ETV Bharat / state

ಕೃಷಿ ಕಾಯ್ದೆ ವಿರೋಧಿಸಿದ ಜನರೇ ಕಾಯ್ದೆ ಪರ ಮಾತನಾಡುವ ದಿನ ಬರುತ್ತೆ: ಸಿ.ಟಿ.ರವಿ

author img

By

Published : Nov 19, 2021, 5:52 PM IST

Updated : Nov 19, 2021, 6:18 PM IST

ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿರುವ (Repeal of three farm laws) ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಆತಂಕವಾದಿಗಳು ಕೃಷಿ ಕಾಯ್ದೆಯನ್ನು ತಪ್ಪಾಗಿ ಬಿಂಬಿಸಿದ್ದರು. ಕಾಂಗ್ರೆಸ್ ಸೇರಿ ರಾಜಕೀಯ ಪಕ್ಷಗಳೇ ಕೃಷಿ ಕಾಯ್ದೆ ತರಬೇಕು ಎಂದಿದ್ದರು. ಕಾಯ್ದೆ ವಿರೋಧಿಸಿದ ಜನರೇ ಕಾಯ್ದೆಪರ ಮಾತನಾಡುವ ದಿನ ಬರುತ್ತೆ ಎಂದರು.

ಸಿ.ಟಿ.ರವಿ
ಸಿ.ಟಿ.ರವಿ

ಚಿಕ್ಕಮಗಳೂರು: ಪ್ರಜಾಪ್ರಭುತ್ವದಲ್ಲಿ ಒಂದು ಹೆಜ್ಜೆ ಹಿಂದೆ ಇಡೋದನ್ನು ನಾವು ಅಪಮಾನ ಅಂತ ಭಾವಿಸಲ್ಲ. ಮೋದಿ ಪ್ರಜಾಪ್ರಭುತ್ವವಾದಿ, ಸರ್ವಾಧಿಕಾರಿಯಾಗಿದ್ರೆ ಕಾಯ್ದೆ ಹಿಂತೆಗೆದುಕೊಳ್ಳುತ್ತಿರಲಿಲ್ಲ. ಕಾಯ್ದೆ ವಿರೋಧಿಸಿದ ಜನರೇ ಕಾಯ್ದೆ (Farm Laws) ಪರ ಮಾತನಾಡುವ ದಿನ ಬರುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಹೇಳಿದರು.


ಕೇಂದ್ರ ಸರ್ಕಾರ ಕೃಷಿ ಕಾಯ್ದೆ ರದ್ದುಗೊಳಿಸಿರುವ (Repeal of three farm laws) ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆತಂಕವಾದಿಗಳು ಕೃಷಿ ಕಾಯ್ದೆಯನ್ನ ತಪ್ಪಾಗಿ ಬಿಂಬಿಸಿದ್ದರು. ಕಾಂಗ್ರೆಸ್ ಸೇರಿ ರಾಜಕೀಯ ಪಕ್ಷಗಳೇ ಕೃಷಿ ಕಾಯ್ದೆ ತರಬೇಕು ಎಂದಿದ್ದರು. ಮಾರುಕಟ್ಟೆ ಮುಕ್ತ ಆಗಬೇಕು ಅಂತಿದ್ದರು. ರಾಜಕೀಯ ಕಾರಣಕ್ಕೆ ವಿರೋಧಿಸಿದರು. ಪಂಜಾಬ್‍ನಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿದರು. ದೇಶದ ಜನಕ್ಕೆ ಮನವರಿಕೆ ಮಾಡುವಲ್ಲಿ ನಾವು ಯಶಸ್ವಿಯಾದೆವು. ಪಂಜಾಬ್, ಹರಿಯಾಣದಲ್ಲಿ ಜನರ ಮನವರಿಕೆ ಪೂರ್ಣ ಪ್ರಮಾಣದಲ್ಲಿ ಆಗಲಿಲ್ಲ. ರೈತ ಸಂಘಟನೆಗಳೇ ಮಾರುಕಟ್ಟೆ ಮುಕ್ತ ಆಗಬೇಕೆಂದು ಆಗ್ರಹದಿಂದ ಭಾಷಣ ಮಾಡ್ತಿದ್ರು. ಕೆಲ ರೈತ ಸಂಘಟನೆಗಳು ಮಾರುಕಟ್ಟೆ ಮುಕ್ತ ಮಾಡಿದ ಮೋದಿ ವಿರುದ್ಧ ಪ್ರತಿಭಟಿಸಿದ್ರು ಎಂದು ಹೇಳಿದರು.

ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದು, ಸಿದ್ದರಾಮಯ್ಯನವರ ಅಜ್ಞಾನಕ್ಕೆ ಅಯ್ಯೋ ಅನ್ಲೋ, ದುರುದ್ದೇಶಕ್ಕೆ ಧಿಕ್ಕಾರ ಅನ್ಲೋ ಗೊತ್ತಾಗ್ತಿಲ್ಲ. ಕೇಂದ್ರ ಸರ್ಕಾರದ ಎಲ್ಲ ನಿಲುವುಗಳು ಕೃಷಿಕರ ವಿರುದ್ಧವೇ ಇವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 6 ಸಾವಿರ ಹಣ ಕೊಟ್ರು. ಬೇವು ಲೇಪಿತ ಯೂರಿಯ(Urea) ತಂದು ಗೊಬ್ಬರದ ದರ್ಬಳಕೆ ತಪ್ಪಿಸಿದ್ರು. ಸ್ವಾಮಿನಾಥನ್ ವರದಿಯನ್ನ ಶೇ.95 ರಷ್ಟು ಜಾರಿಗೆ ತಂದದ್ದು ಮೋದಿ. ಇವೆಲ್ಲವೂ ರೈತ ವಿರೋಧಿ ನಿಲುವುಗಳೇ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯನವರೆ, ನಿಮ್ಮ ಪೂರ್ವಗ್ರಹದ ಮನಸ್ಥಿತಿಯಿಂದ ಹೊರಬನ್ನಿ. ನೀವು ಮಾಡುವ ಪಾಪ ಕಾರ್ಯ ಒಂದು ದಿನ ನಿಮ್ಮನ್ನೇ ಬೆನ್ನತ್ತಿ ಕಾಡುತ್ತೆ. 3 ಕಾಯ್ದೆಯಲ್ಲಿ ರೈತ ವಿರೋಧಿ ಯಾವುದು ಎಂದು ಕೇಳಿದ್ದೆವು. ಇವತ್ತಿನವರೆಗೂ ಒಂದೇ ಒಂದನ್ನ ಹೇಳಿಲ್ಲ ಎಂದು ಹೇಳಿದರು.

ಇದನ್ನೂ ಓದಿ: 3ಕೃಷಿ ಕಾಯ್ದೆಗಳ ವಾಪಸ್‌.. ಇದು 2ನೇ ಸ್ವಾತಂತ್ರ್ಯ ಹೋರಾಟಕ್ಕೆ ಸಿಕ್ಕ ಜಯ : ಸಿದ್ದರಾಮಯ್ಯ ಬಣ್ಣನೆ

ಚಿಕ್ಕಮಗಳೂರು: ಪ್ರಜಾಪ್ರಭುತ್ವದಲ್ಲಿ ಒಂದು ಹೆಜ್ಜೆ ಹಿಂದೆ ಇಡೋದನ್ನು ನಾವು ಅಪಮಾನ ಅಂತ ಭಾವಿಸಲ್ಲ. ಮೋದಿ ಪ್ರಜಾಪ್ರಭುತ್ವವಾದಿ, ಸರ್ವಾಧಿಕಾರಿಯಾಗಿದ್ರೆ ಕಾಯ್ದೆ ಹಿಂತೆಗೆದುಕೊಳ್ಳುತ್ತಿರಲಿಲ್ಲ. ಕಾಯ್ದೆ ವಿರೋಧಿಸಿದ ಜನರೇ ಕಾಯ್ದೆ (Farm Laws) ಪರ ಮಾತನಾಡುವ ದಿನ ಬರುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಹೇಳಿದರು.


