ETV Bharat / state

ಖಾಕಿ ಲವ್ ದೋಖಾ ಆರೋಪ.. ವಿವಾಹಿತೆ ಜೊತೆ ಪ್ರೀತಿ, ಮದುವೆಗೆ ಪಟ್ಟು ಹಿಡಿದಿದ್ದಕ್ಕೆ ಕಾನ್ಸ್‌ಟೇಬಲ್ ಪರಾರಿ!

author img

By

Published : Jun 28, 2022, 1:25 PM IST

ಪ್ರೀತಿ ಹೆಸರಲ್ಲಿ ವಿವಾಹಿತೆಯೊಬ್ಬರನ್ನು ಕಾನ್ಸ್​ಟೇಬಲ್​ ಮೋಸ ಮಾಡಿರುವ ಆರೋಪ ಪ್ರಕರಣ ಚಾಮರಾಜನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

constable cheat to married woman in Chamarajanagar, Chamarajanagar crime news, Chamarajanagara Constable cheating news, ಚಾಮರಾಜನಗರದಲ್ಲಿ ವಿವಾಹಿತ ಮಹಿಳೆಗೆ ಕಾನ್ಸ್​ಟೇಬಲ್​ ವಂಚನೆ, ಚಾಮರಾಜನಗರ ಅಪರಾಧ ಸುದ್ದಿ, ಚಾಮರಾಜನಗರ ಕಾನ್ಸ್​ಟೇಬಲ್ ವಂಚನೆ ಸುದ್ದಿ,
ಪೊಲೀಸ್​ ಠಾಣೆ

ಚಾಮರಾಜನಗರ: ವಿವಾಹಿತ ಮಹಿಳೆಯೊಬ್ಬರನ್ನು ವರ್ಷಗಳ ಕಾಲ ಪ್ರೀತಿಸಿ, ಎಲ್ಲೆಂದರಲ್ಲಿ ಸುತ್ತಾಡಿದ್ದಲ್ಲದೇ ಮದುವೆಯಾಗುವುದಾಗಿ ನಿರಂತರ ದೈಹಿಕ ಸಂಪರ್ಕ ಬೆಳೆಸಿದ್ದರೆನ್ನಲಾದ ಕಾನ್ಸ್​ಟೇಬಲ್​ವೋರ್ವರು ಈಗ ನಾಪತ್ತೆಯಾಗಿದ್ದಾರೆ. ತನ್ನನ್ನು ಮದುವೆ ಮಾಡಿಕೋ ಎಂದು ವಿವಾಹಿತೆ ಪಟ್ಟು ಹಿಡಿದಿದ್ದಕ್ಕೆ ಕಾನ್ಸ್​ಟೇಬಲ್​ ಮಹಿಳೆಯನ್ನು ಬಿಟ್ಟು ಪರಾರಿಯಾಗಿರುವ ಆರೋಪ ಪ್ರಕರಣ ಯಳ‌ಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

constable cheat to married woman in Chamarajanagar, Chamarajanagar crime news, Chamarajanagara Constable cheating news, ಚಾಮರಾಜನಗರದಲ್ಲಿ ವಿವಾಹಿತ ಮಹಿಳೆಗೆ ಕಾನ್ಸ್​ಟೇಬಲ್​ ವಂಚನೆ, ಚಾಮರಾಜನಗರ ಅಪರಾಧ ಸುದ್ದಿ, ಚಾಮರಾಜನಗರ ಕಾನ್ಸ್​ಟೇಬಲ್ ವಂಚನೆ ಸುದ್ದಿ,
ಅರೋಪಿ ಕಾನ್ಸ್‌ಟೇಬಲ್ ಶಂಕರ್​

ಚಾಮರಾಜನಗರ ಪಟ್ಟಣ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಶಂಕರ್ ಎಂಬವರ ವಿರುದ್ಧ ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 27 ವರ್ಷದ ವಿವಾಹಿತೆ ದೂರು ನೀಡಿದ್ದು, ತನ್ನ ಮೇಲೆ ನಿರಂತರ ಅತ್ಯಾಚಾರವೆಸಗಿ, ಮದುವೆ ಆಗು ಎಂದಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಮಹಿಳೆ ಅಳಲು ತೋಡಿಕೊಂಡು ದೂರು ಕೊಟ್ಟಿದ್ದಾರೆ.

