ETV Bharat / state

ಬಾಗೇಪಲ್ಲಿಯಲ್ಲಿ ಮಳೆಯ ಅಬ್ಬರಕ್ಕೆ ಹೊಳೆಯಾದ ರಸ್ತೆಗಳು..

author img

By

Published : Sep 21, 2020, 9:25 PM IST

ದ್ವಿಮುಖ ಸಂಚಾರ ಇರುವ ಈ ರಸ್ತೆಯಲ್ಲಿ ತಗ್ಗು ಇರುವ ಕಾರಣ ಸಂಪೂರ್ಣ ಕೆರೆಯಂತಾಗಿತ್ತು..

bagepalli
ರಸ್ತೆಯಲ್ಲಿ ತುಂಬಿದ ನೀರು

ಬಾಗೇಪಲ್ಲಿ : ಶನಿವಾರ ಸಂಜೆಯಿಂದ ಇಂದು ಸಂಜೆಯವರೆಗೆ ಸುರಿದ ಮಳೆಗೆ ಪಟ್ಟಣದ ಹೆಚ್ ಎನ್ ವೃತ್ತ(ಗೂಳೂರು) ರಸ್ತೆಯಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ರಸ್ತೆಯ ಪಕ್ಕದ ಚರಂಡಿ ಅವೈಜ್ಞಾನಿಕ ನಿರ್ಮಾಣದ ಜತೆಗೆ ಹೂಳು ತೆಗೆಯದ ಕಾರಣ ನೀರು ನಿಂತು ಸಂಚಾರ ಅಡೆತಡೆಯಾಗಿದೆ.

ರಸ್ತೆಯಲ್ಲಿ ಸುಮಾರು ಮೂರು ಅಡಿವರೆಗೆ ನೀರು ನಿಂತಿದ್ದರಿಂದ ವಾಹನ ಸವಾರರು ಸರ್ಕಸ್ ಮಾಡುತ್ತಾ, ಪುರಸಭೆ ಅಧಿಕಾರಿಗಳಿಗೆ ಶಾಪ ಹಾಕಿ ಮುಂದೆ ಸಾಗುತ್ತಿದ್ದರು. ದ್ವಿಮುಖ ಸಂಚಾರ ಇರುವ ಈ ರಸ್ತೆಯಲ್ಲಿ ತಗ್ಗು ಇರುವ ಕಾರಣ ಸಂಪೂರ್ಣ ಕೆರೆಯಂತಾಗಿತ್ತು.

ಸುರಿದ ಭಾರಿ ಮಳೆಗೆ ರಸ್ತೆಯಲ್ಲಿ ನೀರು ನಿಂತು ಅವಾಂತರ ಸೃಷ್ಟಿ..

ಮಳೆಗಾಲದಲ್ಲಿ ಪುರಸಭೆ ಅಧಿಕಾರಿಗಳು ಚರಂಡಿ ಹೂಳು ತೆಗೆಯುವ ಕೆಲಸ ಸಮರ್ಪಕವಾಗಿ ನಿರ್ವಹಿಸಿಲ್ಲ. ಆದ್ದರಿಂದಲೇ ಈ ಅವಾಂತರ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಬಾಗೇಪಲ್ಲಿ : ಶನಿವಾರ ಸಂಜೆಯಿಂದ ಇಂದು ಸಂಜೆಯವರೆಗೆ ಸುರಿದ ಮಳೆಗೆ ಪಟ್ಟಣದ ಹೆಚ್ ಎನ್ ವೃತ್ತ(ಗೂಳೂರು) ರಸ್ತೆಯಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ರಸ್ತೆಯ ಪಕ್ಕದ ಚರಂಡಿ ಅವೈಜ್ಞಾನಿಕ ನಿರ್ಮಾಣದ ಜತೆಗೆ ಹೂಳು ತೆಗೆಯದ ಕಾರಣ ನೀರು ನಿಂತು ಸಂಚಾರ ಅಡೆತಡೆಯಾಗಿದೆ.

ರಸ್ತೆಯಲ್ಲಿ ಸುಮಾರು ಮೂರು ಅಡಿವರೆಗೆ ನೀರು ನಿಂತಿದ್ದರಿಂದ ವಾಹನ ಸವಾರರು ಸರ್ಕಸ್ ಮಾಡುತ್ತಾ, ಪುರಸಭೆ ಅಧಿಕಾರಿಗಳಿಗೆ ಶಾಪ ಹಾಕಿ ಮುಂದೆ ಸಾಗುತ್ತಿದ್ದರು. ದ್ವಿಮುಖ ಸಂಚಾರ ಇರುವ ಈ ರಸ್ತೆಯಲ್ಲಿ ತಗ್ಗು ಇರುವ ಕಾರಣ ಸಂಪೂರ್ಣ ಕೆರೆಯಂತಾಗಿತ್ತು.

ಸುರಿದ ಭಾರಿ ಮಳೆಗೆ ರಸ್ತೆಯಲ್ಲಿ ನೀರು ನಿಂತು ಅವಾಂತರ ಸೃಷ್ಟಿ..

ಮಳೆಗಾಲದಲ್ಲಿ ಪುರಸಭೆ ಅಧಿಕಾರಿಗಳು ಚರಂಡಿ ಹೂಳು ತೆಗೆಯುವ ಕೆಲಸ ಸಮರ್ಪಕವಾಗಿ ನಿರ್ವಹಿಸಿಲ್ಲ. ಆದ್ದರಿಂದಲೇ ಈ ಅವಾಂತರ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.