ETV Bharat / state

ಕಾಣೆಯಾಗಿದ್ದ ತಾಯಿ, ಮಕ್ಕಳು ಘಟಪ್ರಭಾ ನದಿಯಲ್ಲಿ ಶವವಾಗಿ ಪತ್ತೆ

ಕಳೆದ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ಇಂದು ಗೋಕಾಕ ತಾಲೂಕಿನ ಲೋಳಸೂರ ಸೇತುವೆಯ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೋಗಿದ್ದ ಸಾವಿತ್ರಿ ನೇರವಾಗಿ ಘಟಪ್ರಭಾ ನದಿಗೆ ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

author img

By

Published : Feb 14, 2021, 6:05 PM IST

Updated : Feb 14, 2021, 7:00 PM IST

Missing mother and two children
ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳು ಶವವಾಗಿ ಪತ್ತೆ

ಬೆಳಗಾವಿ: ಕಳೆದ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳು ಘಟಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಗೋಕಾಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳು ಶವವಾಗಿ ಪತ್ತೆ

ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಸಾವಿತ್ರಿ ಬನಾಜ (33), ಪೂಜಾ (4), ಸಹನಾ (2) ಮೃತ ದುರ್ದೈವಿಗಳು. ಮೃತ ಸಾವಿತ್ರಿಗೆ ಪತಿ ರಾಜು ಬನಾಜ ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಪತಿಯ ಕಾಟ ತಾಳಲಾರದೇ ಕಳೆದ ಎರಡು ದಿನಗಳ ಹಿಂದೆ ಸಾವಿತ್ರಿ‌ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟಿದ್ದಳು.

ಈ ಬಗ್ಗೆ ಮೃತನ ಗಂಡ ರಾಜು ಬನಾಜ ಗೋಕಾಕ ಪೊಲೀಸ್ ಠಾಣೆಯಲ್ಲಿ ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದ. ಮಕ್ಕಳನ್ನು ಕರೆದುಕೊಂಡು ಹೋಗಿದ್ದ ಸಾವಿತ್ರಿ ನೇರವಾಗಿ ಘಟಪ್ರಭಾ ನದಿಗೆ ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಓದಿ: ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ.. ಮದ್ಯಕ್ಕಾಗಿಯೇ ಕೊಲೆಯಾಗಿ ಹೋದನಾ..?

ಕಾಣೆಯಾಗಿದ್ದ ತಾಯಿ ಮತ್ತು 2 ಮಕ್ಕಳ ಮೃತದೇಹಗಳು ಇಂದು ಗೋಕಾಕ ತಾಲೂಕಿನ ಲೋಳಸೂರ ಸೇತುವೆಯ ಬಳಿ ಪತ್ತೆಯಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗೋಕಾಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ: ಕಳೆದ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳು ಘಟಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಗೋಕಾಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳು ಶವವಾಗಿ ಪತ್ತೆ

ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಸಾವಿತ್ರಿ ಬನಾಜ (33), ಪೂಜಾ (4), ಸಹನಾ (2) ಮೃತ ದುರ್ದೈವಿಗಳು. ಮೃತ ಸಾವಿತ್ರಿಗೆ ಪತಿ ರಾಜು ಬನಾಜ ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಪತಿಯ ಕಾಟ ತಾಳಲಾರದೇ ಕಳೆದ ಎರಡು ದಿನಗಳ ಹಿಂದೆ ಸಾವಿತ್ರಿ‌ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟಿದ್ದಳು.

ಈ ಬಗ್ಗೆ ಮೃತನ ಗಂಡ ರಾಜು ಬನಾಜ ಗೋಕಾಕ ಪೊಲೀಸ್ ಠಾಣೆಯಲ್ಲಿ ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದ. ಮಕ್ಕಳನ್ನು ಕರೆದುಕೊಂಡು ಹೋಗಿದ್ದ ಸಾವಿತ್ರಿ ನೇರವಾಗಿ ಘಟಪ್ರಭಾ ನದಿಗೆ ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಓದಿ: ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ.. ಮದ್ಯಕ್ಕಾಗಿಯೇ ಕೊಲೆಯಾಗಿ ಹೋದನಾ..?

ಕಾಣೆಯಾಗಿದ್ದ ತಾಯಿ ಮತ್ತು 2 ಮಕ್ಕಳ ಮೃತದೇಹಗಳು ಇಂದು ಗೋಕಾಕ ತಾಲೂಕಿನ ಲೋಳಸೂರ ಸೇತುವೆಯ ಬಳಿ ಪತ್ತೆಯಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗೋಕಾಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Feb 14, 2021, 7:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.