ETV Bharat / state

ಪ್ರಧಾನಿ ಜೊತೆಗಿನ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಗಣಿನಾಡ ಬಾಲಕಿ ಆಯ್ಕೆ.. - Pareeksa pe charche with PM

ಕುರುಗೋಡು ತಾಲೂಕಿನ ಯಲ್ಲಾಪುರ ಗ್ರಾಮದ ನಿವಾಸಿ ಕೆ ಎಂ ಪಂಪಯ್ಯಸ್ವಾಮಿ ಹಾಗೂ ಕೆ ನೀಲಮ್ಮನವರ ಪುತ್ರಿ, ಕುರುಗೋಡು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ ಎಂ ನೇತ್ರಾವತಿ ಪ್ರಧಾನಿಯೊಂದಿಗಿನ ಸಂವಾದದಲ್ಲಿ ಪಾಲ್ಗೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ.

Pareeksa pe charche with PM
ಪ್ರಧಾನಿ ಜೊತೆ ಪರೀಕ್ಷಾ ಪೇ ಚರ್ಚೆಗೆ ಆಯ್ಕೆಯಾದ ಗಣಿನಾಡ ಬಾಲಕಿ
author img

By

Published : Jan 19, 2020, 3:58 PM IST

ಬಳ್ಳಾರಿ: ಜಿಲ್ಲೆಯ ಕುರುಗೋಡು ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯೋರ್ವಳು ಪ್ರಧಾನಿ ನರೇಂದ್ರ ಮೋದಿ ಜೊತೆ 'ಪರೀಕ್ಷಾ ಪೇ ಚರ್ಚಾ' ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾಳೆ.

ಪ್ರಧಾನಿ ಜೊತೆ ಪರೀಕ್ಷಾ ಪೇ ಚರ್ಚೆಗೆ ಆಯ್ಕೆಯಾದ ಗಣಿನಾಡ ಬಾಲಕಿ..

ಕುರುಗೋಡು ತಾಲೂಕಿನ ಯಲ್ಲಾಪುರ ಗ್ರಾಮದ ನಿವಾಸಿ ಕೆ ಎಂ ಪಂಪಯ್ಯಸ್ವಾಮಿ ಹಾಗೂ ಕೆ.ನೀಲಮ್ಮನವರ ಪುತ್ರಿ, ಕುರುಗೋಡು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ ಎಂ ನೇತ್ರಾವತಿ ಪ್ರಧಾನಿಯೊಂದಿಗಿನ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ.

ಈ ಬಗ್ಗೆ ಶಿಕ್ಷಕ ಶಾಸ್ತ್ರಿ ಕೃಷ್ಣಮೂರ್ತಿ ಮಾತನಾಡಿ, ಪರೀಕ್ಷಾ ಪೇ ಚರ್ಚಾ -2020 ಪ್ರಧಾನಿಯೊಂದಿಗಿನ ಸಂವಾದಕ್ಕೆ ಡಿಸೆಂಬರ್ ತಿಂಗಳಲ್ಲಿ ಆನ್​ಲೈನ್ ಮೂಲಕ ಆಯ್ದ ವಿಷಯಗಳ ಕುರಿತ ಪ್ರಬಂಧ ಮಂಡನೆ ಮಾಡಬೇಕಿತ್ತು. ಅಂದಾಜು ಮೂರು ಲಕ್ಷ ವಿದ್ಯಾರ್ಥಿನಿಯರು ಆನ್​ಲೈನ್​ ಮುಖಾಂತರ ಅರ್ಜಿ ಸಲ್ಲಿಸಿದ್ರು. ಕೊನೆಯ ಎರಡು ದಿನಗಳು ಬಾಕಿ ಇರುವಾಗ ವಿದ್ಯಾರ್ಥಿನಿ ನೇತ್ರಾವತಿ ಅರ್ಜಿ ಹಾಕಿದ್ಳು. ನಮ್ಮ ಶಾಲೆಯ ವಿದ್ಯಾರ್ಥಿನಿ ಆಯ್ಕೆಯಾಗಿರೋದು ನಮಗೆ ಖುಷಿ ತಂದಿದೆ ಎಂದರು.

