ETV Bharat / entertainment

'ಏನೋ ಮಾಡಲು ಹೋಗಿ'; ಬಿಗ್​ ಬಾಸ್​​​ನಲ್ಲಿ ಮೃಗೀಯ ವರ್ತನೆ: ಸ್ಪರ್ಧಿಗಳ ಸ್ಥಿತಿ ಗಂಭೀರ - Bigg Boss Shishir fell unconscious

''ಏನೋ ಮಾಡಲು ಹೋಗಿ, ಇನ್ನೇನೋ ಮಾಡಿದ್ರಾ ಮನೆ ಸದಸ್ಯರು'' ಶೀರ್ಷಿಕೆಯಡಿ 'ಬಿಗ್​​​ ಬಾಸ್​​​' ಪ್ರೋಮೋ ಅನಾವರಣಗೊಂಡಿದೆ.

author img

By ETV Bharat Karnataka Team

Published : 2 hours ago

Bigg Boss Kannada 11
ಬಿಗ್​​​ ಬಾಸ್ ಕನ್ನಡ 11 (Photo: social media)

'ಬಿಗ್​​​ ಬಾಸ್​​​', ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಪ್ರೇಕ್ಷಕರನ್ನು ಸಂಪಾದಿಸಿರುವ ನಂಬರ್​ ಒನ್​ ಕಾರ್ಯಕ್ರಮ ಅಂದ್ರೆ ಅತಿಶಯೋಕ್ತಿಯಲ್ಲ. ಬಾಲಿವುಡ್​ನಲ್ಲಿ ಮೊದಲು ಆರಂಭವಾದ ಈ ಕಾರ್ಯಕ್ರಮ ಸದ್ಯ ಬಹುತೇಕ ಎಲ್ಲಾ ಭಾಷೆಗಳಲ್ಲೂ ಪ್ರಸಾರವಾಗುತ್ತಿದೆ. ಅದರಂತೆ ಕಳೆದ ಭಾನುವಾರ ಕನ್ನಡ ಬಿಗ್​ ಬಾಸ್​ ಬಹಳ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಆದರೆ, ಊಹೆಗೂ ಮೀರಿ ಮೊದಲ ವಾರದಲ್ಲೇ ವಾದ ವಿವಾದಗಳು ದೊಡ್ಡ ಮಟ್ಟದಲ್ಲಿ ನಡೆದಿದೆ. ಇಂದಿನ ಸಂಚಿಕೆ ಇನ್ನೂ ಗಂಭೀರವಾಗಿರಲಿದೆ ಎಂಬ ಸುಳಿವನ್ನು ಪ್ರೋಮೋ ಬಿಟ್ಟುಕೊಟ್ಟಿದೆ.

ಕಲರ್ಸ್ ಕನ್ನಡ ಇಂದು ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಪ್ರೋಮೋ ಅನಾವರಣಗೊಳಿಸಿದೆ. ''ಏನೋ ಮಾಡಲು ಹೋಗಿ, ಇನ್ನೇನೋ ಮಾಡಿದ್ರಾ ಮನೆ ಸದಸ್ಯರು. ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ 9:30ಕ್ಕೆ'' ಎಂದು ಬರೆದುಕೊಂಡಿದೆ.

ಬಿಗ್​​ ಬಾಸ್​​ ಟಾಸ್ಕ್​​ ಒಂದನ್ನು ನೀಡಿದ್ದಾರೆ. ಆಟದ ಭರದಲ್ಲಿ ಕೆಲ ಸ್ಪರ್ಧಿಗಳು ಅತಿ ಆವೇಶದಲ್ಲಿ ಆಡಿರುವಂತೆ ತೋರಿದೆ. ಪ್ರೋಮೋ ಹಿನ್ನೆಲೆಯಲ್ಲಿ, ''ಆಟದ ಉದ್ದೇಶ ಇರುವುದು ಚೆಂಡನ್ನು ರಕ್ಷಿಸಿಕೊಳ್ಳಬೇಕೆಂದು. ಗೆಲುವನ್ನು ಸಾಧಿಸುವ ಛಲದಲ್ಲಿ ಉದ್ದೇಶ ಮರೆಯುವುದು ಮೃಗೀಯ ಪ್ರೌವೃತ್ತಿ ಎಂದು ಹೇಳಬಹುದು. ಈ ಪ್ರವೃತ್ತಿಯನ್ನು ಹತೋಟಿಯಲ್ಲಿದ್ದುಕೊಂಡು ಆಡಿ ಗೆದ್ದಾಗಲೇ ಮನುಷ್ಯರು ಎಂದನಿಸಿಕೊಳ್ಳೋದು'' ಎಂದು ಬಿಗ್​ ಬಾಸ್​ ಹೇಳುತ್ತಿರುವುದನ್ನು ಕಾಣಬಹುದು.

