ETV Bharat / state

ಇತಿಹಾಸ ಬರೆದ ಸುಮಲತಾ, ರಾಜ್ಯ ರಾಜಕಾರಣದಲ್ಲೇ ಗೆದ್ದ ಮೊದಲ ಮಹಿಳಾ ಸ್ವತಂತ್ರ ಅಭ್ಯರ್ಥಿ! - undefined

1,951ರ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಈವರೆಗೆ ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದು, ರಾಜ್ಯದ ಇತಿಹಾಸದಲ್ಲೇ ಗೆದ್ದ ಮೊದಲ ಮಹಿಳಾ ಹಾಗೂ ಕರ್ನಾಟಕದಿಂದ ಒಟ್ಟಾರೆ ಗೆದ್ದವರಲ್ಲಿ ಮೂರನೇ ಪಕ್ಷೇತರ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಸುಮಲತಾ ಅಂಬರೀಶ್ ಪಾತ್ರರಾಗಿದ್ದಾರೆ.

ಸುಮಲತಾ ಅಂಬರೀಷ್
author img

By

Published : May 26, 2019, 5:04 PM IST

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ 52 ವರ್ಷದ ಹಳೆಯ ದಾಖಲೆಯನ್ನು ಸುಮಲತಾ ಅಂಬರೀಶ್‌ ಮುರಿದಿದ್ದಾರೆ.ರಾಜ್ಯದ ಇತಿಹಾಸದಲ್ಲೇ ಗೆದ್ದ ಮೊದಲ ಮಹಿಳಾ ಹಾಗೂ ಕರ್ನಾಟಕದಿಂದ ಇಲ್ಲಿಯವರೆಗೆ ಗೆದ್ದವರಲ್ಲಿ ಮೂರನೇ ಪಕ್ಷೇತರ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ ಪ್ರಭಾವಿ ವ್ಯಕ್ತಿಗಳಲ್ಲಿ ಮಂಡ್ಯದಲ್ಲಿ ನಟಿ ಸುಮಲತಾ, ಬೆಂಗಳೂರು ಕೇಂದ್ರದಲ್ಲಿ ನಟ ಪ್ರಕಾಶ್ ರೈ, ಬೆಂಗಳೂರು ದಕ್ಷಿಣದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಣದಲ್ಲಿದ್ದರು. ರಾಜ್ಯದ ಇತಿಹಾಸದಲ್ಲಿ 1951ರ ಈಚೆಗೆ ನಡೆದ ಒಟ್ಟು 16 ಲೋಕಸಭೆ ಚುನಾವಣೆಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ ಉದಾಹರಣೆ ಇದುವರೆಗೆ ಎರಡು ಬಾರಿ ಮಾತ್ರ. ಮೊದಲನೇಯದು 1957 ಮತ್ತು ಎರಡನೇಯದು 1967ರಲ್ಲಿ. ಈ ಸಾರಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಂಡ್ಯದಿಂದ ಕಣಕ್ಕಿಳಿದಿರುವ ನಟಿ ಸುಮಲತಾ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದು, 1967 ರ ನಂತರ ಗೆದ್ದ ಮೊದಲ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಅವರು ಗೆಲುವು ದಾಖಲಿಸಿದ್ದರು.

