ETV Bharat / state

ಗ್ರಾಮಾಭಿವೃದ್ಧಿಗೆ ಪಣತೊಟ್ಟ, ನಕ್ಸಲ್ ಶರಣಾಗತಿಗೆ ದಿಟ್ಟ ಹೆಜ್ಜೆ ಇಟ್ಟ ಶ್ರೀಗಳು

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮೂಲಭೂತ ಸೌಕರ್ಯ ಗಳಿಂದ ವಂಚಿತವಾಗಿರುವ ಅದೆಷ್ಟೋ ಪ್ರದೇಶಗಳ ಜನರಿಗೆ ಪೇಜಾವರ ಮಠ ಜೀವನ ರೂಪಿಸಿಕೊಟ್ಟಿದೆ.

author img

By

Published : Dec 30, 2019, 12:09 PM IST

Pejawar shree worked for rural development
ಗ್ರಾಮಾಭಿವೃದ್ಧಿಗೆ ಪಣತೊಟ್ಟ, ನಕ್ಸಲ್ ಶರಣಾಗತಿಗೆ ದಿಟ್ಟ ಹೆಜ್ಜೆ ಇಟ್ಟ ಶ್ರೀಗಳು

ಚಿಕ್ಕಮಗಳೂರು: ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೊಳಪಟ್ಟ ಅದೆಷ್ಟೋ ಕುಗ್ರಾಮಗಳಿಂದು ಖಾಸಗಿಯವರ ಹೃದಯ ವೈಶಾಲ್ಯತೆಯಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಇಂಥ ಮಹತ್ತರ ಕೆಲಸ ಮಾಡುತ್ತಾ ಬಂದಿರುವ ಹೆಗ್ಗಳಿಕೆಗೆ ಪೇಜಾವರ ಮಠವೂ ಭಾಜನವಾಗಿದೆ. ಏಕೆಂದರೆ ಈ ಮಠ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮೂಲಭೂತ ಸೌಕರ್ಯ ಗಳಿಂದ ವಂಚಿತವಾಗಿರುವ ಅದೆಷ್ಟೋ ಪ್ರದೇಶಗಳ ಜನರಿಗೆ ಜೀವನ ರೂಪಿಸಿಕೊಟ್ಟಿದೆ.

ಗ್ರಾಮಾಭಿವೃದ್ಧಿಗೆ ಪಣತೊಟ್ಟ, ನಕ್ಸಲ್ ಶರಣಾಗತಿಗೆ ದಿಟ್ಟ ಹೆಜ್ಜೆ ಇಟ್ಟ ಶ್ರೀಗಳು

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ಅನೇಕ ಗ್ರಾಮಗಳು ನಕ್ಸಲ್ ಪೀಡಿತ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದವು. ಸರ್ಕಾರ ಬಿಡುಗಡೆ ಮಾಡತೊಡಗಿದ ಅದೆಷ್ಟೋ ಲಕ್ಷಗಳ ನಕ್ಸಲ್ ಪ್ಯಾಕೇಜ್ ಸಹ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಸಂದಿಲ್ಲ. ಇದನ್ನೇ ನಕ್ಸಲರು ಬಂಡವಾಳವಾಗಿಟ್ಟುಕೊಂಡು ಅಮಾಯಕ ಗ್ರಾಮಸ್ಥರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಸುತ್ತಿರುವುದನ್ನು ಮನಗಂಡು ಉಡುಪಿಯ ಪೇಜಾವರ ಮಠ ಕೈಗೆತ್ತಿಕೊಂಡ ಯೋಜನೆಯೇ ಗ್ರಾಮೋತ್ಥಾನ ಪರಿಕಲ್ಪನೆ. ಇದರ ಅನ್ವಯ ಈವರೆಗೂ 300ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸೌಲಭ್ಯ ದೊರೆತಿದೆ. ಮಕ್ಕಳಿಗೆ ಲಕ್ಷಾಂತರ ರೂಪಾಯಿ ವಿದ್ಯಾರ್ಥಿವೇತನ ಪೂರೈಕೆಯಾಗಿದೆ. ಜಿಲ್ಲೆಯ ಕೊಪ್ಪದ ಮೆಣಸಿನಹಾಡ್ಯ, ಕಳಸದ ಕೆಲ ಗ್ರಾಮಗಳ 130 ಮನೆಗಳಿಗೆ ಅಳವಡಿಸಲಾಗಿದ್ದ ವಿದ್ಯುತ್ ಸಂಪರ್ಕಕ್ಕೆ ಶ್ರೀಗಳೇ ಕಾರಣ.

