ಚಿತ್ರದುರ್ಗ : ಕೇಸರಿ ಪೇಟ ಧರಿಸಿದವರು ಬಳಿಕ ಬಿಸಾಕಿದ್ದಾರೆ, ಕೇಸರಿ ಪೇಟ ಧರಿಸುವಾಗ ತಲೆಯಲ್ಲಿ ಸೆಗಣಿಯಿತ್ತಾ. ಕೇಸರಿ ಎಂಬುದು ತ್ಯಾಗ, ಬಲಿದಾನದ ಸಂಕೇತ ಅದಕ್ಕೆ ಅಪಮಾನ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸಿದ್ದರಾಮಯ್ಯ ಕಣ್ಣಿಗೆ ಬರೀ ಹಿಂದೂ ಎಂಬುದು ಕಣ್ಣಿಗೆ ಬೀಳುತ್ತದೆ. ರಾಷ್ಟ್ರ ಧ್ವಜದ ಬಗ್ಗೆ ನಮಗೆ ಗೌರವ ಇದೆ, ಡಿಕೆಶಿ ರಾಷ್ಟ್ರ ಧ್ವಜದ ವಿಚಾರವನ್ನ ರಾಜಕಾರಣಕ್ಕೆ ಬಳಸಿದ್ದಾರೆ. ರಾಷ್ಟ್ರ ಧ್ವಜ ತೆಗೆದು ಭಾಗವಾ ಧ್ವಜ ಹಾರಿಸಿದ್ದಾರೆಂದು ಡಿಕೆಶಿ ಹೇಳಿದ್ದಾರೆ. ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿರುವುದು ತಪ್ಪು ಎಂದರು.
ರಾಜ್ಯದಲ್ಲಿ ಇದೊಂದು ವಿಚಿತ್ರವಾದ ಪರಿಸ್ಥಿತಿ. ಮಕ್ಕಳಲ್ಲಿ ಸಮವಸ್ತ್ರದ ಬಗ್ಗೆ ಎಲ್ಲರೂ ಆಸಕ್ತಿ ಮೂಡಿಸಬೇಕಿತ್ತು. ಉಡುಪಿಯ ಶಾಲೆಯಲ್ಲಿ ಆರು ಜನ ಮಾತ್ರ ಹಿಜಾಬ್ ಧರಿಸಿದ್ದರು, ಇನ್ನುಳಿದ ತೊಂಬತ್ತು ಜನ ಮುಸ್ಲಿಂ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿದ್ದರು. ಆ ಆರು ಜನಕ್ಕೆ ಸಮಾಧಾನ ಪಡಿಸಿದ್ದರೆ ಈ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ ಎಂದರು.