ETV Bharat / state

ಕೆಲಸ ಮಾಡಲಾಗದವರು ಜಾಗ ಖಾಲಿ ಮಾಡಿ: ಶಾಸಕ ನಾರಾಯಣರಾವ್​ ಖಡಕ್ ಸೂಚನೆ - ಬೀದರ್ ಬಸವಕಲ್ಯಾಣ ಕೆಡಿಪಿ ಸುದ್ದಿ

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ಅಭಿವೃದ್ಧಿ ಇಲಾಖೆಗಳಲ್ಲಿ ಕೆಲಸ ಮಾಡುವವರು ಜವಾಬ್ದಾರಿ ಅರಿಯಬೇಕು. ಆಗದವರು ತಕ್ಷಣ ಜಾಗ ಖಾಲಿ ಮಾಡಬೇಕು ಎಂದು ಶಾಸಕ ಬಿ. ನಾರಾಯಣರಾವ್​ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

bidar-basavakalyana-kdp-meeting
ಬಸವಕಲ್ಯಾಣ ಕೆಡಿಪಿ ಸಭೆ
author img

By

Published : Dec 24, 2019, 8:32 AM IST

ಬಸವಕಲ್ಯಾಣ: ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ಅಭಿವೃದ್ಧಿ ಇಲಾಖೆಗಳ ಪಾತ್ರ ಮಹತ್ವದ್ದಾಗಿದೆ. ಈ ಇಲಾಖೆಯಲ್ಲಿ ಕೆಲಸ ಮಾಡುವವರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು, ಆಗದವರು ತಕ್ಷಣ ಜಾಗ ಖಾಲಿ ಮಾಡಬೇಕೆಂದು ಶಾಸಕ ಬಿ. ನಾರಾಯಣರಾವ ಖಡಕ್ ಎಚ್ಚರಿಕೆ ನೀಡಿದರು.

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಯಾವ ಊರಲ್ಲಿ ಗುಡಿ, ಗುಂಡಾರಗಳು ಹೇಗಿವೆ ಅಂತ ನಾನು ನೋಡಲ್ಲ. ಅಲ್ಲಿನ ಶಾಲೆ ಹೇಗಿದೆ ಅಂತ ನೋಡುವೆ. ಊರಲ್ಲಿ ಪೀಠಾಧಿಪತಿ ಎಂಥವರಿದ್ದಾರೆ ಅನ್ನೋದು ನನಗೆ ಬೇಕಾಗಿಲ್ಲ, ಅಲ್ಲಿನ ಶಿಕ್ಷಕರು ಎಂಥವರಿದ್ದಾರೆ ಅನ್ನೋದನ್ನು ಮಾತ್ರ ನಾನು ನೋಡುವೆ ಎಂದು ತಿಳಿಸಿದರು.

ಬಸವಕಲ್ಯಾಣ ಕೆಡಿಪಿ ಸಭೆ

ಶಾಲೆ ಚನ್ನಾಗಿದ್ರೆ ಆ ಊರಿನ ದರಿದ್ರ ದೂರವಾಗುತ್ತೆ. ಆದ್ರೆ ಶಿಕ್ಷಕರಿಗೆ ಮಕ್ಕಳ ಅಭ್ಯಾಸ, ಶಾಲೆಯ ಅಭಿವೃದ್ಧಿ ಬಗ್ಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ಹೀಗಾದರೆ ಗ್ರಾಮಗಳು ಉದ್ದಾರ ಆಗೋದು ಯಾವಾಗ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಸಕರು ಕ್ಲಾಸ್ ತೆಗೆದುಕೊಂಡರು.

ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಅಲ್ಲದೆ ಶಾಲೆ ಮೂಲ ಸೌಕರ್ಯಗಳಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ತಕ್ಷಣ ಅನುದಾನ ಕಲ್ಪಿಸಲಾಗುವುದು ಎಂದು ತಿಳಿಸಿದರು. ಅನಿರೀಕ್ಷಿತ ಭೇಟಿ ನೀಡಲಾಗುವುದು ಎಂದು ಎಚ್ಚರಿಸಿದರು.