ಮಲೆನಾಡಿನ ಕುಗ್ರಾಮಗಳಲ್ಲಿ ಹೆಜ್ಜೆ ಹಾಕಿದ ಪೇಜಾವರ ಶ್ರೀಗಳು ಗಿರಿಜನರಿಗೆ ಅಗತ್ಯವಾಗಿ ಬೇಕಾಗಿರುವ ಪಾತ್ರೆ, ಮೂಲಭೂತ ಸಾಮಾಗ್ರಿಗಳನ್ನು ವಿತರಣೆ ಮಾಡಿದ್ದರು. ಮಠದಿಂದ 2 ಕೋಟಿಗೂ ಅಧಿಕ ವೆಚ್ಚದಲ್ಲಿ ನಾಲ್ಕು ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದಲ್ಲಿ ಕ್ರಾಂತಿಯನ್ನೇ ಮೂಡಿಸಿದರು. ಇನ್ನು ಮುಂದುವರಿದ ಭಾಗವಾಗಿ ನಕ್ಸಲ್ ಶರಣಾಗತಿಗೆ ಪೇಜಾವರ ಶ್ರೀಗಳು ಮುನ್ನಡೆಯನ್ನು ಬರೆದಿದ್ದರು. ಇದರ ಭಾಗವಾಗಿ ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಪ್ಯಾಕೇಜ್ ನ ಅಡಿಯಲ್ಲಿ ನಾಲ್ವರು ಕಾಡಿನಿಂದ ನಾಡಿಗೆ ಮುಖ ಮಾಡಿದರು. 2010 ರ ಸಿಎಂ ಯಡಿಯ್ಯೂರಪ್ಪನವರ ಅವಧಿಯಲ್ಲಿ ನಾಲ್ಕು ಮಂದಿ ನಕ್ಸಲರು ಶರಣಾಗತಿ ಆಗುವಲ್ಲಿ ಶ್ರೀ ಪಾತ್ರ ದೊಡ್ಡದು.

ಚಿಕ್ಕಮಗಳೂರು: ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೊಳಪಟ್ಟ ಅದೆಷ್ಟೋ ಕುಗ್ರಾಮಗಳಿಂದು ಖಾಸಗಿಯವರ ಹೃದಯ ವೈಶಾಲ್ಯತೆಯಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಇಂಥ ಮಹತ್ತರ ಕೆಲಸ ಮಾಡುತ್ತಾ ಬಂದಿರುವ ಹೆಗ್ಗಳಿಕೆಗೆ ಪೇಜಾವರ ಮಠವೂ ಭಾಜನವಾಗಿದೆ. ಏಕೆಂದರೆ ಈ ಮಠ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮೂಲಭೂತ ಸೌಕರ್ಯ ಗಳಿಂದ ವಂಚಿತವಾಗಿರುವ ಅದೆಷ್ಟೋ ಪ್ರದೇಶಗಳ ಜನರಿಗೆ ಜೀವನ ರೂಪಿಸಿಕೊಟ್ಟಿದೆ.