ಈ ಸಾರಿ ಲೋಕಸಭೆ ಚುನಾವಣಾ ಅಖಾಡದಲ್ಲಿ ಒಟ್ಟು 265 ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದು, ಅತೀ ಹೆಚ್ಚು ಮಂದಿ ಬೆಳಗಾವಿಯಲ್ಲಿ ಹಾಗೂ ಅತೀ ಕಡಿಮೆ ಮಂದಿ ಬಳ್ಳಾರಿ ಕ್ಷೇತ್ರದಲ್ಲಿದ್ದರು. ರಾಯಚೂರಿನಲ್ಲಿ ಯಾವೊಬ್ಬ ಅಭ್ಯರ್ಥಿಯೂ ಪಕ್ಷೇತರವಾಗಿ ಸ್ಪರ್ಧಿಸಿರಲಿಲ್ಲ. ಕ್ಷೇತ್ರವಾರು ಗಮನಿಸುತ್ತಾ ಹೋದರೆ ಚಿಕ್ಕೋಡಿಯಲ್ಲಿ 6, ಬೆಳಗಾವಿಯಲ್ಲಿ 52, ಬಾಗಲಕೋಟೆಯಲ್ಲಿ 4, ವಿಜಯಪುರದಲ್ಲಿ 5, ಕಲಬುರುಗಿಯಲ್ಲಿ 3, ಬೀದರ್​ನಲ್ಲಿ 8, ಕೊಪ್ಪಳದಲ್ಲಿ 7, ಬಳ್ಳಾರಿಯಲ್ಲಿ 1, ಹಾವೇರಿಯಲ್ಲಿ 5, ಧಾರವಾಡದಲ್ಲಿ 10, ಉತ್ತರ ಕನ್ನಡದಲ್ಲಿ 6, ದಾವಣಗೆರೆಯಲ್ಲಿ 18, ಶಿವಮೊಗ್ಗದಲ್ಲಿ 7, ಉಡುಪಿ-ಚಿಕ್ಕಮಗಳೂರಲ್ಲಿ 4, ಹಾಸನದಲ್ಲಿ 2, ದಕ್ಷಿಣ ಕನ್ನಡದಲ್ಲಿ 7, ಚಿತ್ರದುರ್ಗದಲ್ಲಿ 12, ತುಮಕೂರಲ್ಲಿ 9, ಮಂಡ್ಯದಲ್ಲಿ 16, ಮೈಸೂರಲ್ಲಿ 15, ಚಾಮರಾಜನಗರದಲ್ಲಿ 4, ಬೆಂಗಳೂರು ಗ್ರಾಮಾಂತರದಲ್ಲಿ 6, ಬೆಂಗಳೂರು ಉತ್ತರದಲ್ಲಿ 20, ಬೆಂಗಳೂರು ಕೇಂದ್ರದಲ್ಲಿ 12, ಬೆಂಗಳೂರು ದಕ್ಷಿಣದಲ್ಲಿ 14, ಚಿಕ್ಕಬಳ್ಳಾಪುರದಲ್ಲಿ 6 ಹಾಗೂ ಕೋಲಾರದಲ್ಲಿ 6 ಮಂದಿ ಪಕ್ಷೇತರರು ಕಣದಲ್ಲಿದ್ದರು.

ಸುಮಲತಾರನ್ನು ಹೊರತುಪಡಿಸಿದರೆ, ರಾಜ್ಯದ ಯಾವುದೇ ಪಕ್ಷೇತರ ಅಭ್ಯರ್ಥಿ ಈ ಸಾರಿಯೂ ಹೇಳಿಕೊಳ್ಳುವಂತ ಸಾಧನೆ ತೋರಿಸಿಲ್ಲ. ರಾಜ್ಯದಲ್ಲಿ ಕಳೆದ ನಾಲ್ಕಾರು ಲೋಕಸಭೆ ಚುನಾವಣೆಗಳ ಇತಿಹಾಸ ಗಮನಿಸಿ ನೋಡಿದಾಗ, ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಪಕ್ಷೇತರರು ಒಟ್ಟಾರೆ ಶೇ.10 ರಷ್ಟು ಮತ ಕೂಡ ಗಳಿಸಿಲ್ಲ. ನಿರೀಕ್ಷೆ ಮೂಡಿಸಿದ್ದ ಅಭ್ಯರ್ಥಿಗಳು ಸಹ ನಿರೀಕ್ಷಿತ ಮತ ಗಳಿಸಲಿಲ್ಲ.

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ 52 ವರ್ಷದ ಹಳೆಯ ದಾಖಲೆಯನ್ನು ಸುಮಲತಾ ಅಂಬರೀಶ್‌ ಮುರಿದಿದ್ದಾರೆ.ರಾಜ್ಯದ ಇತಿಹಾಸದಲ್ಲೇ ಗೆದ್ದ ಮೊದಲ ಮಹಿಳಾ ಹಾಗೂ ಕರ್ನಾಟಕದಿಂದ ಇಲ್ಲಿಯವರೆಗೆ ಗೆದ್ದವರಲ್ಲಿ ಮೂರನೇ ಪಕ್ಷೇತರ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ ಪ್ರಭಾವಿ ವ್ಯಕ್ತಿಗಳಲ್ಲಿ ಮಂಡ್ಯದಲ್ಲಿ ನಟಿ ಸುಮಲತಾ, ಬೆಂಗಳೂರು ಕೇಂದ್ರದಲ್ಲಿ ನಟ ಪ್ರಕಾಶ್ ರೈ, ಬೆಂಗಳೂರು ದಕ್ಷಿಣದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಣದಲ್ಲಿದ್ದರು. ರಾಜ್ಯದ ಇತಿಹಾಸದಲ್ಲಿ 1951ರ ಈಚೆಗೆ ನಡೆದ ಒಟ್ಟು 16 ಲೋಕಸಭೆ ಚುನಾವಣೆಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ ಉದಾಹರಣೆ ಇದುವರೆಗೆ ಎರಡು ಬಾರಿ ಮಾತ್ರ. ಮೊದಲನೇಯದು 1957 ಮತ್ತು ಎರಡನೇಯದು 1967ರಲ್ಲಿ. ಈ ಸಾರಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಂಡ್ಯದಿಂದ ಕಣಕ್ಕಿಳಿದಿರುವ ನಟಿ ಸುಮಲತಾ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದು, 1967 ರ ನಂತರ ಗೆದ್ದ ಮೊದಲ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಅವರು ಗೆಲುವು ದಾಖಲಿಸಿದ್ದರು.

