ETV Bharat / state

ಗಣಿನಾಡಿನ ವಕೀಲರೊಬ್ಬರ ಭಾಷಾಭಿಮಾನ... ಕನ್ನಡದಲ್ಲೇ ವಾದ - ಪ್ರತಿವಾದ ಮಂಡನೆ - ಕರ್ನಾಟಕ ನ್ಯಾಯಾಲಯ ವ್ಯವಸ್ಥೆ

ಬಳ್ಳಾರಿಯ ಹಿರಿಯ ವಕೀಲರೊಬ್ಬರು ಎಲ್ಲಾ ಕಾನೂನಾತ್ಮಕ ಹೋರಾಟ ಹಾಗೂ ವಾದ - ಪ್ರತಿವಾದವನ್ನು ಕನ್ನಡದಲ್ಲೇ ಮಾಡುತ್ತಾ, ತಮ್ಮ ಕನ್ನಡ ಭಾಷಾಭಿಮಾನ ಮೆರೆಯುತ್ತಿದ್ದಾರೆ.

advocate
advocate
author img

By

Published : Oct 31, 2020, 6:09 PM IST

ಬಳ್ಳಾರಿ: ಸತತ ಎರಡೂವರೆ ದಶಕದಿಂದಲೂ ವಕೀಲ ವೃತ್ತಿಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಗಣಿನಾಡಿನ ಹಿರಿಯ ವಕೀಲರೊಬ್ಬರು ವಿಶೇಷ ರೀತಿಯಲ್ಲಿ ಕನ್ನಡ ಭಾಷಾಭಿಮಾನ ವ್ಯಕ್ತಪಡಿಸುತ್ತದ್ದಾರೆ.

ಕರ್ನಾಟಕ ನ್ಯಾಯಾಲಯದ ವ್ಯವಸ್ಥೆಯಲ್ಲಿ ಆಡಳಿತ ಭಾಷೆ ಕನ್ನಡ ಭಾಷೆಯಾಗಿ ಸಮರ್ಪಕವಾಗಿ ಜಾರಿಯಾಗಿದೆಯೋ ಇಲ್ಲವೋ ತಿಳಿಯದು. ಆದರೆ, ಗಣಿನಗರಿಯ ಈ ಹಿರಿಯ ವಕೀಲರೊಬ್ಬರ ಕಾರ್ಯದಲ್ಲಿ ಮಾತ್ರ ಕನ್ನಡ ಭಾಷೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿದೆ.

ವಕೀಲರೊಬ್ಬರ ಕನ್ನಡ ಭಾಷಾಭಿಮಾನ

ಯಾಕಂದ್ರೆ ಈ ಹಿರಿಯ ವಕೀಲರು ತಮ್ಮ ಎಲ್ಲಾ ಕಾನೂನಾತ್ಮಕ ಹೋರಾಟ ಹಾಗೂ ವಾದ - ಪ್ರತಿವಾದವನ್ನು ಕನ್ನಡದಲ್ಲೇ ಮಾಡುತ್ತಾರೆ. ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ‌ ಅಲ್ಲಿಯ ತಮಿಳು - ಮರಾಠಿ ಭಾಷೆಗಳೇ ಆಡಳಿತ ಭಾಷೆಯನ್ನಾಗಿಸಿಕೊಂಡು ಸಮರ್ಪಕವಾಗಿ ಜಾರಿಗೆ ತಂದಿರೋದೇ ನನಗೆ ಪ್ರೇರಣೆಯಾಯಿತು ಎನ್ನುತ್ತಾರೆ ಹಿರಿಯ ವಕೀಲ ಮಂಜುನಾಥ ಹೆಗಡೆ.

