ETV Bharat / state

ಉಕ್ರೇನ್​​​​ನಲ್ಲಿ ಸಿಲುಕಿದ ಚಿಕ್ಕಬಳ್ಳಾಪುರದ ವಿದ್ಯಾರ್ಥಿಗಳನ್ನು ರಕ್ಷಿಸುತ್ತಿದೆ ತ್ರಿವರ್ಣ ಧ್ವಜ.. - ಉಕ್ರೇನ್​​​​ನಲ್ಲಿ ಸಿಲುಕಿಕೊಂಡ ಗುಡಿಬಂಡೆ ಇಬ್ಬರು ವಿದ್ಯಾರ್ಥಿಗಳು

Russia-Ukraine War crisis.. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್​​ನಲ್ಲಿ ಸಿಲುಕಿಕೊಂಡಿದ್ದಾರೆ. ಸದ್ಯ ಉಕ್ರೇನ್​​​​ನಲ್ಲಿ ಸಿಲುಕಿಕೊಂಡ ವಿದ್ಯಾರ್ಥಿಗಳು ತಮ್ಮ ರಕ್ಷಣೆಗಾಗಿ ತ್ರಿವರ್ಣ ಧ್ವಜವನ್ನು ಬಳಸುತ್ತಿದ್ದಾರೆ.

Students are using Indian flag for their protection
ಉಕ್ರೇನ್​​​​ನಲ್ಲಿ ಸಿಲುಕಿಕೊಂಡ ಗುಡಿಬಂಡೆ ಇಬ್ಬರು ವಿದ್ಯಾರ್ಥಿಗಳು
author img

By

Published : Mar 5, 2022, 5:59 PM IST

Updated : Mar 5, 2022, 8:29 PM IST

ಚಿಕ್ಕಬಳ್ಳಾಪುರ : ಉಕ್ರೇನ್​ನಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಅಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಜಿಲ್ಲೆಯ 10ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಜಿಲ್ಲೆಯ ಗುಡಿಬಂಡೆಯ ಇಬ್ಬರು ಯುವಕರು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಎಂಬಿಬಿಎಸ್ ವ್ಯಾಸಂಗಕ್ಕಾಗಿ ಜಿಲ್ಲೆಯ ವಿದ್ಯಾರ್ಥಿಗಳು ತೆರಳಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಯುದ್ಧದಿಂದ ವಿದ್ಯಾರ್ಥಿಗಳ ಪೋಷಕರು ಭಯಭೀತರಾಗಿದ್ದು, ಆದಷ್ಟು ಬೇಗ ಮಕ್ಕಳನ್ನು ವಾಪಸ್​ ಕರೆ ತರುವಂತೆ ಮನವಿ ಮಾಡಿಕೊಂಡಿದ್ದಾರೆ. ಗುಡಿಬಂಡೆ ತಾಲೂಕಿನ ಲಕ್ಷ್ಮೀಸಾಗರದ ನವನೀತ್ ಕುಮಾರ್ ಮತ್ತು ಕಂಬಾಲಹಳ್ಳಿಯ ನಂದ ಪ್ರಸಾದ್ಉಕ್ರೇನ್​ನಲ್ಲಿ ಸಿಲುಕಿದ್ದಾರೆ.

ರಕ್ಷಣಗೆ ತ್ರಿವರ್ಣ ಧ್ವಜ ಬಳಕೆ

ಧೈರ್ಯ ತುಂಬಿದ ತಹಶೀಲ್ದಾರ್: ಉಕ್ರೇನ್​ನಲ್ಲಿ ಸಿಲುಕಿಕೊಂಡಿರುವ ಗುಡಿಬಂಡೆ ವಿದ್ಯಾರ್ಥಿಗಳನ್ನು ತಹಶೀಲ್ದಾರ್​​​​ ಸಿಬ್ಗತ್ ವುಲ್ಲಾ ಸಂಪರ್ಕಿಸಿದ್ದು, ಯುವಕರ ಆರೋಗ್ಯ ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಯುವಕರಿಗೆ ಧೈರ್ಯ ತುಂಬಿದ್ದಾರೆ ಎಂದು ತಾಲೂಕು ಆಡಳಿತ ಮೂಲಗಳು ಮಾಹಿತಿ ನೀಡಿವೆ.

ರಕ್ಷಣೆಗೆ ಬಂದ ಭಾರತದ ಧ್ವಜ: ಉಕ್ರೇನ್​ನಲ್ಲಿ ನಡೆಯುತ್ತಿರುವ ಯುದ್ಧದಿಂದ ಪಾರಾಗಲು ವಿದ್ಯಾರ್ಥಿಗಳು ಭಾರತದ ಧ್ವಜವನ್ನು ಹಿಡಿದು, ವಂದೇ ಮಾತರಂ​ ಎಂದು ಘೋಷಣೆ ಕೂಗುತ್ತಾ ಅಲ್ಲಿನ ರಸ್ತೆಗಳಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಈ ಮೂಲಕ ನಮ್ಮ ದೇಶದ ಬಾವುಟವನ್ನು ರಕ್ಷಣೆಗೆ ವಿದ್ಯಾರ್ಥಿಗಳು ಬಳಸುತ್ತಿದ್ದಾರೆ.