ಗ್ರಾಮಾಭಿವೃದ್ಧಿಗೆ ಪಣತೊಟ್ಟ, ನಕ್ಸಲ್ ಶರಣಾಗತಿಗೆ ದಿಟ್ಟ ಹೆಜ್ಜೆ ಇಟ್ಟ ಶ್ರೀಗಳು

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ಅನೇಕ ಗ್ರಾಮಗಳು ನಕ್ಸಲ್ ಪೀಡಿತ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದವು. ಸರ್ಕಾರ ಬಿಡುಗಡೆ ಮಾಡತೊಡಗಿದ ಅದೆಷ್ಟೋ ಲಕ್ಷಗಳ ನಕ್ಸಲ್ ಪ್ಯಾಕೇಜ್ ಸಹ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಸಂದಿಲ್ಲ. ಇದನ್ನೇ ನಕ್ಸಲರು ಬಂಡವಾಳವಾಗಿಟ್ಟುಕೊಂಡು ಅಮಾಯಕ ಗ್ರಾಮಸ್ಥರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಸುತ್ತಿರುವುದನ್ನು ಮನಗಂಡು ಉಡುಪಿಯ ಪೇಜಾವರ ಮಠ ಕೈಗೆತ್ತಿಕೊಂಡ ಯೋಜನೆಯೇ ಗ್ರಾಮೋತ್ಥಾನ ಪರಿಕಲ್ಪನೆ. ಇದರ ಅನ್ವಯ ಈವರೆಗೂ 300ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸೌಲಭ್ಯ ದೊರೆತಿದೆ. ಮಕ್ಕಳಿಗೆ ಲಕ್ಷಾಂತರ ರೂಪಾಯಿ ವಿದ್ಯಾರ್ಥಿವೇತನ ಪೂರೈಕೆಯಾಗಿದೆ. ಜಿಲ್ಲೆಯ ಕೊಪ್ಪದ ಮೆಣಸಿನಹಾಡ್ಯ, ಕಳಸದ ಕೆಲ ಗ್ರಾಮಗಳ 130 ಮನೆಗಳಿಗೆ ಅಳವಡಿಸಲಾಗಿದ್ದ ವಿದ್ಯುತ್ ಸಂಪರ್ಕಕ್ಕೆ ಶ್ರೀಗಳೇ ಕಾರಣ.

ಮಲೆನಾಡಿನ ಕುಗ್ರಾಮಗಳಲ್ಲಿ ಹೆಜ್ಜೆ ಹಾಕಿದ ಪೇಜಾವರ ಶ್ರೀಗಳು ಗಿರಿಜನರಿಗೆ ಅಗತ್ಯವಾಗಿ ಬೇಕಾಗಿರುವ ಪಾತ್ರೆ, ಮೂಲಭೂತ ಸಾಮಾಗ್ರಿಗಳನ್ನು ವಿತರಣೆ ಮಾಡಿದ್ದರು. ಮಠದಿಂದ 2 ಕೋಟಿಗೂ ಅಧಿಕ ವೆಚ್ಚದಲ್ಲಿ ನಾಲ್ಕು ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದಲ್ಲಿ ಕ್ರಾಂತಿಯನ್ನೇ ಮೂಡಿಸಿದರು. ಇನ್ನು ಮುಂದುವರಿದ ಭಾಗವಾಗಿ ನಕ್ಸಲ್ ಶರಣಾಗತಿಗೆ ಪೇಜಾವರ ಶ್ರೀಗಳು ಮುನ್ನಡೆಯನ್ನು ಬರೆದಿದ್ದರು. ಇದರ ಭಾಗವಾಗಿ ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಪ್ಯಾಕೇಜ್ ನ ಅಡಿಯಲ್ಲಿ ನಾಲ್ವರು ಕಾಡಿನಿಂದ ನಾಡಿಗೆ ಮುಖ ಮಾಡಿದರು. 2010 ರ ಸಿಎಂ ಯಡಿಯ್ಯೂರಪ್ಪನವರ ಅವಧಿಯಲ್ಲಿ ನಾಲ್ಕು ಮಂದಿ ನಕ್ಸಲರು ಶರಣಾಗತಿ ಆಗುವಲ್ಲಿ ಶ್ರೀ ಪಾತ್ರ ದೊಡ್ಡದು.

