ETV Bharat / state

ಮಹಾಗಣಪತಿ ಗಣೇಶೋತ್ಸವಕ್ಕೆ ಕೊರೊನಾ ಛಾಯೆ : ಸರಳ ಶೋಭಯಾತ್ರೆ

author img

By

Published : Sep 12, 2020, 10:35 PM IST

ಕೊರೊನಾ ಪರಿಣಾಮದ ಹಿನ್ನೆಲೆ ಪ್ರತಿವರ್ಷ ವೈಭವಯುತವಾಗಿ ನಿಮಜ್ಜನಗೊಳ್ಳುತ್ತಿದ್ದ ಪ್ರಸಿದ್ಧ ಚಿತ್ರದುರ್ಗದ ಹಿಂದೂ ಮಹಾಗಣಪತಿ ಗಣೇಶೋತ್ಸವ ಶೋಭಾಯಾತ್ರೆ ಈ ಬಾರಿ ಸರಳವಾಗಿ ಜರುಗಿತು. 4 ಲಕ್ಷ ಜನ ಸೇರುತ್ತಿದ್ದ ಶೋಭಾಯಾತ್ರೆಯಲ್ಲಿ ಕೇವಲ 3 ಸಾವಿರ ಜನರಷ್ಟೇ ಪಾಲ್ಗೊಂಡರು.

chitradurga hindu mahaganapathi shobhayatra simple celebration
ಸರಳವಾಗಿ ನಡೆದ ಶೋಭಯಾತ್ರೆ

ಚಿತ್ರದುರ್ಗ: ರಾಜ್ಯದಲ್ಲಿ ಖ್ಯಾತಿಗಳಿಸಿರುವ ಚಿತ್ರದುರ್ಗದ ಹಿಂದೂ ಮಹಾಗಣಪತಿ ಗಣೇಶೋತ್ಸವದ ಮೇಲೆ ಕೊರೊನಾ ಮಹಾಮಾರಿಯ ಕರಿ ನೆರಳು ಅವರಿಸಿದೆ. ಕೊರೊನಾ ಸೋಂಕಿನ ಭೀತಿಯ ಪರಿಣಾಮ ವಿಜೃಂಭಣೆಯಿಂದ ನಡೆಯುತ್ತಿದ್ಧ ಗಣೇಶೋತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲಾಗಿದ್ದು, ಚಿತ್ರದುರ್ಗ ನಗರದ ಮುಖ್ಯ‌ರಸ್ತೆಗಳಲ್ಲಿ ತೆರಳಿದ ಶೋಭಾಯಾತ್ರೆಯಲ್ಲಿ ಪ್ರತಿವರ್ಷ ಇರುತ್ತಿದ್ದಷ್ಟು ಜನಸಾಗರ ಕಾಣಲಿಲ್ಲ.

ಸರಳವಾಗಿ ನಡೆದ ಶೋಭಾಯಾತ್ರೆ
ವಿಶ್ವ ಹಿಂದೂ ಪರಿಷತ್​​ ಹಾಗೂ ಭಜರಂಗದಳದ ಸಹಯೋಗದಲ್ಲಿ ಸತತ 9 ವರ್ಷಗಳಿಂದ ನಡೆದುಕೊಂಡು ಬಂದಿರುವ ವೈಭೋಗದ ಉತ್ಸವಕ್ಕೆ ಈ ಬಾರಿ ಬ್ರೇಕ್ ಬಿದ್ದಿದೆ. ಪ್ರತಿ ವರ್ಷದಂತೆ ಪ್ರಸ್ತುತ ವರ್ಷ ಕಲಾ ತಂಡಗಳ ವೈಭವ, ನೃತ್ಯ, ಡೋಲು, ಸೇರಿದ್ದಂತೆ ಡಿಜೆ ಸದ್ದು ಇಲ್ಲದೆ ಹಿಂದೂ ಮಹಾಗಣಪತಿ ನಾದ ಸ್ವರದ ಮುಖೇನಾ ನಗರದ ಮುಖ್ಯ‌ರಸ್ತೆಗಳಲ್ಲಿ ಸಾಗಿತು. ಪ್ರತಿ ವರ್ಷ ನಾಲ್ಕು ಲಕ್ಷ ಜನ ಸೇರಿ ಡಿಜೆಗೆ ಹೆಜ್ಜೆ ಹಾಕುತ್ತಾ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದ ಹಿಂದೂ ಮಹಾಗಣಪತಿ ಉತ್ಸವದಲ್ಲಿ ಈ ಬಾರಿ ಕೇವಲ 3 ಸಾವಿರ ಜನ ಪಾಲ್ಗೊಂಡ್ರು.