ವಿದ್ಯಾರ್ಥಿನಿ ತಂದೆ ಕೆ ಎಂ ಪಂಪಯ್ಯಸ್ವಾಮಿ ಮಾತನಾಡಿ, ನಾವು ಕೂಲಿ-ನಾಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ನಮಗೆ ನಾಲ್ವರು ಹೆಣ್ಮಕ್ಕಳು ಇದ್ದಾರೆ. ಮುಂದಿನ ವಿದ್ಯಾಭ್ಯಾಸ ಮಾಡಿಸಲಿಕ್ಕೂ ನಮ್ಮ ಬಳಿ ಹಣವಿಲ್ಲ. ಇದೀಗ ನನ್ನ ಮಗಳು ಪ್ರಧಾನಿ ಮೋದಿಯವರೊಂದಿಗಿನ ಪರೀಕ್ಷಾ ಪೇ ಚರ್ಚೆಯಲ್ಲಿ ಭಾಗವಹಿಸೋದು ಖುಷಿ ತಂದಿದೆ ಎಂದರು.

ವಿದ್ಯಾರ್ಥಿನಿ ಕೆ.ಎಂ.ನೇತ್ರಾವತಿ ಮಾತನಾಡಿ, ನಾನು ಹಳ್ಳಿಯಿಂದ ದಿಲ್ಲಿಗೆ ಹೋಗಿ, ಪ್ರಧಾನಿ ಮೋದಿಯವರ ಪರೀಕ್ಷಾ ಪೇ ಚರ್ಚೆಯಲ್ಲಿ ಭಾಗವಹಿಸೋದು ನನಗೆ ಖುಷಿ ತಂದಿದೆ ಎಂದು ಹೇಳಿದರು.

ಬಳ್ಳಾರಿ: ಜಿಲ್ಲೆಯ ಕುರುಗೋಡು ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯೋರ್ವಳು ಪ್ರಧಾನಿ ನರೇಂದ್ರ ಮೋದಿ ಜೊತೆ 'ಪರೀಕ್ಷಾ ಪೇ ಚರ್ಚಾ' ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾಳೆ.

ಪ್ರಧಾನಿ ಜೊತೆ ಪರೀಕ್ಷಾ ಪೇ ಚರ್ಚೆಗೆ ಆಯ್ಕೆಯಾದ ಗಣಿನಾಡ ಬಾಲಕಿ..

ಕುರುಗೋಡು ತಾಲೂಕಿನ ಯಲ್ಲಾಪುರ ಗ್ರಾಮದ ನಿವಾಸಿ ಕೆ ಎಂ ಪಂಪಯ್ಯಸ್ವಾಮಿ ಹಾಗೂ ಕೆ.ನೀಲಮ್ಮನವರ ಪುತ್ರಿ, ಕುರುಗೋಡು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ ಎಂ ನೇತ್ರಾವತಿ ಪ್ರಧಾನಿಯೊಂದಿಗಿನ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ.

ಈ ಬಗ್ಗೆ ಶಿಕ್ಷಕ ಶಾಸ್ತ್ರಿ ಕೃಷ್ಣಮೂರ್ತಿ ಮಾತನಾಡಿ, ಪರೀಕ್ಷಾ ಪೇ ಚರ್ಚಾ -2020 ಪ್ರಧಾನಿಯೊಂದಿಗಿನ ಸಂವಾದಕ್ಕೆ ಡಿಸೆಂಬರ್ ತಿಂಗಳಲ್ಲಿ ಆನ್​ಲೈನ್ ಮೂಲಕ ಆಯ್ದ ವಿಷಯಗಳ ಕುರಿತ ಪ್ರಬಂಧ ಮಂಡನೆ ಮಾಡಬೇಕಿತ್ತು. ಅಂದಾಜು ಮೂರು ಲಕ್ಷ ವಿದ್ಯಾರ್ಥಿನಿಯರು ಆನ್​ಲೈನ್​ ಮುಖಾಂತರ ಅರ್ಜಿ ಸಲ್ಲಿಸಿದ್ರು. ಕೊನೆಯ ಎರಡು ದಿನಗಳು ಬಾಕಿ ಇರುವಾಗ ವಿದ್ಯಾರ್ಥಿನಿ ನೇತ್ರಾವತಿ ಅರ್ಜಿ ಹಾಕಿದ್ಳು. ನಮ್ಮ ಶಾಲೆಯ ವಿದ್ಯಾರ್ಥಿನಿ ಆಯ್ಕೆಯಾಗಿರೋದು ನಮಗೆ ಖುಷಿ ತಂದಿದೆ ಎಂದರು.

