ಚಿತ್ರದುರ್ಗ : ಪೇ ಸಿಎಂ ವಿಚಾರದಲ್ಲಿ ಕಾಂಗ್ರೆಸ್ ಡರ್ಟಿ ರಾಜಕಾರಣ ಮಾಡುತ್ತಿದೆ. ಯಾವುದೇ ವಿಚಾರ ಇದ್ದಲ್ಲಿ ನೇರವಾಗಿ ಮಾತನಾಡ ಬೇಕು ಇಲ್ಲಾ ದಾಖಲೆಗಳನ್ನು ಕೊಟ್ಟು ತನಿಖೆ ಮಾಡಿಸಬೇಕು. ಇದು ನೈತಿಕತೆಯ ಅಧಪತನವನ್ನು ಕಾಂಗ್ರೆಸ್ ತೊರುತ್ತಿದೆ. ಸದನದಲ್ಲೂ ಯಾವುದೇ ಸಂಪೂರ್ಣ ಮಾಹಿತಿ ಇಲ್ಲದೇ, ಜನ ಪರ ಕಾಳಜಿ ಇಲ್ಲದ ರೀತಿ ಕಾಂಗ್ರೆಸ್ ನಡೆದು ಕೊಂಡಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ದೂರಿದರು.
ಇಲ್ಲಿನ ಸಿರಿಗೆರೆ ಗ್ರಾಮದಲ್ಲಿ ನಡೆದ ಲಿಂಗಕೈ ಶಿವಕುಮಾರ ಶಿವಾಚಾರ್ಯ ಶ್ರೀಗಳ 30ನೇ ಶ್ರದ್ಧಾಂಜಲಿ ಸಮಾರಂಭ ಭಾಗವಹಿಸಿದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದರು. ಸುಧಾಕರ್ ಅವರು ನೀಡಿದ್ದ ಲಿಂಗಾಯತ ಸಿಎಂ ಟಾರ್ಗೆಟ್ ವಿಚಾರಕ್ಕೆ, ನಾನು ಅದರ ಭಾಗ ಅಲ್ಲ ಕಮೆಂಟ್ ಮಾಡಲ್ಲ ಎಂದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚಿಂತನೆ ಇದೆ ಎಂದು ಈ ವೇಳೆ ಮತ್ತೆ ಹಿಂಟ್ ಕೊಟ್ಟರು. ದೆಹಲಿಗೆ ಹೋದಾಗ ಈ ಬಗ್ಗೆ ಚರ್ಚಿಸಿ ತಿರ್ಮಾನ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಪಿಎಫ್ಐಯಿಂದ ಚಟುವಟಿಕೆ ಹೆಚ್ಚಗಿರುವುದರ ಬಗ್ಗೆ ಉತ್ತರಿಸಿ, ಈ ಬಗ್ಗೆ ಎನ್ಐಎ ಮತ್ತು ರಾಜ್ಯ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದ ಅವರು ಚುನಾವಣಾ ಸಮೀಕ್ಷೆಯ ಕುರಿತಾದ ಪ್ರಶ್ನೆಗೆ, ಸಮೀಕ್ಷೆಗಳು ಏನು ಹೇಳುತ್ತವೆ ಎಂಬುದು ಮುಖ್ಯ ಅಲ್ಲ, ಜನರ ನಾಡಿ ಮಿಡಿತದಲ್ಲಿ ನಮಗೆ ತಿಳಿಯುತ್ತದೆ. ಈ ಬಾರಿಯೂ ಬಿಜೆಪಿಯೇ ನೂರಕ್ಕೆ ನೂರು ಅಧಿಕಾರಕ್ಕೆ ಬರುವುದು ಎಂದು ಹೇಳಿದರು.
ಇದನ್ನೂ ಓದಿ : ರಾಜಕಾರಣಿಗಳು ಭ್ರಷ್ಟರಲ್ಲ, ವ್ಯವಸ್ಥೆ ನಮ್ಮನ್ನು ಕೆಡಿಸ್ತಿದೆ: ಸಚಿವ ಮಾಧುಸ್ವಾಮಿ