ETV Bharat / state

ಕೋಟೆ ನಾಡಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ... ಮಾಜಿ ಶಾಸಕನ ವಿರುದ್ಧ ತೊಡೆ ತಟ್ಟಿದ ಶ್ರೀರಾಮುಲು!

ಗೆದ್ದ ಕ್ಷೇತ್ರವನ್ನ ಮಧ್ಯದಲ್ಲಿ ಬಿಟ್ಟು ಹೋಗುವ ವ್ಯಕ್ತಿ ನಾನಲ್ಲ. ಇದ್ದಿದ್ದನ್ನು ಇದ್ದಂಗೆ ಮಾತನಾಡುವೆ. ಅನೇಕರು ನನ್ನ ಬಗ್ಗೆ ಏನೆನೋ ಮಾತನಾಡುತ್ತಾರೆ. ಅವರನ್ನು ಸಮಾಧಾನ ಮಾಡೋ ಅವಶ್ಯಕತೆ ಇಲ್ಲವೆಂದು ಶಾಸಕ ಶ್ರೀರಾಮುಲು ಟೀಕಾಕಾರರಿಗೆ ಟಾಂಗ್ ಕೊಟ್ಟರು.

author img

By

Published : Apr 5, 2019, 5:09 PM IST

ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ ಪರ ಶಾಸಕ ಶ್ರೀ ರಾಮುಲು ಪ್ರಚಾರ

ಚಿತ್ರದುರ್ಗ: ಲೋಕಸಭಾ ಚುನಾವಣೆಯ ಬೃಹತ್‌ ಪ್ರಚಾರಕ್ಕೆ ಇಂದು ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಾಕ್ಷಿಯಾಗಿದೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಶ್ರೀ ರಾಮುಲು ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು ಪ್ರಚಾರದಲ್ಲಿ ಭಾಗಿಯಾಗಿ ಶಕ್ತಿ ಪ್ರದರ್ಶಿಸಿದರು.

ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ ಪರ ಶಾಸಕ ಶ್ರೀ ರಾಮುಲು ಪ್ರಚಾರ

ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ ಪರ ಪ್ರಚಾರದ ವೇಳೆ, ವೇದಿಕೆಯಲ್ಲಿ ಭಾಷಣ ಮಾಡಿದ ಶ್ರೀ ರಾಮುಲು ಗೆದ್ದ ಕ್ಷೇತ್ರವನ್ನ ಮಧ್ಯದಲ್ಲಿ ಬಿಟ್ಟು ಹೋಗುವ ವ್ಯಕ್ತಿ ನಾನಲ್ಲ. ಎಲ್ಲಾ ರಾಜಕಾರಣಿಗಳ ತರ ರಾಮುಲು ಅಲ್ಲ. ಇದ್ದಿದ್ದನ್ನು ಇದ್ದಂಗೆ ಮಾತನಾಡುವೆ. ಅನೇಕರು ನನ್ನ ಬಗ್ಗೆ ಏನೆನೋ ಮಾತನಾಡುತ್ತಾರೆ. ಅವರಿಗೆ ಸಮಾಧಾನ ಮಾಡೋ ಅವಶ್ಯಕತೆ ನನಗಿಲ್ಲ. ಅವರೆಲ್ಲಾ ಅಧಿಕಾರ ಕಳ್ಕೊಂಡು ಮನಸಿಗೆ ಬಂದಂತೆ ಮಾತನಾಡುತ್ತಾರೆ. ಅವರು ನನ್ನನ್ನು ಕೆಣಕಿದಿರುವುದೇ ಉತ್ತಮ ಎಂದು ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಶ್ರೀರಾಮುಲು ಫೋಟೋ ಇಟ್ಕೊಂಡ್ ಶಾಸಕರಾದವ್ರು ನನಗೆ ಬುದ್ದಿ ಕಲಿಸ್ತಾರಾ?. ಶ್ರೀರಾಮುಲು ಎದುರು ಗೆಲ್ಲಲು ಶಕ್ತಿ ಇಲ್ಲದಂತವರು ನನ್ನ ಬಗ್ಗೆ ಮಾತನಾಡ್ತಾರೆ. ಜೀವನದ ಕೊನೆ ಉಸಿರು ಇರೋವರೆಗೂ ನಿನ್ನ ಶಕ್ತಿ ಏನು ಎಂಬುದನ್ನ ನೋಡ್ತೇನಿ ಎಂದು ಶ್ರೀರಾಮುಲು ತೊಡೆ ತಟ್ಟಿದರು.

