ETV Bharat / state

ಗಣಿ ಜಿಲ್ಲೆಗೆ ತಂಪೆರೆದ ವರುಣ, ವಿಜಯಪುರದಲ್ಲೂ ವರ್ಷಧಾರೆ, ರಾಯಚೂರಲ್ಲಿ ಆಲಿಕಲ್ಲು ಮಳೆ - undefined

ಬಿಸಿಲಿನಿಂದ ಕಂಗೆಟ್ಟಿದ್ದ ಹಲವು ಜಿಲ್ಲೆಗಳಲ್ಲಿ ನಿನ್ನೆ ಸಂಜೆ ಉತ್ತ ಮಳೆಯಾಗಿದ್ದು, ಕೆಲವೆಡೆ ಆಲಿಕಲ್ಲು ಸಹಿತ ಭರ್ಜರಿ ಮಳೆ ಸುರಿದಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ
author img

By

Published : May 22, 2019, 7:55 AM IST

ಬಳ್ಳಾರಿ: ಬಿರು ಬಿಸಿಲು ಹಾಗೂ ಒಣಹವೆಗೆ ನಲುಗಿ ಹೋಗಿದ್ದ ಗಣಿನಗರಿ ಬಳ್ಳಾರಿಯಲ್ಲಿ ನಿನ್ನೆ ಸಂಜೆ ಸುರಿದ ಮಳೆ ಕೆಂಡದಂತೆ ಕಾದಿದ್ದ ಧರೆಯನ್ನು‌ ತಂಪುಗೊಳಿಸಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ

ಬಳ್ಳಾರಿ ನಗರ ಸೇರಿದಂತೆ ಜಾಲಿಹಾಳು, ಮೋಕಾ, ಮಸೀದಿ ಪುರ, ಸಂಗನಕಲ್ಲು, ಬಿಸಿಲಹಳ್ಳಿ, ಬೇವಿನ ಹಳ್ಳಿ, ಅಮರಾಪುರ, ಹಗರಿ, ಕಾರೇಕಲ್ಲು- ವೀರಾಪುರ, ಗೋಡೆ ಹಾಳು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಗುಡುಗು ಸಹಿತ ಸುರಿದ ಮಳೆಯಿಂದಾಗಿ ಕೆಲವೆಡೆ ಮರಗಳ ಧರೆಗುರುಳಿದ್ದು, ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಿನ್ನೆಯಿಂದ ಮೋಡಕವಿದ ವಾತಾವರಣ ಮುಂದುವರೆದಿದ್ದು, ತಾಪಮಾನ ಕೊಂಚ ತಗ್ಗಿದೆ.

ಇತ್ತ ವಿಜಯಪುರದಲ್ಲೂ ಗುಡುಗು, ಸಿಡಿಲು ಸಹಿತ ಭರ್ಜರಿ ಮಳೆಯಾಗಿದ್ದು, ಅಧಿಕ ತಾಪಮಾನದಿಂದ ಬೇಸತ್ತಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಒಂದು ವಾರದಿಂದ ಗರಿಷ್ಠ 43 ಡಿಗ್ರಿ ತಾಪಮಾನ ದಾಖಲಾಗಿತ್ತು. ಬಿಸಿಲಿನ ಬೇಗೆಯಿಂದ ಮನೆಯಿಂದ ಹೊರ ಬರಲು ಹೆದರುತ್ತಿದ್ದ ಜನರ ಮೊಗದಲ್ಲಿ ವರುಣ ಮಂದಹಾಸ ಮೂಡಿಸಿದ್ದಾನೆ.

ರಾಯಚೂರು ಜಿಲ್ಲೆಯ ವಿವಿಧೆಡೆ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದೆ. ಲಿಂಗಸೂಗೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಇಷ್ಟು ದಿನಗಳ ಕಾಲ ಬಿಸಿಲಿಗೆ ಕಾದು ಕೆಂಡವಾಗಿದ್ದ ಭೂಮಿಗೆ ವರುಣ ತಂಪೆರೆದಿದ್ದು, ರೈತ ಮುಖದಲ್ಲಿ ಮದಹಾಸ ಮೂಡಿದೆ.