ಈ ಸಾರಿ ಲೋಕಸಭೆ ಚುನಾವಣಾ ಅಖಾಡದಲ್ಲಿ ಒಟ್ಟು 265 ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದು, ಅತೀ ಹೆಚ್ಚು ಮಂದಿ ಬೆಳಗಾವಿಯಲ್ಲಿ ಹಾಗೂ ಅತೀ ಕಡಿಮೆ ಮಂದಿ ಬಳ್ಳಾರಿ ಕ್ಷೇತ್ರದಲ್ಲಿದ್ದರು. ರಾಯಚೂರಿನಲ್ಲಿ ಯಾವೊಬ್ಬ ಅಭ್ಯರ್ಥಿಯೂ ಪಕ್ಷೇತರವಾಗಿ ಸ್ಪರ್ಧಿಸಿರಲಿಲ್ಲ. ಕ್ಷೇತ್ರವಾರು ಗಮನಿಸುತ್ತಾ ಹೋದರೆ ಚಿಕ್ಕೋಡಿಯಲ್ಲಿ 6, ಬೆಳಗಾವಿಯಲ್ಲಿ 52, ಬಾಗಲಕೋಟೆಯಲ್ಲಿ 4, ವಿಜಯಪುರದಲ್ಲಿ 5, ಕಲಬುರುಗಿಯಲ್ಲಿ 3, ಬೀದರ್​ನಲ್ಲಿ 8, ಕೊಪ್ಪಳದಲ್ಲಿ 7, ಬಳ್ಳಾರಿಯಲ್ಲಿ 1, ಹಾವೇರಿಯಲ್ಲಿ 5, ಧಾರವಾಡದಲ್ಲಿ 10, ಉತ್ತರ ಕನ್ನಡದಲ್ಲಿ 6, ದಾವಣಗೆರೆಯಲ್ಲಿ 18, ಶಿವಮೊಗ್ಗದಲ್ಲಿ 7, ಉಡುಪಿ-ಚಿಕ್ಕಮಗಳೂರಲ್ಲಿ 4, ಹಾಸನದಲ್ಲಿ 2, ದಕ್ಷಿಣ ಕನ್ನಡದಲ್ಲಿ 7, ಚಿತ್ರದುರ್ಗದಲ್ಲಿ 12, ತುಮಕೂರಲ್ಲಿ 9, ಮಂಡ್ಯದಲ್ಲಿ 16, ಮೈಸೂರಲ್ಲಿ 15, ಚಾಮರಾಜನಗರದಲ್ಲಿ 4, ಬೆಂಗಳೂರು ಗ್ರಾಮಾಂತರದಲ್ಲಿ 6, ಬೆಂಗಳೂರು ಉತ್ತರದಲ್ಲಿ 20, ಬೆಂಗಳೂರು ಕೇಂದ್ರದಲ್ಲಿ 12, ಬೆಂಗಳೂರು ದಕ್ಷಿಣದಲ್ಲಿ 14, ಚಿಕ್ಕಬಳ್ಳಾಪುರದಲ್ಲಿ 6 ಹಾಗೂ ಕೋಲಾರದಲ್ಲಿ 6 ಮಂದಿ ಪಕ್ಷೇತರರು ಕಣದಲ್ಲಿದ್ದರು.

