ETV Bharat / state

ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂ. ಬೆಲೆ ಬಾಳುವ ಆಸ್ತಿ ಗುಳುಂ..! - ಚಿಕ್ಕಬಳ್ಳಾಪುರ

ವಿಜಯಪುರ- ಕೋಲಾರ ಮುಖ್ಯರಸ್ತೆಯಲ್ಲಿರುವ ಕೋಟ್ಯಾಂತರ ರೂ. ಮೌಲ್ಯದ ತಮ್ಮ ಆಸ್ತಿ ಕಂಡವರ ಪಾಲಾಗಿದ್ದು, ಈ ಪ್ರಕರಣದ ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯನ್ನು ರೈತರು ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತ ರೈತ
author img

By

Published : Jun 19, 2019, 4:27 AM IST

ಚಿಕ್ಕಬಳ್ಳಾಪುರ: ಕೋಟ್ಯಾಂತರ ಬೆಲೆ ಬಾಳುವ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಲಪಟಾಯಿಸಿರುವ ಆರೋಪ ಶಿಡ್ಲಘಟ್ಟ ತಾಲೂಕಿನ ಕಾಳನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸರ್ವೇ ನಂ. 42ರಲ್ಲಿ ಆಂಜಿನಪ್ಪ ಎಂಬುವರ ಹೆಸರಲ್ಲಿ ಭೂಕಬಳಿಕೆಯಾಗಿರುವ ಆರೋಪ ಕೇಳಿ ಬಂದಿದೆ. ವಿಜಯಪುರ- ಕೋಲಾರ ಮುಖ್ಯರಸ್ತೆಯಲ್ಲಿರುವ ಜಮೀನು ಒಂಬತ್ತು ಜನರಿಗೆ ಸೇರಬೇಕಾದದ್ದು. ಆದರೆ, ಈಗ ಬೇರೆಯವರ ಪಾಲಾಗಿದೆ.

ಸರ್ವೆ ನಿರತ ಅಧಿಕಾರಿ ಹಾಗೂ ಸಂತ್ರಸ್ತ ರೈತ
ಸದ್ಯ ಜಮೀನು ಕಳೆದುಕೊಂಡವರು ನ್ಯಾಯಾಲಯದ ಮೊರೆ ಹೋಗಿದ್ದು, ಈ ಪ್ರಕರಣ ಕೋರ್ಟ್​ನಲ್ಲಿ ವಿಚಾರಣಾ ಹಂತದಲ್ಲಿದೆ. ಆದರೆ, ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿ ಸರ್ವೆ ನಡೆಸಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆಪಾದನೆ ಕೇಳಿಬಂದಿದೆ.

ಖರಾಬು ಜಮೀನು ಪರಭಾರೆ ಮಾಡಬಾರದೆಂಬ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಜಮೀನು ಲಪಟಾಯಿಸಿ ಅಧಿಕಾರಿಗಳೇ ಕಿರುಕುಳ ನೀಡುತ್ತಿದ್ದಾರೆ. ಇದರ ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯನ್ನು ರೈತರು ವ್ಯಕ್ತಪಡಿಸಿದ್ದಾರೆ. ನ್ಯಾಯ ಕೇಳಲು ಹೋದ ರೈತ ನಾಗರಾಜು ಎಂಬುವವರಿಗೆ ಬೆದರಿಕೆಯ ಕರೆ ಮಾಡಿ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ ಎಂಬ ದೂರು ಸಹ ಕೇಳಿಬಂದಿದೆ.

ಚಿಕ್ಕಬಳ್ಳಾಪುರ: ಕೋಟ್ಯಾಂತರ ಬೆಲೆ ಬಾಳುವ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಲಪಟಾಯಿಸಿರುವ ಆರೋಪ ಶಿಡ್ಲಘಟ್ಟ ತಾಲೂಕಿನ ಕಾಳನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸರ್ವೇ ನಂ. 42ರಲ್ಲಿ ಆಂಜಿನಪ್ಪ ಎಂಬುವರ ಹೆಸರಲ್ಲಿ ಭೂಕಬಳಿಕೆಯಾಗಿರುವ ಆರೋಪ ಕೇಳಿ ಬಂದಿದೆ. ವಿಜಯಪುರ- ಕೋಲಾರ ಮುಖ್ಯರಸ್ತೆಯಲ್ಲಿರುವ ಜಮೀನು ಒಂಬತ್ತು ಜನರಿಗೆ ಸೇರಬೇಕಾದದ್ದು. ಆದರೆ, ಈಗ ಬೇರೆಯವರ ಪಾಲಾಗಿದೆ.

