ETV Bharat / state

ಕೊರೊನಾ ವಾರಿಯರ್ಸ್​ ಜೊತೆ ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿದ ಶಿವರಾಯ ಕಾಳೇಲಿ - ಕೌಲಗುಡ್ಡದ ಅಮರೇಶ್ವರ ಮಹಾರಾಜ

ಕಾಗವಾಡ ತಾಲೂಕಿನ ಸಿದ್ದೇವಾಡಿ ಗ್ರಾಮದ ಮುಖಂಡ ಶಿವರಾಯ ಕಾಳೇಲಿ ತಮ್ಮ ಹುಟ್ಟುಹಬ್ಬವನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಆಚರಿಸಿದ್ದಾರೆ.

Shivaraya Kaleli
ಹುಟ್ಟು ಹಬ್ಬ ಆಚರಿಸಿಕೊಂಡ ಶಿವರಾಯ ಕಾಳೇಲಿ
author img

By

Published : Jun 2, 2020, 1:24 PM IST

ಚಿಕ್ಕೋಡಿ : ಕಾಗವಾಡ ತಾಲೂಕಿನ ಸಿದ್ದೇವಾಡಿ ಗ್ರಾಮದ ಮುಖಂಡ ಶಿವರಾಯ ಕಾಳೇಲಿ ಎಂಬವರು ತಮ್ಮ 59ನೇ ಹುಟ್ಟುಹಬ್ಬವನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಸೀರೆ, ಟವೆಲ್, ಟೋಪಿ, 5 ಕೆ.ಜಿ ಸಕ್ಕರೆ 10 ಕೆ.ಜಿ ಗೋದಿಯಿರುವ ಪಡಿತರ ಕಿಟ್ ನೀಡುವ ಮೂಲಕ ವಿಭಿನ್ನವಾಗಿ ಆಚರಿಸಿಕೊಂಡರು.

ಕೊರೊನಾ ಸಂಕಷ್ಟದ ಸಮಯದಲ್ಲಿ ಕೋವಿಡ್-19 ಹರಡದಂತೆ ಜಾಗೃತಿ ಮೂಡಿಸುವಲ್ಲಿ ಕೊರೊನಾ ವಾರಿಯರ್ಸ್​​ಗಳಾದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತ ಮಹತ್ವದ ಕೆಲಸ ನಿಭಾಯಿಸಿದ್ದರು.

ಕೊರೊನಾ ವಾರಿಯರ್ಸ್​ ಜೊತೆ ವಿಶಿಷ್ಟವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಶಿವರಾಯ ಕಾಳೇಲಿ

ಸಂಕಷ್ಟದ ಸ್ಥಿತಿಯಲ್ಲಿ ಜನರ ರಕ್ಷಣೆಗೆ ಧಾವಿಸಿದವರನ್ನು ಹುಟ್ಟುಹಬ್ಬದ ನಿಮಿತ್ತ ಗೌರವಿಸುತ್ತಿರುವುದು ಸೌಭಾಗ್ಯ ಎಂದು ಶಿವರಾಯ ಕಾಳೇಲಿ ಹೇಳಿದರು.

ಇಂತಹ ಉತ್ತಮ ಕೆಲಸ ಮಾಡಿದ ಶಿವರಾಯ ಕಾಳೇಲಿ ಅವರನ್ನು ದೇವರು ಆಯುಷ್ಯ, ಆರೋಗ್ಯ ಮತ್ತು ಸುಖ ಶಾಂತಿ ನೀಡಿ ಕಾಪಾಡಲಿ ಎಂದು ಕೌಲಗುಡ್ಡ ಮಠದ ಅಮರೇಶ್ವರ ಮಹರಾಜರು ಆಶಿಸಿದರು.

ಚಿಕ್ಕೋಡಿ : ಕಾಗವಾಡ ತಾಲೂಕಿನ ಸಿದ್ದೇವಾಡಿ ಗ್ರಾಮದ ಮುಖಂಡ ಶಿವರಾಯ ಕಾಳೇಲಿ ಎಂಬವರು ತಮ್ಮ 59ನೇ ಹುಟ್ಟುಹಬ್ಬವನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಸೀರೆ, ಟವೆಲ್, ಟೋಪಿ, 5 ಕೆ.ಜಿ ಸಕ್ಕರೆ 10 ಕೆ.ಜಿ ಗೋದಿಯಿರುವ ಪಡಿತರ ಕಿಟ್ ನೀಡುವ ಮೂಲಕ ವಿಭಿನ್ನವಾಗಿ ಆಚರಿಸಿಕೊಂಡರು.

ಕೊರೊನಾ ಸಂಕಷ್ಟದ ಸಮಯದಲ್ಲಿ ಕೋವಿಡ್-19 ಹರಡದಂತೆ ಜಾಗೃತಿ ಮೂಡಿಸುವಲ್ಲಿ ಕೊರೊನಾ ವಾರಿಯರ್ಸ್​​ಗಳಾದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತ ಮಹತ್ವದ ಕೆಲಸ ನಿಭಾಯಿಸಿದ್ದರು.

ಕೊರೊನಾ ವಾರಿಯರ್ಸ್​ ಜೊತೆ ವಿಶಿಷ್ಟವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಶಿವರಾಯ ಕಾಳೇಲಿ

ಸಂಕಷ್ಟದ ಸ್ಥಿತಿಯಲ್ಲಿ ಜನರ ರಕ್ಷಣೆಗೆ ಧಾವಿಸಿದವರನ್ನು ಹುಟ್ಟುಹಬ್ಬದ ನಿಮಿತ್ತ ಗೌರವಿಸುತ್ತಿರುವುದು ಸೌಭಾಗ್ಯ ಎಂದು ಶಿವರಾಯ ಕಾಳೇಲಿ ಹೇಳಿದರು.

ಇಂತಹ ಉತ್ತಮ ಕೆಲಸ ಮಾಡಿದ ಶಿವರಾಯ ಕಾಳೇಲಿ ಅವರನ್ನು ದೇವರು ಆಯುಷ್ಯ, ಆರೋಗ್ಯ ಮತ್ತು ಸುಖ ಶಾಂತಿ ನೀಡಿ ಕಾಪಾಡಲಿ ಎಂದು ಕೌಲಗುಡ್ಡ ಮಠದ ಅಮರೇಶ್ವರ ಮಹರಾಜರು ಆಶಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.