ಸುಮಲತಾರನ್ನು ಹೊರತುಪಡಿಸಿದರೆ, ರಾಜ್ಯದ ಯಾವುದೇ ಪಕ್ಷೇತರ ಅಭ್ಯರ್ಥಿ ಈ ಸಾರಿಯೂ ಹೇಳಿಕೊಳ್ಳುವಂತ ಸಾಧನೆ ತೋರಿಸಿಲ್ಲ. ರಾಜ್ಯದಲ್ಲಿ ಕಳೆದ ನಾಲ್ಕಾರು ಲೋಕಸಭೆ ಚುನಾವಣೆಗಳ ಇತಿಹಾಸ ಗಮನಿಸಿ ನೋಡಿದಾಗ, ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಪಕ್ಷೇತರರು ಒಟ್ಟಾರೆ ಶೇ.10 ರಷ್ಟು ಮತ ಕೂಡ ಗಳಿಸಿಲ್ಲ. ನಿರೀಕ್ಷೆ ಮೂಡಿಸಿದ್ದ ಅಭ್ಯರ್ಥಿಗಳು ಸಹ ನಿರೀಕ್ಷಿತ ಮತ ಗಳಿಸಲಿಲ್ಲ.

Intro:NEWSBody:52 ವರ್ಷದ ನಂತರ ಇತಿಹಾಸ ಬರೆದರು ಸುಮಲತಾ; ಉಳಿದ ಪಕ್ಷೇತರರ ಸ್ಥಿತಿ ದಯನೀಯ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ 52 ವರ್ಷದ ಹಳೆಯ ದಾಖಲೆಯನ್ನು ಸುಮಲತಾ ಅಂಬರೀಶ್ ಮುರಿದಿದ್ದಾರೆ. ಇದನ್ನು ಹೊರತುಪಡಿಸಿದರೆ, ರಾಜ್ಯದ ಯಾವುದೇ ಪಕ್ಷೇತರ ಅಭ್ಯರ್ಥಿ ಈ ಸಾರಿಯೂ ಹೇಳಿಕೊಳ್ಳುವಂತ ಸಾಧನೆ ತೋರಿಸಿಲ್ಲ.
1967ರ ನಂತರ ಗೆದ್ದ ಮೊದಲ ಹಾಗೂ ಇದುವರೆಗೂ ರಾಜ್ಯದ ಇತಿಹಾಸದಲ್ಲೇ ಗೆದ್ದ ಮೂರನೇ ಪಕ್ಷೇತರ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ ಸುಮಲತಾ, ನಟಿ ಬೆಂಗಳೂರು ಕೇಂದ್ರದಲ್ಲಿ ನಟ ಪ್ರಕಾಶ್ ರೈ, ಬೆಂಗಳೂರು ದಕ್ಷಿಣದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಣದಲ್ಲಿದ್ದರು. ರಾಜ್ಯದ ಇತಿಹಾಸದಲ್ಲಿ 1951ರ ಈಚೆ ನಡೆದ ಒಟ್ಟು 16 ಲೋಕಸಭೆ ಚುನಾವಣೆಗಳ ಪೈಕಿ ಪಕ್ಷೇತರರು ಗೆಲುವು ಸಾಧಿಸಿದ ಉದಾಹರಣೆ ಇದುವರೆಗೆ ಎರಡು ಸಾರಿ ಮಾತ್ರ. ಮೊದಲನೇಯದು 1957 ಮತ್ತು ಎರಡನೇಯದು 1967ರಲ್ಲಿ. ಈ ಸಾರಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಂಡ್ಯದಿಂದ ಕಣಕ್ಕಿಳಿದಿರುವ ನಟಿ ಸುಮಲತಾ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆದ್ದಿರುವುದು ಇನ್ನೊಂದು ವಿಶೇಷ.
265 ಮಂದಿ ಕಣದಲ್ಲಿ