ಓದಿ: ವಿರೋಧ ವ್ಯಕ್ತಪಡಿಸಿಲ್ಲ ಎಂದ ಮಾತ್ರಕ್ಕೆ ಅತ್ಯಾಚಾರ ಅಲ್ಲ ಎಂದರ್ಥವಲ್ಲ: ಹೈಕೋರ್ಟ್ ಮಹತ್ವದ ತೀರ್ಪು, ಅಪರಾಧಿಗೆ 10 ವರ್ಷ ಜೈಲು!

ಏನಿದು ಲವ್ ಕಹಾನಿ: ವಿವಾಹಿತೆಗೆ ಈಗಾಗಲೇ ಎರಡು ಮಕ್ಕಳಿದ್ದು, ಕೌಟಂಬಿಕ ಕಲಹದಿಂದಾಗಿ ತವರು ಮನೆಗೆ ವಾಪಸಾಗಿದ್ದಾರೆ. ಈ ವೇಳೆ ಕಾನ್ಸ್‌ಟೇಬಲ್ ಶಂಕರ್ ಹಳೇ ಪರಿಚಯದಿಂದ ಮಾತುಕತೆ ಆಡುತ್ತ ಪ್ರೇಮದ ಬಲೆಗೆ ಬೀಳಿಸಿಕೊಂಡಿದ್ದರಂತೆ. ಬಳಿಕ ಕಳೆದ 1 ವರ್ಷದಿಂದ ಮಹಿಳೆಯ ಮೇಲೆ ಶಂಕರ್​ ನಿರಂತರ ಅತ್ಯಾಚಾರ ಎಸಗಿದ್ದಾರಂತೆ. ಬಳಿಕ ವಿವಾಹಿತೆ ಮದುವೆ ಆಗು ಎಂದಿದ್ದಕ್ಕೆ ಕಾನ್ಸ್‌ಟೇಬಲ್ ನಿರಾಕರಿಸಿದ್ದಾರೆ.

ಈ ಸಂಬಂಧ ಪಂಚಾಯ್ತಿ, ಹಿರಿಯರ ನಡುವೆ ಮಾತುಕತೆಯೂ ಆಗಿದೆ. ಮದುವೆಗೆ ಕಾನ್ಸ್‌ಟೇಬಲ್ ಒಪ್ಪಿಲ್ಲ ಎಂದು ತಿಳಿದುಬಂದಿದೆ. ಕೊನೆಗೆ, ನ್ಯಾಯಕ್ಕಾಗಿ ವಿವಾಹಿತೆ ಯಳಂದೂರು ಠಾಣೆಗೆ ದೂರು ಕೊಟ್ಟಿದ್ದರಿಂದ ಅತ್ಯಾಚಾರ ಮತ್ತು ಕೊಲೆ ಬೆದರಿಕೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಶಂಕರ್ ಪರಾರಿಯಾಗಿದ್ದಾರೆ. ಯಳಂದೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಚಾಮರಾಜನಗರ: ವಿವಾಹಿತ ಮಹಿಳೆಯೊಬ್ಬರನ್ನು ವರ್ಷಗಳ ಕಾಲ ಪ್ರೀತಿಸಿ, ಎಲ್ಲೆಂದರಲ್ಲಿ ಸುತ್ತಾಡಿದ್ದಲ್ಲದೇ ಮದುವೆಯಾಗುವುದಾಗಿ ನಿರಂತರ ದೈಹಿಕ ಸಂಪರ್ಕ ಬೆಳೆಸಿದ್ದರೆನ್ನಲಾದ ಕಾನ್ಸ್​ಟೇಬಲ್​ವೋರ್ವರು ಈಗ ನಾಪತ್ತೆಯಾಗಿದ್ದಾರೆ. ತನ್ನನ್ನು ಮದುವೆ ಮಾಡಿಕೋ ಎಂದು ವಿವಾಹಿತೆ ಪಟ್ಟು ಹಿಡಿದಿದ್ದಕ್ಕೆ ಕಾನ್ಸ್​ಟೇಬಲ್​ ಮಹಿಳೆಯನ್ನು ಬಿಟ್ಟು ಪರಾರಿಯಾಗಿರುವ ಆರೋಪ ಪ್ರಕರಣ ಯಳ‌ಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

