ETV Bharat / state

ಕೊರೊನಾ ಭೀತಿ: ಗ್ರಾಮಸ್ಥರಿಂದ ರಸ್ತೆಗೆ ಬೇಲಿ

author img

By

Published : Mar 28, 2020, 7:13 PM IST

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಬ್ಬಿಹಳ್ಳಿ ಗ್ರಾಮಸ್ಥರು ಕೊರೊನಾ ಭೀತಿಯಿಂದ ಗ್ರಾಮಕ್ಕೆ ಪ್ರವೇಶ ಕಲ್ಪಸಿವ ರಸ್ತೆಗಳಿಗೆ ಅಡ್ಡಲಾಗಿ ಬೇಲಿ ಹಾಕಿ, ಹೊರಗಿನವರು ಗ್ರಾಮಕ್ಕೆ ಬಾರದಂತೆ ದಿಗ್ಬಂಧನ ವಿಧಿಸಿದ್ದಾರೆ.

corona effect in villages
ಗ್ರಾಮಸ್ಥರಿಂದ ರಸ್ತೆಗೆ ದಿಗ್ಬಂಧನ

ಚಿಕ್ಕಮಗಳೂರು: ಕೊರೊನಾ ಸೋಂಕಿನ ಭೀತಿಯಿಂದ ಗ್ರಾಮಕ್ಕೆ ಬೇರೆಯವರ ಪ್ರವೇಶ ತಡೆಯಲು ಮುಖ್ಯ ರಸ್ತೆಗೆ ಬೇಲಿ, ವಿದ್ಯುತ್​ ಕಂಬಗಳನ್ನು ಹಾಕಲಾಗಿದೆ.

ಗ್ರಾಮಸ್ಥರಿಂದ ರಸ್ತೆಗೆ ಬೇಲಿ

ಕಡೂರು ತಾಲೂಕಿನ ಗುಬ್ಬಿಹಳ್ಳಿ ಗ್ರಾಮಸ್ಥರು ಹೊರಗಡೆಯಿಂದ ಊರಿಗೆ ಬರುವವರನ್ನು ತಡೆಯಲು ಈ ರೀತಿ ಮಾಡಿದ್ದಾರೆ. ಇನ್ನೂ ಕೆಲವು ಕಡೆ ರಸ್ತೆಯ ಮಧ್ಯೆ ದೊಡ್ಡ ಗುಂಡಿಗಳನ್ನು ತೆಗೆಯಲಾಗಿದೆ. ಇದರಿಂದ ಗ್ರಾಮಸ್ಥರು ಕೂಡಾ ಹೊರಗೆ ಹೋಗುವುದನ್ನು ತಡೆಯಲಾಗಿದೆ.

ಸುತ್ತಲಿನ ಗ್ರಾಮಸ್ಥರು ಸೋಂಕಿನ ಹರಡುವಿಕೆ ತಡೆಯಲು ಈ ರೀತಿ ನಿಷೇಧ ಹೇರುತ್ತಿದ್ದು, ಆದಷ್ಟು ಬೇಗ ಕೊರೊನಾ ಸೋಂಕಿನಿಂದ ದೇಶವನ್ನು ಉಳಿಸಿಕೊಳ್ಳಬೇಕಿದೆ.

ಚಿಕ್ಕಮಗಳೂರು: ಕೊರೊನಾ ಸೋಂಕಿನ ಭೀತಿಯಿಂದ ಗ್ರಾಮಕ್ಕೆ ಬೇರೆಯವರ ಪ್ರವೇಶ ತಡೆಯಲು ಮುಖ್ಯ ರಸ್ತೆಗೆ ಬೇಲಿ, ವಿದ್ಯುತ್​ ಕಂಬಗಳನ್ನು ಹಾಕಲಾಗಿದೆ.

ಗ್ರಾಮಸ್ಥರಿಂದ ರಸ್ತೆಗೆ ಬೇಲಿ

ಕಡೂರು ತಾಲೂಕಿನ ಗುಬ್ಬಿಹಳ್ಳಿ ಗ್ರಾಮಸ್ಥರು ಹೊರಗಡೆಯಿಂದ ಊರಿಗೆ ಬರುವವರನ್ನು ತಡೆಯಲು ಈ ರೀತಿ ಮಾಡಿದ್ದಾರೆ. ಇನ್ನೂ ಕೆಲವು ಕಡೆ ರಸ್ತೆಯ ಮಧ್ಯೆ ದೊಡ್ಡ ಗುಂಡಿಗಳನ್ನು ತೆಗೆಯಲಾಗಿದೆ. ಇದರಿಂದ ಗ್ರಾಮಸ್ಥರು ಕೂಡಾ ಹೊರಗೆ ಹೋಗುವುದನ್ನು ತಡೆಯಲಾಗಿದೆ.

ಸುತ್ತಲಿನ ಗ್ರಾಮಸ್ಥರು ಸೋಂಕಿನ ಹರಡುವಿಕೆ ತಡೆಯಲು ಈ ರೀತಿ ನಿಷೇಧ ಹೇರುತ್ತಿದ್ದು, ಆದಷ್ಟು ಬೇಗ ಕೊರೊನಾ ಸೋಂಕಿನಿಂದ ದೇಶವನ್ನು ಉಳಿಸಿಕೊಳ್ಳಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.