ETV Bharat / state

ಗ್ಲೋಬಲ್ ಚಾಂಪ್ಸ್.. ಹಳ್ಳಿ ಮಕ್ಕಳ ಮುಡಿಗೆ ಚಾಂಪಿಯನ್ ಕಿರೀಟ - ಗ್ಲೋಬಲ್ ಚಾಂಪ್ಸ್

ಈ ವಿದ್ಯಾರ್ಥಿಗಳು ಪ್ರವಾಹದಿಂದ ನಾಶವಾಗದ ಮನೆಗಳನ್ನು ವಿನ್ಯಾಸಗೊಳಿಸುವ ಮೂಲಕ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದು ಬೀಗಿದ್ದಾರೆ.

Students who won the Young Earth Champions award
ಯಂಗ್ ಅರ್ಥ್ ಚಾಂಪಿಯನ್ಸ್ ಪ್ರಶಸ್ತಿ ಗೆದ್ದ ವಿದ್ಯಾರ್ಥಿಗಳು
author img

By

Published : Dec 1, 2022, 2:18 PM IST

ಬೀದರ್: ಗಡಿ ಜಿಲ್ಲೆ ಬೀದರ್​ನ ಭಾಲ್ಕಿ ತಾಲೂಕಿನ ಕುಂಟೆಸಿರ್ಸೆ ಗ್ರಾಮದ ವೇದಾಂತ ಅಲ್ಲಮಪ್ರಭು ಆನಂದವಾಡಿ ಹಾಗೂ ಅವರ ಐದು ಜನರ ತಂಡ ವಿಶ್ವದ ಅತ್ಯುತ್ತಮ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಯೊಡ್ಡಿ 2022ರ ಯಂಗ್ ಅರ್ಥ್ ಚಾಂಪಿಯನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಗ್ಲೋಬಲ್ ಚಾಂಪ್ಸ್ ಆಗಿ ಹೊರಹೊಮ್ಮಿದ್ದಾರೆ.

ಈ ವಿದ್ಯಾರ್ಥಿಗಳು ಹೈದರಾಬಾದ್​ನ ಮಹೀಂದ್ರ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.​ ಪ್ಯಾರಿಸ್‌ನಲ್ಲಿರುವ ಯುನೆಸ್ಕೋ ಪ್ರಧಾನ ಕಚೇರಿಯಿಂದ ಪ್ರಶಸ್ತಿ ಜೊತೆಗೆ ನಗದು ಹಣವನ್ನೂ ಸ್ವೀಕರಿಸಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳ ಸಾಧನೆಗೆ ಪಂಚಮಸಾಲಿ ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅಂಭಿನಂದಿಸಿದ್ದಾರೆ.

ಗ್ಲೋಬಲ್ ಚಾಂಪ್ಸ್: ಹಳ್ಳಿ ಮಕ್ಕಳ ಮುಡಿಗೆ ಚಾಂಪಿಯನ್ ಕಿರೀಟ

ಈ ವಿದ್ಯಾರ್ಥಿಗಳು ಪ್ರವಾಹದಿಂದ ನಾಶವಾಗದ ಮನೆಗಳನ್ನು ವಿನ್ಯಾಸಗೊಳಿಸುವ ಮೂಲಕ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಈ ಒಂದು ಸ್ಪರ್ಧೆಯಲ್ಲಿ ವಿಶ್ವದ 500ಕ್ಕೂ ಹೆಚ್ಚು ಅತ್ಯುತ್ತಮ ಕಾಲೇಜುಗಳು, 15ಕ್ಕೂ ಹೆಚ್ಚು ವಿಶ್ವದ ಟಾಪ್ 15ರಲ್ಲಿ ಗುರುತಿಸಿಕೊಂಡಿದ್ದ ವಿಶ್ವವಿದ್ಯಾಲಯಗಳ ಮಕ್ಕಳು ಭಾಗವಹಿಸಿದ್ದರು.

ಬೀದರ್ ಮೂಲದ ವಿದ್ಯಾರ್ಥಿ ವೇದಾಂತ್ ಡಾ. ಪ್ರಭು ಮತ್ತು ಡಾ. ವಿಜಯಲಕ್ಷ್ಮಿ ಆನಂದವಾಡೆ ಅವರ ಮಗ. ಈ ಬೀದರ್ ಮೂಲದ ವೇದಾಂತ್ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಈ ಯಂಗ್ ಅರ್ಥ್ ಚಾಂಪಿಯನ್​ಶಿಪ್​ ಗೆದ್ದುಕೊಂಡ ಮೊದಲ ವಿದ್ಯಾರ್ಥಿಯಾಗಿದ್ದಾನೆ.

