ಬೆಳಗಾವಿ : ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಜೆಡಿಎಸ್ ಶಾಸಕರು ಕಿತ್ತಾಟ ವಿಚಾರದ ಕುರಿತು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಬಾಲಚಂದ್ರ ಹೇಳಿಕೆ ಕೊಟ್ಟಿದ್ದು. ಲೋಕಸಭಾ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಬಾರಿ ಬದಲಾವಣೆ ಆಗಲಿದೆ ಕಾದು ನೋಡಿ ಅಂದಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಪಕ್ಷದ ಜಗಳವನ್ನ ಅವರೇ ಬಗೆ ಹರಿಸಿಕೊಳ್ಳಬೇಕು. ಇದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಏನು ಆಗಬೇಕು ಎಂದು ದೇವರ ಇಚ್ಚೆನೂ ಇರಬೇಕು ಎಲ್ಲವೂ ದೇವರ ಅಭಿಪ್ರಾಯದ ಪ್ರಕಾರ ನಡೆಯುತ್ತೆ ಕೆಲವರು ದೇವರನ್ನ ನಂಬುವುದಿಲ್ಲ ಆದ್ರೇ ಎಲ್ಲವೂ ನಮ್ಮ ಹಣೆ ಬರಹದ ಪ್ರಕಾರ ನಡೆಯುತ್ತೆ ಎಂದು ಹೇಳಿದ್ದಾರೆ.
ಉಮೇಶ್ ಕತ್ತಿ ಕಾಂಗ್ರೆಸ್ ಗೆ ಹೋಗುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಉಮೇಶ್ ಕತ್ತಿ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಈ ಕುರಿತು ಉಮೇಶ್ ನಮ್ಮ ಮುಂದೆ ಯಾವುದೇ ವಿಷಯ ಪ್ರಸ್ತಾಪ ಮಾಡಿಲ್ಲ ಎಂದರು.
2008 ರಿಂದಲೂ ಕಾಂಗ್ರೆಸ್ ಪಕ್ಷ ಜೆಡಿಎಸ್ ವಿರುದ್ಧ ಹೋರಾಟ ಮಾಡಿಕೊಂಡು ಬಂದಿವೆ. ಸಮ್ಮಿಶ್ರ ಸರ್ಕಾರ ನಡೆಸುವುದು ಬಹಳ ಕಷ್ಟ . ರಾಜ್ಯ ಸರ್ಕಾರ ಒಂದೇ ಪಾರ್ಟಿ ಬಂದರೆ ಒಳ್ಳೆಯದಾಗುತ್ತೆ. ಕುಂದಗೋಳ ಚಿಂಚೋಳಿ ಉಪ ಚುನಾವಣೆಯ ಫಲಿತಾಂಶದ ಮೇಲೆ ರಾಜ್ಯ ರಾಜಕಾರಣ ನಿಂತಿದೆ ಎಂದು ಹೇಳಿದ್ದಾರೆ.