ETV Bharat / state

ಜಾತ್ರೆ ಕರ್ತವ್ಯದಲ್ಲಿದ್ದ ಎಎಸ್​ಐ ಹೃದಯಾಘಾತದಿಂದ ಸಾವು - ASI heart attack death

ಜಾತ್ರೆ ನಿಮಿತ್ತ ಬಂದೋಬಸ್ತ್​ಗಾಗಿ ನಿಯೋಜನೆಗೊಂಡಿದ್ದ ಎಎಸ್‌ಐವೋರ್ವರು ಕರ್ತವ್ಯನಿರತರಾಗಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಮಂಠಾಳದಲ್ಲಿ ನಡೆದಿದೆ.

ಹೃದಯಾಘಾತದಿಂದ ಎಎಸ್​ಐ ಸಾವು, Death of a ASI by heart attack
ಹೃದಯಾಘಾತದಿಂದ ಎಎಸ್​ಐ ಸಾವು
author img

By

Published : Jan 5, 2020, 9:00 PM IST

ಬಸವಕಲ್ಯಾಣ(ಬೀದರ್​): ಜಾತ್ರೆ ನಿಮಿತ್ತ ಬಂದೋಬಸ್ತ್​ಗಾಗಿ ನಿಯೋಜನೆಗೊಂಡಿದ್ದ ಎಎಸ್‌ಐವೋರ್ವರು ಕರ್ತವ್ಯನಿರತರಾಗಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಮಂಠಾಳನಲ್ಲಿ ನಡೆದಿದೆ.

ಲಕ್ಷ್ಮಣರಾವ ಮಾನೆ (58) ಎಂಬುವರೆ ಮೃತ ಪೊಲೀಸ್ ಅಧಿಕಾರಿಯಾಗಿದ್ದಾರೆ. ಹಾರಕೂಡ ಜಾತ್ರೆ ನಿಮಿತ್ತ ಬಂದೋಬಸ್ತ್​ಗಾಗಿ ಲಕ್ಷ್ಮಣರಾವಗೆ ಶನಿವಾರ ತಡ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಕಲಬುರಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದವರಾಗಿದ್ದ ಲಕ್ಷ್ಮಣರಾವ್​ ಈ ಹಿಂದೆ ಇಲ್ಲಿಯ ನಗರ ಠಾಣೆ, ಸಂಚಾರಿ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಕೆಲ ತಿಂಗಳ ಹಿಂದೆ ಮಂಠಾಳ ಠಾಣೆಗೆ ವರ್ಗಾವಣೆಗೊಂಡು ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಂತರ ಕೆಲ ದಿನಗಳ ಹಿಂದೆಯಷ್ಟೇ ಇವರನ್ನು ಎಎಸ್‌ಐ ಹುದ್ದೆಗೆ ಬಡ್ತಿ ನೀಡಿ ಬೀದರ್​​ನ ಗಾಂಧಿ ಗಂಜ್ ಠಾಣೆಗೆ ವರ್ಗಾವಣೆಗೊಳಿಸಲಾಗಿತ್ತು. ಆದರೆ ಲಕ್ಷ್ಮಣರಾವ್​ ಜಾತ್ರೆ ಬಂದೋಬಸ್ತ್​ಗಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕಾರಣ ಪೇದೆ ಹುದ್ದೆಯಿಂದ ಬಿಡುಗಡೆಗೊಳಿಸಲು ಸಾಧ್ಯವಾಗಿರಲಿಲ್ಲವಂತೆ. ಎಎಸ್‌ಐ ಆಗಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ದುರಂತ ಸಂಭವಿಸಿದೆ.

ಬಸವಕಲ್ಯಾಣ(ಬೀದರ್​): ಜಾತ್ರೆ ನಿಮಿತ್ತ ಬಂದೋಬಸ್ತ್​ಗಾಗಿ ನಿಯೋಜನೆಗೊಂಡಿದ್ದ ಎಎಸ್‌ಐವೋರ್ವರು ಕರ್ತವ್ಯನಿರತರಾಗಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಮಂಠಾಳನಲ್ಲಿ ನಡೆದಿದೆ.