ಬಳ್ಳಾರಿ: ಬಿರು ಬಿಸಿಲು ಹಾಗೂ ಒಣಹವೆಗೆ ನಲುಗಿ ಹೋಗಿದ್ದ ಗಣಿನಗರಿ ಬಳ್ಳಾರಿಯಲ್ಲಿ ನಿನ್ನೆ ಸಂಜೆ ಸುರಿದ ಮಳೆ ಕೆಂಡದಂತೆ ಕಾದಿದ್ದ ಧರೆಯನ್ನು‌ ತಂಪುಗೊಳಿಸಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ

ಬಳ್ಳಾರಿ ನಗರ ಸೇರಿದಂತೆ ಜಾಲಿಹಾಳು, ಮೋಕಾ, ಮಸೀದಿ ಪುರ, ಸಂಗನಕಲ್ಲು, ಬಿಸಿಲಹಳ್ಳಿ, ಬೇವಿನ ಹಳ್ಳಿ, ಅಮರಾಪುರ, ಹಗರಿ, ಕಾರೇಕಲ್ಲು- ವೀರಾಪುರ, ಗೋಡೆ ಹಾಳು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಗುಡುಗು ಸಹಿತ ಸುರಿದ ಮಳೆಯಿಂದಾಗಿ ಕೆಲವೆಡೆ ಮರಗಳ ಧರೆಗುರುಳಿದ್ದು, ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಿನ್ನೆಯಿಂದ ಮೋಡಕವಿದ ವಾತಾವರಣ ಮುಂದುವರೆದಿದ್ದು, ತಾಪಮಾನ ಕೊಂಚ ತಗ್ಗಿದೆ.

ಇತ್ತ ವಿಜಯಪುರದಲ್ಲೂ ಗುಡುಗು, ಸಿಡಿಲು ಸಹಿತ ಭರ್ಜರಿ ಮಳೆಯಾಗಿದ್ದು, ಅಧಿಕ ತಾಪಮಾನದಿಂದ ಬೇಸತ್ತಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಒಂದು ವಾರದಿಂದ ಗರಿಷ್ಠ 43 ಡಿಗ್ರಿ ತಾಪಮಾನ ದಾಖಲಾಗಿತ್ತು. ಬಿಸಿಲಿನ ಬೇಗೆಯಿಂದ ಮನೆಯಿಂದ ಹೊರ ಬರಲು ಹೆದರುತ್ತಿದ್ದ ಜನರ ಮೊಗದಲ್ಲಿ ವರುಣ ಮಂದಹಾಸ ಮೂಡಿಸಿದ್ದಾನೆ.

ರಾಯಚೂರು ಜಿಲ್ಲೆಯ ವಿವಿಧೆಡೆ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದೆ. ಲಿಂಗಸೂಗೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಇಷ್ಟು ದಿನಗಳ ಕಾಲ ಬಿಸಿಲಿಗೆ ಕಾದು ಕೆಂಡವಾಗಿದ್ದ ಭೂಮಿಗೆ ವರುಣ ತಂಪೆರೆದಿದ್ದು, ರೈತ ಮುಖದಲ್ಲಿ ಮದಹಾಸ ಮೂಡಿದೆ.