ವಿಡಿಯೋದಲ್ಲಿ, ಗುದ್ದಾಟವನ್ನು ತೋರಿಸಲಾಗಿದೆ. ಸ್ಪರ್ಧಿಗಳ ಎಳೆದಾಟ, ನೆಲಕ್ಕೆ ಕುಕ್ಕರಿಸಿರುವುದು ಹೀಗೆ ಗಂಭೀರ ಸನ್ನಿವೇಶವನ್ನು ಕಾಣಬಹುದು. ಅಲ್ಲದೇ ಸ್ಪರ್ಧಿ ಶಿಶಿರ್​​ ಪ್ರಜ್ಞೆ ತಪ್ಪಿ ಬೀಳುವ ದೃಶ್ಯವನ್ನೂ ತೋರಿಸಲಾಗಿದೆ.

ಇದನ್ನೂ ಓದಿ: ಅ.4ರಿಂದ 'ಮಾರ್ಟಿನ್' ಜಾತ್ರೆ: ಆ್ಯಕ್ಷನ್ ಪ್ರಿನ್ಸ್ ಸಂಭಾವನೆ ಬಗ್ಗೆ ನಿರ್ಮಾಪಕರು ಹೇಳಿದ್ದೇನು? - Martin Cinema

''ಧನರಾಜ್ ಡೈಲಾಗ್ ಮಳೆಗೆ ಚಪ್ಪಾಳೆಗಳ ಸುರಿಮಳೆ. ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ - ಶುಕ್ರ ರಾತ್ರಿ 9:30ಕ್ಕೆ ಪ್ರಸಾರ''ಎಂಬ ಕ್ಯಾಪ್ಷನ್​ನೊಂದಿಗೆ ಮತ್ತೊಂದು ಪ್ರೋಮೋ ಅನಾವರಣಗೊಂಡಿದೆ. ಧನರಾಜ್​​ ಕನ್ನಡ ಚಿತ್ರರಂಗದ ಬ್ಲಾಕ್​ಬಸ್ಟರ್ ಸಿನಿಮಾ ಮುಂಗಾರು ಮಳೆಯ ಫೇಮಸ್​ ಡೈಲಾಗ್​​ ಹೊಡೆಯೋ ಮೂಲಕ ಮನೆಮಂದಿಯನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಗೋಲ್ಡನ್​​ ಸ್ಟಾರ್​ ಗಣೆಶ್​ ಅವರ ಡೈಲಾಗ್ಸ್​​ ಅನ್ನು ಮರೆಯೋಕೆ ಸಾಧ್ಯನಾ? ಆ ಮಳೆ ಡೈಲಾಗ್​ ಇಂದಿಗೂ ಅಷ್ಟೇ ಜನಪ್ರಿಯ. ನರಕನಿವಾಸಿಗಳೆದುರು ಕುಳಿತು ಧನರಾಜ್ ಹೊಡೆಯೋ ಡೈಲಾಗ್ಸ್ ಮನೆಯ ಎಲ್ಲಾ ಸದಸ್ಯರ ಮತ್ತು ಪ್ರೇಕ್ಷಕರ ಮನ ಗೆದ್ದಿದೆ. ಸೋಷಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದ್ದು, ನೆಟ್ಟಿಗರು ಮತ್ತು ಅಭಿಮಾನಿಗಳು ತಮ್ಮ ಪ್ರತಿಕ್ರಿಯೆ ಕೊಡುತ್ತಿದ್ದಾರೆ.

ಇದನ್ನೂ ಓದಿ: ನಟಿ ಹರ್ಷಿಕಾ ಪೂಣಚ್ಚಗೆ ಹೆಣ್ಣು ಮಗು ಜನನ: ಭುವನ್​ ಕಂದಮ್ಮನ ಹೆಸರೇನು ಗೊತ್ತಾ? - Harshika Bhuvann Baby

ಇನ್ನೂ ಬಿಗ್​ ಬಾಸ್​ ಅನ್ನೇ ಎಕ್ಸ್​ಪೋಸ್ ಮಾಡುತ್ತೇನೆ. ನಾನೇ ಬಿಗ್​​ ಬಾಸ್​ ಎಂದು ಹೇಳುತ್ತಿದ್ದ ಲಾಯರ್​ ಜಗದೀಶ್​ ಕೊಂಚ ತಣ್ಣಗಾದಂತೆ ತೋರುತ್ತಿದೆ. ಮನೆ ಮನಂದಿಯೊಂದಿಗೆ ಬೆರೆಯುವ ಪ್ರಯತ್ನ ನಡೆಯುತ್ತಿದೆ.