ಲಕ್ಷ್ಮಣರಾವ ಮಾನೆ (58) ಎಂಬುವರೆ ಮೃತ ಪೊಲೀಸ್ ಅಧಿಕಾರಿಯಾಗಿದ್ದಾರೆ. ಹಾರಕೂಡ ಜಾತ್ರೆ ನಿಮಿತ್ತ ಬಂದೋಬಸ್ತ್​ಗಾಗಿ ಲಕ್ಷ್ಮಣರಾವಗೆ ಶನಿವಾರ ತಡ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಕಲಬುರಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದವರಾಗಿದ್ದ ಲಕ್ಷ್ಮಣರಾವ್​ ಈ ಹಿಂದೆ ಇಲ್ಲಿಯ ನಗರ ಠಾಣೆ, ಸಂಚಾರಿ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಕೆಲ ತಿಂಗಳ ಹಿಂದೆ ಮಂಠಾಳ ಠಾಣೆಗೆ ವರ್ಗಾವಣೆಗೊಂಡು ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಂತರ ಕೆಲ ದಿನಗಳ ಹಿಂದೆಯಷ್ಟೇ ಇವರನ್ನು ಎಎಸ್‌ಐ ಹುದ್ದೆಗೆ ಬಡ್ತಿ ನೀಡಿ ಬೀದರ್​​ನ ಗಾಂಧಿ ಗಂಜ್ ಠಾಣೆಗೆ ವರ್ಗಾವಣೆಗೊಳಿಸಲಾಗಿತ್ತು. ಆದರೆ ಲಕ್ಷ್ಮಣರಾವ್​ ಜಾತ್ರೆ ಬಂದೋಬಸ್ತ್​ಗಾಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕಾರಣ ಪೇದೆ ಹುದ್ದೆಯಿಂದ ಬಿಡುಗಡೆಗೊಳಿಸಲು ಸಾಧ್ಯವಾಗಿರಲಿಲ್ಲವಂತೆ. ಎಎಸ್‌ಐ ಆಗಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ದುರಂತ ಸಂಭವಿಸಿದೆ.

Intro:
ಎರಡು ಚಿತ್ರ ಕಳಿಸಲಾಗಿದೆ

ಬಸವಕಲ್ಯಾಣ: ಕರ್ತವ್ಯ ನಿರತ ಎಎಸ್‌ಐ ಯೊಬ್ಬರು ಹೃದಯಾಘಾತದಿಂದ ಪೃತಪಟ್ಟ ಘಟನೆ ತಾಲೂಕಿನ ಮಂಠಾಳನಲ್ಲಿ ನಡೆದಿದೆ.
ಮಂಠಾಳ ಪೊಲೀಸ್ ಠಾಣೆ ಕರ್ತವ್ಯ ನಿರ್ವಹಿಸುತಿದ್ದ ಲಕ್ಷö್ಮಣರಾವ ಮಾನೆ(೫೮) ಮೃತ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಮೂಲತಃ ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದವರಾಗಿದ್ದ ಲಕ್ಷö್ಮಣರಾವ ಅವರು ಇಲ್ಲಿಯ ನಗರ ಠಾಣೆ, ಸಂಚಾರಿ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಅನೇಕ ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದು, ಕೆಲ ತಿಂಗಳ ಹಿಂದೆ ಮಂಠಾಳ ಠಾಣೆಗೆ ವರ್ಗಾವಣೆಗೊಂಡು ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತಿದ್ದರು.
ಕೆಲ ದಿನಗಳ ಹಿಂದೆಯಷ್ಟೇ ಇವರನ್ನು ಮುಖ್ಯ ಪೇದೆ ಹುದ್ದೆಯಿಂದ ಎಎಸ್‌ಐ ಹುದ್ದೆಗೆ ಬಡ್ತಿನೀಡಿ ಬೀದರನ ಗಾಂಧಿ ಗಂಜ್ ಠಾಣೆಗೆ ವರ್ಗಾವಣೆಗೊಳಿಸಲಾಗಿತ್ತು. ಆದರೆ ಹಾರಕೂಡ ಜಾತ್ರೆ ನಿಮಿತ್ತ ಬಂದೋಬಸ್ತ್ಗಾಗಿ ಅವರನ್ನು ಕರ್ತವ್ಯಕ್ಕೆ ನೊಯೋಜಿಸಿದ ಕಾರಣ ಕರ್ತವ್ಯದಿಂದ ಬಿಡುಗಡೆಗೊಳಿಸಲು ಸಾಧ್ಯವಾಗಿರಲಿಲ್ಲ.
ಹಾರಕೂಡ ಜಾತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಶನಿವಾರ ತಡ ರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರನ್ನು ಕಲಬುರಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.



ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ


Body:UDAYAKUMAR MULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.