ETV Bharat / state

ಹಂಪಿ ವಿವಿ ಆವರಣದೊಳಗೆ ಬಂತು ಚಿರತೆ... ಹೌಹಾರಿದ ವಿದ್ಯಾರ್ಥಿಗಳು!

author img

By

Published : Oct 16, 2020, 6:08 PM IST

ವಿ.ವಿ.ಯು 750 ಎಕರೆ ವಿಸ್ತಾರ ಹೊಂದಿದ್ದು, ಯಥೇಚ್ಛವಾದ ಮರಗಳನ್ನು ಕಾಣಬಹುದಾಗಿದೆ. ಅಲ್ಲಲ್ಲಿ ಕಲ್ಲು ಬಂಡೆಗಳಿದ್ದು, ಚಿರತೆ ವಾಸಸ್ಥಳಕ್ಕೆ ಯೋಗ್ಯವಾಗಿದೆ. ಹಾಗಾಗಿ ಚಿರತೆ ಪದೇ-ಪದೆ ಕಾಣಿಸಿಕೊಳ್ಳತೊಡಗಿದ್ದು ಅಲ್ಲಿರುವವರು ಭಯಭೀತರಾಗಿದ್ದಾರೆ.

Leopard in the campus of Hampi Kannada University
ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಚಿರತೆ

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಳ್ಳುತ್ತಿದ್ದು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ವಿ.ವಿ.ಯಲ್ಲಿ ಓಡಾಡದಂತೆ ಸೂಚನೆ: ವಿವಿಯ ಆಡಳಿತಾಂಗ ಈಗಾಗಲೇ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಒಬ್ಬಂಟಿಯಾಗಿ ಓಡಾಡದಂತೆ ಸೂಚನೆಯನ್ನು ನೀಡಿದೆ. ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಲೈಟಿಂಗ್ ಅಳವಡಿಸಲಾಗಿದೆ.

ಬೋನ್ ಸಮಸ್ಯೆ: ಚಿರತೆ ಕಾಣಿಸಿಕೊಂಡರೂ ಕೂಡ ಈವರೆಗೆ ಬೋನ್ ಅಳವಡಿಸಿಲ್ಲ. ಅರಣ್ಯ ಇಲಾಖೆಯು ಬೋನ್ ಸಮಸ್ಯೆಯನ್ನು ಎದುರಿಸುತ್ತಿದ್ದು, ವಿವಿ ಆವರಣದಲ್ಲಿ ಬೋನ್ ಅಳವಡಿಸಲು ಸಾಧ್ಯವಾಗಿಲ್ಲ.

ಕುಲಪತಿ ಡಾ. ಸ.ಚಿ. ರಮೇಶ ಮಾತನಾಡಿ, ಚಿರತೆ ಪದೇ-ಪದೆ ಕಾಣಿಸಿಕೊಳ್ಳುತ್ತಿದೆ.‌ ಈಗಾಗಲೇ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ.‌ ಪಟಾಕಿ ಸಿಡಿಸಿ ಓಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಆದರೂ ಸಹ ಚಿರತೆ ಬಂದು ಹೋಗುತ್ತಿದೆ. ಕ್ಯಾಂಪಸ್​ನಲ್ಲಿನ‌ ನಾಯಿಗಳನ್ನು ಚಿರತೆ ಕೊಂದು ತಿಂದಿರುವ ಉದಾಹರಣೆಗಳಿವೆ.‌ ಹಾಗಾಗಿ ವಿವಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೂಡಲೇ ಬೋನ್ ಅಳವಡಿಸಿ, ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದರು.

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಳ್ಳುತ್ತಿದ್ದು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ವಿ.ವಿ.ಯಲ್ಲಿ ಓಡಾಡದಂತೆ ಸೂಚನೆ: ವಿವಿಯ ಆಡಳಿತಾಂಗ ಈಗಾಗಲೇ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಒಬ್ಬಂಟಿಯಾಗಿ ಓಡಾಡದಂತೆ ಸೂಚನೆಯನ್ನು ನೀಡಿದೆ. ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಲೈಟಿಂಗ್ ಅಳವಡಿಸಲಾಗಿದೆ.

ಬೋನ್ ಸಮಸ್ಯೆ: ಚಿರತೆ ಕಾಣಿಸಿಕೊಂಡರೂ ಕೂಡ ಈವರೆಗೆ ಬೋನ್ ಅಳವಡಿಸಿಲ್ಲ. ಅರಣ್ಯ ಇಲಾಖೆಯು ಬೋನ್ ಸಮಸ್ಯೆಯನ್ನು ಎದುರಿಸುತ್ತಿದ್ದು, ವಿವಿ ಆವರಣದಲ್ಲಿ ಬೋನ್ ಅಳವಡಿಸಲು ಸಾಧ್ಯವಾಗಿಲ್ಲ.

ಕುಲಪತಿ ಡಾ. ಸ.ಚಿ. ರಮೇಶ ಮಾತನಾಡಿ, ಚಿರತೆ ಪದೇ-ಪದೆ ಕಾಣಿಸಿಕೊಳ್ಳುತ್ತಿದೆ.‌ ಈಗಾಗಲೇ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ.‌ ಪಟಾಕಿ ಸಿಡಿಸಿ ಓಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಆದರೂ ಸಹ ಚಿರತೆ ಬಂದು ಹೋಗುತ್ತಿದೆ. ಕ್ಯಾಂಪಸ್​ನಲ್ಲಿನ‌ ನಾಯಿಗಳನ್ನು ಚಿರತೆ ಕೊಂದು ತಿಂದಿರುವ ಉದಾಹರಣೆಗಳಿವೆ.‌ ಹಾಗಾಗಿ ವಿವಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೂಡಲೇ ಬೋನ್ ಅಳವಡಿಸಿ, ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.