ಹೊಸಪೇಟೆ (ಬಳ್ಳಾರಿ) : ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಎಂಎಸ್ಪಿಎಲ್ ಸಂಸ್ಥೆ ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನು ವಿತರಿಸಿದೆ ಎಂದು ಹೊಸಪೇಟೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಾಕ್ಡೌನ್ ನಡುವೆಯೂ ಸರ್ಕಾರದ ಆದೇಶದ ಮೇರೆಗೆ ಕೆಲ ನಿರ್ಬಂಧನೆಗಳೊಂದಿಗೆ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಹೊಸಪೇಟೆ ಸಾರಿಗೆ ಇಲಾಖೆಯ ಸಿಬ್ಬಂದಿಗೆ ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸಿಎಸ್ಆರ್ ಅಡಿಯಲ್ಲಿ 2000 ಮಾಸ್ಕ್ ಹಾಗೂ 200 ಲೀ. ನಷ್ಟು ಸ್ಯಾನಿಟೈಸರ್ ಅನ್ನು ಸಂಸ್ಥೆ ನೀಡಿದೆ ಎಂದಿದ್ದಾರೆ.