ರಕ್ಷಣೆಗೆ ಮನವಿ ಮಾಡಿದ ವಿದ್ಯಾರ್ಥಿ

ಊಟವಿಲ್ಲದೆ ಪರದಾಟ : ಯುದ್ಧದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಸರಿಯಾಗಿ ಊಟ, ನಿದ್ದೆ ಇಲ್ಲದಂತಾಗಿದೆ. ನಾವು ಯುದ್ಧದ ವಾತಾವರಣವಿದ್ದ ಪ್ರದೇಶದಿಂದ ಬೇರೊಂದು ಸ್ಥಳಕ್ಕೆ ನಡೆದುಕೊಂಡೇ ಬಂದಿದ್ದೇವೆ. ಸರ್ಕಾರ ಆದಷ್ಟು ಬೇಗ ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕೆಂದು ವಿದ್ಯಾರ್ಥಿ ನಂದಪ್ರಸಾದ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನಮ್ಮ ದೇಶದ ಬಾವುಟವೇ ಉಕ್ರೇನ್​ನಲ್ಲಿ ನಮಗೆ ಶ್ರೀರಕ್ಷೆ: ವ್ಯೆದ್ಯಕೀಯ ವಿದ್ಯಾರ್ಥಿನಿ ಭೂಮಿಕಾ

ಚಿಕ್ಕಬಳ್ಳಾಪುರ : ಉಕ್ರೇನ್​ನಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಅಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಜಿಲ್ಲೆಯ 10ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಜಿಲ್ಲೆಯ ಗುಡಿಬಂಡೆಯ ಇಬ್ಬರು ಯುವಕರು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಎಂಬಿಬಿಎಸ್ ವ್ಯಾಸಂಗಕ್ಕಾಗಿ ಜಿಲ್ಲೆಯ ವಿದ್ಯಾರ್ಥಿಗಳು ತೆರಳಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಯುದ್ಧದಿಂದ ವಿದ್ಯಾರ್ಥಿಗಳ ಪೋಷಕರು ಭಯಭೀತರಾಗಿದ್ದು, ಆದಷ್ಟು ಬೇಗ ಮಕ್ಕಳನ್ನು ವಾಪಸ್​ ಕರೆ ತರುವಂತೆ ಮನವಿ ಮಾಡಿಕೊಂಡಿದ್ದಾರೆ. ಗುಡಿಬಂಡೆ ತಾಲೂಕಿನ ಲಕ್ಷ್ಮೀಸಾಗರದ ನವನೀತ್ ಕುಮಾರ್ ಮತ್ತು ಕಂಬಾಲಹಳ್ಳಿಯ ನಂದ ಪ್ರಸಾದ್ಉಕ್ರೇನ್​ನಲ್ಲಿ ಸಿಲುಕಿದ್ದಾರೆ.

ರಕ್ಷಣಗೆ ತ್ರಿವರ್ಣ ಧ್ವಜ ಬಳಕೆ

ಧೈರ್ಯ ತುಂಬಿದ ತಹಶೀಲ್ದಾರ್: ಉಕ್ರೇನ್​ನಲ್ಲಿ ಸಿಲುಕಿಕೊಂಡಿರುವ ಗುಡಿಬಂಡೆ ವಿದ್ಯಾರ್ಥಿಗಳನ್ನು ತಹಶೀಲ್ದಾರ್​​​​ ಸಿಬ್ಗತ್ ವುಲ್ಲಾ ಸಂಪರ್ಕಿಸಿದ್ದು, ಯುವಕರ ಆರೋಗ್ಯ ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಯುವಕರಿಗೆ ಧೈರ್ಯ ತುಂಬಿದ್ದಾರೆ ಎಂದು ತಾಲೂಕು ಆಡಳಿತ ಮೂಲಗಳು ಮಾಹಿತಿ ನೀಡಿವೆ.

ರಕ್ಷಣೆಗೆ ಬಂದ ಭಾರತದ ಧ್ವಜ: ಉಕ್ರೇನ್​ನಲ್ಲಿ ನಡೆಯುತ್ತಿರುವ ಯುದ್ಧದಿಂದ ಪಾರಾಗಲು ವಿದ್ಯಾರ್ಥಿಗಳು ಭಾರತದ ಧ್ವಜವನ್ನು ಹಿಡಿದು, ವಂದೇ ಮಾತರಂ​ ಎಂದು ಘೋಷಣೆ ಕೂಗುತ್ತಾ ಅಲ್ಲಿನ ರಸ್ತೆಗಳಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಈ ಮೂಲಕ ನಮ್ಮ ದೇಶದ ಬಾವುಟವನ್ನು ರಕ್ಷಣೆಗೆ ವಿದ್ಯಾರ್ಥಿಗಳು ಬಳಸುತ್ತಿದ್ದಾರೆ.

ರಕ್ಷಣೆಗೆ ಮನವಿ ಮಾಡಿದ ವಿದ್ಯಾರ್ಥಿ

ಊಟವಿಲ್ಲದೆ ಪರದಾಟ : ಯುದ್ಧದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಸರಿಯಾಗಿ ಊಟ, ನಿದ್ದೆ ಇಲ್ಲದಂತಾಗಿದೆ. ನಾವು ಯುದ್ಧದ ವಾತಾವರಣವಿದ್ದ ಪ್ರದೇಶದಿಂದ ಬೇರೊಂದು ಸ್ಥಳಕ್ಕೆ ನಡೆದುಕೊಂಡೇ ಬಂದಿದ್ದೇವೆ. ಸರ್ಕಾರ ಆದಷ್ಟು ಬೇಗ ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕೆಂದು ವಿದ್ಯಾರ್ಥಿ ನಂದಪ್ರಸಾದ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನಮ್ಮ ದೇಶದ ಬಾವುಟವೇ ಉಕ್ರೇನ್​ನಲ್ಲಿ ನಮಗೆ ಶ್ರೀರಕ್ಷೆ: ವ್ಯೆದ್ಯಕೀಯ ವಿದ್ಯಾರ್ಥಿನಿ ಭೂಮಿಕಾ

Last Updated : Mar 5, 2022, 8:29 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.