ಬಿಇಓ ಸಿ.ಜಿ. ಹಳ್ಳದ ಮಾತನಾಡಿ, ಎಸ್​​ಎಸ್​ಎಲ್​ಸಿ ಫಲಿತಾಂಶ ಸುಧಾರಣೆಗಾಗಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಂದ ಈಗಾಗಲೇ ಕಾರ್ಯಗಾರ ನಡೆಸಲಾಗಿದೆ. ಫೋನ್​ ಇನ್ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ತಹಶಶೀಲ್ದಾರ ಸಾವಿತ್ರಿ ಸಲಗರ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಓಂಪ್ರಕಾಶ್​ ಪಾಟೀಲ್​, ಇಒ ಮಡೋಳಪ್ಪ ಪಿ.ಎಸ್ ಉಪಸ್ಥಿತರಿದ್ದರು. ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಇಲಾಖಾವಾರು ವರದಿ ಒಪ್ಪಿಸಿದರು.

ಬಸವಕಲ್ಯಾಣ: ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ಅಭಿವೃದ್ಧಿ ಇಲಾಖೆಗಳ ಪಾತ್ರ ಮಹತ್ವದ್ದಾಗಿದೆ. ಈ ಇಲಾಖೆಯಲ್ಲಿ ಕೆಲಸ ಮಾಡುವವರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು, ಆಗದವರು ತಕ್ಷಣ ಜಾಗ ಖಾಲಿ ಮಾಡಬೇಕೆಂದು ಶಾಸಕ ಬಿ. ನಾರಾಯಣರಾವ ಖಡಕ್ ಎಚ್ಚರಿಕೆ ನೀಡಿದರು.

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಯಾವ ಊರಲ್ಲಿ ಗುಡಿ, ಗುಂಡಾರಗಳು ಹೇಗಿವೆ ಅಂತ ನಾನು ನೋಡಲ್ಲ. ಅಲ್ಲಿನ ಶಾಲೆ ಹೇಗಿದೆ ಅಂತ ನೋಡುವೆ. ಊರಲ್ಲಿ ಪೀಠಾಧಿಪತಿ ಎಂಥವರಿದ್ದಾರೆ ಅನ್ನೋದು ನನಗೆ ಬೇಕಾಗಿಲ್ಲ, ಅಲ್ಲಿನ ಶಿಕ್ಷಕರು ಎಂಥವರಿದ್ದಾರೆ ಅನ್ನೋದನ್ನು ಮಾತ್ರ ನಾನು ನೋಡುವೆ ಎಂದು ತಿಳಿಸಿದರು.

ಬಸವಕಲ್ಯಾಣ ಕೆಡಿಪಿ ಸಭೆ

ಶಾಲೆ ಚನ್ನಾಗಿದ್ರೆ ಆ ಊರಿನ ದರಿದ್ರ ದೂರವಾಗುತ್ತೆ. ಆದ್ರೆ ಶಿಕ್ಷಕರಿಗೆ ಮಕ್ಕಳ ಅಭ್ಯಾಸ, ಶಾಲೆಯ ಅಭಿವೃದ್ಧಿ ಬಗ್ಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ಹೀಗಾದರೆ ಗ್ರಾಮಗಳು ಉದ್ದಾರ ಆಗೋದು ಯಾವಾಗ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಸಕರು ಕ್ಲಾಸ್ ತೆಗೆದುಕೊಂಡರು.

ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಅಲ್ಲದೆ ಶಾಲೆ ಮೂಲ ಸೌಕರ್ಯಗಳಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ತಕ್ಷಣ ಅನುದಾನ ಕಲ್ಪಿಸಲಾಗುವುದು ಎಂದು ತಿಳಿಸಿದರು. ಅನಿರೀಕ್ಷಿತ ಭೇಟಿ ನೀಡಲಾಗುವುದು ಎಂದು ಎಚ್ಚರಿಸಿದರು.

