ETV Bharat / state

ಕುಟುಂಬದ 4 ಜನರಿಗೆ ಗುಂಡಿಕ್ಕಿ ವ್ಯಕ್ತಿ ಆತ್ಮಹತ್ಯೆ... ಬೆಚ್ಚಿಬಿತ್ತು ಗುಂಡ್ಲುಪೇಟೆ

author img

By

Published : Aug 16, 2019, 8:13 AM IST

Updated : Aug 16, 2019, 2:39 PM IST

ಗನ್​ನಿಂದ ಶೂಟ್ ಮಾಡಿ ತನ್ನ ಕುಟುಂಬದ ನಾಲ್ಕು ಜನರನ್ನು ಕೊಂದ ವ್ಯಕ್ತಿವೋರ್ವ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಈ ಪ್ರಕರಣ ನಡೆದಿದೆ.

ಆತ್ಮಹತ್ಯೆ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯ ಜನ ಇಂದು ಬೆಚ್ಚಿ ಬಿದ್ದಿದ್ದಾರೆ. ಗನ್​ನಿಂದ ಶೂಟ್ ಮಾಡಿ ತನ್ನ ಕುಟುಂಬದ ನಾಲ್ವರನ್ನು ಕೊಂದ ವ್ಯಕ್ತಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಬೆಚ್ಚಿಬೀಳಿಸುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಗುಂಡ್ಲುಪೇಟೆಯ ಬಳಿ ಇರುವ ಊಟಿ ರಸ್ತೆಯಲ್ಲಿರುವ ಮೈಸೂರು ವಿವಿ ನಿವೃತ್ತ ಪ್ರೊಫೆಸರ್ ಮಹೇಶ್ ಚಂದ್ರಗುರು ಅವರ ಸಂಬಂಧಿಕರಿಗೆ ಸೇರಿದ ಜಮೀನಿನಲ್ಲಿ ಮಧ್ಯರಾತ್ರಿ 2 ಗಂಟೆ ಸಮಯಕ್ಕೆ ಈ ಘಟನೆ ನಡೆದಿದೆ. ತಂದೆ-ತಾಯಿ, ತನ್ನ ಪತ್ನಿ, ಮಗನಿಗೆ ಗುಂಡು ಹಾರಿಸಿದ ಮೈಸೂರಿನಲ್ಲಿ ಡಾಟಾ ಬೇಸ್ ಕಂಪನಿ‌ ನಡೆಸುತ್ತಿದ್ದ ಓಂ ಪ್ರಕಾಶ್​​ (35) ಬಳಿಕ ತಾನೂ ಶೂಟ್​ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರೆಲ್ಲ ಮೈಸೂರಿನ ದಟ್ಟಗಳ್ಳಿಯಲ್ಲಿ ವಾಸವಾಗಿದ್ದರು. ಓಂ ಪ್ರಕಾಶ್ ತನ್ನ ತಂದೆ-ನಾಗರಾಜಭಟ್ರು (60), ತಾಯಿ- ಹೇಮಾಲತಾ (50), ಪತ್ನಿ- ನಿಖಿತಾ, ಮಗ- ಆರ್ಯನ್ (4) ರನ್ನು ಗನ್​ನಿಂದ ಶೂಟ್​ ಮಾಡಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಓಂಕಾರ್​​.

ಬೆಚ್ಚಿಬಿತ್ತು ಗುಂಡ್ಲುಪೇಟೆ

ರಿಯಲ್​ ಎಸ್ಟೇಟ್​ ವ್ಯವಹಾರ ನಡೆಸುತ್ತಿದ್ದ ಓಂ ಪ್ರಕಾಶ್​ ನಷ್ಟ ಅನುಭವಿಸಿದ್ದರು ಎನ್ನಲಾಗ್ತಿದೆ. ಇದೇ ಘಟನೆಗೆ ಕಾರಣ ಎಂದು ಹೇಳಲಾಗ್ತಿದೆ.

a-man-kills-4-of-his-family-members-and-committed-sucide
ಬೆಚ್ಚಿಬಿತ್ತು ಗುಂಡ್ಲುಪೇಟೆ