ಪೊಲೀಸರು ಜನರು ಬರದಂತೆ ತಡೆ​​ ಮಾಡಿದ್ದು ಹಾಗೂ ಕೊರೊನಾದಿಂದಾಗಿ ಯುವಕ ಯುವತಿಯರು ಈ ಬಾರಿ ಹಿಂದು ಮಹಾಗಣಪತಿ ನಿಮ್ಮಜ್ಜನ‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿರುವುದು ಪ್ರಮುಖ ಕಾರಣ ಕೂಡ ಆಗಿದೆ ಎನ್ನುತ್ತಾರೆ ಸ್ಥಳೀಯರು.

ಪ್ರತಿ ವರ್ಷ ಬೆಳಿಗ್ಗೆ 10 ಗಂಟೆಗೆ ಆರಂಭವಾಗುತ್ತಿದ್ದ ಶೋಭಯಾತ್ರೆ ಕೊರೊನಾದಿಂದ ಇಂದು ಸಂಜೆ 3 ಗಂಟೆಗೆ ಆರಂಭವಾಯಿತು. ವಿಶ್ವ ಹಿಂದೂ ಪರಿಷತ್ ಹಾಗು ಭಜರಂಗದಳದ ಸುಮಾರು 100 ಜನ ಕಾರ್ಯಕರ್ತರು ಗಣೇಶೋತ್ಸವದಲ್ಲಿ ಸಾಂಕೇತಿಕವಾಗಿ ಭಾಗಿಯಾಗಿ ರಾಮ ಸ್ಮರಣೆ ಮಾಡುತ್ತಾ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಶೋಭಾಯಾತ್ರೆಗೆ ಮುನ್ನ ಭಗೀರಥ ಶ್ರೀ, ಮಾದರಾ ಚನ್ನಯ್ಯ ಶ್ರೀ, ಸೇವಾಲಾಲ್ ಶ್ರೀ, ವಿದ್ಯಾರಣ್ಯ ಶ್ರೀ ಸೇರಿದಂತೆ ಶಾಸಕ ತಿಪ್ಪಾರೆಡ್ಡಿ ಭಾಗಿಯಾಗಿ ಶೋಭಯಾತ್ರೆಗೆ ಹಸಿರು ನಿಶಾನೆ ತೋರಿದರು.

ಒಟ್ಟಾರೆ, ರಾಜ್ಯದಲ್ಲೇ ಖ್ಯಾತಿ ಗಳಿಸಿದ್ದ ಹಿಂದೂ ಮಹಾಗಣಪತಿ್ಯ ಅದ್ಧೂರಿ ಗಣೇಶೋತ್ಸವ ಹಾಗು ಶೋಭಾಯಾತ್ರೆಗೆ ಕೊರೊನಾ ಮಾಹಾಮಾರಿ ಬ್ರೇಕ್ ಹಾಕಿದೆ. ಈ ಬಾರಿ ಸರಳತೆಯಿಂದ ಸಾಂಕೇತಿಕವಾಗಿ ಶೋಭಾಯಾತ್ರೆ ಆಚರಣೆಯಾಗಿದ್ದಕ್ಕೆ ಯುವಜನತೆಯಲ್ಲಿ ನಿರಾಸೆ ಸೃಷ್ಟಿಯಾಗಿರುವುದಂತು ಸುಳ್ಳಲ್ಲ.

ಚಿತ್ರದುರ್ಗ: ರಾಜ್ಯದಲ್ಲಿ ಖ್ಯಾತಿಗಳಿಸಿರುವ ಚಿತ್ರದುರ್ಗದ ಹಿಂದೂ ಮಹಾಗಣಪತಿ ಗಣೇಶೋತ್ಸವದ ಮೇಲೆ ಕೊರೊನಾ ಮಹಾಮಾರಿಯ ಕರಿ ನೆರಳು ಅವರಿಸಿದೆ. ಕೊರೊನಾ ಸೋಂಕಿನ ಭೀತಿಯ ಪರಿಣಾಮ ವಿಜೃಂಭಣೆಯಿಂದ ನಡೆಯುತ್ತಿದ್ಧ ಗಣೇಶೋತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲಾಗಿದ್ದು, ಚಿತ್ರದುರ್ಗ ನಗರದ ಮುಖ್ಯ‌ರಸ್ತೆಗಳಲ್ಲಿ ತೆರಳಿದ ಶೋಭಾಯಾತ್ರೆಯಲ್ಲಿ ಪ್ರತಿವರ್ಷ ಇರುತ್ತಿದ್ದಷ್ಟು ಜನಸಾಗರ ಕಾಣಲಿಲ್ಲ.