'ಬಿಗ್​​​ ಬಾಸ್​​​', ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಪ್ರೇಕ್ಷಕರನ್ನು ಸಂಪಾದಿಸಿರುವ ನಂಬರ್​ ಒನ್​ ಕಾರ್ಯಕ್ರಮ ಅಂದ್ರೆ ಅತಿಶಯೋಕ್ತಿಯಲ್ಲ. ಬಾಲಿವುಡ್​ನಲ್ಲಿ ಮೊದಲು ಆರಂಭವಾದ ಈ ಕಾರ್ಯಕ್ರಮ ಸದ್ಯ ಬಹುತೇಕ ಎಲ್ಲಾ ಭಾಷೆಗಳಲ್ಲೂ ಪ್ರಸಾರವಾಗುತ್ತಿದೆ. ಅದರಂತೆ ಕಳೆದ ಭಾನುವಾರ ಕನ್ನಡ ಬಿಗ್​ ಬಾಸ್​ ಬಹಳ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಆದರೆ, ಊಹೆಗೂ ಮೀರಿ ಮೊದಲ ವಾರದಲ್ಲೇ ವಾದ ವಿವಾದಗಳು ದೊಡ್ಡ ಮಟ್ಟದಲ್ಲಿ ನಡೆದಿದೆ. ಇಂದಿನ ಸಂಚಿಕೆ ಇನ್ನೂ ಗಂಭೀರವಾಗಿರಲಿದೆ ಎಂಬ ಸುಳಿವನ್ನು ಪ್ರೋಮೋ ಬಿಟ್ಟುಕೊಟ್ಟಿದೆ.

ಕಲರ್ಸ್ ಕನ್ನಡ ಇಂದು ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಪ್ರೋಮೋ ಅನಾವರಣಗೊಳಿಸಿದೆ. ''ಏನೋ ಮಾಡಲು ಹೋಗಿ, ಇನ್ನೇನೋ ಮಾಡಿದ್ರಾ ಮನೆ ಸದಸ್ಯರು. ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ 9:30ಕ್ಕೆ'' ಎಂದು ಬರೆದುಕೊಂಡಿದೆ.

ಬಿಗ್​​ ಬಾಸ್​​ ಟಾಸ್ಕ್​​ ಒಂದನ್ನು ನೀಡಿದ್ದಾರೆ. ಆಟದ ಭರದಲ್ಲಿ ಕೆಲ ಸ್ಪರ್ಧಿಗಳು ಅತಿ ಆವೇಶದಲ್ಲಿ ಆಡಿರುವಂತೆ ತೋರಿದೆ. ಪ್ರೋಮೋ ಹಿನ್ನೆಲೆಯಲ್ಲಿ, ''ಆಟದ ಉದ್ದೇಶ ಇರುವುದು ಚೆಂಡನ್ನು ರಕ್ಷಿಸಿಕೊಳ್ಳಬೇಕೆಂದು. ಗೆಲುವನ್ನು ಸಾಧಿಸುವ ಛಲದಲ್ಲಿ ಉದ್ದೇಶ ಮರೆಯುವುದು ಮೃಗೀಯ ಪ್ರೌವೃತ್ತಿ ಎಂದು ಹೇಳಬಹುದು. ಈ ಪ್ರವೃತ್ತಿಯನ್ನು ಹತೋಟಿಯಲ್ಲಿದ್ದುಕೊಂಡು ಆಡಿ ಗೆದ್ದಾಗಲೇ ಮನುಷ್ಯರು ಎಂದನಿಸಿಕೊಳ್ಳೋದು'' ಎಂದು ಬಿಗ್​ ಬಾಸ್​ ಹೇಳುತ್ತಿರುವುದನ್ನು ಕಾಣಬಹುದು.