Intro:Kn_Ckm_01_Pejavara_sri_nenapu_pkg_7202347Body:ಚಿಕ್ಕಮಗಳೂರು :-

ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೊಳಪಟ್ಟ ಅದೆಷ್ಟೋ ಕುಗ್ರಾಮಗಳಿಂದು ಖಾಸಗಿಯವರ ಹೃದಯ ವೈಶಾಲ್ಯತೆಯಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಇಂಥಾ ಮಹತ್ತರ ಕೆಲಸ ಮಾಡುತ್ತಾ ಬಂದಿರುವ ಹೆಗ್ಗಳಿಕೆಗೆ ಪೇಜಾವರ ಮಠವೂ ಭಾಜನವಾಗಿದೆ. ಏಕೆಂದರೆ ಈ ಮಠ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮೂಲಭೂತ ಸೌಕರ್ಯ ಗಳಿಂದ ವಂಚಿತವಾಗಿರುವ ಅದೆಷ್ಟೋ ಪ್ರದೇಶಗಳ ಜನರಿಗೆ ಜೀವನ ರೂಪಿಸಿಕೊಟ್ಟಿದೆ. ಇದರಲ್ಲಿ ನಕ್ಸಲ್ಪೀಡಿತ ಪ್ರದೇಶಗಳೂ ಸೇರುತ್ತವೆ. 6 ಹಂತಗಳಲ್ಲಿ ವಿದ್ಯುತ್ ಸಂಪರ್ಕ , ಮೂಲಭೂತ ಸೌಲಭ್ಯ ಕಲ್ಪಿಸುವ, ನಕ್ಸಲ್ ಶರಣಾಗಿಗೂ ಮುನ್ನಡೆ ಬರೆಯುವ ಮೂಲಕ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಬೆಳಕಾಗಿದ್ದರು ಪೇಜಾವರ ಶ್ರೀ.ಈ ಕುರಿತು ಒಂದು ವರದಿ ಇಲ್ಲಿದೆ.......

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ,ಶೃಂಗೇರಿ,ಎನ್.ಆರ್.ಪುರ ತಾಲೂಕುಗಳ ಅನೇಕ ಗ್ರಾಮಗಳು ನಕ್ಸಲ್ ಪೀಡಿತ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದವು. ಸರ್ಕಾರ ಬಿಡುಗಡೆ ಮಾಡತೊಡಗಿದ ಅದೆಷ್ಟೋ ಲಕ್ಷಗಳ ನಕ್ಸಲ್ ಪ್ಯಾಕೇಜ್ ಸಹ ಫಲಾನು ಭವಿಗಳಿಗೆ ಸರಿಯಾದ ರೀತಿಯಲ್ಲಿ ಸಂದಿಲ್ಲ. ಇದನ್ನೇ ನಕ್ಸಲರು ಬಂಡವಾಳವಾಗಿಟ್ಟುಕೊಂಡು ಅಮಾಯಕ ಗ್ರಾಮಸ್ಥರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಯುತ್ತಿರುವುದನ್ನು ಮನಗಂಡು ಉಡುಪಿಯ ಪೇಜಾ ವರ ಮಠ ಕೈಗೆತ್ತಿಕೊಂಡ ಯೋಜನೆಯೇ ಗ್ರಾಮೋತ್ಥಾನ ಪರಿಕಲ್ಪನೆ. ಇದರ ಅನ್ವಯ ಈವರೆಗೂ 300 ಕ್ಕೂ ಮನೆಗಳಿಗೆ ವಿದ್ಯುತ್ ಸೌಲಭ್ಯ ದೊರೆತಿದೆ.ಲಕ್ಷಾಂತರ ರು ವಿದ್ಯಾರ್ಥಿವೇತನ ಮಕ್ಕಳಿಗೆ ಪೂರೈಕೆಯಾಗಿದೆ.ಜಿಲ್ಲೆಯ ಕೊಪ್ಪದ ಮೆಣಸಿನಹಾಡ್ಯ, ಕಳಸದ ಕೆಲ ಗ್ರಾಮಗಳ 130 ಮನೆಗಳಿಗೆ ಅಳವಡಿಸಲಾಗಿದ್ದ ವಿದ್ಯುತ್ ಸಂಪರ್ಕವನ್ನು ಶ್ರೀಗಳು ನೀಡಿದರು.