ಸರ್ವೆ ನಿರತ ಅಧಿಕಾರಿ ಹಾಗೂ ಸಂತ್ರಸ್ತ ರೈತ
ಸದ್ಯ ಜಮೀನು ಕಳೆದುಕೊಂಡವರು ನ್ಯಾಯಾಲಯದ ಮೊರೆ ಹೋಗಿದ್ದು, ಈ ಪ್ರಕರಣ ಕೋರ್ಟ್​ನಲ್ಲಿ ವಿಚಾರಣಾ ಹಂತದಲ್ಲಿದೆ. ಆದರೆ, ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿ ಸರ್ವೆ ನಡೆಸಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆಪಾದನೆ ಕೇಳಿಬಂದಿದೆ.

ಖರಾಬು ಜಮೀನು ಪರಭಾರೆ ಮಾಡಬಾರದೆಂಬ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಜಮೀನು ಲಪಟಾಯಿಸಿ ಅಧಿಕಾರಿಗಳೇ ಕಿರುಕುಳ ನೀಡುತ್ತಿದ್ದಾರೆ. ಇದರ ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯನ್ನು ರೈತರು ವ್ಯಕ್ತಪಡಿಸಿದ್ದಾರೆ. ನ್ಯಾಯ ಕೇಳಲು ಹೋದ ರೈತ ನಾಗರಾಜು ಎಂಬುವವರಿಗೆ ಬೆದರಿಕೆಯ ಕರೆ ಮಾಡಿ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ ಎಂಬ ದೂರು ಸಹ ಕೇಳಿಬಂದಿದೆ.

Intro:ಕೋಟ್ಯಾಂತರ ಬೆಲೆ ಬಾಳುವ ಜಮೀನನ್ನುಅಕ್ರಮ ಧಾಖಲೆಗಳ ಸೃಷ್ಟಿಸಿ ಜಮೀನು ಲಪಟಾಯಿಸಿರುವ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ಕಾಳನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.Body:ಆಂಜಿನಪ್ಪ ಎಂಬುವರಿಂದ ಸರ್ವೇ ನಂ42 ರಲ್ಲಿ ಭೂಕಬಳಿಕೆಯಾಗಿರುವ ಆರೋಪ ಸದ್ಯ ಬೆಳಕಿಗೆ ಬಂದಿದೆ. ವಿಜಯಪುರ ಕೋಲಾರ ಮುಖ್ಯರಸ್ತೆಯಲ್ಲಿರುವ ಜಮೀನು ಒಂಬತ್ತು ಜನರಿಗೆ ಸೇರಬೇಕಾದದ್ದು ಆದರೆ ಈಗ ಕಂಡೋರ ಪಾಲಿಗಿದೆ.

ಇದು ಸದ್ಯ ಜಮೀನು ಕಳೆದುಕೊಂಡವರು ನ್ಯಾಯಲಯದ ಮೊರೆ ಹೋಗಿ ವಿಚಾರಣೆ ನಡೆಯುತ್ತಿದ್ದರು ಅಧಿಕಾರಿಗಳು ಮಾತ್ರ ರೈತರಿಗೆ ನೋಟೀಸ್ ಕೊಟ್ಟು ಸರ್ವೆ ನಡೆಸಿ ಕಿರಿಕಿರಿಕೊಡುತ್ತಿದ್ದಾರೆ.

ಖರಾಬು ಜಮೀನು ಪರಬಾರೆ ಮಾಡಬಾರದೆಂಬ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಜಮೀನು ಪಲಾಟಾಯಿಸಿದ್ದರು ಅಧಿಕಾರಿಗಳೆ ಕಿರುಕುಳ ನೀಡುತ್ತಿದ್ದಾರೆ.ಸದ್ಯ ಇದರ ಹಿಂದೆ ಕಂದಾಯ ಇಲಾಖಾ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯನ್ನು ರೈತ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೇ ನ್ಯಾಯ ಕೇಳಲು ಹೋದರೆ ರೈತ ನಾಗರಾಜುನಿಗೆ ಬೆದರಿಕೆ ಕರೆಯನ್ನು ನೀಡಿ ಕೊಲೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.ಏನೇ ಆದರೂ ನ್ಯಾಯ ಕೊಡಿಸಬೇಕಾದ ಅಧಿಕಾರಿಗಳು ರೈತನ ಪಾಲಿಗೆ ತಿಮಿಗಳಗಳಾಗಿರುವುದು ವಿಪರ್ಯಾಸೆಯೇ ಸರೀ..
Conclusion:ಮುನಿಸತ್ಯಮ್ಮ
ನಾಗಾರಾಜು( 60)
ಮುನಿರಾಜು (45)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.