ವಿಡಿಯೋದಲ್ಲಿ, ಗುದ್ದಾಟವನ್ನು ತೋರಿಸಲಾಗಿದೆ. ಸ್ಪರ್ಧಿಗಳ ಎಳೆದಾಟ, ನೆಲಕ್ಕೆ ಕುಕ್ಕರಿಸಿರುವುದು ಹೀಗೆ ಗಂಭೀರ ಸನ್ನಿವೇಶವನ್ನು ಕಾಣಬಹುದು. ಅಲ್ಲದೇ ಸ್ಪರ್ಧಿ ಶಿಶಿರ್​​ ಪ್ರಜ್ಞೆ ತಪ್ಪಿ ಬೀಳುವ ದೃಶ್ಯವನ್ನೂ ತೋರಿಸಲಾಗಿದೆ.

ಇದನ್ನೂ ಓದಿ: ಅ.4ರಿಂದ 'ಮಾರ್ಟಿನ್' ಜಾತ್ರೆ: ಆ್ಯಕ್ಷನ್ ಪ್ರಿನ್ಸ್ ಸಂಭಾವನೆ ಬಗ್ಗೆ ನಿರ್ಮಾಪಕರು ಹೇಳಿದ್ದೇನು? - Martin Cinema

''ಧನರಾಜ್ ಡೈಲಾಗ್ ಮಳೆಗೆ ಚಪ್ಪಾಳೆಗಳ ಸುರಿಮಳೆ. ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ - ಶುಕ್ರ ರಾತ್ರಿ 9:30ಕ್ಕೆ ಪ್ರಸಾರ''ಎಂಬ ಕ್ಯಾಪ್ಷನ್​ನೊಂದಿಗೆ ಮತ್ತೊಂದು ಪ್ರೋಮೋ ಅನಾವರಣಗೊಂಡಿದೆ. ಧನರಾಜ್​​ ಕನ್ನಡ ಚಿತ್ರರಂಗದ ಬ್ಲಾಕ್​ಬಸ್ಟರ್ ಸಿನಿಮಾ ಮುಂಗಾರು ಮಳೆಯ ಫೇಮಸ್​ ಡೈಲಾಗ್​​ ಹೊಡೆಯೋ ಮೂಲಕ ಮನೆಮಂದಿಯನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಗೋಲ್ಡನ್​​ ಸ್ಟಾರ್​ ಗಣೆಶ್​ ಅವರ ಡೈಲಾಗ್ಸ್​​ ಅನ್ನು ಮರೆಯೋಕೆ ಸಾಧ್ಯನಾ? ಆ ಮಳೆ ಡೈಲಾಗ್​ ಇಂದಿಗೂ ಅಷ್ಟೇ ಜನಪ್ರಿಯ. ನರಕನಿವಾಸಿಗಳೆದುರು ಕುಳಿತು ಧನರಾಜ್ ಹೊಡೆಯೋ ಡೈಲಾಗ್ಸ್ ಮನೆಯ ಎಲ್ಲಾ ಸದಸ್ಯರ ಮತ್ತು ಪ್ರೇಕ್ಷಕರ ಮನ ಗೆದ್ದಿದೆ. ಸೋಷಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದ್ದು, ನೆಟ್ಟಿಗರು ಮತ್ತು ಅಭಿಮಾನಿಗಳು ತಮ್ಮ ಪ್ರತಿಕ್ರಿಯೆ ಕೊಡುತ್ತಿದ್ದಾರೆ.

ಇದನ್ನೂ ಓದಿ: ನಟಿ ಹರ್ಷಿಕಾ ಪೂಣಚ್ಚಗೆ ಹೆಣ್ಣು ಮಗು ಜನನ: ಭುವನ್​ ಕಂದಮ್ಮನ ಹೆಸರೇನು ಗೊತ್ತಾ? - Harshika Bhuvann Baby

ಇನ್ನೂ ಬಿಗ್​ ಬಾಸ್​ ಅನ್ನೇ ಎಕ್ಸ್​ಪೋಸ್ ಮಾಡುತ್ತೇನೆ. ನಾನೇ ಬಿಗ್​​ ಬಾಸ್​ ಎಂದು ಹೇಳುತ್ತಿದ್ದ ಲಾಯರ್​ ಜಗದೀಶ್​ ಕೊಂಚ ತಣ್ಣಗಾದಂತೆ ತೋರುತ್ತಿದೆ. ಮನೆ ಮನಂದಿಯೊಂದಿಗೆ ಬೆರೆಯುವ ಪ್ರಯತ್ನ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.