ಮಲೆನಾಡಿನ ಕುಗ್ರಾಮಗಳಲ್ಲಿ ಹೆಜ್ಜೆ ಹಾಕಿದ ಪೇಜಾವರ ಶ್ರೀಗಳು ನಕ್ಸಲ್ ಪೀಡಿತ ಪ್ರದೇಶಗಳಿಗೆ ತೆರಳಿ ಹೊಸ ಕ್ರಾಂತಿಯನ್ನೇ ಮೂಡಿಸಿದರು. ಕಳಸದ ಕೆಂಚನಕೆರೆ,ಕಾನು ಮೇಳ,ದೇವರಗುಂಡಿಯಂಥ ಗ್ರಾಮಗಳಲ್ಲಿ ಶೇ.80 ರಷ್ಟು ಮನೆಗಳಿಗೆ ವಿದ್ಯುತ್ ಸೌಲಭ್ಯ ನೀಡಿದ್ದರು ಪೇಜಾವರಶ್ರೀಗಳು. ಮಠದ ವತಿಯಿಂದಲೇ ಲಕ್ಷಾಂತರ ವೆಚ್ಚದಲ್ಲಿ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದರು. ಇದರ ಜೊತೆಗೆ ಗಿರಿಜನರಿಗೆ ಅಗತ್ಯವಾಗಿ ಬೇಕಾಗಿರುವ ಪಾತ್ರೆ ಮೂಲಭೂತ ಸಾಮಾಗ್ರಿಗಳನ್ನು ವಿತರಣೆ ಮಾಡಿದ್ದರು. ಮಠದಿಂದ 2 ಕೋಟಿಗೂ ಅಧಿಕ ವೆಚ್ಚದಲ್ಲಿ ನಾಲ್ಕು ಜಿಲ್ಲೆಯಲ್ಲಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಕ್ರಾಂತಿಯನ್ನೇ ಮೂಡಿಸಿದರು. ಇನ್ನು ಮುಂದುವರಿದ ಭಾಗವಾಗಿ ನಕ್ಸಲ್ ಶರಣಾಗತಿಗೆ ಪೇಜಾವರ ಶ್ರೀಗಳು ಮುನ್ನಡೆಯನ್ನು ಬರೆದಿದ್ದರು. ಇದರ ಭಾಗವಾಗಿ ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಪ್ಯಾಕೇಜ್ ನ ಅಡಿಯಲ್ಲಿ ನಾಲ್ವರು ಕಾಡಿನಿಂದ ನಾಡಿಗೆ ಮುಖ ಮಾಡಿದರು. 2010 ರಲ್ಲಿ ಸಿಎಂ ಯಡಿಯ್ಯೂರಪ್ಪನವರ ಅವಧಿಯಲ್ಲಿ ನಾಲ್ಕು ಮಂದಿ ನಕ್ಸಲರು ಶರಣಾಗತಿ ಆಗುವಲ್ಲಿ ಶ್ರೀ ಪಾತ್ರ ದೊಡ್ಡದು. ಜಿಲ್ಲಾಡಳಿತದ ಮುಂದೆ ನಕ್ಸಲ್ ರಾದ ವೆಂಕಟೇಶ್ ,ಮಲ್ಲಿಕಾ, ಕೋಮಲ, ಜಯ ,ಶರಣಾಗತಿಯಾಗಿ ಪ್ಯಾಕೇಜ್ ನ ಸೌಲಭ್ಯ ಪಡೆದು ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಒಟ್ಟಾರೆಯಾಗಿ ನಕ್ಸಲ್ ಪೀಡಿತ ಪ್ರದೇಶದ ಮನೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ,ಲಕ್ಷಾಂತರ ರೂ ಗಿರಿಜನರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಶ್ರೀ ಮಠ ನೀಡಿದೆ. ಅಮಾಯಕ ಗ್ರಾಮಸ್ಥರ ಮನಸುಗಳಲ್ಲಿ ಹಿಂಸೆ-ಪ್ರತಿಭಟನೆ ಪ್ರಚೋದಿಸಿ ಆಡಳಿತ ಯಂತ್ರದ ವಿರುದ್ಧ ನಡೆಸುತ್ತಿರುವ ತಮ್ಮ ಹೋರಾಟ ಬೆಂಬಲಿಸುವಂತೆ ಮಾಡುವ ನಕ್ಸಲರು ಸದಾ ಅಪಾಯಕಾರಿ ಎನ್ನುವುದನ್ನು ಪ್ರತಿ ಭೇಟಿಯಲ್ಲೂ ಶ್ರೀಗಳು ಪುನರುಚ್ಚರಿಸುತ್ತಲೇ ಬಂದ್ದರು.

Conclusion:ರಾಜಕುಮಾರ್......
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.