ETV Bharat / state

ತಗ್ಗಿದ ಪ್ರವಾಹ: ಆದರೂ  ಕೃಷ್ಣಾ ನದಿಗೆ 1.35 ಲಕ್ಷ ಕ್ಯೂಸೆಕ್​ ನೀರು

author img

By

Published : Aug 11, 2020, 1:53 PM IST

ಕಳೆದ 24 ಗಂಟೆಗಳಲ್ಲಿ ಕೃಷ್ಣಾ ಮತ್ತು ಉಪನದಿನಗಳ ನೀರಿನ ಪ್ರಮಾಣದಲ್ಲಿ 3 ಅಡಿಯಷ್ಟು ಕಡಿಮೆಯಾಗಿದೆ. ಇಷ್ಟಿದ್ದರೂ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳಲ್ಲಿ 1,35,000 ಕ್ಯೂಸೆಕ್‌ಕ್ಕಿಂತ ಹೆಚ್ಚು ಒಳ ಹರಿವಿದೆ ಎಂದು ಚಿಕ್ಕೋಡಿ ತಹಶೀಲ್ದಾರ್​ ಶುಭಾಸ್​​ ಸಂಪಗಾಂವಿ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ.

Over 1,35,000 Cusec Krishna River Inland Flows
1,35,000ಕ್ಕೂ ಅಧಿಕ ಕ್ಯೂಸೆಕ್ ಕೃಷ್ಣಾ ನದಿ ಒಳ ಹರಿವು

ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ಇಂದು‌ ಮತ್ತೆ ಮಳೆ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ, ರಾಜ್ಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ 10 ಸಾವಿರ ಕ್ಯೂಸೆಕ್​​​ನಷ್ಟು ಕಡಿಮೆ ಆಗಿದೆ.

1,35,000ಕ್ಕೂ ಅಧಿಕ ಕ್ಯೂಸೆಕ್ ಕೃಷ್ಣಾ ನದಿ ಒಳ ಹರಿವು..

ಕಳೆದ 24 ಗಂಟೆಗಳಲ್ಲಿ ಕೃಷ್ಣಾ ಮತ್ತು ಉಪನದಿನಗಳ ನೀರಿನ ಪ್ರಮಾಣದಲ್ಲಿ ಮೂರು ಅಡಿಯಷ್ಟು ಕಡಿಮೆಯಾಗಿದೆ. ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವು 1,35,000 ಕ್ಯೂಸೆಕ್​​​ಗಿಂತ ಹೆಚ್ಚಿನ ಒಳ ಹರಿವಿದೆ ಎಂದು ಚಿಕ್ಕೋಡಿ ತಹಶೀಲ್ದಾರ್​ ಶುಭಾಸ ಸಂಪಗಾಂವಿ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 1,10,000 ಕ್ಯೂಸೆಕ್ ನೀರು ಹಾಗೂ ದೂಧಗಂಗಾ ನದಿಯಿಂದ 26,752 ಕ್ಯೂಸೆಕ್ ನೀರು ಹೀಗೆ ಒಟ್ಟು 1,35,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ - 45 ಮಿ.ಮೀ, ನವಜಾ - 72 ಮಿ.ಮೀ, ಮಹಾಬಲೇಶ್ವರ - 59 ಮಿ.ಮೀ, ವಾರಣಾ - 47 ಮಿ.ಮೀ, ಕಾಳಮ್ಮವಾಡಿ - 37 ಮಿ.ಮೀ, ರಾಧಾನಗರಿ - 40 ಮಿ.ಮೀ, ಪಾಟಗಾಂವ - 82 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದ ಭಾಗದಲ್ಲಿ ಮಳೆ ಹೆಚ್ಚಾಗಿದೆ.