ಬಿಇಓ ಸಿ.ಜಿ. ಹಳ್ಳದ ಮಾತನಾಡಿ, ಎಸ್​​ಎಸ್​ಎಲ್​ಸಿ ಫಲಿತಾಂಶ ಸುಧಾರಣೆಗಾಗಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಂದ ಈಗಾಗಲೇ ಕಾರ್ಯಗಾರ ನಡೆಸಲಾಗಿದೆ. ಫೋನ್​ ಇನ್ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ತಹಶಶೀಲ್ದಾರ ಸಾವಿತ್ರಿ ಸಲಗರ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಓಂಪ್ರಕಾಶ್​ ಪಾಟೀಲ್​, ಇಒ ಮಡೋಳಪ್ಪ ಪಿ.ಎಸ್ ಉಪಸ್ಥಿತರಿದ್ದರು. ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಇಲಾಖಾವಾರು ವರದಿ ಒಪ್ಪಿಸಿದರು.

Intro:ಒಂದು ವಿಡಿಯೊ ಕಳಿಸಲಾಗಿದೆ



ಬಸವಕಲ್ಯಾಣ: ಶೈಕ್ಷಣಿಕ ಪ್ರಗತಿಯಿಂದ ಮಾತ್ರ ತಾಲೂಕಿನ ಪ್ರಗತಿ ಸಾಧ್ಯ. ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ಅಭಿವೃದ್ದಿ ಇಲಾಖೆಗಳೆ ಪಾತ್ರ ಮಹತ್ವದ್ದಾಗಿದೆ. ಈ ಇಲಾಖೆಯಲ್ಲಿ ಕೆಲಸ ಮಾಡುವವರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಕೆಲಸ ಮಾಡಲು ಆಗದವರು ತಕ್ಷಣ ಜಾಗಾ ಖಾಲಿ ಮಾಡಬೇಕು ಎಂದು ಶಾಸಜ ಬಿ.ನಾರಾಯಣರಾವ ಖಡಕ್ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಯಾವ ಊರಲ್ಲಿ ಗುಡಿ, ಗುಂಡಾರಗಳು ಹೇಗಿವೆ ಅಂತ ನಾನು ನೋಡಲ್ಲ, ಅಲ್ಲಿನ ಶಾಲೆ ಹೇಗಿದೆ ಅಂತ ನೋಡುವೆ. ಊರಲ್ಲಿ ಪೀಠಾಧಿಪತಿ ಎಂಥವರಿದ್ದಾರೆ ಅನ್ನೊದು ನನಗೆ ಬೇಕಾಗಿಲ್ಲ, ಅಲ್ಲಿನ ಶಿಕ್ಷಕರು ಎಂಥವರಿದ್ದಾರೆ ಅನ್ನೊದು ಮಾತ್ರ ನಾನು ನೋಡುವೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಗೆ ಇಲಾಖೆ ವರದಿ ಒಪ್ಪಿಸುವಾಗ ಮಧ್ಯೆ ಪ್ರವೇಶಿಸಿದ ಶಾಸಕರು, ಊರಲ್ಲಿ ಸ್ಕೂಲ್ ಚನ್ನಾಗಿ ಇದ್ರೆ ಆ ಊರಿನ ದಾರಿದ್ಯç ದೂರವಾಗುತ್ತೆ. ಆದರೆ ಶಾಲೆಯಲ್ಲಿಯ ಶಿಕ್ಷಕರಿಗೆ ಮಕ್ಕಳಿಗೆ ಅಭ್ಯಾಸ ಮಾಡಿಸುವುದು, ಶಾಲೆ ಮೂಲ ಸೌಕರ್ಯಗಳನ್ನು ಅಭಿವೃದ್ದಿಪಡಿಸುವ ಬಗ್ಗೆ ಕಾಳಜಿ ವಹಿಸುವುದು ತಮಗೆ ಸಂಬAದವಿಲ್ಲದ ವಿಷಯ ಎನ್ನುವಂತೆ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ಹಿಗಾದ್ರೆ ಗ್ರಾಮಗಳು ಉದ್ದಾರ ಆಗೋದು ಯಾವಾಗ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಪ್ರಸಂಗ ಜರಗಿತು.