ಈ ಸಾರಿ ಲೋಕಸಭೆ ಚುನಾವಣಾ ಅಖಾಡದಲ್ಲಿ ಒಟ್ಟು 265 ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದು, ಅತಿ ಹೆಚ್ಚು ಮಂದಿ ಬೆಳಗಾವಿಯಲ್ಲಿ ಹಾಗೂ ಅತಿ ಕಡಿಮೆ ಮಂದಿ ಬಳ್ಳಾರಿ ಕ್ಷೇತ್ರದಲ್ಲಿಯೂ ಇದ್ದರು. ರಾಯಚೂರಿನಲ್ಲಿ ಯಾವೊಬ್ಬ ಅಭ್ಯರ್ಥಿಯೂ ಪಕ್ಷೇತರವಾಗಿ ಸ್ಪರ್ಧಿಸಿರಲಿಲ್ಲ.
ಕ್ಷೇತ್ರವಾರು ಗಮನಿಸುತ್ತಾ ಹೋದರೆ ಚಿಕ್ಕೋಡಿಯಲ್ಲಿ 6, ಬೆಳಗಾವಿಯಲ್ಲಿ 52, ಬಾಗಲಕೋಟೆಯಲ್ಲಿ 4, ವಿಜಯಪುರದಲ್ಲಿ 5, ಕಲಬುರುಗಿಯಲ್ಲಿ 3, ಬೀದರ್ನಲ್ಲಿ 8, ಕೊಪ್ಪಳದಲ್ಲಿ 7, ಬಳ್ಳಾರಿಯಲ್ಲಿ 1, ಹಾವೇರಿಯಲ್ಲಿ 5, ಧಾರವಾಡದಲ್ಲಿ 10, ಉತ್ತರಕನ್ನಡ 6, ದಾವಣಗೆರೆ 18, ಶಿವಮೊಗ್ಗ 7, ಉಡುಪಿ-ಚಿಕ್ಕಮಗಳೂರು 4, ಹಾಸನ 2, ದಕ್ಷಿಣ ಕನ್ನಡ 7, ಚಿತ್ರದುರ್ಗ 12, ತುಮಕೂರು 9, ಮಂಡ್ಯ 16, ಮೈಸೂರು 15, ಚಾಮರಾಜನಗರ 4, ಬೆಂಗಳೂರು ಗ್ರಾಮಾಂತರ 6, ಬೆಂಗಳೂರು ಉತ್ತರ 20, ಬೆಂಗಳೂರು ಕೇಂದ್ರ 12, ಬೆಂಗಳೂರು ದಕ್ಷಿಣ 14, ಚಿಕ್ಕಬಳ್ಳಾಪುರ 6 ಹಾಗೂ ಕೋಲಾರ 6 ಮಂದಿ ಪಕ್ಷೇತರರು ಕಣದಲ್ಲಿದ್ದರು.
ರಾಜ್ಯದಲ್ಲಿ ಕಳೆದ ನಾಲ್ಕಾರು ಲೋಕಸಭೆ ಚುನಾವಣೆಗಳ ಇತಿಹಾಸ ಗಮನಿಸಿ ನೋಡಿದಾಗ, ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಪಕ್ಷೇತರರು ಒಟ್ಟಾರೆ ಶೇ.10ರಷ್ಟು ಮತ ಕೂಡ ಗಳಿಸಿಲ್ಲ. ಈ ಸಾರಿ ಬಿಜೆಪಿ ಎದುರಾಳಿಯಾಗಿ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಸೆಣೆಸಿದ್ದವು. ಸುಮಲತಾ ಗೆದ್ದಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದು ಸ್ಥಾನ ಗೆದ್ದಿವೆ. ಉಳಿದ 25 ಸ್ಥಾನ ಬಿಜೆಪಿ ಪಾಲಾಗಿದೆ.
ಫಲಕೊಡದ ಪಕ್ಷೇತರರ ಸ್ಪರ್ಧೆ
ಪಕ್ಷೇತರರ ಸ್ಪರ್ಧೆ ಈ ಸಾರಿಯೂ ಫಲ ಕೊಡಲಿಲ್ಲ. ನಿರೀಕ್ಷೆ ಮೂಡಿಸಿದ್ದ ಅಭ್ಯರ್ಥಿಗಳು ನಿರೀಕ್ಷಿತ ಮತ ಗಳಿಸಲಿಲ್ಲ. 5 ಸಾವಿರ ಮೇಲ್ಪಟ್ಟು ಮತ ಪಡೆದವರನ್ನು ಗಮನಿಸಿದರೆ ಬೆಂಗಳೂರ ಕೇಂದ್ರದಿಂದ ಸ್ಪರ್ಧಿಸಿದ್ದ ಪ್ರಕಾಶ್ ರೈ 28,906 ಮತ ಪಡೆದರು. ಬೆಂಗಳೂರು ಉತ್ತರದಲ್ಲಿ ಕೆ.