ಸದ್ಯ, ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಇತರರು ಸ್ಥಳಕ್ಕೆ ಆಗಮಿಸದಂತೆ ನಿರ್ಬಂಧ ವಿಧಿಸಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯ ಜನ ಇಂದು ಬೆಚ್ಚಿ ಬಿದ್ದಿದ್ದಾರೆ. ಗನ್​ನಿಂದ ಶೂಟ್ ಮಾಡಿ ತನ್ನ ಕುಟುಂಬದ ನಾಲ್ವರನ್ನು ಕೊಂದ ವ್ಯಕ್ತಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಬೆಚ್ಚಿಬೀಳಿಸುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಗುಂಡ್ಲುಪೇಟೆಯ ಬಳಿ ಇರುವ ಊಟಿ ರಸ್ತೆಯಲ್ಲಿರುವ ಮೈಸೂರು ವಿವಿ ನಿವೃತ್ತ ಪ್ರೊಫೆಸರ್ ಮಹೇಶ್ ಚಂದ್ರಗುರು ಅವರ ಸಂಬಂಧಿಕರಿಗೆ ಸೇರಿದ ಜಮೀನಿನಲ್ಲಿ ಮಧ್ಯರಾತ್ರಿ 2 ಗಂಟೆ ಸಮಯಕ್ಕೆ ಈ ಘಟನೆ ನಡೆದಿದೆ. ತಂದೆ-ತಾಯಿ, ತನ್ನ ಪತ್ನಿ, ಮಗನಿಗೆ ಗುಂಡು ಹಾರಿಸಿದ ಮೈಸೂರಿನಲ್ಲಿ ಡಾಟಾ ಬೇಸ್ ಕಂಪನಿ‌ ನಡೆಸುತ್ತಿದ್ದ ಓಂ ಪ್ರಕಾಶ್​​ (35) ಬಳಿಕ ತಾನೂ ಶೂಟ್​ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರೆಲ್ಲ ಮೈಸೂರಿನ ದಟ್ಟಗಳ್ಳಿಯಲ್ಲಿ ವಾಸವಾಗಿದ್ದರು. ಓಂ ಪ್ರಕಾಶ್ ತನ್ನ ತಂದೆ-ನಾಗರಾಜಭಟ್ರು (60), ತಾಯಿ- ಹೇಮಾಲತಾ (50), ಪತ್ನಿ- ನಿಖಿತಾ, ಮಗ- ಆರ್ಯನ್ (4) ರನ್ನು ಗನ್​ನಿಂದ ಶೂಟ್​ ಮಾಡಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಓಂಕಾರ್​​.

ಬೆಚ್ಚಿಬಿತ್ತು ಗುಂಡ್ಲುಪೇಟೆ

ರಿಯಲ್​ ಎಸ್ಟೇಟ್​ ವ್ಯವಹಾರ ನಡೆಸುತ್ತಿದ್ದ ಓಂ ಪ್ರಕಾಶ್​ ನಷ್ಟ ಅನುಭವಿಸಿದ್ದರು ಎನ್ನಲಾಗ್ತಿದೆ. ಇದೇ ಘಟನೆಗೆ ಕಾರಣ ಎಂದು ಹೇಳಲಾಗ್ತಿದೆ.

a-man-kills-4-of-his-family-members-and-committed-sucide
ಬೆಚ್ಚಿಬಿತ್ತು ಗುಂಡ್ಲುಪೇಟೆ

ಸದ್ಯ, ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಇತರರು ಸ್ಥಳಕ್ಕೆ ಆಗಮಿಸದಂತೆ ನಿರ್ಬಂಧ ವಿಧಿಸಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:

ಶೂಟ್ ಮಾಡಿಕೊಂಡು ೫ ಮಂದಿ ಆತ್ಮಹತ್ಯೆ: ಗುಂಡ್ಲುಪೇಟೆಯಲ್ಲಿ ಭೀಕರ ಘಟನೆ





ಚಾಮರಾಜನಗರ: ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡು ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ಹೊರವಲಯದ ಸೇಂಟ್ ಜಾನ್ಸ್ ಶಾಲೆಯಲ್ಲಿ ನಡೆದಿದೆ.



ತಂದೆ-ತಾಯಿ, ತನ್ನ ಪತ್ನಿ,ಮಗನೊಂದಿಗೆ ಮಧ್ಯವಯಸ್ಕನೋರ್ವ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಹೆಸರು ಮತ್ತು ಊರಿನ ಕುರಿತು ಇನ್ನು ತಿಳಿದುಬಂದಿಲ್ಲ.



ಸದ್ಯ, ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಪರಿಶೀಲನೆ ನಡೆಸುತ್ತಿದ್ದು ಘಟನಾ ಸ್ಥಳಕ್ಕೆ ಇತರರನ್ನು ನಿರ್ಭಂಧಿಸಿದ್ದಾರೆ.


Conclusion:
Last Updated : Aug 16, 2019, 2:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.