದೆ. ಆದ್ದರಿಂದ ಇದಕ್ಕೊಂದು ಅಂತಿಮ ರೂಪ ನೀಡಬೇಕು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಅಖಿಲ ಭಾರತ ಜನಜಾಗೃತಿ ವೇದಿಕೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ‌ ಯೋಜನೆ ವ್ಯಸನಮುಕ್ತರ ಸಾಧಕರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ವತಿಯಿಂದ ವೀರೇಂದ್ರ ಹೆಗ್ಗಡೆಯವರ ಅಭಿಪ್ರಾಯವನ್ನು ಕ್ರೋಢೀಕರಿಸಿಕೊಂಡು ಯಾವ ರೀತಿ ಗ್ರಾಮಾಭಿವೃದ್ಧಿಗೆ ಹೆಜ್ಜೆಯನ್ನು ಇರಿಸಿದ್ದೇವೋ, ಅದೇ ರೀತಿ ಮದ್ಯಪಾನ ನಿಷೇಧ ಹಾಗೂ ಮದ್ಯವರ್ಜನ ಶಿಬಿರಕ್ಕೆ ಸರ್ಕಾರ ಮತ್ತು ಪಾನ ನಿರೋಧ ಮಂಡಳಿಯ ವತಿಯಿಂದ ಯೋಜನೆಯನ್ನು ರೂಪಿಸಲು ಪ್ರಯತ್ನ ಪಡುತ್ತೇವೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ವ್ಯಸನಮುಕ್ತ ಸಾಧಕರ ಸಮಾವೇಶ

ಇಡೀ ಕರ್ನಾಟಕ ಸರ್ಕಾರಕ್ಕೆ ಸುಮಾರು 18 ಸಾವಿರ ಕೋಟಿ ರೂ. ಆದಾಯ ಬರುವುದು ಅಬಕಾರಿ ಇಲಾಖೆಯಿಂದ. ಆದರೆ ಇಷ್ಟು ಆದಾಯ ಬರುವ ಬಾರ್​​ಗಳನ್ನು ಮುಚ್ಚಿದರೆ ಸರ್ಕಾರದ ಬೊಕ್ಕಸಕ್ಕೆ ಅಷ್ಟು ಕೋಟಿ ರೂ. ನಷ್ಟವಾಗುತ್ತದೆ. ಆದರೆ ಮದ್ಯಪಾನಿಗಳು ಮಾಡುವ ಅವಾಂತರವನ್ನು ನಿಯಂತ್ರಣ ಮಾಡಲು ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಅಬಕಾರಿ ಇಲಾಖೆಯಿಂದ 10% ಜಾಸ್ತಿ ಖರ್ಚು ಮಾಡಬೇಕಾಗುತ್ತದೆ ಎಂಬ ವರದಿ ಬಂದಿತ್ತು. ಆದ್ದರಿಂದ ವ್ಯಸನಮುಕ್ತ ಸಮಾಜವನ್ನು ನಿರ್ಮಾಣ ಮಾಡುವ‌ ಶಾಸನವನ್ನು ಸರ್ಕಾರ ಅನುಷ್ಠಾನಗೊಳಿಸಿ ಮದ್ಯ ವ್ಯಸನಿಗಳನ್ನು ಪುನರುಜ್ಜೀವನ ಮಾಡಬೇಕಾದ ಅವಶ್ಯಕತೆ ಇದೆ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸುಮಾರು 27 ವರ್ಷಗಳಿಂದ ಜನರಲ್ಲಿರುವ ಮದ್ಯಪಾನ, ಡ್ರಗ್ಸ್ ಮುಂತಾದ ದುಶ್ಚಟಗಳನ್ನು ಬಿಡಿಸುವ ಪ್ರಯತ್ನ ನಡೆಸುತ್ತಿದ್ದೇವೆ. ನಮ್ಮ ಈ ವೇದಿಕೆಯ ಮೂಲಕ ಮಾದಕ ವ್ಯಸನಿಗಳ ಮನಪರಿವರ್ತನೆ ಮಾಡಿ ದುಶ್ಚಟಗಳಿಂದ ಮುಕ್ತರಾಗುವಂತೆ ಮಾಡುತ್ತೇವೆ. ಅಲ್ಲದೆ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ದುಶ್ಚಟಗಳಿಂದ ದೂರ ಇರುವಂತೆಯೂ ಮಾರ್ಗದರ್ಶನ ನೀಡುತ್ತಿದ್ದೇವೆ. ಹಾಗಾಗಿ ಶಿಬಿರದ ಮೂಲಕ ನೂರು ದಿವಸ ಯಾರು ಮುಗಿಸಿದ್ದಾರೆ ಅವರಿಗೆ ಮನೋಸ್ಥೈರ್ಯ ತುಂಬಲು ಅವರಿಗೆ ಮತ್ತೆ ಮಾದಕ ವ್ಯವಸನದಿಂದ ದೂರ ಇರುವಂತೆ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ವ್ಯಸನಮುಕ್ತ ಸಾಧಕರಿಗೆ ಐಡಿ ಕಾರ್ಡ್​ಗಳು, ಅಭಿನಂದನಾ ಪತ್ರಗಳನ್ನು ಸಾಂಕೇತಿಕವಾಗಿ ನೀಡಲಾಯಿತು. ಅಲ್ಲದೆ ಅತೀ ಹೆಚ್ಚು ಜನರನ್ನು ಮಾದಕ ವ್ಯಸನದಿಂದ ಮುಕ್ತರಾಗುವಂತೆ ಮಾಡಿದವರನ್ನು ಸನ್ಮಾನಿಸಲಾಯಿತು.

