ETV Bharat / state

ಗಡಿ ಕ್ಯಾತೆಗೆ ಆಕ್ರೋಶ: ಚೀನಾ ಮೊಬೈಲ್​​​ಗಳನ್ನು ಪುಡಿಗಟ್ಟಿ ಪ್ರತಿಭಟನೆ

author img

By

Published : Jun 17, 2020, 4:02 PM IST

ಚೀನಾ ಯೋಧರು ನಡೆಸಿದ ದಾಳಿಯಿಂದ ಹುತಾತ್ಮರಾದ ಭಾರತದ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕರ್ನಾಟಕ ಸೇನಾಪಡೆ ಮತ್ತು ಅಖಿಲ ಭಾರತ ಕರುನಾಡು ಯುವಸೇನೆ ಮೌನಾಚರಣೆ ನಡಸಿತು.

protest_
ಪ್ರತಿಭಟನೆ

ಚಾಮರಾಜನಗರ: ಗಡಿಯಲ್ಲಿ ಕ್ಯಾತೆ ತೆಗೆದು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವ ಚೀನಾ ನಡೆ ವಿರೋಧಿಸಿ ನಗರದಲ್ಲಿ ಕರ್ನಾಟಕ ಸೇನಾಪಡೆ ವತಿಯಿಂದ ಚೀನಾ ನಿರ್ಮಿತ ಮೊಬೈಲ್​​​​​ಗಳನ್ನು ಪುಡಿಗಟ್ಟಿ ಪ್ರತಿಭಟಿಸಲಾಯಿತು.

ಚಾಮರಾಜೇಶ್ವರನ ದೇಗುಲದಿಂದ ಭುವನೇಶ್ವರಿ ವೃತ್ತದವರೆಗೆ ಚೀನಾ ಅಧ್ಯಕ್ಷರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಚೀನಾ ನಿರ್ಮಿತ ವಸ್ತುಗಳನ್ನಿಟ್ಟು ಪ್ರತಿಭಟನಾ ಮೆರೆವಣಿಗೆ ನಡೆಸಿ ಧಿಕ್ಕಾರ ಕೂಗಿದರು.

ಚೀನಾ ಮೊಬೈಲ್, ಬ್ಯಾಟರಿ ಇನ್ನಿತರೆ ವಸ್ತುಗಳನ್ನು ನಾಶಪಡಿಸಿ ಜಿನ್‌​​​ಪಿಂಗ್ ಭಾವಚಿತ್ರವನ್ನು ಸುಟ್ಟರು. ಇದೇ ರೀತಿ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದ್ದರೆ ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ಭಾರತೀಯ ಸೇನೆ ನೀಡಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಮೌನಾಚರಣೆ:

ಬೇಗೂರಿನಲ್ಲಿ ಅಖಿಲ ಭಾರತ ಕರುನಾಡು ಯುವಸೇನೆಯಿಂದ ಚೀನಾ ಸಂಘರ್ಷದಲ್ಲಿ ಮಡಿದ ಯೋಧರಿಗೆ ಮೂರು ನಿಮಿಷಗಳ ಕಾಲ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಚಾಮರಾಜನಗರ: ಗಡಿಯಲ್ಲಿ ಕ್ಯಾತೆ ತೆಗೆದು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವ ಚೀನಾ ನಡೆ ವಿರೋಧಿಸಿ ನಗರದಲ್ಲಿ ಕರ್ನಾಟಕ ಸೇನಾಪಡೆ ವತಿಯಿಂದ ಚೀನಾ ನಿರ್ಮಿತ ಮೊಬೈಲ್​​​​​ಗಳನ್ನು ಪುಡಿಗಟ್ಟಿ ಪ್ರತಿಭಟಿಸಲಾಯಿತು.

ಚಾಮರಾಜೇಶ್ವರನ ದೇಗುಲದಿಂದ ಭುವನೇಶ್ವರಿ ವೃತ್ತದವರೆಗೆ ಚೀನಾ ಅಧ್ಯಕ್ಷರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಚೀನಾ ನಿರ್ಮಿತ ವಸ್ತುಗಳನ್ನಿಟ್ಟು ಪ್ರತಿಭಟನಾ ಮೆರೆವಣಿಗೆ ನಡೆಸಿ ಧಿಕ್ಕಾರ ಕೂಗಿದರು.

ಚೀನಾ ಮೊಬೈಲ್, ಬ್ಯಾಟರಿ ಇನ್ನಿತರೆ ವಸ್ತುಗಳನ್ನು ನಾಶಪಡಿಸಿ ಜಿನ್‌​​​ಪಿಂಗ್ ಭಾವಚಿತ್ರವನ್ನು ಸುಟ್ಟರು. ಇದೇ ರೀತಿ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದ್ದರೆ ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ಭಾರತೀಯ ಸೇನೆ ನೀಡಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಮೌನಾಚರಣೆ:

ಬೇಗೂರಿನಲ್ಲಿ ಅಖಿಲ ಭಾರತ ಕರುನಾಡು ಯುವಸೇನೆಯಿಂದ ಚೀನಾ ಸಂಘರ್ಷದಲ್ಲಿ ಮಡಿದ ಯೋಧರಿಗೆ ಮೂರು ನಿಮಿಷಗಳ ಕಾಲ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.