ಚಿತ್ರದುರ್ಗ: ಲೋಕಸಭಾ ಚುನಾವಣೆಯ ಬೃಹತ್‌ ಪ್ರಚಾರಕ್ಕೆ ಇಂದು ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಾಕ್ಷಿಯಾಗಿದೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಶ್ರೀ ರಾಮುಲು ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು ಪ್ರಚಾರದಲ್ಲಿ ಭಾಗಿಯಾಗಿ ಶಕ್ತಿ ಪ್ರದರ್ಶಿಸಿದರು.

ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ ಪರ ಶಾಸಕ ಶ್ರೀ ರಾಮುಲು ಪ್ರಚಾರ

ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ ಪರ ಪ್ರಚಾರದ ವೇಳೆ, ವೇದಿಕೆಯಲ್ಲಿ ಭಾಷಣ ಮಾಡಿದ ಶ್ರೀ ರಾಮುಲು ಗೆದ್ದ ಕ್ಷೇತ್ರವನ್ನ ಮಧ್ಯದಲ್ಲಿ ಬಿಟ್ಟು ಹೋಗುವ ವ್ಯಕ್ತಿ ನಾನಲ್ಲ. ಎಲ್ಲಾ ರಾಜಕಾರಣಿಗಳ ತರ ರಾಮುಲು ಅಲ್ಲ. ಇದ್ದಿದ್ದನ್ನು ಇದ್ದಂಗೆ ಮಾತನಾಡುವೆ. ಅನೇಕರು ನನ್ನ ಬಗ್ಗೆ ಏನೆನೋ ಮಾತನಾಡುತ್ತಾರೆ. ಅವರಿಗೆ ಸಮಾಧಾನ ಮಾಡೋ ಅವಶ್ಯಕತೆ ನನಗಿಲ್ಲ. ಅವರೆಲ್ಲಾ ಅಧಿಕಾರ ಕಳ್ಕೊಂಡು ಮನಸಿಗೆ ಬಂದಂತೆ ಮಾತನಾಡುತ್ತಾರೆ. ಅವರು ನನ್ನನ್ನು ಕೆಣಕಿದಿರುವುದೇ ಉತ್ತಮ ಎಂದು ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಶ್ರೀರಾಮುಲು ಫೋಟೋ ಇಟ್ಕೊಂಡ್ ಶಾಸಕರಾದವ್ರು ನನಗೆ ಬುದ್ದಿ ಕಲಿಸ್ತಾರಾ?. ಶ್ರೀರಾಮುಲು ಎದುರು ಗೆಲ್ಲಲು ಶಕ್ತಿ ಇಲ್ಲದಂತವರು ನನ್ನ ಬಗ್ಗೆ ಮಾತನಾಡ್ತಾರೆ. ಜೀವನದ ಕೊನೆ ಉಸಿರು ಇರೋವರೆಗೂ ನಿನ್ನ ಶಕ್ತಿ ಏನು ಎಂಬುದನ್ನ ನೋಡ್ತೇನಿ ಎಂದು ಶ್ರೀರಾಮುಲು ತೊಡೆ ತಟ್ಟಿದರು.