Intro:ಬಳ್ಳಾರಿ ನಗರದಲ್ಲಿ ತಂಪೆರದ ಮಳೆರಾಯ
ಬಳ್ಳಾರಿ: ಬಿರುಬಿಸಿಲು ಹಾಗೂ ಒಣಹವೆಗೆ ನಲುಗಿ ಹೋಗಿದ್ದ ಗಣಿನಗರಿ ಬಳ್ಳಾರಿಯಲ್ಲಿ ನಿನ್ನೆಯ ದಿನ ಸಂಜೆ ವೇಳೆ ಸುರಿದ ಮಳೆಯು ಕೆಂಡದಂತೆ ಕಾದಿರುವ ಧರೆಯನ್ನು‌ ತಂಪುಗೊಳಿಸಿ ತು.
ಬೆಳಿಗ್ಗೆಯಿಂದಲೇ ಬಿರುಬಿಸಿಲು ಹಾಗೂ ಒಣಹವೆ ಹೆಚ್ಚಾಗಿತ್ತು.‌ ಅದರಿಂದ ಮುಕ್ತಿ ಹೊಂದಲು ತಂಪು ಪಾನೀಯ, ತಣ್ಣನೆಯ‌ ನೀರು ಸೇವನೆ ಮಾಡಿದ್ರೂ‌ ನೀರಿನ ದಾಹ ಮಾತ್ರ ತೀರಲೇ ಇಲ್ಲ. ಮಧ್ಯಾಹ್ನದ ಹೊತ್ತಿಗೆ‌ ಮೋಡ ಕವಿದ ವಾತಾವರಣಕ್ಕೆ ತಿರುಗಿತು.‌
ಮಠಮಠ ಮಧ್ಯಾಹ್ನವೇ ಸುಡುವ ಬಿಸಿಲಿನ ಬದಲಿಗೆ ಗುಡುಗು, ಮಿಂಚಿನ ಅರ್ಭಟ ಜೋರಾಗಿತ್ತು. 3 ಗಂಟೆಯ ಸುಮಾರಿಗೆ ತುಂತುರು ಹನಿ ಬೀಳಲಾರಂಭಿಸಿತು. ಕ್ರಮೇಣ ಮಳೆಯ ರಭಸ ಜೋರಾಯಿತು. ಬಿರುಗಾಳಿ ಸಮೇತ ಮಳೆ ಸುರಿದಾಗ, ಕೆಲವೆಡೆ ಗಿಡ, ಮರಗಳು ನೆಲಕ್ಕುರುಳಿದವು. ಕೆಲ ಕಾಲ ಸಾರ್ವಜನಿಕ ‌ವಾಹನಗಳ ಸಂಚಾರಕ್ಕೆ ಅಡೆತಡೆ‌ ಉಂಟಾ ಯಿತು.


Body:ತಾಲೂಕಿನಲ್ಲೂ ತಂಪೆರಗಿಸಿದ ಮಳೆರಾಯ: ಬಳ್ಳಾರಿ ಹಾಗೂ‌ ಕುರುಗೋಡು ತಾಲೂಕಿನ‌ ಸುತ್ತಮುತ್ತಲ ಗ್ರಾಮಗಳಲ್ಲೂ ಗುಡುಗು, ಮಿಂಚು ಸಹಿತ ಮಳೆರಾಯ ಸುರಿಯಲಾರಂಭಿಸಿದ. ಕುರುಗೋಡು ತಾಲೂಕು ವ್ಯಾಪ್ತಿಯ ಏಳುಬೆಂಚೆ, ಕುಡಿತಿನಿ ಎಚ್. ವೀರಾಪುರ ಮತ್ತು‌ ಬಳ್ಳಾರಿ ತಾಲೂಕಿನ ಜಾಲಿಹಾಳು, ಮೋಕಾ, ಮಸೀದಿ ಪುರ, ಸಂಗನಕಲ್ಲು, ಬಿಸಿಲಹಳ್ಳಿ, ಬೇವಿನ ಹಳ್ಳಿ, ಅಮರಾಪುರ, ಹಗರಿ, ಕಾರೇಕಲ್ಲು- ವೀರಾಪುರ, ಗೋಡೆ ಹಾಳು ಇತರೆ ಗ್ರಾಮಗಳಲ್ಲಿ ಸರಿಸುಮಾರು ಅರ್ಧ ಗಂಟೆಗಳ ಕಾಲ ಮಳೆಯು ಸುರಿಯಿತು.
ಮೋಡ ಕವಿದ ವಾತಾವರಣ ಮುಂದುವರಿಕೆ: ನಿನ್ನೆಯ ದಿನ ದಿಂದಲೂ ಇಂದಿನವರೆಗೂ ಮೋಡ ಕವಿದ ವಾತಾವರಣ ಮುಂದುವರಿದಿದೆ. ಅದರಿಂದ ಒಣಹವೆ, ಬಿರುಬಿಸಿಲು‌‌ ತಾಪಮಾನ ಕೊಂಚಮಟ್ಟಿಗೆ‌ ತಗ್ಗಿದಂತಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.


Conclusion:KN_BLY_01_22_BALLARI_CITY_RAIN_VISUALS_7203310

KN_BLY_01a_22_BALLARI_CITY_RAIN_VISUALS_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.