ಚಿಕ್ಕಬಳ್ಳಾಪುರ: ಕೋಟ್ಯಾಂತರ ಬೆಲೆ ಬಾಳುವ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಲಪಟಾಯಿಸಿರುವ ಆರೋಪ ಶಿಡ್ಲಘಟ್ಟ ತಾಲೂಕಿನ ಕಾಳನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸರ್ವೇ ನಂ. 42ರಲ್ಲಿ ಆಂಜಿನಪ್ಪ ಎಂಬುವರ ಹೆಸರಲ್ಲಿ ಭೂಕಬಳಿಕೆಯಾಗಿರುವ ಆರೋಪ ಕೇಳಿ ಬಂದಿದೆ. ವಿಜಯಪುರ- ಕೋಲಾರ ಮುಖ್ಯರಸ್ತೆಯಲ್ಲಿರುವ ಜಮೀನು ಒಂಬತ್ತು ಜನರಿಗೆ ಸೇರಬೇಕಾದದ್ದು. ಆದರೆ, ಈಗ ಬೇರೆಯವರ ಪಾಲಾಗಿದೆ.
ಖರಾಬು ಜಮೀನು ಪರಭಾರೆ ಮಾಡಬಾರದೆಂಬ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಜಮೀನು ಲಪಟಾಯಿಸಿ ಅಧಿಕಾರಿಗಳೇ ಕಿರುಕುಳ ನೀಡುತ್ತಿದ್ದಾರೆ. ಇದರ ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯನ್ನು ರೈತರು ವ್ಯಕ್ತಪಡಿಸಿದ್ದಾರೆ. ನ್ಯಾಯ ಕೇಳಲು ಹೋದ ರೈತ ನಾಗರಾಜು ಎಂಬುವವರಿಗೆ ಬೆದರಿಕೆಯ ಕರೆ ಮಾಡಿ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ ಎಂಬ ದೂರು ಸಹ ಕೇಳಿಬಂದಿದೆ.