senior-advocate-uses-kannada-as-official-language
ವಕೀಲರೊಬ್ಬರ ಕನ್ನಡ ಭಾಷಾಭಿಮಾನ

ಮೂಲತಃ ಕಾರವಾರ ಜಿಲ್ಲೆಯ ಶಿರಸಿ - ಸಿದ್ಧಾಪುರ ತಾಲೂಕಿನ ಉಕ್ಕಲಮಕ್ಕಿ ಗ್ರಾಮದ ನಿವಾಸಿ ಕಮಲಾಕರ ಹೆಗಡೆ - ಸುಮಿತ್ರಾ ಹೆಗಡೆ ದಂಪತಿಗೆ ಜನಿಸಿದ ಮಂಜುನಾಥ ಹೆಗಡೆ, 1990 ಇಸವಿಯಲ್ಲಿ ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಶಿಕ್ಷಣ ಮುಗಿಸಿದ್ದು, ಇವರು ಅಲ್ಲಿಂದ ನೇರವಾಗಿ ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ಹೈಕೋರ್ಟ್​ಗೆ ತೆರಳಿದ್ದರು.

senior-advocate-uses-kannada-as-official-language
ವಕೀಲರೊಬ್ಬರ ಕನ್ನಡ ಭಾಷಾಭಿಮಾನ

ಅಲ್ಲಿ ಆಡಳಿತ ಭಾಷೆಯಾಗಿ ಆಯಾ ಪ್ರಾಂತೀಯ ಭಾಷೆಯಲ್ಲೇ ಕಾನೂನಾತ್ಮಕ ಹೋರಾಟ, ವಾದ- ಪ್ರತಿವಾದ ನಡೆಯುತ್ತಿದ್ದವು. ಆದ್ರೆ, ನಮ್ಮ ಕರ್ನಾಟಕದಲ್ಲಿ ಏತಕ್ಕೆ ಆಡಳಿತ ಭಾಷೆಯಾಗಿ ಕನ್ನಡ ಭಾಷೆಯನ್ನ ಅನುಷ್ಠಾನಗೊಳಿಸಲು ಆಗುತ್ತಿಲ್ಲ ಎಂಬ ಜಿಜ್ಞಾಸೆಗೆ ಒಳಗಾಗಿದ್ದ ನಾನು, ನನ್ನಷ್ಟಕ್ಕೇ ನಾನೇ ಕನ್ನಡ ಭಾಷೆಯಲ್ಲಿ ವಾದ - ಪ್ರತಿವಾದ ಮಾಡಲಾರಂಭಿಸಿದೆ. ಆಗ ನನಗೆ ನನ್ನ ಕಕ್ಷಿದಾರರ ಬೆಂಬಲ ಕೂಡ ಸಕಾರಾತ್ಮಕವಾಗಿ ಬಂತು. ಹೀಗಾಗಿ, ನಾನು ನೂರಾರು ದಾವೆಗಳಿಗೆ ಕನ್ನಡ ಭಾಷೆಯಲ್ಲೇ ವಾದ - ಪ್ರತಿವಾದ ಮಂಡಿಸಲು ಶುರು ಮಾಡಿದೆ.‌ ಇದರಿಂದ ಕಕ್ಷಿದಾರರಿಗೂ ಕೂಡ ಸುಲಲಿತವಾಗಿ ಪ್ರಕರಣದ ಹಾದಿಯನ್ನ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ರು.

senior-advocate-uses-kannada-as-official-language
ವಕೀಲರೊಬ್ಬರ ಕನ್ನಡ ಭಾಷಾಭಿಮಾನ

ಆಂಗ್ಲ ಭಾಷೆಯ ವ್ಯಾಮೋಹ ಕೈಬಿಡಿ:

ಇಡೀ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಇರುತ್ತೆ ಎಂಬ ಕಪೋಲಕಲ್ಪಿತ ಭಾವನೆಗಳನ್ನ ಕಕ್ಷಿದಾರರಾಗಲೀ ಅಥವಾ ಯುವ ವಕೀಲರಾಗಲೀ ಹೊಂದಿದ್ದರೆ ಅದನ್ನ ಮೊದಲು ತೆಗೆದು ಹಾಕಿಬಿಡಿ. ಕನ್ನಡ ಭಾಷೆಯಲ್ಲೂ ವಾದ - ಪ್ರತಿವಾದ ಮಂಡಿಸಿದ್ರೂ ಕೂಡ ನ್ಯಾಯಾಂಗ ವ್ಯವಸ್ಥೆಯು ಅದನ್ನ ಸ್ವೀಕರಿಸಲಿದೆ. ಎಲ್ಲಾ ಯುವ ವಕೀಲರು ಇದನ್ನರಿತುಕೊಂಡು ಕನ್ನಡ ಭಾಷೆಯಲ್ಲಿ ವಾದ - ಪ್ರತಿವಾದ ಮಂಡಿಸುವಂತಹ ಧೈರ್ಯವನ್ನ ಮಾಡಬೇಕು ಎಂದು ಹಿರಿಯ ವಕೀಲ ಮಂಜುನಾಥ ಹೆಗಡೆ ಹೆಳಿದರು.

