ಚಿಕ್ಕೋಡಿ: ಎತ್ತಿನಗಾಡಿ ಕಟ್ಟಿಕೊಂಡು ಹೊಲಕ್ಕೆ ಹೊರಟ ರೈತನಿಗೆ ಪೊಲೀಸ್ ಅಧಿಕಾರಿಯೊಬ್ಬರು ಸೆಲ್ಯೂಟ್ ಹೊಡೆದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.
ಬಂಡಿ ಮೇಲಿದ್ದರೂ ಹೆಲ್ಮೆಟ್ ಧರಿಸಿ ರೈತ ಹೋಗುತ್ತಿದ್ದ. ಈ ವೇಳೆ ಪೊಲೀಸ್ ಅಧಿಕಾರಿ ಆತನನ್ನು ತಡೆದಿದ್ದಾರೆ. ಆಗ ರೈತ ಪೊಲೀಸಪ್ಪನಿಗೆ ಕೊರೊನಾ ಬಗ್ಗೆ ತಿಳುವಳಿಕೆ ಹೇಳಿದ್ದಾನೆ. ಸಾಬೂನ್ ಹಂಚ್ಕೊಂಡು ಕೈ ತೊಳ್ಕಬೇಕ್ರಿ, ಊಟ ಮಾಡುವುದಕ್ಕಿಂತ ಮೊದಲೇ ಕೈ ತೊಳ್ಕೊಬೇಕು. ಕೊರೊನಾ ಹಿನ್ನೆಲೆ ತಲೆಗೆ ಹೆಲ್ಮೆಟ್ ಹಾಕ್ಕೊಂಡು ಓಡಾಡುತ್ತಿದ್ದೇನೆ ಎಂದು ರೈತ ಪೊಲೀಸ್ಗೆ ಹೇಳಿದ್ದಾನೆ.
ನಿನಗೆ ಹೆಲ್ಮೆಟ್ ಹಾಕ್ಕೊಂಡು ಓಡಾಡು ಅಂತಾ ಯಾರು ಹೇಳಿದ್ದಾರೆ ಎಂಬ ಪೊಲೀಸಪ್ಪನ ಪ್ರಶ್ನೆಗೆ ಉತ್ತರಿಸಿದ ರೈತ, ನಾನೇ ಸ್ವತಃ ತಲೆ ಓಡಿಸಿ ಹಾಕ್ಕೊಂಡಿದ್ದೀನಿ ಸರ್ ಎಂದಿದ್ದಾನೆ. ರೈತನ ಈ ಮಾತು ಕೇಳಿ ನಡು ರಸ್ತೆಯಲ್ಲೇ ಪೊಲೀಸ್ ಅಧಿಕಾರಿ ಆತನಿಗೆ ಸೆಲ್ಯೂಟ್ ಹೊಡೆದಿದ್ದಾರೆ. ರೈತನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.