ಬಳ್ಳಾರಿ: ನಗರದ ರೇಡಿಯೋ ಪಾರ್ಕ್ನಲ್ಲಿ 104 ಮಂದಿ ಅಲ್ಪಸಂಖ್ಯಾತರಿಗೆ ದಿನಸಿ ಕಿಟ್ಗಳನ್ನು ಮಾಜಿ ಕಾರ್ಪೋರೇಟರ್ ಎಂ.ಗೋವಿಂದರಾಜಲು ವಿತರಿಸಿದರು.
ಲಾಕ್ಡೌನ್ ಹಿನ್ನೆಲೆ ಸಂಕಷ್ಟ ಎದುರಿಸುತ್ತಿರುವ ಅಲ್ಪಸಂಖ್ಯಾತರು ಈಚೆಗೆ ಮಾಜಿ ಕಾಪೋರೇಟರ್ ಬಳಿ ತಮಗೂ ದಿನಸಿ ಕಿಟ್ ವಿತರಿಸಿ. ನಾವೂ ಆಹಾರಕ್ಕಾಗಿ ಕಷ್ಟ ಪಡುತ್ತಿದ್ದೇವೆ ಎಂದು ಮನವಿ ಮಾಡಿದ್ದರು.
3 ಕೆಜಿ ಅಕ್ಕಿ, ಬೇಳೆ, ಗೋಧಿ ಹಿಟ್ಟು, ರವೆ, ಬಿಸ್ಕತ್, ಬಾಳೆ ಹಣ್ಣು, ಸಕ್ಕರೆ, ಉಪ್ಪು, ಖಾರದಪುಡಿ ಸೇರಿದಂತೆ ಅನೇಕ ವಸ್ತುಗಳು ಕಿಟ್ನಲ್ಲಿ ಇವೆ.
ಸಂಪ್ರದಾಯವೆಂಬಂತೆ ಅಲ್ಪಸಂಖ್ಯಾತರಿಗೆ ದಿನಸಿ ಕಿಟ್ನಲ್ಲಿ ಅರಿಶಿಣ, ಕುಂಕುಮ ಮತ್ತು 5 ಹಸಿರು ಬಳೆಗಳನ್ನು ನೀಡಲಾಯಿತು. ಮಾಜಿ ಕಾರ್ಪೋರೇಟರ್ ಎಂ.ಗೋವಿಂದರಾಜಲು ಅವರಿಗೆ ಚಿಲ್ಲರೆ ಹಣ ನೀಡಿ, ಮಂಗಳಮುಖಿಯರು ಧನ್ಯವಾದ ಹೇಳಿದರು.