ಚಿತ್ರದುರ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಅವರು ಇಂದು ಬೆಳಗ್ಗೆ ಸೈಕಲ್ ಏರಿ ಸಿಟಿ ರೌಂಡ್ಸ್ ಹಾಕಿದರು.
ಪೊಲೀಸ್ ವರಿಷ್ಠಾಧಿಕಾರಿ ಜಿ ರಾಧಿಕಾ ಅವರು ಬೆಳಗಿನ ಜಾವ ಸೈಕಲ್ ಏರಿ ನಗರದ ಹೊರವಲಯ ಹಾಗು ನಗರವನ್ನು ರೌಂಡ್ಸ್ ಹಾಕಿದ್ದಾರೆ. ಬೆಳಗಿನ ಜಾವ 4 ಘಂಟೆಗೆ ಸೈಕಲ್ ಏರಿ ನಗರದ ಡಿಸಿ ಸರ್ಕಲ್ ನಿಂದ ಹೊರಟ ಅವರು, ರಾಷ್ಟ್ರೀಯ ಹೆದ್ದಾರಿ-4ರ ಮೂಲಕ ಕ್ಯಾದಿಗೆರೆ ತಲುಪಿ, ಬಳಿಕ ರಾಷ್ಟ್ರೀಯ ಹೆದ್ದಾರಿ-13ರ ರಸ್ತೆ ಮುಖಾಂತರ ತಮಟ್ಕಾಲ್ ರೋಡ್, ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುವ ಮೂಲಕ ಸಿಟಿ ರೌಂಡ್ಸ್ ಹಾಕಿದರು. ಎಸ್ಪಿಗೆ ಇತರೆ ಅಧಿಕಾರಿಗಳು ಸಾಥ್ ನೀಡಿದರು.