Intro:ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮೂಲಕ ನೂರಾರು ಮಂದಿ ಮದ್ಯವ್ಯಸನ ಮುಕ್ತರಾಗಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಮತ್ತೊಂದು ಕಡೆಗಳಲ್ಲಿ ಸರಕಾರ ಹೊಸ ಬಾರ್ ಗೆ ಪರವಾನಿಗೆ ನೀಡುತ್ತಿದೆ. ಆದ್ದರಿಂದ ಇದಕ್ಕೊಂದು ಅಂತಿಮ ರೂಪ ನೀಡಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅಖಿಲ ಭಾರತ ಜನಜಾಗೃತಿ ವೇದಿಕೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ‌ ಯೋಜನೆ ವ್ಯಸನಮುಕ್ತರ ಸಾಧಕರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿ, ಸರಕಾರದ ವತಿಯಿಂದ ವೀರೇಂದ್ರ ಹೆಗ್ಗಡೆಯವರ ಅಭಿಪ್ರಾಯವನ್ನು ಕ್ರೋಢೀಕರಿಸಿಕೊಂಡು ಯಾವ ರೀತಿ ಗ್ರಾಮಾಭಿವೃದ್ಧಿಗೆ ಹೆಜ್ಜೆಯನ್ನು ಇರಿಸಿದ್ದೇವೋ, ಅದೇ ರೀತಿ ಮದ್ಯಪಾನ ನಿಷೇಧ ಹಾಗೂ ಮದ್ಯವರ್ಜನ ಶಿಬಿರಕ್ಕೆ ಸರಕಾರ ಮತ್ತು ಪಾನ ನಿರೋಧ ಮಂಡಳಿಯ ವತಿಯಿಂದ ಯೋಜನೆಯನ್ನು ರೂಪಿಸಲು ಪ್ರಯತ್ನ ಪಡುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇಡೀ ಕರ್ನಾಟಕ ಸರಕಾರಕ್ಕೆ ಸುಮಾರು 18 ಸಾವಿರ ಕೋಟಿ ರೂ. ಆದಾಯ ಬರುವುದು ಅಬಕಾರಿ ಇಲಾಖೆಯಿಂದ. ಆದರೆ ಇಷ್ಟು ಆದಾಯ ಬರುವ ಬಾರ್ ಗಳನ್ನು ಮುಚ್ಚಿದರೆ ಸರಕಾರದ ಬೊಕ್ಕಸಕ್ಕೆ ಅಷ್ಟು ಕೋಟಿ ರೂ.ಗಳು ನಷ್ಟವಾಗುತ್ತದೆ. ಆದರೆ ಮದ್ಯಪಾನಿಗಳು ಮಾಡುವ ಅವಾಂತರವನ್ನು ನಿಯಂತ್ರಣ ಮಾಡಲು ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಅಬಕಾರಿ ಇಲಾಖೆಯಿಂದ 10% ಜಾಸ್ತಿ ಖರ್ಚು ಮಾಡಬೇಕಾಗುತ್ತದೆ ಎಂಬ ವರದಿ ಬಂದಿತ್ತು. ಆದ್ದರಿಂದ ವ್ಯಸನಮುಕ್ತ ಸಮಾಜವನ್ನು ನಿರ್ಮಾಣ ಮಾಡುವ‌ ಶಾಸನವನ್ನು ಸರಕಾರ ಅನುಷ್ಠಾನ ಗೊಳಿಸಿ ಮದ್ಯ ವ್ಯಸನಿಗಳನ್ನು ಪುನರುಜ್ಜೀವನ ಮಾಡಬೇಕಾದ ಅವಶ್ಯಕತೆ ಇದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.