Intro:ಅವರೆಲ್ಲಾ ಅಧಿಕಾರ ಕಳ್ಕೊಂಡಿರೋ ಹುಚ್ಚ ನಾಯಿಗಳು, ಯಾರೀಗೆ ಟಾಂಗ್ ಕೊಟ್ರು ಶಾಸಕ ಶ್ರೀ ರಾಮುಲು

ಚಿತ್ರದುರ್ಗ: ಲೋಕಸಭಾ ಚುನಾವಣೆಯ ಬೃಹತ್‌ ಪ್ರಚಾರಕ್ಕೆ ಇಂದು ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಾಕ್ಷಿಯಾಯಿತು. ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕ ಶ್ರೀ ರಾಮುಲು ಸೇರಿದ್ದಂತೆ ಜಿಲ್ಲೆಯ ಶಾಸಕರು ಪ್ರಚಾರದಲ್ಲಿ ಭಾಗಿಯಾಗಿ ಶಕ್ರಿ ಪ್ರದರ್ಶನ ಮಾಡಿದರು. ಬಿಜೆಪಿ ಅಭ್ಯರ್ಥಿ ಎ‌ನಾರಾಯಣ ಸ್ವಾಮಿಯ ಪರ ಪ್ರಚಾರದ ವೇಳೆ ವೇದಿಕೆಯಲ್ಲಿ ಭಾಷಣ ಮಾಡಿದ ಶ್ರೀ ರಾಮುಲು ಗೆದ್ದ ಕ್ಷೇತ್ರವನ್ನ ಮಧ್ಯದಲ್ಲಿ ಬಿಟ್ಟು ಹೋಗುವ ವ್ಯಕ್ತಿ ನಾನಲ್ಲ. ಎಲ್ಲಾ ರಾಜಕಾರಣಿಗಳ ತರ ರಾಮುಲು ಅಲ್ಲ. ಇದ್ದದ್ದನ್ನು ಇದ್ದಂಗೆ ಮಾತನಾಡುವವನು ನಾನು. ಅನೇಕರು ನನ್ನ ಬಗ್ಗೆ ಏನೆನೋ ಮಾತಾಡ್ತಾರೆ ಅವರಿಗೆ ಸಮಾಧಾನ ಮಾಡೋ ಅವಶ್ಯಕತೆ ನನಗೆ ಇಲ್ಲ‌. ಅವರೆಲ್ಲಾ ಅಧಿಕಾರ ಕಳ್ಕೊಂಡಿರೋ ಹುಚ್ಚ ನಾಯಿಗಳು. ಹುಚ್ಚ ನಾಯಿಗಳಿಗೆ ಸಮಾಧಾನ ಮಾಡೋ ಅಗತ್ಯವಿಲ್ಲ ಎಂದು ಮಾಜಿ ಶಾಸಕರೊಬ್ಬರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಶ್ರೀರಾಮುಲು ಪೋಟೋ ಇಟ್ಕೊಂಡ್ ಶಾಸಕರಾದವ್ರು ನನಗೆ ಬುದ್ದಿ ಕಲಿಸ್ತಾರಾ?, ಶ್ರೀರಾಮುಲು ಎದುರು ಗೆಲ್ಲಲು ಶಕ್ತಿ ಇಲ್ಲದಂತವರು ನನ್ನ ಬಗ್ಗೆ ಮಾತಾಡ್ತಾರೆ.
ನನ್ನ ಜೀವನದ ಕೊನೆ ಉಸಿರು ಇರೋವರೆಗೂ ನಿನ್ನ ಶಕ್ತಿ ಏನು ಎಂಬುದನ್ನ ನಾನು ನೋಡ್ತೀನಿ. ಶ್ರೀರಾಮುಲು ಪ್ರೀತಿಯಿಂದ ಮಾತಾಡ್ಸಿದ್ರೆ ತಲೆ ಬಾಗ್ತೀನಿ. ನೋಡ್ತೀನಿ, ಮಾಡ್ತೀನಿ ಅಂದ್ರೆ ನನ್ನ ಅಸಲಿ ಮುಖ ನೋಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಗೆ ಟಾಂಗ್ ಕೊಟ್ಟರು. Body:ಹುಚ್ಚ ನಾಯಿConclusion:ರಾಮುಲು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.