ಬಳ್ಳಾರಿ: ಸತತ ಎರಡೂವರೆ ದಶಕದಿಂದಲೂ ವಕೀಲ ವೃತ್ತಿಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ಗಣಿನಾಡಿನ ಹಿರಿಯ ವಕೀಲರೊಬ್ಬರು ವಿಶೇಷ ರೀತಿಯಲ್ಲಿ ಕನ್ನಡ ಭಾಷಾಭಿಮಾನ ವ್ಯಕ್ತಪಡಿಸುತ್ತದ್ದಾರೆ.

ಕರ್ನಾಟಕ ನ್ಯಾಯಾಲಯದ ವ್ಯವಸ್ಥೆಯಲ್ಲಿ ಆಡಳಿತ ಭಾಷೆ ಕನ್ನಡ ಭಾಷೆಯಾಗಿ ಸಮರ್ಪಕವಾಗಿ ಜಾರಿಯಾಗಿದೆಯೋ ಇಲ್ಲವೋ ತಿಳಿಯದು. ಆದರೆ, ಗಣಿನಗರಿಯ ಈ ಹಿರಿಯ ವಕೀಲರೊಬ್ಬರ ಕಾರ್ಯದಲ್ಲಿ ಮಾತ್ರ ಕನ್ನಡ ಭಾಷೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿದೆ.

ವಕೀಲರೊಬ್ಬರ ಕನ್ನಡ ಭಾಷಾಭಿಮಾನ

ಯಾಕಂದ್ರೆ ಈ ಹಿರಿಯ ವಕೀಲರು ತಮ್ಮ ಎಲ್ಲಾ ಕಾನೂನಾತ್ಮಕ ಹೋರಾಟ ಹಾಗೂ ವಾದ - ಪ್ರತಿವಾದವನ್ನು ಕನ್ನಡದಲ್ಲೇ ಮಾಡುತ್ತಾರೆ. ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ‌ ಅಲ್ಲಿಯ ತಮಿಳು - ಮರಾಠಿ ಭಾಷೆಗಳೇ ಆಡಳಿತ ಭಾಷೆಯನ್ನಾಗಿಸಿಕೊಂಡು ಸಮರ್ಪಕವಾಗಿ ಜಾರಿಗೆ ತಂದಿರೋದೇ ನನಗೆ ಪ್ರೇರಣೆಯಾಯಿತು ಎನ್ನುತ್ತಾರೆ ಹಿರಿಯ ವಕೀಲ ಮಂಜುನಾಥ ಹೆಗಡೆ.

senior-advocate-uses-kannada-as-official-language
ವಕೀಲರೊಬ್ಬರ ಕನ್ನಡ ಭಾಷಾಭಿಮಾನ

ಮೂಲತಃ ಕಾರವಾರ ಜಿಲ್ಲೆಯ ಶಿರಸಿ - ಸಿದ್ಧಾಪುರ ತಾಲೂಕಿನ ಉಕ್ಕಲಮಕ್ಕಿ ಗ್ರಾಮದ ನಿವಾಸಿ ಕಮಲಾಕರ ಹೆಗಡೆ - ಸುಮಿತ್ರಾ ಹೆಗಡೆ ದಂಪತಿಗೆ ಜನಿಸಿದ ಮಂಜುನಾಥ ಹೆಗಡೆ, 1990 ಇಸವಿಯಲ್ಲಿ ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಶಿಕ್ಷಣ ಮುಗಿಸಿದ್ದು, ಇವರು ಅಲ್ಲಿಂದ ನೇರವಾಗಿ ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ಹೈಕೋರ್ಟ್​ಗೆ ತೆರಳಿದ್ದರು.