Body:ನೂರಾರು ಶಿಬಿರಗಳನ್ನು ಮಾಡಿ, ಸಾಕಷ್ಟು ದಿನಗಳ ಕಾಲ ಮಾದಕ ವ್ಯಸನಿಗಳ ಕಾಲ ಮದ್ಯವರ್ಜನರೊಂದಿಗೆ ಇದ್ದು ಅವರನ್ನು‌ ಬದುಕಿನ ಮತ್ತೊಂದು ಮಗ್ಗಲಿಗೆ ಕೊಂಡೊಯ್ಯುವ ತಂಡದ ಶ್ರಮ ದಿಗ್ಭ್ರಮೆ ಮೂಡಿಸುತ್ತಿದೆ. ಈ ಜನಜಾಗೃತಿ ಸಮಿತಿಯ ಮದ್ಯವರ್ಜನ ಶಿಬಿರದ ಮೂಲಕ ಸಾವಿರಾರು ಜನರ ವ್ಯಸನಮುಕ್ತರಾಗುವ ಸಂಕಲ್ಪದಿಂದ ನಿಮ್ಮ ಕುಟುಂಬ ಮಾತ್ರವಲ್ಲ, ಇಡೀ ನಾಗರಿಕ ಸಮಾಜವನ್ನು ರೂಪಿಸಿದಂತಹ ಕೀರ್ತಿಗೆ ನೀವು ಭಾಜನರಾದಿರಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿರುವ ಈ ಜನಜಾಗೃತಿ ವೇದಿಕೆ ಇಡೀ ಕರ್ನಾಟಕದಲ್ಲಿ ಹೊಸ ಯೋಜನೆಯನ್ನು ಮಾಡುತ್ತಿದೆ. ಆದ್ದರಿಂದ ಸರಕಾರವೂ ಅದಕ್ಕೆ ಒಂದಿಷ್ಟು ಶಕ್ತಿ ತುಂಬುವ ಕೆಲಸ ಮಾಡಬೇಕಾಗುತ್ತದೆ.

ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಸುಮಾರು 27 ವರ್ಷಗಳಿಂದ ಜನರಲ್ಲಿರುವ ಮದ್ಯಪಾನ, ಡ್ರಗ್ಸ್ ಮುಂತಾದ ದುಶ್ಚಟಗಳನ್ನು ಬಿಡಿಸುವ ಪ್ರಯತ್ನ ನಡೆಸುತ್ತಿದ್ದೇವೆ. ನಮ್ಮ ಈ ವೇದಿಕೆಯ ಮೂಲಕ ಮಾದಕ ವ್ಯಸನಿಗಳ ಮನಪರಿವರ್ತನೆ ಮಾಡಿ ದುಶ್ಚಟಗಳಿಂದ ಮುಕ್ತರಾಗುವಂತೆ ಮಾಡುತ್ತೇವೆ. ಅಲ್ಲದೆ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ದುಶ್ಚಟಗಳಿಂದ ದೂರ ಇರುವಂತೆಯೂ ಮಾರ್ಗದರ್ಶನ ನೀಡುತ್ತಿದ್ದೇವೆ. ಹಾಗಾಗಿ ಶಿಬಿರದ ಮೂಲಕ ನೂರು ದಿವಸ ಯಾರು ಮುಗಿಸಿದ್ದಾರೆ ಅವರಿಗೆ ಮನೋಸ್ಥೈರ್ಯ ತುಂಬಲು ಅವರಿಗೆ ಮತ್ತೆ ಮಾದಕವ್ಯವಸನದಿಂದ ದೂರ ಇರುವಂತೆ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ವ್ಯಸನಮುಕ್ತರ ಸಾಧಕರಿಗೆ ಐಡಿ ಕಾರ್ಡ್ ಗಳು, ಅಭಿನಂದನಾ ಪತ್ರಗಳನ್ನು ಸಾಂಕೇತಿಕವಾಗಿ ನೀಡಲಾಯಿತು. ಅಲ್ಲದೆ ಅತೀ ಹೆಚ್ಚು ಜನರನ್ನು ಮಾದಕವ್ಯಸನದಿಂದ ಮುಕ್ತರಾಗುವಂತೆ ಮಾಡಿದವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಹೇಮಾವತಿ ವಿ.ಹೆಗ್ಗಡೆ, ರಾಜ್ಯ ಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ರೋಹಿಣಿ, ಧರ್ಮಸ್ಥಳ ಜನಜಾಗೃತಿ ವೇದಿಕೆಯ ವಿವೇಕ್ ವಿ.ಪಾಯಸ್ ಮತ್ತಿತರರು ಉಪಸ್ಥಿತರಿದ್ದರು.

Reporter_Vishwanath Panjimogaru




Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.