ಎನ್. ಜಗದೀಶ್ ಕುಮಾರ್ 8,463, ಬೆಳಗಾವಿಯಲ್ಲಿ ಗಣೇಶ್ ಎಂ. ದದ್ದೀಕರ್ 8151, ಬೀದರ್ನಲ್ಲಿ ರವಿಕಾಂತ್ ಕೆ. ಹೂಗಾರ್ 5748, ಚಾಮರಾಜನಗರದಲ್ಲಿ ಎಂ. ಪ್ರದೀಪ್ ಕುಮಾರ್ 6554, ಚಿತ್ರದುರ್ಗದಲ್ಲಿ ಎನ್.ಟಿ. ವಿಜಯಕುಮಾರ್ 8,707, ಲೋಕೇಶ್ ಎಂ.ಕೆ. 7,026, ಎಲ್. ವೇಣುಗೋಪಾಲ್ 6379, ದಾವಣಗೆರೆಯಲ್ಲಿ ಮಂಜುನಾಥ ಮಾರಿಕೊಪ್ಪ 5,947, ಧಾರವಾಡದಲ್ಲಿ ಸೋಮಶೇಖರ್ ಪೀರ್ಜಿ ಯಾದವ್ 5400, ಕಲಬುರುಗಿಯಲ್ಲಿ ರಮೇಶ್ ಭೀಮಸಿಂಗ್ ಚವಾಣ್ 5,056, ಹಾವೇರಿಯಲ್ಲಿ ಹನುಮಂತಪ್ಪ ಡಿ. ಕಬ್ಬಾರ್ 6247 ಮತ್ತು ಸಿದ್ದಪ್ಪ ಕಲ್ಲಪ್ಪ ಪೂಜಾರ್ 5858, ಕೊಪ್ಪಳದಲ್ಲಿ ಸುರೇಶ್ ಗೌಡ ಮುಂದಿನಮನೆ 5157, ಮಂಡ್ಯದಲ್ಲಿ ಎಂ.ಎಲ್. ಶಶಿಕುಮಾರ್ 18,323, ಸುಮಲತಾ ಪಿ. 8902, ಎಂ. ಸುಮಲತಾ 8542, ಸಿ. ಲಿಂಗೇಗೌಡ 6,408, ಗುರುಲಿಂಗಯ್ಯ 6322, ಮೈಸೂರಿನಲ್ಲಿ ಶ್ರೀನಿವಾಸಯ್ಯ 6863, ಶಿವಮೊಗ್ಗದಲ್ಲಿ ಶಶಿಕುಮಾರ್ ಎಸ್. ಗೌಡ 6845, ತುಮಕೂರಿನಲ್ಲಿ ಸಿದ್ದರಾಮೇಗೌಡ ಟಿ.ಬಿ. 7637, ಉಡುಪಿ ಚಿಕ್ಕಮಗಳೂರಿನಲ್ಲಿ ಅಮೃತಾ ಶೆಣೈ 7981, ಅಬ್ದುಲ್ ರೆಹಮಾನ್ 6017, ಉತ್ತರ ಕನ್ನಡದಲ್ಲಿ ನಾಗರಾಜ್ ಅನಂದ್ ಶಿರಾಲಿ 6254 ಮತ ಗಳಿಸುವಲ್ಲಿ ಸಫಲರಾಗಿದ್ದಾರೆ. ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಿದ್ದ ವಾಟಾಳ್ ನಾಗರಾಜ್ 2510 ಮತ ಪಡೆದಿದ್ದಾರೆ.
ಒಟ್ಟಾರೆ ಮತ ಹಂಚಿಕೆ
ಈ ಸಾರಿ ಲೋಕಸಭೆ ಚುನಾವಣೆಯಲ್ಲಿ ಮತ ಹಂಚಿಕೆ ಗಮನಿಸಿದರೆ ಪಕ್ಷೇತರರಿಗೆ ಕೇವಲ ಶೇ. 5.04ರಷ್ಟು ಮಾತ್ರ ಮತ ಲಭಿಸಿದೆ. ಬಿಜೆಪಿ ಸಿಂಹಪಾಲು ಅಂದರೆ ಶೇ. 51.38, ಕಾಂಗ್ರೆಸ್ ಶೇ.31.88, ಜೆಡಿಎಸ್ ಶೇ. 9.67, ಬಿಎಸ್ಪಿ ಶೇ.1.17, ಸಿಪಿಐ ಮತ್ತು ಇಪಿಎಂಗಳು ತಲಾ ಶೇ.0.05, ನೋಟಾ ಶೇ.071, ಎಸ್ಎಚ್ಎಸ್ ಶೇ. 0.04 ಮತಗಳಿಸಿವೆ. ಉತ್ತಮ ಪ್ರಜಾಕೀಯ ಪಕ್ಷ ಗಣನೆಗೂ ಬಾರದ ಹಿನ್ನಡೆ ಅನುಭವಿಸಿದೆ.
Conclusion:NEWS

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.