ವಿದ್ಯಾರ್ಥಿನಿ ತಂದೆ ಕೆ ಎಂ ಪಂಪಯ್ಯಸ್ವಾಮಿ ಮಾತನಾಡಿ, ನಾವು ಕೂಲಿ-ನಾಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ನಮಗೆ ನಾಲ್ವರು ಹೆಣ್ಮಕ್ಕಳು ಇದ್ದಾರೆ. ಮುಂದಿನ ವಿದ್ಯಾಭ್ಯಾಸ ಮಾಡಿಸಲಿಕ್ಕೂ ನಮ್ಮ ಬಳಿ ಹಣವಿಲ್ಲ. ಇದೀಗ ನನ್ನ ಮಗಳು ಪ್ರಧಾನಿ ಮೋದಿಯವರೊಂದಿಗಿನ ಪರೀಕ್ಷಾ ಪೇ ಚರ್ಚೆಯಲ್ಲಿ ಭಾಗವಹಿಸೋದು ಖುಷಿ ತಂದಿದೆ ಎಂದರು.

ವಿದ್ಯಾರ್ಥಿನಿ ಕೆ.ಎಂ.ನೇತ್ರಾವತಿ ಮಾತನಾಡಿ, ನಾನು ಹಳ್ಳಿಯಿಂದ ದಿಲ್ಲಿಗೆ ಹೋಗಿ, ಪ್ರಧಾನಿ ಮೋದಿಯವರ ಪರೀಕ್ಷಾ ಪೇ ಚರ್ಚೆಯಲ್ಲಿ ಭಾಗವಹಿಸೋದು ನನಗೆ ಖುಷಿ ತಂದಿದೆ ಎಂದು ಹೇಳಿದರು.

