ಜೌನಪುರ, ಉತ್ತರಪ್ರದೇಶ: ಮಹಾಕುಂಭದ ವಿಶೇಷ ರೈಲಿನ ಬೋಗಿಗೆ ಎಂಜಿನ್ ಜೋಡಿಸುವ ವೇಳೆ ಹಳಿ ತಪ್ಪಿರುವ ಘಟನೆ ಜೌನ್ಪುರ ಜಂಕ್ಷನ್ನಲ್ಲಿ ನಡೆದಿದೆ. ಜೌನಪುರ ಜಂಕ್ಷನ್ನ ಮೂರನೇ ಫ್ಲಾಟ್ಫಾರ್ಮ್ನಲ್ಲಿ ನಡೆದ ಈ ಘಟನೆ ರೈಲ್ವೆ ನೌಕರರಲ್ಲಿ ಆತಂಕಕ್ಕೆ ಕಾರಣವಾಯಿತು. ಆದರೆ, ಅದೃಷ್ಟವಶಾತ್ ರೈಲು ಖಾಲಿ ಇದ್ದ ಕಾರಣ ಯಾವುದೆ ಅಹಿತಕರ ಘಟನೆ ನಡೆದಿಲ್ಲ.
ಪ್ರಯಾಗರಾಜ್ನ ಮಹಾಕುಂಭ ಮೇಳಕ್ಕೆ ಸಂಚರಿಸುವ ವಿಶೇಷ ರೈಲನ್ನು ಜೌನಪುರ ಜಂಕ್ಷನ್ನ ಪ್ಲಾಟ್ಫಾರ್ಮ್ ನಂಬರ್ ಮೂರರಲ್ಲಿ ಸಿದ್ಧಪಡಿಸಲಾಗುತ್ತಿತ್ತು. ನೌಕರರು ಜೋಡಣೆ ಕೆಲಸವನ್ನು ನಿರ್ವಹಿಸುತ್ತಿದ್ದರು. ಈ ವೇಳೆ, ರೈಲು ಹಿಂದಕ್ಕೆ ಮುಂದಕ್ಕೆ ಚಲಿಸುವಾಗ ಇಂಜಿನ್ನ ಎರಡು ಚಕ್ರಗಳು ಏಕಾಏಕಿ ಹಳಿಯಿಂದ ಹೊರಬಂದು, ನೌಕರರಲ್ಲಿ ಆತಂಕಕ್ಕೆ ಕಾರಣವಾಯ್ತು.
ಈ ಅಪಘಾತದ ಸಮಯದಲ್ಲಿ, ರೈಲು ಸಂಪೂರ್ಣವಾಗಿ ಖಾಲಿಯಾಗಿತ್ತು. ಇದರಿಂದಾಗಿ ಭಾರಿ ಅನಾಹುತ ತಪ್ಪಿದೆ. ಈ ಅಪಘಾತಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದೆ.
ಸದ್ಯ ರೈಲು ಸಿದ್ದವಾಗಿದ್ದು, ಖಾಲಿ ರೈಲು ಪ್ರಯಾಗ್ರಾಜ್ಗೆ ತಲುಪಿ ಅಲ್ಲಿಂದ ಪ್ರಯಾಣಿಕರೊಂದಿಗೆ ಈ ನಿಲ್ದಾಣಕ್ಕೆ ಹಿಂತಿರುಗುತ್ತದೆ ಎಂದು ನಿಲ್ದಾಣದ ಸಿಬ್ಬಂದಿ ತಿಳಿಸಿದ್ದಾರೆ.
ಈ ನಡುವೆ, ರೈಲಿನ ಚಕ್ರ ಹಳಿತಪ್ಪಿದ ಮಾಹಿತಿ ಪಡೆದ ಎಡಿಆರ್ಎಂ ಲಾಲ್ಜಿ ಚೌಧರಿ ತಡರಾತ್ರಿಯೇ ತಮ್ಮ ತಂಡದೊಂದಿಗೆ ಜೌನ್ಪುರ ಜಂಕ್ಷನ್ಗೆ ಭೇಟಿ ನೀಡಿ, ಅಪಘಾತಕ್ಕೆ ಕಾರಣ ಕುರಿತು ಸಿಬ್ಬಂದಿಯೊಂದಿಗೆ ಮಾತನಾಡಿದರು. ರೈಲ್ವೆ ಸಿಬ್ಬಂದಿ ತಡರಾತ್ರಿಯವರೆಗೂ ತನಿಖೆ ಮುಂದುವರೆಸಿ, ಎಂಜಿನ್ ಅನ್ನು ಮತ್ತೆ ಹಳಿಗೆ ತರಲು ಎಲ್ಲಾ ಪ್ರಯತ್ನಗಳು ಮಾಡಿದರು. ಈ ನಡುವೆ ಈ ಅಪಘಾತಕ್ಕೆ ಕಾರಣ ಏನು ಎಂಬುದು ತಿಳಿದಿಲ್ಲ. ಈ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಎಡಿಆರ್ಎಂ ತಿಳಿಸಿದ್ದಾರೆ.
ಇದನ್ನೂ ಓದಿ: ಕುಂಭ, ಗಂಗಾ, ಜಮುನಾ, ಬಸಂತಿ: ಮಹಾ ಕುಂಭಮೇಳದಲ್ಲಿ ಜನಿಸಿದ ಶಿಶುಗಳಿಗೆ ನಾಮಕರಣ
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 167 ಗೀಲನ್ ಬಾ ಸಿಂಡ್ರೋಮ್ ಪ್ರಕರಣಗಳು ಪತ್ತೆ; ರೋಗಕ್ಕೆ 7 ಮಂದಿ ಬಲಿ