constable cheat to married woman in Chamarajanagar, Chamarajanagar crime news, Chamarajanagara Constable cheating news, ಚಾಮರಾಜನಗರದಲ್ಲಿ ವಿವಾಹಿತ ಮಹಿಳೆಗೆ ಕಾನ್ಸ್​ಟೇಬಲ್​ ವಂಚನೆ, ಚಾಮರಾಜನಗರ ಅಪರಾಧ ಸುದ್ದಿ, ಚಾಮರಾಜನಗರ ಕಾನ್ಸ್​ಟೇಬಲ್ ವಂಚನೆ ಸುದ್ದಿ,
ಅರೋಪಿ ಕಾನ್ಸ್‌ಟೇಬಲ್ ಶಂಕರ್​

ಚಾಮರಾಜನಗರ ಪಟ್ಟಣ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಶಂಕರ್ ಎಂಬವರ ವಿರುದ್ಧ ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 27 ವರ್ಷದ ವಿವಾಹಿತೆ ದೂರು ನೀಡಿದ್ದು, ತನ್ನ ಮೇಲೆ ನಿರಂತರ ಅತ್ಯಾಚಾರವೆಸಗಿ, ಮದುವೆ ಆಗು ಎಂದಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಮಹಿಳೆ ಅಳಲು ತೋಡಿಕೊಂಡು ದೂರು ಕೊಟ್ಟಿದ್ದಾರೆ.

ಓದಿ: ವಿರೋಧ ವ್ಯಕ್ತಪಡಿಸಿಲ್ಲ ಎಂದ ಮಾತ್ರಕ್ಕೆ ಅತ್ಯಾಚಾರ ಅಲ್ಲ ಎಂದರ್ಥವಲ್ಲ: ಹೈಕೋರ್ಟ್ ಮಹತ್ವದ ತೀರ್ಪು, ಅಪರಾಧಿಗೆ 10 ವರ್ಷ ಜೈಲು!

ಏನಿದು ಲವ್ ಕಹಾನಿ: ವಿವಾಹಿತೆಗೆ ಈಗಾಗಲೇ ಎರಡು ಮಕ್ಕಳಿದ್ದು, ಕೌಟಂಬಿಕ ಕಲಹದಿಂದಾಗಿ ತವರು ಮನೆಗೆ ವಾಪಸಾಗಿದ್ದಾರೆ. ಈ ವೇಳೆ ಕಾನ್ಸ್‌ಟೇಬಲ್ ಶಂಕರ್ ಹಳೇ ಪರಿಚಯದಿಂದ ಮಾತುಕತೆ ಆಡುತ್ತ ಪ್ರೇಮದ ಬಲೆಗೆ ಬೀಳಿಸಿಕೊಂಡಿದ್ದರಂತೆ. ಬಳಿಕ ಕಳೆದ 1 ವರ್ಷದಿಂದ ಮಹಿಳೆಯ ಮೇಲೆ ಶಂಕರ್​ ನಿರಂತರ ಅತ್ಯಾಚಾರ ಎಸಗಿದ್ದಾರಂತೆ. ಬಳಿಕ ವಿವಾಹಿತೆ ಮದುವೆ ಆಗು ಎಂದಿದ್ದಕ್ಕೆ ಕಾನ್ಸ್‌ಟೇಬಲ್ ನಿರಾಕರಿಸಿದ್ದಾರೆ.

ಈ ಸಂಬಂಧ ಪಂಚಾಯ್ತಿ, ಹಿರಿಯರ ನಡುವೆ ಮಾತುಕತೆಯೂ ಆಗಿದೆ. ಮದುವೆಗೆ ಕಾನ್ಸ್‌ಟೇಬಲ್ ಒಪ್ಪಿಲ್ಲ ಎಂದು ತಿಳಿದುಬಂದಿದೆ. ಕೊನೆಗೆ, ನ್ಯಾಯಕ್ಕಾಗಿ ವಿವಾಹಿತೆ ಯಳಂದೂರು ಠಾಣೆಗೆ ದೂರು ಕೊಟ್ಟಿದ್ದರಿಂದ ಅತ್ಯಾಚಾರ ಮತ್ತು ಕೊಲೆ ಬೆದರಿಕೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಶಂಕರ್ ಪರಾರಿಯಾಗಿದ್ದಾರೆ. ಯಳಂದೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.