Intro:ಪ್ರಧಾನಿ ಮೋದಿಯೊಂದಿಗಿನ ಪರೀಕ್ಷಾ ಪೇ ಚರ್ಚೆಗೆ ಗಣಿನಾಡಿನ‌ ಬಡ ವಿದ್ಯಾರ್ಥಿನಿ ಸೆಲೆಕ್ಟ್…!
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯೋರ್ವಳು ಪ್ರಧಾನಿ ಮೋದಿಯೊಂದಿಗಿನ 'ಪರೀಕ್ಷಾ ಪೇ' ಚರ್ಚೆಗೆ ಸೆಲೆಕ್ಟ್ ಆಗಿದ್ದಾಳೆ. ನಾಳೆಯ ದಿನ ನಡೆಯಲಿರುವ ಈ ಪರೀಕ್ಷಾ ಪೇ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾಳೆ.
ಕುರುಗೋಡು ತಾಲೂಕಿನ ಯಲ್ಲಾಪುರ ಗ್ರಾಮದ ನಿವಾಸಿ ಕೆ.ಎಂ.ಪಂಪಯ್ಯಸ್ವಾಮಿ ಹಾಗೂ ಕೆ.ನೀಲಮ್ಮನವರ ಪುತ್ರಿ ಕೆ.ಎಂ.ನೇತ್ರಾವತಿ, ಯಲ್ಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾಭ್ಯಾಸ ಪೂರೈಸಿದ್ದು, 9ನೇ ತರಗತಿ ವಿದ್ಯಾಭ್ಯಾಸವನ್ನು ಸದ್ಯ ಕುರುಗೋಡಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.
ಕಡು ಬಡತನದ ಕುಟುಂಬದ ಹಿನ್ನಲೆಯಲ್ಲಿ ಬಂದಿರುವ ಈ ವಿದ್ಯಾರ್ಥಿನಿ ಕೆ.ಎಂ.ನೇತ್ರಾವತಿ, ಪ್ರಧಾನಿ‌ ನರೇಂದ್ರ ಮೋದಿ ಯೊಂದಿಗಿನ ಪರೀಕ್ಷಾ ಪೇ ಚರ್ಚೆಯಲ್ಲಿ ಭಾಗವಹಿಸಿರೋದಕ್ಕೆ ಇಡೀ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರು, ಸಿಬ್ಬಂದಿ, ಶಾಲೆಯ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಯಲ್ಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಶಾಸ್ತ್ರಿ ಕೃಷ್ಣಮೂರ್ತಿ ಅವರು ಮಾತನಾಡಿ, 2020ರ ಪರೀಕ್ಷಾ ಪೇ
ಚರ್ಚೆಗೆ ಡಿಸೆಂಬರ್ ತಿಂಗಳಲ್ಲಿ ಆನ್ ಲೈನ್ ಅಪ್ಲಿಕೇಶನ್
ಮೂಲಕ ಆಯ್ದ ವಿಷಯಗಳ ಕುರಿತ ಪ್ರಬಂಧ ಮಂಡನೆ ಮಾಡಬೇಕಿತ್ತು. ಅಂದಾಜು ಮೂರು ಲಕ್ಷ ವಿದ್ಯಾರ್ಥಿನಿಯರು
ಆನ್ ಲೈನ್ ಮುಖೇನ ಅರ್ಜಿ ಸಲ್ಲಿಸಿದ್ರು. ಕೊನೆಯ ಎರಡು ದಿನಗಳು ಬಾಕಿ ಇರುವಾಗ ಈ ಅರ್ಜಿಯನ್ನು ಹಾಕಲಾಗಿತ್ತು.
ನಮ್ಮ ಶಾಲೆಯ ವಿದ್ಯಾರ್ಥಿನಿ ಆಯ್ಕೆಯಾಗಿರೋದು ನಮಗೆ
ಖುಷಿ ತಂದಿದೆ ಎಂದ್ರು.
Body:ಯಲ್ಲಾಪುರ ಗ್ರಾಮದ ಕೆ.ಎಂ.ಪಂಪಯ್ಯಸ್ವಾಮಿ ಮಾತನಾಡಿ, ನಾವು ಕೂಲಿ- ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತೀದ್ದೇವೆ. ನಮಗೆ ನಾಲ್ವರು ಹೆಣ್ಮಕ್ಕಳು ಇದ್ದಾರೆ. ಮುಂದಿನ ವಿದ್ಯಾಭ್ಯಾಸ ಮಾಡಿಸಲಿಕ್ಕೂ ನಮ್ಮ ಬಳಿ ಹಣವಿಲ್ಲ. ಇದೀಗ ನನ್ನ ಮಗಳು ಪ್ರಧಾನಿ ಮೋದಿಯವರೊಂದಿಗಿನ ಪರೀಕ್ಷಾ ಪೇ ಚರ್ಚೆಯಲ್ಲಿ ಭಾಗವಹಿಸೋದು ಖುಷಿ ತಂದಿದೆ ಎಂದ್ರು.
ವಿದ್ಯಾರ್ಥಿನಿ ಕೆ.ಎಂ.ನೇತ್ರಾವತಿ ಮಾತನಾಡಿ, ನಾನು ಹಳ್ಳಿಯಿಂದ ಡಿಲ್ಲಿಗೆ ಹೋಗೋದು ಬಹಳ ಖುಷಿಯಾಗಿದೆ. ಪ್ರಧಾನಿ ಮೋದಿ ಯವರ ಪರೀಕ್ಷಾ ಪೇ ಚರ್ಚೆಯಲ್ಲಿ ಭಾಗವಹಿಸೋದು ನನಗೆ ಖುಷಿ ತಂದಿದೆ ಎಂದ್ರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_PM_MODI_PARIKSHA_PAY_CHERCHE_VSL_7203310

KN_BLY_1a_PM_MODI_PARIKSHA_PAY_CHERCHE_VSL_7203310

KN_BLY_1b_PM_MODI_PARIKSHA_PAY_CHERCHE_VSL_7203310

KN_BLY_1c_PM_MODI_PARIKSHA_PAY_CHERCHE_VSL_7203310

KN_BLY_1d_PM_MODI_PARIKSHA_PAY_CHERCHE_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.