ಸರಳವಾಗಿ ನಡೆದ ಶೋಭಾಯಾತ್ರೆ
ವಿಶ್ವ ಹಿಂದೂ ಪರಿಷತ್​​ ಹಾಗೂ ಭಜರಂಗದಳದ ಸಹಯೋಗದಲ್ಲಿ ಸತತ 9 ವರ್ಷಗಳಿಂದ ನಡೆದುಕೊಂಡು ಬಂದಿರುವ ವೈಭೋಗದ ಉತ್ಸವಕ್ಕೆ ಈ ಬಾರಿ ಬ್ರೇಕ್ ಬಿದ್ದಿದೆ. ಪ್ರತಿ ವರ್ಷದಂತೆ ಪ್ರಸ್ತುತ ವರ್ಷ ಕಲಾ ತಂಡಗಳ ವೈಭವ, ನೃತ್ಯ, ಡೋಲು, ಸೇರಿದ್ದಂತೆ ಡಿಜೆ ಸದ್ದು ಇಲ್ಲದೆ ಹಿಂದೂ ಮಹಾಗಣಪತಿ ನಾದ ಸ್ವರದ ಮುಖೇನಾ ನಗರದ ಮುಖ್ಯ‌ರಸ್ತೆಗಳಲ್ಲಿ ಸಾಗಿತು. ಪ್ರತಿ ವರ್ಷ ನಾಲ್ಕು ಲಕ್ಷ ಜನ ಸೇರಿ ಡಿಜೆಗೆ ಹೆಜ್ಜೆ ಹಾಕುತ್ತಾ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದ ಹಿಂದೂ ಮಹಾಗಣಪತಿ ಉತ್ಸವದಲ್ಲಿ ಈ ಬಾರಿ ಕೇವಲ 3 ಸಾವಿರ ಜನ ಪಾಲ್ಗೊಂಡ್ರು.

ಪೊಲೀಸರು ಜನರು ಬರದಂತೆ ತಡೆ​​ ಮಾಡಿದ್ದು ಹಾಗೂ ಕೊರೊನಾದಿಂದಾಗಿ ಯುವಕ ಯುವತಿಯರು ಈ ಬಾರಿ ಹಿಂದು ಮಹಾಗಣಪತಿ ನಿಮ್ಮಜ್ಜನ‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿರುವುದು ಪ್ರಮುಖ ಕಾರಣ ಕೂಡ ಆಗಿದೆ ಎನ್ನುತ್ತಾರೆ ಸ್ಥಳೀಯರು.

ಪ್ರತಿ ವರ್ಷ ಬೆಳಿಗ್ಗೆ 10 ಗಂಟೆಗೆ ಆರಂಭವಾಗುತ್ತಿದ್ದ ಶೋಭಯಾತ್ರೆ ಕೊರೊನಾದಿಂದ ಇಂದು ಸಂಜೆ 3 ಗಂಟೆಗೆ ಆರಂಭವಾಯಿತು. ವಿಶ್ವ ಹಿಂದೂ ಪರಿಷತ್ ಹಾಗು ಭಜರಂಗದಳದ ಸುಮಾರು 100 ಜನ ಕಾರ್ಯಕರ್ತರು ಗಣೇಶೋತ್ಸವದಲ್ಲಿ ಸಾಂಕೇತಿಕವಾಗಿ ಭಾಗಿಯಾಗಿ ರಾಮ ಸ್ಮರಣೆ ಮಾಡುತ್ತಾ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಶೋಭಾಯಾತ್ರೆಗೆ ಮುನ್ನ ಭಗೀರಥ ಶ್ರೀ, ಮಾದರಾ ಚನ್ನಯ್ಯ ಶ್ರೀ, ಸೇವಾಲಾಲ್ ಶ್ರೀ, ವಿದ್ಯಾರಣ್ಯ ಶ್ರೀ ಸೇರಿದಂತೆ ಶಾಸಕ ತಿಪ್ಪಾರೆಡ್ಡಿ ಭಾಗಿಯಾಗಿ ಶೋಭಯಾತ್ರೆಗೆ ಹಸಿರು ನಿಶಾನೆ ತೋರಿದರು.

ಒಟ್ಟಾರೆ, ರಾಜ್ಯದಲ್ಲೇ ಖ್ಯಾತಿ ಗಳಿಸಿದ್ದ ಹಿಂದೂ ಮಹಾಗಣಪತಿ್ಯ ಅದ್ಧೂರಿ ಗಣೇಶೋತ್ಸವ ಹಾಗು ಶೋಭಾಯಾತ್ರೆಗೆ ಕೊರೊನಾ ಮಾಹಾಮಾರಿ ಬ್ರೇಕ್ ಹಾಕಿದೆ. ಈ ಬಾರಿ ಸರಳತೆಯಿಂದ ಸಾಂಕೇತಿಕವಾಗಿ ಶೋಭಾಯಾತ್ರೆ ಆಚರಣೆಯಾಗಿದ್ದಕ್ಕೆ ಯುವಜನತೆಯಲ್ಲಿ ನಿರಾಸೆ ಸೃಷ್ಟಿಯಾಗಿರುವುದಂತು ಸುಳ್ಳಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.