senior-advocate-uses-kannada-as-official-language
ವಕೀಲರೊಬ್ಬರ ಕನ್ನಡ ಭಾಷಾಭಿಮಾನ

ಅಲ್ಲಿ ಆಡಳಿತ ಭಾಷೆಯಾಗಿ ಆಯಾ ಪ್ರಾಂತೀಯ ಭಾಷೆಯಲ್ಲೇ ಕಾನೂನಾತ್ಮಕ ಹೋರಾಟ, ವಾದ- ಪ್ರತಿವಾದ ನಡೆಯುತ್ತಿದ್ದವು. ಆದ್ರೆ, ನಮ್ಮ ಕರ್ನಾಟಕದಲ್ಲಿ ಏತಕ್ಕೆ ಆಡಳಿತ ಭಾಷೆಯಾಗಿ ಕನ್ನಡ ಭಾಷೆಯನ್ನ ಅನುಷ್ಠಾನಗೊಳಿಸಲು ಆಗುತ್ತಿಲ್ಲ ಎಂಬ ಜಿಜ್ಞಾಸೆಗೆ ಒಳಗಾಗಿದ್ದ ನಾನು, ನನ್ನಷ್ಟಕ್ಕೇ ನಾನೇ ಕನ್ನಡ ಭಾಷೆಯಲ್ಲಿ ವಾದ - ಪ್ರತಿವಾದ ಮಾಡಲಾರಂಭಿಸಿದೆ. ಆಗ ನನಗೆ ನನ್ನ ಕಕ್ಷಿದಾರರ ಬೆಂಬಲ ಕೂಡ ಸಕಾರಾತ್ಮಕವಾಗಿ ಬಂತು. ಹೀಗಾಗಿ, ನಾನು ನೂರಾರು ದಾವೆಗಳಿಗೆ ಕನ್ನಡ ಭಾಷೆಯಲ್ಲೇ ವಾದ - ಪ್ರತಿವಾದ ಮಂಡಿಸಲು ಶುರು ಮಾಡಿದೆ.‌ ಇದರಿಂದ ಕಕ್ಷಿದಾರರಿಗೂ ಕೂಡ ಸುಲಲಿತವಾಗಿ ಪ್ರಕರಣದ ಹಾದಿಯನ್ನ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ರು.

senior-advocate-uses-kannada-as-official-language
ವಕೀಲರೊಬ್ಬರ ಕನ್ನಡ ಭಾಷಾಭಿಮಾನ

ಆಂಗ್ಲ ಭಾಷೆಯ ವ್ಯಾಮೋಹ ಕೈಬಿಡಿ:

ಇಡೀ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಇರುತ್ತೆ ಎಂಬ ಕಪೋಲಕಲ್ಪಿತ ಭಾವನೆಗಳನ್ನ ಕಕ್ಷಿದಾರರಾಗಲೀ ಅಥವಾ ಯುವ ವಕೀಲರಾಗಲೀ ಹೊಂದಿದ್ದರೆ ಅದನ್ನ ಮೊದಲು ತೆಗೆದು ಹಾಕಿಬಿಡಿ. ಕನ್ನಡ ಭಾಷೆಯಲ್ಲೂ ವಾದ - ಪ್ರತಿವಾದ ಮಂಡಿಸಿದ್ರೂ ಕೂಡ ನ್ಯಾಯಾಂಗ ವ್ಯವಸ್ಥೆಯು ಅದನ್ನ ಸ್ವೀಕರಿಸಲಿದೆ. ಎಲ್ಲಾ ಯುವ ವಕೀಲರು ಇದನ್ನರಿತುಕೊಂಡು ಕನ್ನಡ ಭಾಷೆಯಲ್ಲಿ ವಾದ - ಪ್ರತಿವಾದ ಮಂಡಿಸುವಂತಹ ಧೈರ್ಯವನ್ನ ಮಾಡಬೇಕು ಎಂದು ಹಿರಿಯ ವಕೀಲ ಮಂಜುನಾಥ ಹೆಗಡೆ ಹೆಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.