ಇದನ್ನೂ ಓದಿ: ಎಸ್.ಎಂ.ಕೆ, ನಾರಾಯಣ ಮೂರ್ತಿ, ಪ್ರಕಾಶ್ ಪಡುಕೋಣೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಬೀದರ್: ಗಡಿ ಜಿಲ್ಲೆ ಬೀದರ್​ನ ಭಾಲ್ಕಿ ತಾಲೂಕಿನ ಕುಂಟೆಸಿರ್ಸೆ ಗ್ರಾಮದ ವೇದಾಂತ ಅಲ್ಲಮಪ್ರಭು ಆನಂದವಾಡಿ ಹಾಗೂ ಅವರ ಐದು ಜನರ ತಂಡ ವಿಶ್ವದ ಅತ್ಯುತ್ತಮ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಯೊಡ್ಡಿ 2022ರ ಯಂಗ್ ಅರ್ಥ್ ಚಾಂಪಿಯನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಗ್ಲೋಬಲ್ ಚಾಂಪ್ಸ್ ಆಗಿ ಹೊರಹೊಮ್ಮಿದ್ದಾರೆ.

ಈ ವಿದ್ಯಾರ್ಥಿಗಳು ಹೈದರಾಬಾದ್​ನ ಮಹೀಂದ್ರ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.​ ಪ್ಯಾರಿಸ್‌ನಲ್ಲಿರುವ ಯುನೆಸ್ಕೋ ಪ್ರಧಾನ ಕಚೇರಿಯಿಂದ ಪ್ರಶಸ್ತಿ ಜೊತೆಗೆ ನಗದು ಹಣವನ್ನೂ ಸ್ವೀಕರಿಸಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳ ಸಾಧನೆಗೆ ಪಂಚಮಸಾಲಿ ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅಂಭಿನಂದಿಸಿದ್ದಾರೆ.

ಗ್ಲೋಬಲ್ ಚಾಂಪ್ಸ್: ಹಳ್ಳಿ ಮಕ್ಕಳ ಮುಡಿಗೆ ಚಾಂಪಿಯನ್ ಕಿರೀಟ

ಈ ವಿದ್ಯಾರ್ಥಿಗಳು ಪ್ರವಾಹದಿಂದ ನಾಶವಾಗದ ಮನೆಗಳನ್ನು ವಿನ್ಯಾಸಗೊಳಿಸುವ ಮೂಲಕ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಈ ಒಂದು ಸ್ಪರ್ಧೆಯಲ್ಲಿ ವಿಶ್ವದ 500ಕ್ಕೂ ಹೆಚ್ಚು ಅತ್ಯುತ್ತಮ ಕಾಲೇಜುಗಳು, 15ಕ್ಕೂ ಹೆಚ್ಚು ವಿಶ್ವದ ಟಾಪ್ 15ರಲ್ಲಿ ಗುರುತಿಸಿಕೊಂಡಿದ್ದ ವಿಶ್ವವಿದ್ಯಾಲಯಗಳ ಮಕ್ಕಳು ಭಾಗವಹಿಸಿದ್ದರು.

ಬೀದರ್ ಮೂಲದ ವಿದ್ಯಾರ್ಥಿ ವೇದಾಂತ್ ಡಾ. ಪ್ರಭು ಮತ್ತು ಡಾ. ವಿಜಯಲಕ್ಷ್ಮಿ ಆನಂದವಾಡೆ ಅವರ ಮಗ. ಈ ಬೀದರ್ ಮೂಲದ ವೇದಾಂತ್ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಈ ಯಂಗ್ ಅರ್ಥ್ ಚಾಂಪಿಯನ್​ಶಿಪ್​ ಗೆದ್ದುಕೊಂಡ ಮೊದಲ ವಿದ್ಯಾರ್ಥಿಯಾಗಿದ್ದಾನೆ.

ಇದನ್ನೂ ಓದಿ: ಎಸ್.ಎಂ.ಕೆ, ನಾರಾಯಣ ಮೂರ್ತಿ, ಪ್ರಕಾಶ್ ಪಡುಕೋಣೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.