ಕೇಂದ್ರ ಸರ್ಕಾರ ಕೃಷಿ ಕಾಯ್ದೆ ರದ್ದುಗೊಳಿಸಿರುವ (Repeal of three farm laws) ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆತಂಕವಾದಿಗಳು ಕೃಷಿ ಕಾಯ್ದೆಯನ್ನ ತಪ್ಪಾಗಿ ಬಿಂಬಿಸಿದ್ದರು. ಕಾಂಗ್ರೆಸ್ ಸೇರಿ ರಾಜಕೀಯ ಪಕ್ಷಗಳೇ ಕೃಷಿ ಕಾಯ್ದೆ ತರಬೇಕು ಎಂದಿದ್ದರು. ಮಾರುಕಟ್ಟೆ ಮುಕ್ತ ಆಗಬೇಕು ಅಂತಿದ್ದರು. ರಾಜಕೀಯ ಕಾರಣಕ್ಕೆ ವಿರೋಧಿಸಿದರು. ಪಂಜಾಬ್‍ನಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿದರು. ದೇಶದ ಜನಕ್ಕೆ ಮನವರಿಕೆ ಮಾಡುವಲ್ಲಿ ನಾವು ಯಶಸ್ವಿಯಾದೆವು. ಪಂಜಾಬ್, ಹರಿಯಾಣದಲ್ಲಿ ಜನರ ಮನವರಿಕೆ ಪೂರ್ಣ ಪ್ರಮಾಣದಲ್ಲಿ ಆಗಲಿಲ್ಲ. ರೈತ ಸಂಘಟನೆಗಳೇ ಮಾರುಕಟ್ಟೆ ಮುಕ್ತ ಆಗಬೇಕೆಂದು ಆಗ್ರಹದಿಂದ ಭಾಷಣ ಮಾಡ್ತಿದ್ರು. ಕೆಲ ರೈತ ಸಂಘಟನೆಗಳು ಮಾರುಕಟ್ಟೆ ಮುಕ್ತ ಮಾಡಿದ ಮೋದಿ ವಿರುದ್ಧ ಪ್ರತಿಭಟಿಸಿದ್ರು ಎಂದು ಹೇಳಿದರು.

ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದು, ಸಿದ್ದರಾಮಯ್ಯನವರ ಅಜ್ಞಾನಕ್ಕೆ ಅಯ್ಯೋ ಅನ್ಲೋ, ದುರುದ್ದೇಶಕ್ಕೆ ಧಿಕ್ಕಾರ ಅನ್ಲೋ ಗೊತ್ತಾಗ್ತಿಲ್ಲ. ಕೇಂದ್ರ ಸರ್ಕಾರದ ಎಲ್ಲ ನಿಲುವುಗಳು ಕೃಷಿಕರ ವಿರುದ್ಧವೇ ಇವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 6 ಸಾವಿರ ಹಣ ಕೊಟ್ರು. ಬೇವು ಲೇಪಿತ ಯೂರಿಯ(Urea) ತಂದು ಗೊಬ್ಬರದ ದರ್ಬಳಕೆ ತಪ್ಪಿಸಿದ್ರು. ಸ್ವಾಮಿನಾಥನ್ ವರದಿಯನ್ನ ಶೇ.95 ರಷ್ಟು ಜಾರಿಗೆ ತಂದದ್ದು ಮೋದಿ. ಇವೆಲ್ಲವೂ ರೈತ ವಿರೋಧಿ ನಿಲುವುಗಳೇ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯನವರೆ, ನಿಮ್ಮ ಪೂರ್ವಗ್ರಹದ ಮನಸ್ಥಿತಿಯಿಂದ ಹೊರಬನ್ನಿ. ನೀವು ಮಾಡುವ ಪಾಪ ಕಾರ್ಯ ಒಂದು ದಿನ ನಿಮ್ಮನ್ನೇ ಬೆನ್ನತ್ತಿ ಕಾಡುತ್ತೆ. 3 ಕಾಯ್ದೆಯಲ್ಲಿ ರೈತ ವಿರೋಧಿ ಯಾವುದು ಎಂದು ಕೇಳಿದ್ದೆವು. ಇವತ್ತಿನವರೆಗೂ ಒಂದೇ ಒಂದನ್ನ ಹೇಳಿಲ್ಲ ಎಂದು ಹೇಳಿದರು.

ಇದನ್ನೂ ಓದಿ: 3ಕೃಷಿ ಕಾಯ್ದೆಗಳ ವಾಪಸ್‌.. ಇದು 2ನೇ ಸ್ವಾತಂತ್ರ್ಯ ಹೋರಾಟಕ್ಕೆ ಸಿಕ್ಕ ಜಯ : ಸಿದ್ದರಾಮಯ್ಯ ಬಣ್ಣನೆ

Last Updated : Nov 19, 2021, 6:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.