ಚಾಮರಾಜನಗರ: ವಿಶ್ವ ಶೌಚಾಲಯ ದಿನವನ್ನು ಶಾಲೆಯ ಶೌಚಗೃಹಗಳನ್ನು ಸ್ವಚ್ಛಗೊಳಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಅರಕಲವಾಡಿಯಲ್ಲಿ ನಡೆದಿದೆ.
![Headmaster cleaning the school toilet](https://etvbharatimages.akamaized.net/etvbharat/prod-images/kn-cnr-03-toilet-av-7202614_19112020173626_1911f_1605787586_147.jpg)
ಶಾಲೆಯ ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ ಎಂಬುವರು ಪೊರಕೆ ಹಿಡಿದು ಸ್ವಚ್ಛಗೊಳಿಸುವ ಮೂಲಕ ಗಂಟೆಗಟ್ಟಲೇ ಸ್ವಚ್ಛತೆ ಬಗ್ಗೆ ಭಾಷಣ ಬಿಗಿಯುವ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.
ಶಿಕ್ಷಕ ಮಹದೇಶ್ವರಸ್ವಾಮಿ ಪ್ರತಿಕ್ರಿಯಿಸಿ, ಗಾಂಧೀಜಿ ಆದರ್ಶ ಹಾಗೂ ಹರ್ಡೇಕರ್ ಅವರ ಸೇವೆಗಾಗಿ ಬಾಳು ಎಂಬ ಮಾತಂತೆ ನಡೆಯುತ್ತಿದ್ದೇನೆ. ಪ್ರತಿಯೊಬ್ಬರು ಶೌಚಾಲಯ ನಿರ್ಮಿಸಿ ಅದನ್ನು ಸದ್ಭಳಕೆ ಮಾಡಿಕೊಂಡು ನಿರಂತರವಾಗಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಸ್ವಚ್ಛ ಭಾರತದ ಕನಸು ನನಸು ಮಾಡಬೇಕು ಎಂದರು. ಗುರುಗಳನ್ನು ನೋಡಿ ವಿದ್ಯಾರ್ಥಿಗಳು ಕಲಿಯುವುದರಿಂದ ಶಾಲೆಯ ಶೌಚಾಲಯವನ್ನು ಸ್ವತಃ ಅವರೇ ಸ್ವಚ್ಛಗೊಳಿಸುವುದನ್ನು ರೂಢಿಸಿಕೊಂಡು ಬಂದಿದ್ದಾರೆ.
![Headmaster cleaning the school toilet](https://etvbharatimages.akamaized.net/etvbharat/prod-images/kn-cnr-03-toilet-av-7202614_19112020173626_1911f_1605787586_394.jpg)