ಬಳ್ಳಾರಿ: ಲಾಕ್ಡೌನ್ ಎಫೆಕ್ಟ್ನಿಂದ ಕಂಗೆಟ್ಟ ಬಡ ಹಾಗೂ ಕೂಲಿ ಕಾರ್ಮಿಕರಿಗೆ ಮಾಜಿ ಸಚಿವ ಮುಂಡ್ಲೂರು ದಿವಾಕರ ಬಾಬು ಅವರು ರೇಷನ್ ಕಿಟ್ ವಿತರಿಸಿದರು.
ನಗರದ ಹೊರವಲಯದ ತಮ್ಮ ನಿವಾಸದ ಹೊರಾಂಗಣದಲ್ಲಿ ದಿವಾಕರ್ ಬಾಬು ಮತ್ತವರ ಪತ್ನಿ ಸ್ವತಃ ಬೆಳಗಿನಜಾವ ಅಡುಗೆ ತಯಾರಿಸಿ ಅನಾಥ, ನಿರ್ಗತಿಕರಿಗೆ ಆಹಾರದ ಪ್ಯಾಕೇಟ್ ಸಿದ್ಧಪಡಿಸಿದರು. ಬಳಿಕ ನಾನಾ ಭಾಗಗಳಿಗೆ ತೆರಳಿ ಅವುಗಳನ್ನು ಹಂಚಿದರು.
ಅವರೊಂದಿಗೆ ಪುತ್ರ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮುಂಡ್ಲೂರು ಹನುಮ ಕಿಶೋರ್ ಕೂಡ ತೆರಳಿ ಆಹಾರದ ಪ್ಯಾಕೇಟ್, ರೇಷನ್ ಕಿಟ್ಗಳನ್ನು ವಿತರಿಸಿದರು.