ಚಿಕ್ಕೋಡಿ ಉಪವಿಭಾಗದಲ್ಲಿ ಚಿಕ್ಕೋಡಿ -3.4 ಮಿ.ಮೀ, ಅಂಕಲಿ -5.2 ಮಿ.ಮೀ, ಜೋಡಟ್ಟಿ -1.4 ಮಿ.ಮೀ ಹಾಗೂ ಸದಲಗಾ-5.0 ಮಿ.ಮೀ ಮಿ.ಮೀ ಮಳೆಯಾಗಿರುವ ವರದಿಯಾಗಿದೆ. ಸದ್ಯ ಕೊಯ್ನಾ ಜಲಾಶಯ ಶೇ 72, ವಾರಣಾ ಜಲಾಶಯ ಶೇ 86, ರಾಧಾನಗರಿ ಜಲಾಶಯ ಶೇ99, ಕಣೇರ ಜಲಾಶಯ ಶೇ 74, ಧೂಮ ಜಲಾಶಯ ಶೇ66, ಪಾಟಗಾಂವ ಶೇ 92.62, ಧೂದಗಂಗಾ ಶೇ 89.41ರಷ್ಟು, ತುಂಬಿದೆ ಎಂದು ತಹಶೀಲ್ದಾರ್​ ಮಾಹಿತಿ ನೀಡಿದ್ದಾರೆ.

ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ಇಂದು‌ ಮತ್ತೆ ಮಳೆ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ, ರಾಜ್ಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ 10 ಸಾವಿರ ಕ್ಯೂಸೆಕ್​​​ನಷ್ಟು ಕಡಿಮೆ ಆಗಿದೆ.

1,35,000ಕ್ಕೂ ಅಧಿಕ ಕ್ಯೂಸೆಕ್ ಕೃಷ್ಣಾ ನದಿ ಒಳ ಹರಿವು..

ಕಳೆದ 24 ಗಂಟೆಗಳಲ್ಲಿ ಕೃಷ್ಣಾ ಮತ್ತು ಉಪನದಿನಗಳ ನೀರಿನ ಪ್ರಮಾಣದಲ್ಲಿ ಮೂರು ಅಡಿಯಷ್ಟು ಕಡಿಮೆಯಾಗಿದೆ. ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವು 1,35,000 ಕ್ಯೂಸೆಕ್​​​ಗಿಂತ ಹೆಚ್ಚಿನ ಒಳ ಹರಿವಿದೆ ಎಂದು ಚಿಕ್ಕೋಡಿ ತಹಶೀಲ್ದಾರ್​ ಶುಭಾಸ ಸಂಪಗಾಂವಿ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 1,10,000 ಕ್ಯೂಸೆಕ್ ನೀರು ಹಾಗೂ ದೂಧಗಂಗಾ ನದಿಯಿಂದ 26,752 ಕ್ಯೂಸೆಕ್ ನೀರು ಹೀಗೆ ಒಟ್ಟು 1,35,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ - 45 ಮಿ.ಮೀ, ನವಜಾ - 72 ಮಿ.ಮೀ, ಮಹಾಬಲೇಶ್ವರ - 59 ಮಿ.ಮೀ, ವಾರಣಾ - 47 ಮಿ.ಮೀ, ಕಾಳಮ್ಮವಾಡಿ - 37 ಮಿ.ಮೀ, ರಾಧಾನಗರಿ - 40 ಮಿ.ಮೀ, ಪಾಟಗಾಂವ - 82 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದ ಭಾಗದಲ್ಲಿ ಮಳೆ ಹೆಚ್ಚಾಗಿದೆ.

ಚಿಕ್ಕೋಡಿ ಉಪವಿಭಾಗದಲ್ಲಿ ಚಿಕ್ಕೋಡಿ -3.4 ಮಿ.ಮೀ, ಅಂಕಲಿ -5.2 ಮಿ.ಮೀ, ಜೋಡಟ್ಟಿ -1.4 ಮಿ.ಮೀ ಹಾಗೂ ಸದಲಗಾ-5.0 ಮಿ.ಮೀ ಮಿ.ಮೀ ಮಳೆಯಾಗಿರುವ ವರದಿಯಾಗಿದೆ. ಸದ್ಯ ಕೊಯ್ನಾ ಜಲಾಶಯ ಶೇ 72, ವಾರಣಾ ಜಲಾಶಯ ಶೇ 86, ರಾಧಾನಗರಿ ಜಲಾಶಯ ಶೇ99, ಕಣೇರ ಜಲಾಶಯ ಶೇ 74, ಧೂಮ ಜಲಾಶಯ ಶೇ66, ಪಾಟಗಾಂವ ಶೇ 92.62, ಧೂದಗಂಗಾ ಶೇ 89.41ರಷ್ಟು, ತುಂಬಿದೆ ಎಂದು ತಹಶೀಲ್ದಾರ್​ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.