ಹಳೆ ಕಟ್ಟಡ ಡೆಮಾಲಿಶ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಆದ್ರೆ ಅನೇಕ ಶಾಲೆಗಳಲ್ಲಿ ಹಳೆ ಕಟ್ಟಡಗಳನ್ನು ಹಾಗೇ ಇಟ್ಟು ಖಾಲಿ ಇರುವ ಸ್ಥಳಗಳಲ್ಲಿ ಹೊಸ ಕಟ್ಟಡ ನಿರ್ಮಾಣಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ಖಾಲಿ ಇರುವ ಸ್ಥಳದಲ್ಲಿ ಕುಳಬಾನ ಕಟ್ಟಿದ ಹಾಗೆ ಖಾಲಿ ಇದ್ದ ಸ್ಥಳದಲ್ಲಿ ಹೊಸ ಕಟ್ಟಡ ಕಟ್ಟಿದ್ರೆ ಶಾಲೆಗೆ ಕಳೆ ಬರಲು ಹೇಗೆ ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಹಳೆ ಕಟ್ಟಡಗಳನ್ನು ಡೇಮಾಲಿಶ ಮಾಡಿ, ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.
ಶಾಲೆಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ, ಕುಡಿಯುವ ನೀರು, ವಿದ್ಯುತ್, ಕೌಂಪಾAಡ್ ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ಅಗತ್ಯವಿರುವ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದಲ್ಲಿ ತಕ್ಷಣ ಅನುದಾನ ಕಲ್ಪಿಸಲಾಗುವದು ಎಂದರು.
ಬಿಇಓ ಸಿ.ಜಿ.ಹಳ್ಳದ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಂದ ಈಗಾಗಲೇ ಕಾರ್ಯಗಾರ ನಡೆಸಲಾಗಿದೆ. ಫೋನಇನ್ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಶೈಕ್ಷಣಿಕ ಪ್ರಗತಿಗೆ ಪೂರಕವಾತಾವರಣ ನಿರ್ಮಾಣ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಮಧ್ಯಾಹ್ನದ ಬಿಸಿಯೂಟದಲ್ಲಿ ತರಕಾರಿ ಬಳಸುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಬಿಸಿಯೂಟದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ ತಿಳಿಸಿದರು. ಜನೆವರಿಯಿಂದ ಶಾಲೆಗಳಿಗೆ ಅನಿರೀಕ್ಷಿತ ಬೇಟಿ ನೀಡಲಾಗುವದು. ಶಾಲೆಯಲ್ಲಿ ಅವ್ಯವಸ್ಥೆ ಕಂಡು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವದು ಎಂದು ಶಾಸಕ ನಾರಾಯಣರಾವ ತಿಳಿಸಿದರು.
ಬೆಸಿಗೆ ಕಾಲ ಸಮಿಪಿಸುತ್ತಿದೆ, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಅವರಿಗೆ ಶಾಸಕರು ಸೂಚಿಸಿದರು.
ತಹಶಶೀಲ್ದಾರ ಸಾವಿತ್ರಿ ಸಲಗರ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಇಒ ಮಡೋಳಪ್ಪ ಪಿ.ಎಸ್ ಉಪಸ್ಥಿತರಿದ್ದರು. ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಇಲಾಖಾವಾರು ವರದಿ ಒಪ್ಪಿಸಿದರು.


ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ
Body:UDAYAKUMAR MULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.